22/10/2022
Urdu sammelana live
ಉರ್ದು ಕವಿ ಸಮ್ಮೇಳನ ನೇರ ಪ್ರಸಾರ
ಭಾರತದ ಅನೇಕ ರಾಜ್ಯಗಳ ಖ್ಯಾತ ಕವಿಗಳು ಭಾಗವಹಿಸಿದ್ದಾರೆ.
ಅಖಿಲ ಭಾರತ ಉರ್ಧು ಕವಿ ಸಮ್ಮೇಳನ - ೨೦೨೨ ಕೊಪ್ಪಳ ಸಾಹಿತ್ಯ ಭವನ ಶನಿವಾರ ೨೨-೧೦-೨೨ ರಾತ್ರಿ ೮.೩೦ ಕ್ಕೆಪ್ರಥಮ ಬಾರಿಗೆ ಕೊಪ್ಪಳ ನಗರದಲ್ಲಿ...
PLEASE SUBSCRIBE TO OUR CHANNEL
Urdu sammelana live
ಉರ್ದು ಕವಿ ಸಮ್ಮೇಳನ ನೇರ ಪ್ರಸಾರ
ಭಾರತದ ಅನೇಕ ರಾಜ್ಯಗಳ ಖ್ಯಾತ ಕವಿಗಳು ಭಾಗವಹಿಸಿದ್ದಾರೆ.
ಅಖಿಲ ಭಾರತ ಉರ್ಧು ಕವಿ ಸಮ್ಮೇಳನ - ೨೦೨೨ ಕೊಪ್ಪಳ ಸಾಹಿತ್ಯ ಭವನ ಶನಿವಾರ ೨೨-೧೦-೨೨ ರಾತ್ರಿ ೮.೩೦ ಕ್ಕೆಪ್ರಥಮ ಬಾರಿಗೆ ಕೊಪ್ಪಳ ನಗರದಲ್ಲಿ...
ಮಂಡ್ಯ: ಕ್ಷಣಾರ್ಧದಲ್ಲಿ ನಾಗರಹಾವಿನಿಂದ ಮಗನನ್ನು ತಾಯಿಯೊಬ್ಬಳು ಕಾಪಾಡಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ತಾಯಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮದ್ದೂರಿನ ಚಾಮುಂಡೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಸದ್ಯ ಇವರು ಪಟ್ಟಣದ ಕೆಮ್ಮಣ್ಣನಾಲೆ ಸರ್ಕಲ್ ಸಮೀಪ ವಾಸವಾಗಿದ್ದಾರೆ. ವೈದ್ಯರಾಗಿ ಕೆಲಸ ಮಾಡುತ್ತಿರುವ ವಿಷ್ಣುಪ್ರಸಾದ್ ಪುತ್ರ ನಾಗರ ಹಾವಿನ ಕಡಿತದಿಂದ ಬಚಾವಾದ ಬಾಲಕನಾಗಿದ್ದಾನೆ. ಮನೆಯಿಂದ ಹೊರ ಹೋಗಲು ತಾಯಿ ಜೊತೆ ಹೊರ ಬಂದ ಬಾಲಕ ಮನೆಯ ಬಾಗಿಲ ಬಳಿ ಹರಿದು ಹೋಗುತ್ತಿದ್ದ ಬೃಹತ್ ಗಾತ್ರದ ನಾಗರಹಾವನ್ನ ಗಮನಿಸದೆ ಹಾವಿನ ಮುಂದೆ ಕಾಲಿಟ್ಟಿದ್ದಾನೆ. ಹೆಡೆ ಎತ್ತಿ ನಿಂತ ನಾಗರ ಹಾವನ್ನು ಕಂಡ ತಾಯಿ ಪ್ರಿಯಾ ಇನ್ನೆನೋ ಕಚ್ಚಲು ಮುಂದಾದಾಗ ಅಷ್ಟರಲ್ಲಿ ಮಗನನ್ನು ಕಾಪಾಡಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ವಿಡಿಯೋ ಇದೀಗ ವೈರಲ್ ಆಗಿದ್ದು, ತಾಯಿಯ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಮಂಡ್ಯ: ಕ್ಷಣಾರ್ಧದಲ್ಲಿ ನಾಗರಹಾವಿನಿಂದ ಮಗನನ್ನು ತಾಯಿಯೊಬ್ಬಳು ಕಾಪಾಡಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ವೈರಲ್ ಆಗಿದ್ದು, ಸಾರ.....
ವಿಜಯಪುರ: ಆಜಾದಿಕ ಅಮೃತ ಮಹೋತ್ಸವದ ಸಲುವಾಗಿ ದೇಶಾದ್ಯಂತ ಹರ್ ಘರ್ ತಿರಂಗ ಯಾತ್ರೆಯನ್ನು ನಡೆಸಲಾಗುತ್ತಿದೆ. ಈ ಸಲುವಾಗಿಯೇ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ತಾಳಿಕೋಟೆಯಲ್ಲಿ ಹಮ್ಮಿಕೊಂಡಿದ್ದಂತ ಕಾರ್ಯಕ್ರಮದಲ್ಲಿ, ಆನೆಯೊಂದಕ್ಕೆ ತಿರಂಗ ಹೊದಿಸಿ, ಸಿಂಗರಿಸಲಾಗಿತ್ತು. ಹೀಗೆ ಸಿಂಗಾರಗೊಂಡಿದ್ದಂತ ತಿರಂಗ ಹೊದ್ದಿದ್ದಂತ ಆನೆಯ ಮೇಲೆಯೇ ಬಿಜೆಪಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ( MLA A S Patil Nadahalli ) ತಮ್ಮ ಮಗನನ್ನು ಕೂರಿಸಿ, ಮೆರವಣಿಗೆ ಮಾಡಿ, ರಾಷ್ಟ್ರಧ್ವಜಕ್ಕೆ ( National Flag ) ಅಪಮಾನ ಮಾಡಿರುವಂತ ಘಟನೆ ಇಂದು ನಡೆದಿದೆ. ಇಂದು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ತಾಳಿಕೋಟೆಯಲ್ಲಿ 75 ಕಿಲೋ ಮೀಟರ್ ಯುವಜನ ಸಂಕಲ್ಪ ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು....
ವಿಜಯಪುರ: ಆಜಾದಿಕ ಅಮೃತ ಮಹೋತ್ಸವದ ಸಲುವಾಗಿ ದೇಶಾದ್ಯಂತ ಹರ್ ಘರ್ ತಿರಂಗ ಯಾತ್ರೆಯನ್ನು ನಡೆಸಲಾಗುತ್ತಿದೆ. ಈ ಸಲುವಾಗಿಯೇ ವಿಜಯಪುರ .....
ಇಂದು ಓಜನಹಳ್ಳಿ ಗ್ರಾಮದಲ್ಲಿ ಮನೆ ಮನೆಗಳ ಮೇಲೆ ಹರ್ ಘರ್ ತಿರಂಗಾ ತ್ರಿವಣ೯ ಧ್ವಜಾರೋಹಣವನ್ನು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ ಸಿ.ವಿ.ಚಂದ್ರಶೇಖರ ನೆರವೇರಿಸಿದರು. ಹರ್ ಘರ್ ತಿರಂಗಾ ೭೫ ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಗಳ ಮೇಲೆ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ ಸಿ ವಿ. ಚಂದ್ರಶೇಖರ ರವರು ಓಜನಹಳ್ಳಿ ಗ್ರಾಮದ ಮನೆ ಮನೆಗಳ ಮೇಲೆ ತ್ರಿವಣ೯ ದ್ವಜಾರೋಹಣ ಕಾಯ೯ಕ್ರಮಕ್ಕೆ ಧ್ವಜಾರೋಹಣ ಮಾಡುವದರ ಮೂಲಕ ಚಾಲನೆ ನೀಡಿದರು.ನಂತರ ಮಾತನಾಡಿದ ಸಿ ವಿ ಚಂದ್ರಶೇಖರವರು ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಆಸೆಯಂತೆ ದೇಶದ ಪ್ರತಿಯೊಂದು ಮನೆ ಮನೆಗಳ ಮೇಲೆ ತ್ರಿವಣ೯ ದ್ವಜಾರೋಹಣ ಮಾಡುವ ಮೂಲಕ ಪ್ರತಿಯೊಂದು ಗ್ರಾಮದಲ್ಲಿ ಪ್ರತಿಯೊಬ್ಬರು ದೇಶಪ್ರೇಮ.ದೇಶಭಕ್ತಿ ಭಾವನೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಹುಟ್ಟುತ್ತದೆ .ಹಾಗಾಗಿ ಎಲ್ಲರೂ ತಮ್ಮ ತಮ್ಮ ಮನೆಗಳ ಮೇಲೆ ತ್ರಿವಣ೯ ದ್ವಜಾರೋಹಣ ಹಾರಿಸಿ ಎಂದು ಹೇಳಿದರು....
ಇಂದು ಓಜನಹಳ್ಳಿ ಗ್ರಾಮದಲ್ಲಿ ಮನೆ ಮನೆಗಳ ಮೇಲೆ ಹರ್ ಘರ್ ತಿರಂಗಾ ತ್ರಿವಣ೯ ಧ್ವಜಾರೋಹಣವನ್ನು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾ....
ಕುಷ್ಟಗಿ : ಕುಷ್ಟಗಿ ಯ ತಾಲೂಕಾ ಕ್ರೀಡಾಂಗಣದಲ್ಲಿ ಹರ್ ಘರ್ ತಿರಂಗಾ ಅಮೃತ ಮಹೋತ್ಸವದ ಪ್ರಯುಕ್ತ ತಾಲೂಕಾ ದಂಡಾಧಿಕಾರಿಗಳಿಗೆ 500 ಧ್ವಜಗಳನ್ನು ಭಗತ್ ಸಿಂಗ್ ಸಂಘದ ಅಧ್ಯಕ್ಷ ವಜೀರ್ ಗೋನಾಳ್ ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಕುಷ್ಟಗಿಯ ತಹಸೀಲ್ದಾರರು, ತಾ.ಪಂ.ಇಓ.ಚಂದ್ರು ಹಿರೇಮಠ. ಸಂಮೇಶ ಸಿಂಗಾಡಿ .ಪ್ರಶಾಂತ ಗುಜ್ಜಲ್ .ಫಾರೂಕ್ ಸಿದ್ದಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು
ಕುಷ್ಟಗಿ : ಕುಷ್ಟಗಿ ಯ ತಾಲೂಕಾ ಕ್ರೀಡಾಂಗಣದಲ್ಲಿ ಹರ್ ಘರ್ ತಿರಂಗಾ ಅಮೃತ ಮಹೋತ್ಸವದ ಪ್ರಯುಕ್ತ ತಾಲೂಕಾ ದಂಡಾಧಿಕಾರಿಗಳಿಗೆ 500 ಧ್ವಜಗ.....
ಧಾರವಾಡ: ಇಡೀ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರದಲ್ಲಿ ಮುಳುಗಿದ್ದು, ಧಾರವಾಡ ಜಿಲ್ಲಾಡಳಿತ ಮಾತ್ರ ಹೊದ್ದುಕೊಂಡು ಮಲಗಿಬಿಟ್ಟಿದೆ. ಅದೇ ಕಾರಣಕ್ಕೆ ಪತ್ರಕರ್ತರೇ ಮುಂದಾಗಿ ತಮ್ಮಲ್ಲಿನ “ಮಹಾತ್ಮ ಪ್ರೇಮ” ವನ್ನ ಪ್ರದರ್ಶಿಸಿದ್ದಾರೆ. ಧಾರವಾಡ ನಗರವನ್ನ ಸ್ವಚ್ಚಂದಗೊಳಿಸಲು ಜಿಲ್ಲಾಡಳಿತ ಎಷ್ಟು ಶ್ರಮ ವಹಿಸಿದೆ ಎಂದು ತಿಳಿಯಬೇಕಾದರೇ, ತಾವೂ ಈ ಮಾಹಿತಿಯನ್ನ ಸಂಪೂರ್ಣವಾಗಿ ಓದಲೇಬೇಕು. ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿರುವ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯಿರುವ ಆವರಣ ಸಂಪೂರ್ಣವಾಗಿ ಗಲೀಜಿನಿಂದ ತುಂಬಿ ಹೋಗಿತ್ತು. ಇಂದಿನಿಂದ ಮೂರು ದಿನಗಳವರೆಗೆ ಅಮೃತ ಮಹೋತ್ಸವ ಆಚರಿಸಲು ಮುಂದಾಗಿದ್ದರೂ, ಡಿಸಿಯವರು ಮಾತ್ರ ಈ ಆವರಣವನ್ನ ಸ್ವಚ್ಚಗೊಳಿಸಿರಲಿಲ್ಲ....
ಧಾರವಾಡ: ಇಡೀ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರದಲ್ಲಿ ಮುಳುಗಿದ್ದು, ಧಾರವಾಡ ಜಿಲ್ಲಾಡಳಿತ ಮಾತ್ರ ಹೊದ್ದುಕೊಂಡು ಮಲಗಿಬಿಟ್....
ಕೊಪ್ಪಳ : ಕನಕಗಿರಿ ಹತ್ತಿರದ ಹುಲಿಹೈದರ್ ನಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಸಾವಿಗೀಡಾದ ಯಂಕಪ್ಪ ತಳವಾರ ಕುಟುಂಬಕ್ಕೆ ಮತ್ತು ಗಾಯಗೊಂಡ ಧರ್ಮಣ್ಣ ಹರಿಜನ ಇವರಿಗೆ ಜಿಲ್ಲಾಡಳಿತ ಪರಿಹಾರ ಬಿಡುಗಡೆ ಮಾಡಿದೆ. ಮೃತ ಯಂಕಪ್ಪ ಪತ್ನಿ ಹನುಮಮ್ಮ ಹೆಸರಿಗೆ 412500 (ನಾಲ್ಕು ಲಕ್ಷ ಹನ್ನೆರಡು ಸಾವಿರದ ಐದು ನೂರು ಮಾತ್ರ) ರೂ. ಮತ್ತು ಗಾಯಾಳು ಧರ್ಮಣ್ಣ ಹೆಸರಿಗೆ 50 ಸಾವಿರ ರೂ. ಚೆಕ್ ನೊಂದಿಗೆ ಕೊಪ್ಪಳ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಹುಲಿಹೈದರ್ ಗ್ರಾಮಕ್ಕೆ ಆಗಮಿಸಿ ಧರ್ಮಣ್ಣ ಕುಟುಂಬಕ್ಕೆ ಚೆಕ್ ನೀಡಿ ಸಾಂತ್ವನ ಹೇಳಿದರು. ನಂತರ ಮೃತ ಪಾಷಾವಲಿ ಕುಟುಂಬಕ್ಕೆ ಸಾಂತ್ವನ ಹೇಳಲು ಹೋದಾಗ ಅವರ ಮನೆ ಬೀಗ ಹಾಕಿತ್ತು....
ಕೊಪ್ಪಳ : ಕನಕಗಿರಿ ಹತ್ತಿರದ ಹುಲಿಹೈದರ್ ನಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಸಾವಿಗೀಡಾದ ಯಂಕಪ್ಪ ತಳವಾರ ಕುಟುಂಬಕ್ಕೆ ಮತ್ತು ಗಾಯಗೊಂ...
ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಮಿಡಾಸ್ ಟಚ್ ಹೊಂದಿರುವ ಹೂಡಿಕೆದಾರರನ್ನು "ಭಾರತದ ವಾರೆನ್ ಬಫೆಟ್" ಎಂದು ಕರೆಯಲಾಯಿತು. ಮೂಲಗಳ ಪ್ರಕಾರ, ಹೂಡಿಕೆದಾರರನ್ನು ಬೆಳಿಗ್ಗೆ ೬:೪೫ ಕ್ಕೆ ಕ್ಯಾಂಡಿ ಬ್ರೀಚ್ ಆಸ್ಪತ್ರೆಗೆ ಕರೆತರಲಾಯಿತು ಮತ್ತು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಅವರು ಮೂತ್ರಪಿಂಡದ ಕಾಯಿಲೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಕೆಲವು ವಾರಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು ಎಂದು ಅವರು ಹೇಳಿದರು. ಒಬ್ಬ ವ್ಯಾಪಾರಿ ಮತ್ತು ಚಾರ್ಟರ್ಡ್ ಅಕೌಂಟೆಂಟ್, ಮತ್ತು ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು, ಅವರು ಕೊನೆಯದಾಗಿ ಆಕಾಶ ಏರ್ನ ಪ್ರಾರಂಭದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಜುಂಜುನ್ವಾಲಾ ಅವರು ಹಂಗಾಮಾ ಮೀಡಿಯಾ ಮತ್ತು ಆಪ್ಟೆಕ್ನ ಅಧ್ಯಕ್ಷರಾಗಿದ್ದರು, ಜೊತೆಗೆ ವೈಸ್ರಾಯ್ ಹೋಟೆಲ್ಗಳು, ಕಾನ್ಕಾರ್ಡ್ ಬಯೋಟೆಕ್, ಪ್ರೊವೊಗ್ ಇಂಡಿಯಾ ಮತ್ತು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ಗಳ ನಿರ್ದೇಶಕರಾಗಿದ್ದರು.
ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಮಿಡಾಸ್ ಟಚ್ ಹೊಂದಿರುವ ಹೂಡಿಕೆದಾರರನ್ನು “ಭಾರತದ...
ಹುಲಿಗೆಮ್ಮ ಚಿತ್ರದ ಶೂಟಿಂಗ್ ವೇಳೆ ಡ್ಯಾನ್ಸರ್ ಮೈಮೇಲೆ ಹುಲಿಗೆಮ್ಮ ಬದಲಾವಣೆ ಸುದ್ದಿ ಕೊಪ್ಪಳ : ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಆವರಣದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಅಭಿನಯದ ವಿಶ್ವರೂಪಿಣಿ ಹುಲಿಗೆಮ್ಮ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ, ಶನಿವಾರ ದೇವಿಯ ಸಾಂಗ್ ಚಿತ್ರಿಕರಣ ನಡೆದಿತ್ತು, ಮದ್ಯಾಹ್ನದ ವೇಳೆಗೆ ಸಾಂಗ್ ಕೊರೆಯೋಗ್ರಫಿ ಮದನ್ ಹರಣಿ ಮತ್ತು ಮಾಸ್ಟರ್ ಕಾಲಲ್ಲಿ ಶೂ ಹಾಕಿ ಡ್ಯಾನ್ಸ್ ಮಾಡಿಸುತಿದ್ದಾಗ ಕೈಯಲ್ಲಿದ್ದ ಬಂಡಾರ, ಕುಂಕುಮ ಕೆಳಗೆ ಚೆಲ್ಲಿ ನೃತ್ಯ ಸಂಯೋಜನೆ ವೇಳೆ ಅದನ್ನು ತುಳಿಯುತ್ತಾ ತೂರುತ್ತ ಡ್ಯಾನ್ಸ್ ಮಾಡುವ ವೇಳೆ ಸಹ ನೃತ್ಯ ಕಲಾವಿದೆ ಪೂಜಾ ಬಾಗಲಕೋಟೆ ಎಂಬ ಯುವತಿಯ ಮೈಯಲ್ಲಿ ಶ್ರೀ ಹುಲಿಗೆಮ್ಮದೇವಿ ಬಂದಿದ್ದು, ಮಾಸ್ಟರ್ಗೆ ಶೂ ಬಿಡುವಂತೆ ಕಿರುಚುತ್ತಾ ಓಡುತ್ತ ಹುಲಿಗೆಮ್ಮನ ಸನ್ನಿಧಿಗೆ ಹೋಗಿ, ಇವರು ನನ್ನ ಜಾಗದಲ್ಲಿ ಬಂಡಾರ ಕುಂಕುಮದ ಮೇಲೆ ತುಳಿದು ತೂರಿದ್ದಾರೆ ಎಂದು ಕಿರುಚುತ್ತಾ ಅವರ ಕಾಲಲಿದ್ದ ಶೂ ಬಿಡಿಸಿ, ನನಗೆ ಹಸಿರು ಸೀರೆ, ಹಸೀರು ಬಳೆ ಕುಂಕುಮ ಹೂವು ಬೇಕು ಎಂದು ಕೇಳಿದ್ದಾಳೆ....
ಹುಲಿಗೆಮ್ಮ ಚಿತ್ರದ ಶೂಟಿಂಗ್ ವೇಳೆ ಡ್ಯಾನ್ಸರ್ ಮೈಮೇಲೆ ಹುಲಿಗೆಮ್ಮ ಬದಲಾವಣೆ ಸುದ್ದಿ ಕೊಪ್ಪಳ : ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹು.....
ಕೊಪ್ಪಳದಿಂದ ೫೦ ಜನರ ತಂಡ ಪವಿತ್ರ ಮೆಕ್ಕಾ ಯಾತ್ರೆಗೆ ಕೊಪ್ಪಳ : ನಗರದಿಂದ ೫೦ ಜನರ ತಂಡ ಮೌಲಾನ ಮುಫ್ತಿ ನಜೀರ್ ಅಹ್ಮದ್ ಸಾಬ್ ಅವರ ಮಾರ್ಗದರ್ಶನದಲ್ಲಿ ಉಮ್ರಾಯಾತ್ರೆ (ಪವಿತ್ರ ಮೆಕ್ಕಾ, ಮದೀನಾ) ಗೆ ಗವಿಮಠದ ಅವರಣದಿಂದ ಬೆಂಗಳೂರಿಗೆ ಹಜ್ಜ್ ಮತ್ತು ಉಮ್ರಾ ಯಾತ್ರೆಗೆ ಬಸ್ಸಿನಲ್ಲಿ ಪ್ರಯಾಣ ಬೆಳಸಿದರು. ಇಸ್ಲಾಂ ಧರ್ಮದಲ್ಲಿ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಮೆಕ್ಕಾ ಮದೀನಾಗೆ ಹೋಗಿ ಬರಬೇಕೆಂದುಕೊಳ್ಳುತ್ತಾನೆ. ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷ ಹಜ್ ಮತ್ತು ಉಮ್ರಾ ಯಾತ್ರೆ ಮೊಟಕುಗೊಳಿಸಲಾಗಿತ್ತು. ಸದ್ಯ ಈ ವರ್ಷದಿಂದ ಹಜ್ ಯಾತ್ರೆಗೆ ಅನುಮತಿ ಸಿಕ್ಕಿದೆ....
ಕೊಪ್ಪಳದಿಂದ ೫೦ ಜನರ ತಂಡ ಪವಿತ್ರ ಮೆಕ್ಕಾ ಯಾತ್ರೆಗೆ ಕೊಪ್ಪಳ : ನಗರದಿಂದ ೫೦ ಜನರ ತಂಡ ಮೌಲಾನ ಮುಫ್ತಿ ನಜೀರ್ ಅಹ್ಮದ್ ಸಾಬ್ ಅವರ ಮಾರ್ಗ....
ಕುಷ್ವಗಿ ತಾಲೂಕಾ ವಕೀಲರ ಸಂಘದ ಅಧ್ಯಕ್ಷರಾಗಿ ಎಂ.ಎಸ್ ಗೋಡಿ ಆಯ್ಕೆ ಕೊಪ್ಪಳ : ಕುಷ್ಟಗಿ ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಗೋಡಿ ಆಯ್ಕೆಯಾಗಿದ್ದಾರೆ. ವಕೀಲರ ಸಂಘದ ಕಚೇರಿಯಲ್ಲಿ ಜರುಗಿದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಗೋಡಿ ಅವರು 94 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ವಕೀಲ ಸಂಗನಗೌಡ ಪಾಟೀಲ ಅವರು 88 ಮತಗಳನ್ನು ಪಡೆದಿದ್ದಾರೆ. ವಕೀಲ ಮಹಾಂತೇಶ ದಂಡಿನ 90 ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಪರಸಪ್ಪ ಆಡಿನ, ಜಂಟಿ ಕಾರ್ಯದರ್ಶಿಯಾಗಿ ಸುರೇಶ ಜರಕುಂಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಾದ ಶಫಿ ಹೇರೂರು, ಸಂಗಮೇಶ ಕಂದಕೂರು ಹಾಗೂ ಎಸ್.ಎನ್ ನಾಯಕ ತಿಳಿಸಿದ್ದಾರೆ. ವಿಜಯೋತ್ಸವ : ಫಲಿತಾಂಶ ಬಳಿಕ ವಕೀಲರ ಸಂಘದ ಸದಸ್ಯರು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಿಹಿ ತಿನಿಸುವ ಮೂಲಕ ವಿಜಯೋತ್ಸವ ಆಚರಿಸಿದರು.
ಕುಷ್ವಗಿ ತಾಲೂಕಾ ವಕೀಲರ ಸಂಘದ ಅಧ್ಯಕ್ಷರಾಗಿ ಎಂ.ಎಸ್ ಗೋಡಿ ಆಯ್ಕೆ ಕೊಪ್ಪಳ : ಕುಷ್ಟಗಿ ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲ....
ಸ್ವತಂತ್ರ ಭಾರತದ ಫಲಾನುಭವಿಗಳಾದ ನಾವು ದೇಶದ ಏಕತೆಗೆ ಶ್ರಮಿಸಬೇಕು : ಗೊಂಡಬಾಳ ಅಕ್ಷರ ಟಿವಿ ಕನ್ನಡ, ಬದಲಾವಣೆ ದೈನಿಕ ಸುದ್ದಿ ಜಾಲ: ಕೊಪ್ಪಳ : ಅಖಂಡ ಭರತ ಖಂಡದ ಪ್ರಜೆಗಳಾದ ನಾವುಗಳು, ಈ ಸ್ವತಂತ್ರ ದೇಶದ ಫಲಾನುಭವಿಗಳು, ಇಲ್ಲಿ ನಾವು ಎಲ್ಲವನ್ನೂ ಪಡೆದುಕೊಂಡಿದ್ದೇವೆ, ಆದ್ದರಿಂದ ದೇಶಪ್ರೇಮ ಮತ್ತು ದೇಶದ ಏಕತೆಗೆ ಶ್ರಮಿಸುವದು ಎಲ್ಲರ ಕರ್ತವ್ಯ ಎಂದು ಬಾಲಕರ ಸರಕಾರಿ ಪಪೂ ಕಾಲೇಜಿನ ಸಿಬಿಸಿ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅಭಿಪ್ರಾಯಪಟ್ಟರು. ಅವರು ನಗರದ ಬಾಲಕರ ಸರಕಾರಿ ಪಪೂ ಕಾಲೇಜಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹರ್ ಘರ್ ತಿರಂಗಾ ಜಾಗೃತಿ, ಬಾವುಟ ವಿತರಣೆ ಹಾಗೂ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು....
ಸ್ವತಂತ್ರ ಭಾರತದ ಫಲಾನುಭವಿಗಳಾದ ನಾವು ದೇಶದ ಏಕತೆಗೆ ಶ್ರಮಿಸಬೇಕು : ಗೊಂಡಬಾಳ ಅಕ್ಷರ ಟಿವಿ ಕನ್ನಡ, ಬದಲಾವಣೆ ದೈನಿಕ ಸುದ್ದಿ ಜಾಲ: ಕೊ.....
ಶ್ರೀ ರಾಮನಗರ, ಗ್ರಾಮೀಣ ಪ್ರದೇಶದಲ್ಲಿ ವಿಶಿಷ್ಟ ಗಮನ ಸೆಳೆದ ಸ್ವಾಮಿ ವಿವೇಕಾನಂದ ಶಾಲೆಯ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ರಾಷ್ಟ್ರ ನಾಯಕರು ವಿವಿಧ ರಾಜ್ಯಗಳಸಂಸ್ಕೃತಿಗಳನ್ನು ಒಳಗೊಂಡ ಆಕರ್ಷಿಕ ಪಧ ಸಂಚಲನಕ್ಕೆ ಜಗನ್ನಾಥ್ ಆಲಂಪಲ್ಲಿ ಚಾಲನೆ ಗಂಗಾವತಿ 13, ಸಮೀಪದ ಶ್ರೀರಾಮ್ ನಗರದ ಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ಶನಿವಾರದಂದು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹಲವು ವೈಶಿಷ್ಟ್ಯಗಳಿಂದ ವೈಶಿಷ್ಟಗಳಿಂದ ವಿಶೇಷ ಗಮನ ಸೆಳೆಯಿತು ಬೆಳಿಗ್ಗೆ 8:30 ಕ್ಕೆ ಶಾಲೆಯ ಹಿರಿಯ ಶಿಕ್ಷಕ ಹನುಮೇಶ್ ಧ್ವಜಾರೋಹಣವನ್ನು ನೆರಿವೇರಿಸಿದರು, ಬಳಿಕ 5 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ರಾಷ್ಟ್ರ ನಾಯಕರು ದೇಶದ ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ವಿವರಿಸುವಂತಹ ಉಡುಗೆಗಳಿಂದ ಆಕರ್ಷಕ ಪಧ ಸಂಚಲನ ನಡೆಸಲಾಯಿತು, ಪಥಸಂಚನಕ್ಕೆ ಸಂಸ್ಥೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಚಾಲನೆ ನೀಡಿ ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ, ವಿಶ್ವಕ್ಕೆ ಮಾದರಿಯಾದ ದೇಶ ಭಾರತ ಇಂದು 75 ನೆಯ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತದೆ, ಗ್ರಾಮೀಣ ಪ್ರದೇಶದ ಜನತೆಗೆ ಹಲವು ರಾಷ್ಟ್ರ ನಾಯಕರುಗಳ ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಉದ್ದೇಶದಿಂದ ಗ್ರಾಮದ ಸುಮಾರು ಐದು ಕಿಲೋಮೀಟರ್ ವರೆಗೆ ಮತ ಸಂಚಲನವನ್ನು ನಡೆಸುವುದರ ಮೂಲಕ ಹರ್,ಘರ್ ತಿರಂಗ ಅಭಿಯಾನ ನಡೆಸುವುದರ ಮೂಲಕ ಜನ ಜಾಗೃತಿಗೊಳಿಸಲಾಗುತ್ತದೆ ಎಂದು ಅತ್ಯಂತ ಮಾರ್ಮಿಕವಾಗಿ ಮಾತನಾಡಿದರು, ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯನಿ ಶಾರುನ್ ಕುಮಾರಿ, ದೈಹಿಕ ಶಿಕ್ಷಕರು ಸಹಶಿಕ್ಷಕರು,ಭೊದಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು
ಶ್ರೀ ರಾಮನಗರ, ಗ್ರಾಮೀಣ ಪ್ರದೇಶದಲ್ಲಿ ವಿಶಿಷ್ಟ ಗಮನ ಸೆಳೆದ ಸ್ವಾಮಿ ವಿವೇಕಾನಂದ ಶಾಲೆಯ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ರಾಷ್ಟ್ರ ...
ಗಂಗಾವತಿ 13, ನಗರದ ಕೇಂದ್ರೀಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉರ್ದು ಶಾಲೆ,,,,(ಸಿಪಿಎಸ್) ಶಾಲೆಯಲ್ಲಿ 75 ನೆಯ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹರ್,ಘರ,ತಿರಂಗ ಅಭಿಯಾನದ ಅಡಿಯಲ್ಲಿ ಶಾಲೆಯಲ್ಲಿ ಬೆಳಗ್ಗೆ ಧ್ವಜಾರೋಹಣವನ್ನು ಎಸ್ ಡಿ ಎಂ ಸಿ ಅಧ್ಯಕ್ಷರು ಗಳಾದ ಅಬ್ದುಲ್ ಹಾಗೂ ತಾಜುದ್ದೀನ್ ರವರು ಧ್ವಜಾರೋಹಣವನ್ನು ನೆರವೇರಿಸಿದರು, ಬಳಿಕ ವಿದ್ಯಾರ್ಥಿಗಳಿಂದ ನಡೆಸಲಾದ ಶೋಭಾ ಯಾತ್ರೆಗೆ ಮುಖಂಡ ರಾಚಪ್ಪ ಸಿದ್ದಾಪುರ ಚಾಲನೆ ನೀಡಿ ಮಾತನಾಡಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ಗುಣಮಟ್ಟದ ಸಂಸ್ಕಾರಗಳನ್ನು ಬೆಳೆಸಿಕೊಳ್ಳುವುದರ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಮುಂದಾಗಬೇಕು ಇಂದಿನ ಯುವಕರೇ ಮುಂದಿನ ನಾಯಕರು ಎನ್ನುವಂತೆ ಶಿಸ್ತು ಶಿಕ್ಷಣ ಪಡೆದುಕೊಳ್ಳುವುದರ ಮೂಲಕ ಸಮಾಜಕ್ಕೆ ದೇಶಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಲು ಮುಂದಾಗಬೇಕೆಂದು ತಿಳಿಸಿದರು ಬಳಿಕ ಶಾಲೆಯ ಆವರಣದಿಂದ ಹೊರಟ ಕನ್ನಡ ಹಾಗೂ ಉರ್ದು ವಿಭಾಗದ ವಿದ್ಯಾರ್ಥಿಗಳು ರಾಷ್ಟ್ರ ಧ್ವಜವನ್ನು ಕೈಯಲ್ಲಿ ಹಿಡಿದು ಘೋಷಣೆಗಳನ್ನು ಕೂಗುತ್ತಾ ಗಾಂಧಿ ವೃತದಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಹೂವಿನ ಹಾರ ಹಾಕಿ ಸಂಭ್ರಮಿಸಿದರು ಬಳಿಕ ಮಹಾವೀರ ವೃತ್ತ ಗಣೇಶ ವೃತ್ತ ಮಾರ್ಗವಾಗಿ ಶಾಲೆಗೆ ಆಗಮಿಸಿದರು ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರುಗಳಾದ ಶಿವಪುತ್ರಪ್ಪ ಹೊಸಮನಿ ಹಾಗೂ ಫರಿದಾ ಬೇಗಂ ಸೇರಿದಂತೆ ಶಾಲಾ ಸುಧಾರಣಾ ಸಮಿತಿಯ ಸದಸ್ಯರುಗಳು ಸಹ ಶಿಕ್ಷಕರು ವಿದ್ಯಾರ್ಥಿಗಳ ಪಾಲಕರು ಪಾಲ್ಗೊಂಡಿದ್ದರು
ಗಂಗಾವತಿ 13, ನಗರದ ಕೇಂದ್ರೀಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉರ್ದು ಶಾಲೆ,,,,(ಸಿಪಿಎಸ್) ಶಾಲೆಯಲ್ಲಿ 75 ನೆಯ ಸ್ವಾತಂತ್ರ್ಯ ...
ಕಾನಿಪ ವಿಜಯನಗರ ಜಿಲ್ಲಾ ಘಟಕದಿಂದ ಆಜಾದಿ ಕಾ ಅಮೃತ್ ಮಹೋತ್ಸವ ಬೈಕ್ ರ್ಯಾಲಿ ಹೊಸಪೇಟೆ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿಜಯನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜನಜಾಗೃತಿ ಬೈಕ್ ರ್ಯಾಲಿ ಆಯೋಜನೆ ಮಾಡಲಾಗಿತ್ತು, ಈ ರ್ಯಾಲಿಗೆ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಹಾಗೂ ಎಸ್ಪಿ ಡಾ.ಅರುಣ್ ಕೆ, ಚಾಲನೆ ನೀಡಿದರು. ನಗರದ ಪುನೀತ್ ರಾಜಕುಮಾರ್ ಸರ್ಕಲ್ ನಲ್ಲಿ ರ್ಯಾಲಿಗೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಹರ್ ಘರ್ ತಿರಂಗಾ ಅಂಗವಾಗಿ ಜಿಲ್ಲೆಯಲ್ಲಿ ಈಗಾಗಲೇ 2 ಲಕ್ಷಕ್ಕೂ ಅಧಿಕ ಬಾವುಟಗಳ ವಿತರಣೆ ಮಾಡಲಾಗಿದೆ....
ಕಾನಿಪ ವಿಜಯನಗರ ಜಿಲ್ಲಾ ಘಟಕದಿಂದ ಆಜಾದಿ ಕಾ ಅಮೃತ್ ಮಹೋತ್ಸವ ಬೈಕ್ ರ್ಯಾಲಿ ಹೊಸಪೇಟೆ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿಜಯನಗರ ...
ಹೊಸಪೇಟೆ: ಭರ್ಜರಿ ಕಾರ್ಯಾಚರಣೆ ನಡೆಸಿರೋ ಹೊಸಪೇಟೆ ನಗರ ಠಾಣೆ ಪೊಲೀಸರು ಖ್ಯಾತ ಮೊಬೈಲ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 26 ವರ್ಷದ ತಾಯಪ್ಪ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತನಿಂದ ಸುಮಾರು 3 ಲಕ್ಷ ರೂಪಾಯಿ ಬೆಲೆ ಬಾಳುವ 30 ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿ ತಾಯಪ್ಪ ತಾನು ಕದ್ದ ಮೊಬೈಲ್ ಗಳನ್ನು ಹೊಸಪೇಟೆಯ ಉಡುಪಿ ಹೋಟೆಲ್ ಎದುರು ಮಾರಾಟ ಮಾಡುತ್ತಿದ್ದ. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ನಗರ ಠಾಣದ ಪೊಲೀಸರು ಆರೋಪಿ ತಾಯಪ್ಪನನ್ನು ಬಂಧಿಸಿದ್ದಾರೆ. ಪಕ್ಕದ ಕೊಪ್ಪಳ ಜಿಲ್ಲೆಯ ಪ್ರಖ್ಯಾತ ಯಾತ್ರಾ ಸ್ಥಳ ಹುಲಿಗಿಯಲ್ಲಿ, ಭಕ್ತರು ರಾತ್ರಿ ವೇಳೆ ಮಲಗಿದ್ದಾಗ ಮೊಬೈಲ್ ಗಳನ್ನು ಕಳ್ಳತನ ಮಾಡ್ತಿದ್ದುದಾಗಿ ವಿಚಾರಣೆ ವೇಳೆ ಆರೋಪಿ ತಾಯಪ್ಪ ಬಾಯಿ ಬಿಟ್ಟಿದ್ದಾನೆ....
ಹೊಸಪೇಟೆ: ಭರ್ಜರಿ ಕಾರ್ಯಾಚರಣೆ ನಡೆಸಿರೋ ಹೊಸಪೇಟೆ ನಗರ ಠಾಣೆ ಪೊಲೀಸರು ಖ್ಯಾತ ಮೊಬೈಲ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದ.....
ಕ್ರೀಡೆಯಿಂದ ಮತ್ತು ಸಾಂಸ್ಕೃತಿಕ ಚಟುವಟಿಕೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಸಾದ್ಯ: ಮಲ್ಲಿಕಾರ್ಜುನ ಪೂಜಾರ ಇವತ್ತು ಸರಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿಧ್ಯಾರ್ಥಿನಿಯರನ್ನು ದ್ವೀತೀಯ ವರ್ಷದ ವಿಧ್ಯಾರ್ಥಿನಿಯರಿಂದ ಕಾಲೇಜಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.ಜೊತೆಗೆ ವಿವಿದ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳು,ಕ್ರೀಡಾ ಚಟುವಟಿಗೆಗಳನ್ನು ಪ್ರಾರಂಬ ಮಾಡಲಾಯಿತು.ಸದ್ರಿ ಸಭೆಯನ್ನು ಕುರಿತು ಕಾಲೇಜಿನ ಅಭಿವೃದ್ದಿ ಸದಸ್ಯರಾದ ಮಲ್ಲಿಕಾರ್ಜುನ ಪೂಜಾರ ಮಾತನಾಡಿದರು, ಈ ಸಂದರ್ಬದಲ್ಲಿ ಯಮನೂರಪ್ಪ ನಾಯಕ,ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಅಧಿಕಾರಿಗಳಾದ ಶ್ರೀ ಬಿ.ಎಂ ಬೂಸನೂರಮಠ,ಪ್ರಾಚಾರ್ಯರಾದ ಬಾರಕೇರ,ಉಪನ್ಯಾಸಕರಾದ ಪತ್ರೆಪ್ಪ,ವಿಜಯಲಕ್ಷ್ಮಿ,ಸೀಮಾ,ಸುರೇಶ,ರಡ್ಡಿ,ಪರಶುರಾಮ್,ಸಂಗೀತಾ ಹಾಗೂ ಇನ್ನಿತರ ಉಪನ್ಯಾಸಕರು ಮುದ್ದುಮಕ್ಕಳು ಬಾಗವಹಿಸಿದ್ದರು...
ಕ್ರೀಡೆಯಿಂದ ಮತ್ತು ಸಾಂಸ್ಕೃತಿಕ ಚಟುವಟಿಕೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಸಾದ್ಯ: ಮಲ್ಲಿಕಾರ್ಜುನ ಪೂಜಾರ ಇವತ್ತು ಸರಕಾರಿ ಬಾಲಕೀ.....
ಗಂಗಾವತಿ : ನಗರದ ಎಂಎನ್ ಎಂ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ವೀರಪ್ಪ ಚನ್ನಪ್ಪ ಕರಿಗಾರ್ (೭೦) ಇವರು ಅನಾರೋಗ್ಯದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗಿನ ಜಾವ ನಿಧನರಾಗಿದ್ದಾರೆ .ಮೃತರು 3 ದಶಕಗಳ ಕಾಲ ನಗರದ ಎಂಎನ್ ಎಂ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ .ಮೃತರಿಗೆ ಪತ್ನಿ ಇಬ್ಬರು ಪುತ್ರಿಯರು ಓರ್ವ ಪುತ್ರ ಇದ್ದಾರೆ .ಮೃತರ ಅಂತ್ಯಕ್ರಿಯೆಯನ್ನು ಗಂಗಾವತಿಯ 18 ಹಿಂದುಳಿದ ವರ್ಗಗಳ ಸ್ಮಶಾನದಲ್ಲಿ ಶನಿವಾರ ಸಂಜೆ 4 ಗಂಟೆಗೆ ನೆರವೇರಿಸಲಾಗುತ್ತದೆ ಎಂದು ಕುಟುಂಬ ವರ್ಗ ತಿಳಿಸಿದೆ . ಸಂತಾಪ :ನಿವೃತ್ತ ಶಿಕ್ಷಕ ವಿ....
ಗಂಗಾವತಿ : ನಗರದ ಎಂಎನ್ ಎಂ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ವೀರಪ್ಪ ಚನ್ನಪ್ಪ ಕರಿಗಾರ್ (೭೦) ಇವರು ಅನಾರೋಗ್ಯದ ಕಾರಣ ಬೆಂಗಳೂರಿನ ಖಾಸಗ.....
ಬಳ್ಳಾರಿ : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಇಂದು ಬಳ್ಳಾರಿ ನಗರದ ಮೋತಿ ವೃತ್ತದಲ್ಲಿ ರಾಷ್ಟ್ರಧ್ವಜ ಹಾರಿಸಲಾಯಿತು. ಸಾರಿಗೆ ಮತ್ತು ಪರಿಶಿಷ್ಟ ವರ್ಗ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆಗಿರುವ ಬಿ.ಶ್ರೀರಾಮುಲು ಧ್ವಜಾರೋಹಣ ನಡೆಸಿದರು. ಈ ವೇಳೆ ನಗರ ಶಾಸಕ ಸೋಮಶೇಖರ ರೆಡ್ಡಿ, ಜಿಲ್ಲಾಡಳಿತದ ಅಧಿಕಾರಿಗಳು, ಬುಡಾ ಅಧ್ಯಕ್ಷ ಪಾಲನ್ನ, ಪಾಲಿಕೆ ಸದಸ್ಯ ಗೋವಿಂದರಾಜುಲು ಸೇರಿದಂತೆ ಹಲವು ಮುಖಂಡರು ಹಾಜರಿದ್ದರು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿಯಾದರು. ಧ್ವಜಾರೋಹಣಕ್ಕೂ ಮುನ್ನ ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಬಳ್ಳಾರಿ : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಇ...
ಕೊಪ್ಪಳ : ನಗರದ ಸತ್ಯಧ್ಯಾನಪುರ ಬಡಾವಣೆಯ ಸ್ವಾತಂತ್ರ್ಯ ಹೋರಾಟಗಾರ ನಾರಾಯಣಚಾರ್ ಮಾದಿನೂರ ಅವರಿಗೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ ಹಾಗೂ ಜೆಡಿಎಸ್ ಮುಖಂಡರು ಅವರ ನಿವಾಸ ಭೇಟಿ ನೀಡಿ ಸನ್ಮಾನಿಸಿ ಗೌರವಿಸಿದರು. ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಆತ್ಮೀಯವಾಗಿ ಚರ್ಚಿಸಿದರು ಸ್ವಾತಂತ್ರ್ಯ ಹೋರಾಟಗಾರ ನಾರಾಯಣಚಾರ್ ಮಾದಿನೂರ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮಗಾಂಧೀ, ಸುಭಾಷ್ಚಂದ್ರ ಬೋಷ್, ಚಂದ್ರಶೇಖರ ಆಜಾದ್, ಭಗತ್ಸಿಂಗ್ರ ಹೋರಾಟದ ಶ್ರಮದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು, ಇಂದು ೭೫ ನೇ ಸ್ವಾತಂತ್ರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಅಮೃತ ಮಹೋತ್ಸವ ಸಂತಸ ತಂದಿದೆ, ದೇಶದ ರಾಷ್ಟ್ರ ಧ್ವಜಕ್ಕೆ ಜಿಎಸ್ಟಿ ಹಾಕಿರುವುದು ಬೇಸರ ತಂದಿದೆ ಎಂದರು....
ಕೊಪ್ಪಳ : ನಗರದ ಸತ್ಯಧ್ಯಾನಪುರ ಬಡಾವಣೆಯ ಸ್ವಾತಂತ್ರ್ಯ ಹೋರಾಟಗಾರ ನಾರಾಯಣಚಾರ್ ಮಾದಿನೂರ ಅವರಿಗೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಕಾರ....
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರೊಫೈಲ್ ಚಿತ್ರವಾಗಿ ತ್ರಿವರ್ಣ ಧ್ವಜವನ್ನು ಏಕೆ ಹಾಕಿಕೊಂಡಿಲ್ಲ ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದರು. ಈ ಎಲ್ಲ ಬೆಳವಣಿಗೆಗಳ ಬಳಿಕ ಆರ್ಎಸ್ಎಸ್ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ತ್ರಿವರ್ಣ ಧ್ವಜದ ಚಿತ್ರವನ್ನು ಅಪ್ಲೋಡ್ ಮಾಡಿಕೊಂಡಿದೆ. ಆರ್ಎಸ್ಎಸ್ ಸರಸಂಚಾಲಕ ಮೋಹನ್ ಭಾಗವತ್ ಸೇರಿದಂತೆ ಆರ್ಎಸ್ಎಸ್ನ ಅಧಿಕೃತ ಖಾತೆಗಳಲ್ಲಿ ಭಾವುಟವನ್ನು ಹಾಕಿಕೊಳ್ಳಲಾಗಿದೆ. ತ್ರಿವರ್ಣ ಧ್ವಜದ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳ ಪ್ರೊಫೈಲ್ನಲ್ಲಿ ಹಾಕಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರು ಮನವಿ ಮಾಡಿದ ನಂತರವೂ ಆರ್ಎಸ್ಎಸ್ ಮುಖಂಡರು ತಮ್ಮ ಖಾತೆಗಳಲ್ಲಿ ಏಕೆ ತ್ರಿವರ್ಣ ಧ್ವಜದ ಚಿತ್ರವನ್ನು ಹಾಕಿಕೊಂಡಿಲ್ಲ ಎಂಬ ವಿವಾದ ಮುನ್ನೆಲೆಗೆ ಬಂದಿತ್ತು....
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ತನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರೊಫೈಲ್ ಚಿತ್ರವಾಗಿ ತ್ರಿವರ್ಣ ಧ್ವಜವನ್ನು ಏಕೆ ಹಾ...
ನವದೆಹಲಿ; ಅತ್ಯುತ್ತಮ ತನಿಖೆ ನಡೆಸಿದ ರಾಜ್ಯದ 6 ಪೊಲೀಸ್ ಅಧಿಕಾರಿಗಳು ಸೇರಿದಂತೆ ದೇಶದ 151 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಪ್ರಶಸ್ತಿ ಲಭ್ಯವಾಗಿದೆ. ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯದಿಂದ ಪದಕದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಉತ್ಕೃಷ್ಟ ಸೇವೆಗಾಗಿ 2022ನೇ ಸಾಲಿನ ಕೇಂದ್ರ ಗೃಹ ಮಂತ್ರಿ ಪದಕವನ್ನು ಪ್ರಕಟಿಸಲಾಗಿದೆ. ಈ ಬಾರಿ 151 ಸಾಧಕರಿಗೆ ಪದಕವನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ. ಕೇಂದ್ರ ಗೃಹ ಮಂತ್ರಿ ಪದಕ ಪಡೆದ ಕರ್ನಾಟಕ ಪೊಲೀಸ್ ಅಧಿಕಾರಿಗಳ ಪಟ್ಟಿ ಲಕ್ಷ್ಮೀ ಗಣೇಶ್ ಕೆ, ಹೆಚ್ಚುವರಿ ಎಸ್ಪಿ ವೆಂಕಟಪ್ಪ ನಾಯಕ, ಡಿವೈಎಸ್ಪಿ ಮೈಸೂರು ರಾಜೇಂದ್ರ ಗೌತಮ್, ಡಿವೈಎಸ್ಪಿ ಶಂಕರ್ ಕಾಳಪ್ಪ ಮರಿಹಾಳ್, ಡಿವೈಎಸ್ಪಿ ಶಂಕರಗೌಡ ವೀರಗೌಡ ಪಾಟೀಲ್, ಡಿವೈಎಸ್ಪಿ ಗುರುಬಸವರಾಜ್ ಹೆಚ್ ಹಿರೇಗೌಡರ್, ಸಿಪಿಐ
ನವದೆಹಲಿ; ಅತ್ಯುತ್ತಮ ತನಿಖೆ ನಡೆಸಿದ ರಾಜ್ಯದ 6 ಪೊಲೀಸ್ ಅಧಿಕಾರಿಗಳು ಸೇರಿದಂತೆ ದೇಶದ 151 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ...
ಕೊಪ್ಪಳ : ದಿವಂಗತ ಮಾಜಿ ಮುಖ್ಯಮಂತ್ರಿಯಾದ ಡಿ.ದೇವರಾಜ ಅರಸುರವರ ಜನ್ಮ ದಿನಾಚರಣೆಯನ್ನು ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಅವರು ಹೇಳಿದರು. ಜಿಲ್ಲಾಡಳಿತ ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಡಿ. ದೇವರಾಜ ಅರಸು ಅವರ 107ನೇ ಜಯಂತಿ ಆಚರಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ (ಆ.12) ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಿ.ದೇವರಾಜ ಅರಸುರವರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಯಾವುದೇ ಶಿಷ್ಟಚಾರ ಉಲ್ಲಂಘನೆ ಆಗದಂತೆ ಮತ್ತು ಪೊಲೀಸ್ ಭದ್ರತೆಯೊಂದಿಗೆ ವಿವಿಧ ಸಮಿತಿಗಳನ್ನು ರಚಿಸಿಕೊಂಡು ಬೇರೆ ಬೇರೆ ಜವಾಬ್ದಾರಿಗಳನ್ನು ಹಂಚಿಕೊAಡು ಕಾರ್ಯಕ್ರಮಕ್ಕೆ ಮೆರಗು ನಿಡಬೇಕು ಮತ್ತು ಕಾರ್ಯಕ್ರದ ಅಂಗವಾಗಿ ವಿವಿಧ ಕುಲವೃತ್ತಿಗಳಿಗೆ ಸಂಬAಧಿಸಿದ ವರ್ಗಗಳಿಂದ ಮಾರಾಟ ಮಳಿಗೆಗಳನ್ನು ಸ್ಥಾಪಿಸಬೇಕು ಇದರಲ್ಲಿ ಆಯಾ ಇಲಾಖೆಗಳಿಂದ ಸೌಲಭ್ಯಗಳನ್ನು ಪಡೆದ ಕೌಶಲ್ಯ ಆಧಾರಿತ ಜನರಿಗೆ ಮಾರಾಟ ಮಾಡಲು ಅವಕಾಶ ಮಾಡಕೊಡಬೇಕು ಎಂದು ಹೇಳಿದರು....
ಕೊಪ್ಪಳ : ದಿವಂಗತ ಮಾಜಿ ಮುಖ್ಯಮಂತ್ರಿಯಾದ ಡಿ.ದೇವರಾಜ ಅರಸುರವರ ಜನ್ಮ ದಿನಾಚರಣೆಯನ್ನು ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನ...
test
test
ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ- ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಘೋಷಣೆ ಅಕ್ಷರ ಟಿವಿ ಕನ್ನಡ, ಬದಲಾವಣೆ ದೈನಿಕ ಸುದ್ದಿ ಜಾಲ: ಕೊಪ್ಪಳ: ತಾಲೂಕಿನ ಕೆರೆಹಳ್ಳಿ ಮತ್ತು ೧೦೩ ಜನವಸತಿಗಳಿಗೆ ಜನಜೀವನ ಮಿಷನ್ ಅಡಿಯಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ೨೬೦ ಕೋಟಿ ರೂಪಾಯಿ ವೆಚ್ಚದಲ್ಲಿ ಸೌಲಭ್ಯ ಕಲ್ಪಿಸುವ ಯೋಜನೆಗೆ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಯೋಜನೆಯಿಂದ ಗ್ರಾಮೀಣ ಪ್ರದೇಶದ ಜನರ ಶುದ್ಧ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ....
ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ- ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಘೋಷಣೆ ಅಕ್ಷರ ಟಿವಿ ಕನ್ನಡ, ಬದಲಾವಣೆ ದೈನಿಕ ಸುದ್ದಿ ಜಾ...
ಕೊಪ್ಪಳ ನಗರದ ಶ್ರೀ ರಾಘವೇಂದ್ರ ಮಠದಲ್ಲಿ ಆರಾಧನೆ ನಿಮಿತ್ಯ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳರವರು ಸ್ವಾಮಿಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ವಿರುಪಾಕ್ಷಪ್ಪ ಮೊರನಾಳ, ಮಾಜಿ ನಗರಸಭಾ ಸದಸ್ಯರಾದ ವಿಷ್ಣು ಗುಬ್ಬಿ ಹಾಗೂ ಅಪ್ಪಣ್ಣ ಜೋಷಿ ಮತ್ತು ಕುರುಗೋಡು ರವಿ ಯಾದವ್ ಉಪಸ್ಥಿತರಿದ್ದರು.
ಕೊಪ್ಪಳ ನಗರದ ಶ್ರೀ ರಾಘವೇಂದ್ರ ಮಠದಲ್ಲಿ ಆರಾಧನೆ ನಿಮಿತ್ಯ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳರವರು ಸ್ವಾಮಿಗಳ ಆಶೀರ್ವಾದ ಪಡೆದರು....
ತಾವರಗೇರಾ ಪ್ರಜೆಗಳು ಕೂಡ ಸ್ವಾತಂತ್ರ್ಯ ಮಹೋತ್ಸವ ವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಣೆ ಮಾಡಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು. ಸಮೀಪದ ಮೆಣೇಧಾಳ ಗ್ರಾಮದ ಶ್ರೀಅಮರೇಶ್ವರ ದೇವಸ್ಥಾನ ದಲ್ಲಿ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ೭೫ ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದ ಅಂಗವಾಗಿ ದೇಶದ ಏಕತೆಗಾಗಿ ಸ್ವಾತಂತ್ರ್ಯ ನಡಿಗೆ ಜನ ಜಾಗೃತಿ ಪಾದೆಯಾತ್ರೆಯನ್ನು ಎಸ್ ಗಂಗನಾಳ ಗ್ರಾಮದಿಂದ ತಾವರಗೇರಾ ಪಟ್ಟಣದ ವರೆಗೆ ಪ್ರಾರಂಭಿಸಿದ್ದು. ಕಾಂಗ್ರೆಸ್ ಪಕ್ಷವು ಇಡೀ ದೇಶದ್ಯಾಂತ ಜಿಲ್ಲೆಯಲ್ಲಿ ೭೫ ಕಿಮೀ ದೂರದ ವರಗೆ ಸ್ವಾತಂತ್ರ್ಯ ಮಹೋತ್ಸವದ ಜನಜಾಗೃತಿ ಪಾದಯಾತ್ರೆ ಕಾರ್ಯ ಕ್ರಮ ಹಮ್ಮಿಕೊಳ್ಳುವ ಮೂಲಕ ಸ್ವಾತಂತ್ರ್ಯ ಹೋರಾಟಗಾರ ರನ್ನು ಸ್ಮರಿಸುವ ಮೂಲಕ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲಾಗುತ್ತಿದೆ.ಭಾರತ ದೇಶಕ್ಕೆ ಒಳ್ಳೆಯದಾಗಲಿ ಸರ್ವರಿಗೂ ಸಮಬಾಳು ಎಲ್ಲರೂ ಏಕತೆಯಿಂದ ಬಾಳಬೇಕು....
ತಾವರಗೇರಾ ಪ್ರಜೆಗಳು ಕೂಡ ಸ್ವಾತಂತ್ರ್ಯ ಮಹೋತ್ಸವ ವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಣೆ ಮಾಡಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬ....
ಬದಲಾವಣೆ ಸುದ್ದಿ: ಸಿಂಧನೂರು ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಆ.13 ರಿಂದ 15 ರ ವರೆಗೆ ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕು. ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು. ತಾಲೂಕು ಆಡಳಿತ, ನಗರಸಭೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಮಿನಿ ವಿಧಾನಸೌಧ ಮುಂಭಾಗದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತದಲ್ಲಿ ಹುಟ್ಟಿದ ನಾವುಗಳು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವನ್ನು ಆಚರಿಸುತ್ತಿದ್ದೇವೆ....
ಬದಲಾವಣೆ ಸುದ್ದಿ: ಸಿಂಧನೂರು ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಆ.13 ರಿಂದ 15 ರ ವರೆಗೆ ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ...
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಎನ್.ಎಮ್ ದೊಡ್ಡಮನಿ ಅವರನ್ನು ಆತ್ಮೀಯವಾಗಿ ಸಂಘಕ್ಕೆ ಪುನಃ ಬರಮಾಡಿಕೊಳ್ಳಲಾಯಿತು.. ಮತ್ತೆ ಸಂಘಕ್ಕೆ ಮರಳಿದ್ದು, ಸಂಘದ ಬಲ ಹೆಚ್ಚಿಸಿದೆ..
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಎನ್.ಎಮ್ ದೊಡ್ಡಮನಿ ಅವರನ್ನು ಆತ್ಮೀಯವಾಗಿ ಸ...
Koppal
583231
Be the first to know and let us send you an email when Akshara TV Kannada posts news and promotions. Your email address will not be used for any other purpose, and you can unsubscribe at any time.
Send a message to Akshara TV Kannada: