Swasthik Media

Swasthik Media Contact us for all kind of media related work

 #ಶಿರಸಿ :    #ಪ್ರಧಾನಿ_ನರೇಂದ್ರ_ಮೋದಿ ಶಿರಸಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿರುವ ಹಿನ್ನಲ್ಲೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ  ...
24/04/2024

#ಶಿರಸಿ :
#ಪ್ರಧಾನಿ_ನರೇಂದ್ರ_ಮೋದಿ ಶಿರಸಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿರುವ ಹಿನ್ನಲ್ಲೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ #ಬಿಜೆಪಿ_ಅಭ್ಯರ್ಥಿ #ವಿಶ್ವೇಶ್ವರ_ಹೆಗಡೆ_ಕಾಗೇರಿ ಬುಧವಾರ ಪೂರ್ವ ಸಿದ್ಧತೆಯನ್ನು ವಿಕ್ಷೀಸಿದರು.

ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ #ಮೋದಿ_ಶಿರಸಿಗೆ ಆಗಮಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಮೋದಿಯವರ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ. ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ. ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸಭೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಸ್ವತಃ ಕಾಗೇರಿ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ತಯಾರಿಯ ಕುರಿತು ಮಾಹಿತಿ ಪಡೆದುಕೊಂಡರು.

ಬಳಿಕ ಮಾತನಾಡಿದ ಕಾಗೇರಿ,
ಜನನಾಯಕ, ಪ್ರಧಾನಿ ನರೇಂದ್ರ ಮೋದಿಯವರು ಏ.೨೮ರಂದು ನಗರಕ್ಕೆ ಆಗಮಿಸುತ್ತಿದ್ದು, ಅವರಿಂದ ಸೌಲಭ್ಯ ಪಡೆದ ಕ್ಷೇತ್ರದ ಬಹುದೊಡ್ಡ ಜನಸಮೂಹ ಅವರಿಗೆ ಧನ್ಯವಾದ ಸಲ್ಲಿಸಲು ಕಾತುರವಾಗಿದೆ ಎಂದರು.

ಪ್ರಧಾನಿ ಮೋದಿಯವರಿಗೆ ಧನ್ಯವಾದ ಸಲ್ಲಿಸುವ ಜನಾಭಿಪ್ರಾಯ ಬಹುದೊಡ್ಡ ಪ್ರಮಾಣದಲ್ಲಿ ಕಾಣಿಸುತ್ತಿದೆ. ಶೌಚಾಲಯ, ಉಜ್ವಲ ಗ್ಯಾಸ್, ರೈತರು, ಮನೆ ಸೇರಿದಂತೆ ಅನೇಕ ಸೌಲಭ್ಯ ಪಡೆದ ಜನತೆ ಮೋದಿಯವರನ್ನು ಕಾಣಲು ಹಂಬಲಿಸಿದೆ. ಇಡೀ ಕ್ಷೇತ್ರದಲ್ಲಿ ಓಡಾಡಿದಾಗ ಜನತೆ ಮೋದಿಯವರನ್ನು ಕಾಣಲು ದೊಡ್ಡ ಸಂಕ್ಯೆಯಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದುದನ್ನು ಕಂಡಿದ್ದೇನೆ. ಇನ್ನೊಂದೆಡೆ ರಾಮ ಮಂದಿರ ಕಟ್ಟಿದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಹೀಗಾಗಿ, ಮೋದಿಯವರನ್ನು ಕಂಡು ಧನ್ಯವಾದ ಸಮರ್ಪಿಸುವ ಉತ್ಸಾಹ ಜನರಲ್ಲಿ ಜಾಸ್ತಿ ಇದೆ. ಜನರ ಭಾವನಾತ್ಮಕ ಸ್ಪಂದನೆ ಹೇಗಿರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಹಲವರು ಬೈಕ್ ರ‍್ಯಾಲಿ, ಮೆರವಣಿಗೆ ಮೂಲಕವೂ ಇಲ್ಲಿಗೆ ಆಗಮಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದರು.

ನರೇಂದ್ರ ಮೋದಿಯವರು ೨೦೦೮ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಶಿರಸಿಗೆ ಆಗಮಿಸಿದ್ದರು. ವಿಕಾಸಾಶ್ರಮ ಬೈಲಿನಲ್ಲಿ ಅವರು ಸಾರ್ವಜನಿಕ ಸಭೆ ನಡೆಸಿದ್ದರು. ಶಿರಸಿ ಸಿದ್ದಾಪುರಕ್ಕೆ ಮೊದಲ ಬಾರಿ ನಿಂತಾಗ ಅವರು ಆಗಮಿಸಿ ನನಗಾಗಿ ಮತ ಯಾಚಿಸಿದ್ದರು. ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಮೋದಿಯವರು ಜಿಲ್ಲೆಗೆ ಆಗಮಿಸಿ ಪ್ರಚಾರ ನಡೆಸಿದ್ದರು. ಶಿರಸಿಯ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಬರುತ್ತಿರುವುದು ಮೊದಲ ಬಾರಿಯಾಗಿದೆ ಎಂದ ಕಾಗೇರಿ, ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸಭೆ ನಡೆಸಲು ಇಂದು ನಮಗೆ ಅನುಮತಿ ಲಭಿಸಿದೆ. ಒಂದೆರಡು ದಿನದಲ್ಲಿ ಪಾರ್ಕಿಂಗ್ ಸೇರಿದಂತೆ ಎಲ್ಲವೂ ಸ್ಪಷ್ಟ ಚಿತ್ರಣ ನೀಡಲಿದ್ದೇವೆ. ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಜರ್ಮನ್ ಟೆಂಟ್ ನಿರ್ಮಿಸುತ್ತಿದ್ದೇವೆ. ಶಿರಸಿಯಲ್ಲಿ ಮೊದಲ ಬಾರಿ ಈ ತಂತ್ರಜ್ಞಾನ ಬಳಸಿ ಸಾರ್ವಜನಿಕ ಕಾರ್ಯಕ್ರಮ ಮಾಡುತ್ತಿದ್ದು, ತಿಪ್ಪಾದೇವಿ ಟೆಂಟ್ ಹೌಸ್ ನ ಕೃಷ್ಣೇಗೌಡ್ರು ಸ್ಥಳದಲ್ಲಿಯೇ ಇದ್ದು ನಿರ್ಮಾಣದ ಜವಾಬ್ದಾರಿ ವಹಿಸಿದ್ದಾರೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾರ್ಯಕರ್ತರ ೨೫ ತಂಡಗಳನ್ನು ರಚಿಸಿ ಬೇರೆ ಬೇರೆ ಜವಾಬ್ದಾರಿಗಳನ್ನು ಅವರಿಗೆ ವಹಿಸಿದ್ದೇವೆ. ಒಂದು ಲಕ್ಷಕ್ಕೂ ಮೀರಿ ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ಬಿಜೆಪಿ ಪ್ರಮುಖರಾದ ಸದಾನಂದ ಭಟ್, ಆನಂದ ಸಾಲೇರ, ಗುರುಪ್ರಸಾದ ಹೆಗಡೆ, ಶ್ರೀನಿವಾಸ ಹೆಬ್ಬಾರ್, ಸುರೇಶ್ಚಂದ್ರ ಹೆಗಡೆ, ಗಣಪತಿ ನಾಯ್ಕ, ನಂದನ ಸಾಗರ, ಗಣೇಶ ಪ್ರಭು, ಕುಮಾರ ಬೋರ್ಕರ್ ಇತರರಿದ್ದರು. #ಶ್ರೀನಿವಾಸ_ಹೆಬ್ಬಾರ್ ಸಹ ಭೇಟಿ ನೀಡಿದರು.

 #ಶಿರಸಿ ರಾಷ್ಟ್ರ ವಾಹಿನಿಗೆ ಅಲ್ಪ ಸಂಖ್ಯಾತರು ಬರದಂತೆ ಮಾಡಿ ಬಿ ಜೆ ಪಿ,  #ಆರ್_ಎಸ್_ಎಸ್ ಮೇಲೆ ಗೂಬೆ ಕೂರಿಸಿ  #ಕಾಂಗ್ರೆಸ್ ಒಡೆದು ಆಳುತ್ತಿದೆ...
24/04/2024

#ಶಿರಸಿ
ರಾಷ್ಟ್ರ ವಾಹಿನಿಗೆ ಅಲ್ಪ ಸಂಖ್ಯಾತರು ಬರದಂತೆ ಮಾಡಿ ಬಿ ಜೆ ಪಿ, #ಆರ್_ಎಸ್_ಎಸ್ ಮೇಲೆ ಗೂಬೆ ಕೂರಿಸಿ #ಕಾಂಗ್ರೆಸ್ ಒಡೆದು ಆಳುತ್ತಿದೆ
ಅಲ್ಪಸಂಖ್ಯಾತ ಬಾಹುಲ್ಯ ಇರುವ ಬೂತ್ ಗಳಲ್ಲಿ ಒಂದಂಕಿ ಮತ ಬಿದ್ದರೆ ಮುಂದೆ ಅದೇ ರೀತಿ ಮುಂಬರುವ ದಿನಗಳಲ್ಲಿ ಇದೇ ನಿರ್ಧಾರ ಕೈಕೊಂಡಲ್ಲಿ ವ್ಯವಸ್ಥೆ ಏನಾಗಬಹುದು
ಹಾಗಾಗಿ ಅಲ್ಪಸಂಖ್ಯಾತರು ರಾಷ್ಟ್ರ ದ ಮುಖ್ಯ ವಾಹಿನಿಗೆ ಬರಬೇಕು ಎಂದು ಬಿ ಜೆ ಪಿ ಲೋಕ ಸಭಾ ಅಭ್ಯರ್ಥಿ #ವಿಶ್ವೇಶ್ವರ_ಹೆಗಡೆ_ಕಾಗೇರಿ ಹೇಳಿದರು
ಅವರು ಮುಂದುವರಿದು ಮಾತನಾಡಿ ಮೋದಿಜಿ ನೀಡುವ ರೇಷನ್, ವಾಕ್ಸಿನ್ ಆಯುಷ್ಮಾನ್ ಪ್ರಯೋಜನ ಎಲ್ಲವನ್ನು ಪಡೆದು ಕೊಂಡು ಓಟ್ ಮಾತ್ರ ಬೇರೆಯವರಿಗೆ ಅಂದರೆ ಬಹುಸಂಖ್ಯಾತರು ಅದೆಯೋಚನೆ ಮಾಡಿದರೆ ಏನಾಗಬಹುದು ಎಂದರು
ಮೋದಿಜಿ ಕಾರ್ಯಕ್ರಮದ ಕುರಿತು ಕಾರ್ಯಕರ್ತರು, ಸಾರ್ವಜನಿರು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಲು ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಬರುವಂತೆ ಆಹ್ವಾನ ನೀಡಬೇಕು ಕಾರ್ಯಕರ್ತರು ಮೊದಲೇ ಆಗಮಿಸಿ ನಮ್ಮನ್ನಮ್ಮ ಭಾಗದಿಂದ ಬಂದ ಸಾರ್ವಜನಿಕರಿಗೆ ಆಸನ ವ್ಯವಸ್ಥೆ ಮಾಡಿಕೊಡಬೇಕು ಎಂದರು

ಈ ಸಭೆಯಲ್ಲಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಮಂಡಲದ ಅಧ್ಯಕ್ಷರಾದ ಉಷಾ ಹೆಗಡೆ, ಆನಂದ್ ಸಾಲೆರ್, ಮಾಧ್ಯಮ ವಕ್ತಾರ ಸದಾನಂದ ಭಟ್, ರಮಾಕಾಂತ್ ಭಟ್, ಮಾಲತೇಶ್ ಹಾದಿಮನಿ, ನರಸಿಂಹ ಹೆಗಡೆ, ಮಂಜುನಾಥ್ ಬಂಡಾರಿ ಇದ್ದರು

 #ಶಿರಸಿ #ವಿನಾಯಕ_ಲೇಓಟ್ ನಲ್ಲಿ  ಜಾಗ ಖರೀದಿಸುವವರೆ ಎಚ್ಚರ ಎಚ್ಚರ!!!ಬಣ್ಣ ಬಣ್ಣದ  ಜಾಹೀರಾತುಗಳಿಗೆ ಮರುಳಾಗದಿರಿ!!!           Mustagi Gro...
23/04/2024

#ಶಿರಸಿ
#ವಿನಾಯಕ_ಲೇಓಟ್ ನಲ್ಲಿ ಜಾಗ ಖರೀದಿಸುವವರೆ ಎಚ್ಚರ ಎಚ್ಚರ!!!

ಬಣ್ಣ ಬಣ್ಣದ ಜಾಹೀರಾತುಗಳಿಗೆ ಮರುಳಾಗದಿರಿ!!!


Mustagi Groups Mustagi Groups

 #ಶಿರಸಿ #ಶಿರಸಿ_ಶ್ರೀ_ಮಾರಿಕಾಂಬಾ_ಜಾತ್ರೆಗೆ ತಯಾರಿಸಿದ ಲಕ್ಷಾಂತರ  #ಲಡ್ಡುಗಳು(ಪ್ರಸಾದ) ಹಾಗೆ ಉಳಿದಿವೆ ಇದಕ್ಕೆ ಯಾರು ಹೊಣೆ? ಅಡಳಿತ ಮಂಡಳಿ ಎ...
29/03/2024

#ಶಿರಸಿ
#ಶಿರಸಿ_ಶ್ರೀ_ಮಾರಿಕಾಂಬಾ_ಜಾತ್ರೆಗೆ ತಯಾರಿಸಿದ ಲಕ್ಷಾಂತರ #ಲಡ್ಡುಗಳು(ಪ್ರಸಾದ) ಹಾಗೆ ಉಳಿದಿವೆ ಇದಕ್ಕೆ ಯಾರು ಹೊಣೆ? ಅಡಳಿತ ಮಂಡಳಿ ಎನು ಮಾಡುತ್ತಿದೆ? ಈ ನಷ್ಠಕ್ಕೆ ಹೊಣೆ ಯಾರು?



Gangubai mankar IAS Bhimanna Naik Vishweshwar Hegde Kageri

 #ಕೊಟೇಕರೆಯ_ದುಬೈ_ಅಂಡರ್ವಾ_ಟರ್_ಫಿಶ್_ಟನಲ್_ಅಕ್ವೇರಿಯಂನಲ್ಲಿ ಮಹಿಳೆಯರಿಗೆ ತೊಂದರೆ ನೀಡುತ್ತಿರುವ ಸಿಬ್ಬಂದಿಗಳು: ನೋಂದ ಮಹಿಳೆಯರ ಆರೋಪ #ನಗರದ ...
25/03/2024

#ಕೊಟೇಕರೆಯ_ದುಬೈ_ಅಂಡರ್ವಾ_ಟರ್_ಫಿಶ್_ಟನಲ್_ಅಕ್ವೇರಿಯಂನಲ್ಲಿ ಮಹಿಳೆಯರಿಗೆ ತೊಂದರೆ ನೀಡುತ್ತಿರುವ ಸಿಬ್ಬಂದಿಗಳು: ನೋಂದ ಮಹಿಳೆಯರ ಆರೋಪ

#ನಗರದ ಮಾರಿಕಾಂಬಾ_ಜಾತ್ರೆಗೆ ಅದೆಷ್ಟೋ ಉರಿನಿಂದ ಭಕ್ತಾಧಿಗಳು ಆಗಮಿಸುತ್ತಾರೆ. ಜಾತ್ರೆಯಲ್ಲಿ ಮೋಜು ಮಸ್ತಿ ಸಹಜ, ಆದರೆ ಕೋಟೆ ಕೆರೆಯ ದುಬೈ ಅಂಡರ್ ವಾಟರ್ ಫಿಶ್ ಟನಲ್ ಅಕ್ವೇರಿಯಂನಲ್ಲಿ ಮಹಿಳೆಯರಿಗೆ ತೊಂದರೆ ನೀಡುತ್ತಿರುವ ಆರೋಪ ಕೇಳಿ ಬಂದಿದೆ.
ಮನರಂಜನೆ ಹೆಸರಿನಲ್ಲಿ ೧೦೦ ರೂ. ವಸೂಲಿ ಮಾಡುತ್ತಿದ್ದು, ಹೊರಗಿನ ಬೋರ್ಡ್ ನಲ್ಲಿ ದೊಡ್ಡ ದೊಡ್ಡ ಮೀನುಗಳು ಪೋಟೋ ಹಾಕಿ ಹಗಲು ದರೋಡೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಡುಬ್ಲಿಕೇಟ್ ಬಿಲ್:
ಜನಸಾಮಾನ್ಯರು ಖರೀದಿಸುವ ದಿನಸಿ ವಸ್ತುಗಳಿಗೂ ಜಿ.ಎಸ್.ಟಿ ವಿಧಿಸುತ್ತದೆ. ಆದರೆ, ಕೋಟೆಕೆರೆಯ ದುಬೈ ಅಂಡರ್ ವಾಟರ್ ಫಿಶ್ ಟನಲ್ ಅಕ್ವೇರಿಯಂನಲ್ಲಿ ಡುಪ್ಲಿಕೆಟ್ ಬಿಲ್ ನೀಡುತ್ತಿದ್ದಾರೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಮೀನುಗಾರಿಕೆ, ನಗರಸಭೆಯ ಪರವಾನಗಿ ಪಡೆಯದೇ, ಬೇಕಾಬಿಟ್ಟಿ ಮನಬಂದಂತೆ ವರ್ತಿಸುತ್ತಿದ್ದಾರೆ. ಅಲ್ಲದೇ, ಅಲ್ಲಿ ನೇಮಿಸಲ್ಪಟ್ಟ ಸಿಬ್ಬಂದಿಗಳು ಮಹಿಳೆಯರ ಜತೆ ಅನುಚಿತ ವರ್ತನೆ ಮಾಡುತ್ತಿದ್ದಾರೆ. ಒಳಗಡೆ ಭದ್ರತೆ ಹಾಗೂ #ಸಿಸಿ_ಕ್ಯಾಮರಾಗಳು ಇಲ್ಲ. ಇದರ ಕುರಿತು ಸಂಬಂಧಿಸಿದ ಇಲಾಖೆಯ ಹೆಚ್ಚಿನ ಗಮನವಹಿಸಬೇಕು ಎಂದು ನೋಂದ ಮಹಿಳೆಯರು ಒತ್ತಾಯಿಸುತ್ತಿದ್ದಾರೆ.


Shivaram Hebbar Siddaramaiah
Madhu Bangarappa
Bhimanna Naik
Gangubai mankar IAS

24/03/2024

#ಉತ್ತರಕನ್ನಡ
#ಲೋಕಸಭಾ_ಚುನಾವಣೆ #ಉತ್ತರ_ಕನ್ನಡ ಬ.ಜ.ಪಾ ಅಭ್ಯರ್ಥಿಯಾಗಿ #ವಿಶ್ವೇಶ್ವರ_ಹೆಗಡೆ_ಕಾಗೇರಿ ಘೋಷಣೆಯಾದ ಹಿನ್ನೆಲೆಯಲ್ಲಿ ಮೊದಲ ಪ್ರತಿಕ್ರಿಯೇ.

Vishweshwar Hegde Kageri


 #ಭಟ್ಕಳಇಲ್ಲಿನ ಮಾರುಕೇರಿಯ ಕೋಟಖಂಡದ ಎಸ್ಸೆಸ್ಸೆಲ್ಸಿಯುಲ್ಲಿ ಓದುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿ ಅನಂತ ನಾಗರಾಜ ಹೆಬ್ಬಾರ (15) ಈತ ಕಳೆದ ಡಿ...
17/03/2024

#ಭಟ್ಕಳ
ಇಲ್ಲಿನ ಮಾರುಕೇರಿಯ ಕೋಟಖಂಡದ ಎಸ್ಸೆಸ್ಸೆಲ್ಸಿಯುಲ್ಲಿ ಓದುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿ ಅನಂತ ನಾಗರಾಜ ಹೆಬ್ಬಾರ (15) ಈತ ಕಳೆದ ಡಿಸೆಂಬರ್ 15 ರಂದು ರಾತ್ರಿ ತನ್ನ ಮನೆಯ ಬಚ್ಚಲು ಒಲೆಗೆ (ಬೊಯ್ಲರ್) ಬೆಂಕಿ ಹಿಡಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗಂಭೀರವಾಗಿ ಸುಟ್ಟುಕೊಂಡು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಐಸಿವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನಿಗೆ ಶೇ. 56 ರಷ್ಟು ಸುಟ್ಟ ಗಾಯವಾಗಿರುವುದರಿಂದ 12ಕ್ಕೂ ಅಧಿಕ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ವಿಪರ್ಯಾಸವೆಂದರೆ ಈತನಿಗೆ ಎರಡೂ ಕಣ್ಣಿನ ದೃಷ್ಟಿದೋಷ ಉಂಟಾಗಿದೆ. ಮತ್ತಷ್ಟು ದಿನ ಈತ ಐಸಿಯುವಿನಲ್ಲೇ ಚಿಕಿತ್ಸೆ ಪಡೆಯಬೇಕಾದ ಅನಿವಾಯರ್ಯತೆ ಇದೆ. ಈಗಾಗಲೇ ಈತನ ಚಿಕಿತ್ಸೆಗೆ 20 ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದ್ದು, ಮತ್ತಷ್ಟು ಚಿಕಿತ್ಸೆಗೆ ಮತ್ತೆ 20 ಲಕ್ಷಕ್ಕೂ ಅಧಿಕ ಹಣ ಅಗತ್ಯವಿದೆ. ಹನಿ ಹನಿ ಕೂಡಿದರೆ ಹಳ್ಳ ಎಂಬ ಗಾದೆಯಂತೆ ಅನಂತನ ಚಿಕಿತ್ಸೆಗೆ ತಾವು ತಮ್ಮ ಕೈಲಾದಷ್ಟು ಮಟ್ಟಿಗೆ ನೆರವು ನೀಡಿ ಆತ ಗುಣ ಆಗಿ ಮನೆಗೆ ಬರಲು ಮಾನವೀಯತೆ ತೋರಬೇಕಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಮೊನಂ : 8660728139 ಗೆ ಸಂಪರ್ಕಿಸಬಹುದು. ಅನಂತನ ಚಿಕಿತ್ಸೆಗೆ ಕೆನರಾ ಬ್ಯಾಂಕ್, ಭಟ್ಕಳ ಶಾಖೆ ಎಸ್ ಬಿ ನಂ: 03052200095295, ಐಎಪ್ಎಸ್ಸಿ ಕೋಡ್ : CNRB0010305 ಗೆ ಧನ ಸಹಾಯ ಮಾಡುವುದರ ಮೂಲಕ ನೆರವು ನೀಡಬಹುದು.

 #ಶಿರಸಿ #ಅನಿಲಕುಮಾರ_ಸಿದ್ದಪ್ಪ‌ಮುಷ್ಟಗಿ (  ) ಅವರ ಕುರಿತು‌ಇನ್ನೊಂದು ಪ್ರಕಟಣೆ  ಗಮನಿಸಿ. ಗ್ರಾಹಕರೆ ಎಚ್ಚರ ಎಚ್ಚರ!!!! ಜಾಹೀರಾತುಗಳಿಗೆ ಮರು...
15/03/2024

#ಶಿರಸಿ
#ಅನಿಲಕುಮಾರ_ಸಿದ್ದಪ್ಪ‌ಮುಷ್ಟಗಿ ( ) ಅವರ ಕುರಿತು‌ಇನ್ನೊಂದು ಪ್ರಕಟಣೆ ಗಮನಿಸಿ.

ಗ್ರಾಹಕರೆ ಎಚ್ಚರ ಎಚ್ಚರ!!!! ಜಾಹೀರಾತುಗಳಿಗೆ ಮರುಳಾಗದಿರಿ.

Mustagi Groups

14/03/2024

#ಶಿರಸಿ
#ವಿನಾಯಕ_ಲೇಓಟ್ ನಲ್ಲಿ ಜಾಗ ಖರೀದಿಸುವವರೆ ಎಚ್ಚರ ಎಚ್ಚರ!!!

ಬಣ್ಣ ಬಣ್ಣದ ಜಾಹೀರಾತುಗಳಿಗೆ ಮರುಳಾಗದಿರಿ!!!


Mustagi Groups Mustagi Groups

Contact us for all kind of media related work

14/03/2024

#ಶಿರಸಿ
ಈಗಾಗಲೇ ₹ವಿನಾಯಕ‌_ಲೇಓಟ್ ನಲ್ಲಿ ಜಾಗ ಖರೀದಿಸುವವರು ದಾಖಲೆಗಳನ್ನು ಸರಿಯಾಗಿ ಪರೀಶಿಲಿಸಿ ಖರೀದಿಸಿ ಎಂದು ಸುದ್ದಿ ಪ್ರಕಟಿಸಿದ್ದರು ಅದರ ಹಿನ್ನೆಲೆಯಲ್ಲಿ ನಮ್ಮ‌ಮೇಲೆ 5ಕೋಟಿ‌ಯ #ಮಾನ_ನಷ್ಟ ಮೊಕದ್ದಮೆ ಹಾಕಿರುವುದಾಗಿ ನೋಟಿಸ್ ಪ್ರತಿ ಹಾಕಿದ್ದರು ಆದರೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.. ಸದರಿ ಜಾಗದ ಕುರಿತು #ಟಿ_ಎಸ್_ಎಸ್. ನವರು ಪ್ರಕಟಣೆ ನೀಡಿರುತ್ತಾರೆ ಯಾರಾದರು ಖರೀದಿಸಿದ್ದಲ್ಲಿ‌ ಪರಿಶೀಲಿಸಿ.


TSS Ltd

Contact us for all kind of media related work

 #ಶಿರಸಿದೊಡ್ನಳ್ಳಿ ಪಂಮಚಾಯತ್ ನ  ಬಚಗಾವನಲ್ಲಿ ಮುಂದುವರೆದ ಅಕ್ರಮ ಮಣ್ಣು ಗಣಿ. ಸ್ಥಳಿಯ ಪಂಚಾಯತ್ ಸದಸ್ಯರ ಮುಂದಾಳತ್ವದಲ್ಲಿ   ನಗರಸಭಾ ಸದಸ್ಯರು...
26/02/2024

#ಶಿರಸಿ
ದೊಡ್ನಳ್ಳಿ ಪಂಮಚಾಯತ್ ನ ಬಚಗಾವನಲ್ಲಿ ಮುಂದುವರೆದ ಅಕ್ರಮ ಮಣ್ಣು ಗಣಿ. ಸ್ಥಳಿಯ ಪಂಚಾಯತ್ ಸದಸ್ಯರ ಮುಂದಾಳತ್ವದಲ್ಲಿ ನಗರಸಭಾ ಸದಸ್ಯರು ಹಾಗೂ ಇತರೆ ಗ್ರಾಮಪಂಚಾಯತ್ ಸದ್ಯರು ಬಾಗಿ. ಕಣ್ಣು ಮುಚ್ವಿ ಕುಳಿತ ಇಲಾಖೆ. ಮಣ್ಣು ಗಣಿಯಿಂದ ಶಾಲೆಗೆ ಬಂತು ಕುತ್ತು. ಶಾಲೆಯ ಸಮೀಪದಲ್ಲಿ ಮಣ್ಣು ತೆಗೆದುದರಿಂದ ಶಾಲೆ ಬೀಳುವ ಸ್ಥಿತಿಗೆ ಬಂದಿದೆ.



Bhimanna Naik
Shivaram Hebbar
Madhu Bangarappa
Siddaramaiah Gangubai mankar IAS
Hariprakash Konemane
ಮಂಕಾಳ ವೈದ್ಯ

23/02/2024

#ಶಿರಸಿಯ #ಗಣೇಶನಗರದ ಪಿಡಬ್ಲ್ಯೂ ಪ್ರವಾಸಿ ಮಂದಿರದ ಸಮೀಪದಲ್ಲಿರುವ #ಯಾತ್ರಿ_ನಿವಾಸದ ಬಾರ್ ನಲ್ಲಿ #ನಗರಸಭೆ_ಸದಸ್ಯ #ಯಶವಂತ_ಮರಾಠಿಯು ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ವೈರಲ್ ಆಗಿದೆ.

#ನಗರಸಭೆ

Bhimanna Naik
Shivaram Hebbar
Madhu Bangarappa
Siddaramaiah
Gangubai mankar IAS

ಶಿರಸಿ:ಪರಿಶಿಷ್ಟರ ಮತ್ತು ದಲಿತರ ಅನುದಾನವನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಎಸ್ಸಿ ಮತ್ತು ಎಸ್...
23/02/2024

ಶಿರಸಿ:
ಪರಿಶಿಷ್ಟರ ಮತ್ತು ದಲಿತರ ಅನುದಾನವನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಎಸ್ಸಿ ಮತ್ತು ಎಸ್ಟಿ ಘಟಕದಿಂದ ನಗರ ಅಂಚೆ ವೃತ್ತದ ಬಳಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ದಲಿತರು ಮತ್ತು ಪರಿಶಿಷ್ಟರಿಗೆ ಮೀಸಲಿಟ್ಟ 11 ಸಾವಿರ ಕೋಟಿ ರೂ. ಅನುದಾನವನ್ನು ಅಲ್ಪಸಂಖ್ಯಾತರ ಓಲೈಕೆಗೆ ಬಳಕೆ ಮಾಡಿಕೊಳ್ಳುತ್ತಿದೆ. ಅಂದಿನ ಕಾಂಗ್ರೆಸ್ ಪ್ರಧಾನಿ ದಿ.ಜವಾಹಾಲ್ ನೆಹರು ದಲಿತರಿಗೆ ಮತ್ತು ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ನೀಡಿದಾಗ ವಿರೋಧ ಮಾಡಿದ್ದರು. ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಕೇವಲವಾಗಿ ಕಾಂಗ್ರೆಸ್ ಸರ್ಕಾರ ನಡೆಸಿಕೊಂಡು, ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಿರಲಿಲ್ಲ. ಈಗ ದಲಿತರ ಮತ್ತು ಪರಿಶಿಷ್ಟ ವರ್ಗದವರ ಹಣವನ್ನು ಅಲ್ಪ ಸಂಖ್ಯಾತರಿಗೆ ನೀಡಲು ಹೊರಟಿದೆ. ಇದನ್ನು ನಾವೆಲ್ಲರೂ ವಿರೋಧಿಸಬೇಕಿದೆ ಎಂದರು.
ಅಲ್ಪಸಂಖ್ಯಾತರ ಕಲ್ಯಾಣಕ್ಕೆ ೧೦ ಸಾವಿರ ಕೋಟಿ ರೂ. ಅನುದಾನ ಮೀಸಲಿಡುತ್ತೇವೆ ಎಂದು ಹೇಳಿ, ಭಾರತದ ಸನಾತನ ಹಿಂದೂ ಸಂಸ್ಕೃತಿಯನ್ನು ಒಡೆಯುವ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ನಾವು ದಲಿತರ ಪರವಾಗಿದ್ದೇವೆ ಎಂದು ತೋರಿಕೆಗಾಗಿ ಹೇಳುತ್ತಾರೆಯೇ ಹೊರತು ನಿಜವಾಗಿಯೂ ದಲಿತರ ಅಭಿವೃದ್ಧಿ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ನಿಲುವನ್ನು ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎಸ್ಸಿ ಮೋರ್ಚಾ ಅಧ್ಯಕ್ಷ ನಂದನ ಬೋರ್ಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ, ಪ್ರಶಾಂತ ನಾಯ್ಕ ಕುಮಟಾ, ಶಿರಸಿ ಗ್ರಾಮೀಣ ಮಂಡಲದ ಅಧ್ಯಕ್ಷೆ ಉಷಾ ಹೆಗಡೆ, ನಗರಸಭೆ ಸದಸ್ಯ ಗಣಪತಿ ನಾಯ್ಕ ಮತ್ತಿತರರು ಇದ್ದರು.

 #ಶಿರಸಿ ಇಲ್ಲಿನ  #ರಾಜೀವನಗರ ನಂಬರ್ ೨  #ಅಂಗನವಾಡಿ ಕೇಂದ್ರವು ತಾತ್ಕಾಲಿಕ ತಗಡಿನ ಶೆಡ್ ನಲ್ಲಿ ನಡೆಯುತ್ತಿದ್ದು, ಶಾಲೆ ಮತ್ತು ಅಂಗನವಾಡಿ ಕುರಿ...
22/02/2024

#ಶಿರಸಿ
ಇಲ್ಲಿನ #ರಾಜೀವನಗರ ನಂಬರ್ ೨ #ಅಂಗನವಾಡಿ ಕೇಂದ್ರವು ತಾತ್ಕಾಲಿಕ ತಗಡಿನ ಶೆಡ್ ನಲ್ಲಿ ನಡೆಯುತ್ತಿದ್ದು, ಶಾಲೆ ಮತ್ತು ಅಂಗನವಾಡಿ ಕುರಿತು ಕಾಳಜಿಯುಳ್ಳ #ಜಿಲ್ಲಾ_ಉಸ್ತುವಾರಿ_ಸಚಿವರು ಇತ್ತ ಗಮನಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ರಾಜೀವನಗರದ ಅಂಗನವಾಡಿ ಕೇಂದ್ರವು ಕಳೆದ ೭ ವರ್ಷಗಳಿಂದ ತಾತ್ಕಾಲಿಕ ಶೆಡ್ ನಲ್ಲಿ ನಡೆಯುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ೨೯ ವಿದ್ಯಾರ್ಥಿಗಳಿದ್ದಾರೆ. ಅಂಗನವಾಡಿ, ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಕುರಿತು ಮಾತನಾಡುವ #ಜಿಲ್ಲಾ_ಉಸ್ತುವಾರಿ_ಸಚಿವ #ಮಂಕಾಳ_ವೈದ್ಯ ಇಲ್ಲಿಗೆ ಒಮ್ಮೆ ಭೇಟಿ ನೀಡಿ, ಪರಿಸ್ಥಿತಿ ಗಮನಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.



Bhimanna Naik
Shivaram Hebbar
Madhu Bangarappa
Siddaramaiah
Gangubai mankar IAS
Hariprakash Konemane

Mankal Vaidya
ಮಂಕಾಳ ವೈದ್ಯ

 #ಶಿರಸಿತ್ಯಾಗವನ್ನು ಬಹಳ ಎತ್ತರಕಕ್ಕೆ ಇಟ್ಟ ಸಂಸ್ಕೃತಿ ನಮ್ಮದು. ಹಣ, ಅಧಿಕಾರ, ಪ್ರಜೆಗಳಿಂದ ಮೋಕ್ಷ ಸಿಗುವುದಿಲ್ಲ. ತ್ಯಾಗದಿಂದ ಭಗವಂತನನ್ನು ಪಡ...
21/02/2024

#ಶಿರಸಿ
ತ್ಯಾಗವನ್ನು ಬಹಳ ಎತ್ತರಕಕ್ಕೆ ಇಟ್ಟ ಸಂಸ್ಕೃತಿ ನಮ್ಮದು. ಹಣ, ಅಧಿಕಾರ, ಪ್ರಜೆಗಳಿಂದ ಮೋಕ್ಷ ಸಿಗುವುದಿಲ್ಲ. ತ್ಯಾಗದಿಂದ ಭಗವಂತನನ್ನು ಪಡೆಯಬಹುದು. ತ್ಯಾಗ ಮಾಡುವ ವ್ಯವಸ್ಥೆಗೆ ಸನ್ಯಾಸ ಎಂದು ಕರೆಯುತ್ತಾರೆ ಎಂದು ಶಿರಳಗಿಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ನುಡಿದರು.
ಅವರು ತಾಲೂಕಿನ ಸೋಂದ ಸ್ವರ್ಣವಲ್ಲೀ ಶ್ರೀ ಮಠದಲ್ಲಿ ನಡೆಯುತ್ತಿರುವ ಶಿಷ್ಯ ಮಹೋತ್ಸವದ ನಾಲ್ಕನೆಯ ದಿನ ಸರ್ವಜ್ಞೇಂದ್ರ ಸರಸ್ವತೀ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ನಿದಿ ಧ್ಯಾಸನ ಕುರಿತು ಆಶೀರ್ವಚನ ನೀಡಿದರು.

ಮನುಷ್ಯ ಜನ್ಮ ಪ್ರಾಪ್ತಿಗೆ ಉದ್ದೇಶವಿದ್ದು, ಜಗತ್ತಿನಲ್ಲಿ ನಮ್ಮ ಮನಸ್ಸನ್ನು ಶಾಂತಿ ಮಾಡುವುದು ಜ್ಞಾನ ಮತ್ತು ಅಧ್ಯಾತ್ಮ ವಿದ್ಯೆ. ಮೋಕ್ಷವನ್ನು ಪಡೆಯಲು ಸಾಧನೆ ಮಾಡಬೇಕಾಗುತ್ತದೆ. ಪರಂಪರಾ ಮತ್ತು ಸಹಕಾರಿ ಮತ್ತು ಸಾಕ್ಷಾತ್ ಸಾಧನೆಯಿಂದ ಪರಮಾತ್ಮನನ್ನು ಪಡೆಯಬಹುದು ಎಂದರು.

ಆಲೋಕಯಾಂಬ ಲಲಿತೇ ಗ್ರಂಥವನ್ನು ಲೋಕಾರ್ಪಣೆಗೊಳಿಸಿ, ಚಾಮರಾಜಪೇಟೆಯ ಕೂಡ್ಲಿ ಶೃಂಗೇರಿ ಮಠದ ಶ್ರೀ ವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ,

ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಹೊಳೆನರಸೀಪುರದ ಆಧ್ಯಾತ್ಮ ಪ್ರಕಾಶನ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀ ಸ್ವಾಮೀಜಿ, ತುರುವೇಕೆರೆಯ ಶ್ರೀ ಪ್ರಣವಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಯತಿಧರ್ಮ ಮತ್ತು ಲೋಕಧರ್ಮದ ಕುರಿತು ಮೈಸೂರಿನ ಭಾರತೀ ಯೋಗಧಾಮದ ಕೆ.ಎಲ್.ಶಂಕರನಾರಾಯಣ ಜೋಯಿಸ್ ಉಪನ್ಯಾಸ ನೀಡಿದರು. ವಿದ್ವಾನ್ ಮಹೇಶ ಭಟ್ಟ, ವಿದ್ವಾನ್ ವಿದ್ಯಾನಂದ ಭಟ್ಟ ವೇದಘೋಷ ಹಾಡಿದರು. ಯಲ್ಲಾಪುರ ಸೀಮಾ ಮಾತೆಯರು ಪ್ರಾರ್ಥಿಸಿದರು. ಎನ್.ಜಿ.ಹೆಗಡೆ ಭಟ್ರಕೇರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ.ವಿನಾಯಕ ಭಟ್ಟ ಗುಂಜಗೋಡ ನಿರೂಪಿಸಿದರು. ಅನಂತ ಭಟ್ಟ ಹುಳಗೋಳ ವಂದಿಸಿದರು.

ನಮ್ಮ ಮಠಕ್ಕೆ ಹೊಸ ಗುರುಗಳ ಆಗಮವಾಗುತ್ತಿದೆ. ಇದೊ ದೊಡ್ಡ ಸಂಭ್ರಮ. ವ್ಯಾಸ ಪೀಠದಿಂದ ಬರುವ ಅಮೃತಧಾರೆಯನ್ನು ನಾವೆಲ್ಲರೂ ಸವಿಯಬೇಕು.
#ಅನಂತಕುಮಾರ_ಹೆಗಡೆ.

21/02/2024

#ಶಿರಸಿ
#ಗಣೇಶ_ನಗರದ ಅಂಗನವಾಡಿ ಬಾವಿಗೆ ಸುಕಾಂತ್ಯ ಹಾಡಿದ #ಅನಂತಕುಮಾರ_ಹೆಗಡೆ. ಅವರೆ ಮುಂದೆ ನಿಂತು ಬಾವಿ ತೆಗೆಸಲು ನಿರ್ದಾರ. ಜಿಲ್ಲಾಧಿಕಾರಿಗಳಿಂದ ಯಾವುದೇ ತೊಂದರೆ ಆಗದೆ ಗೌರಿ ನಾಯ್ಕರಿಂದ ಬಾವಿ ತೆಗೆಸಲು ಸೂಚನೆ ಹಾಗೂ ಬಾವಿಗೆ ಗೌರಿ‌ನಾಯ್ಕ ಹೆಸರಿಡುವಂತೆ ಸೂಚಿಸಿದ ಅನಂತಕುಮಾರ ಹೆಗಡೆ.



🔥

Bhimanna Naik Shivaram Hebbar Madhu Bangarappa Siddaramaiah Siddaramaiah Dc Office Karwar Gangubai mankar IAS Hariprakash Konemane
Anantkumar Hegde

 #ಶಿರಸಿನಗರದ ಎ.ಸಿ. ಕಛೇರಿಯ ಬಳಿ ಗೌರಿ ನಾಯ್ಕ ಹಾಗೂ ವಿವಿದ ಸಂಘಟನೆಗಳಿಂದ ಎ.ಸಿ‌ ಕಛೇರಿಯ ಬಳಿ ದರಣಿ ಹಾಗೂ ಪರವಾನಿಗೆ  ನೀಡುವವರೆಗೆ ಉಪವಾಸ ಸತ್...
21/02/2024

#ಶಿರಸಿ
ನಗರದ ಎ.ಸಿ. ಕಛೇರಿಯ ಬಳಿ ಗೌರಿ ನಾಯ್ಕ ಹಾಗೂ ವಿವಿದ ಸಂಘಟನೆಗಳಿಂದ ಎ.ಸಿ‌ ಕಛೇರಿಯ ಬಳಿ ದರಣಿ ಹಾಗೂ ಪರವಾನಿಗೆ ನೀಡುವವರೆಗೆ ಉಪವಾಸ ಸತ್ಯಾಗ್ರಹ.

20/02/2024

#ಶಿರಸಿ
ಶಿರಸಿಯ #ಗಣೇಶ_ನಗರದ ಅಂಗನವಾಡಿ #ಬಾವಿಯನ್ನು ಮುಚ್ಚಿದ ಹಿನ್ನೆಲೆಯಲ್ಲಿ #ಭಾಗೀರಥಿ_ಗೌರಿ_ನಾಯ್ಕ ಅವರ ಮನದಾಳದ ಮಾತು.


Bhimanna Naik
Shivaram Hebbar
Madhu Bangarappa
Siddaramaiah
Gangubai mankar IAS
Hariprakash Konemane
GST Suvidha Kendra

Address

SH 93, Sirsi 581401
Sirsi
581402

Alerts

Be the first to know and let us send you an email when Swasthik Media posts news and promotions. Your email address will not be used for any other purpose, and you can unsubscribe at any time.

Contact The Business

Send a message to Swasthik Media:

Videos

Share