Sudha & Sandeep Manjunath

Sudha & Sandeep Manjunath S4 Naturals - Simple Sustainable Self- reliant Society Promoting Desi cow based natural farming.

ಹೀಗೊಂದು ಆಧುನಿಕ ಹರಕೆ ವಿಧಾನ. ಇಷ್ಟು ದಿನ ಗಿಡ ಮರಗಳಿಗೆ ದಾರ ಕಟ್ಟುವುದು, ತೊಟ್ಟಿಲು ಕಟ್ಟುವುದು ಮತ್ತಿತ್ಯಾದಿ ನೋಡಿದ್ದೇವೆ. ಇಂದು ಮಾಜಿ ಮುಖ...
13/01/2025

ಹೀಗೊಂದು ಆಧುನಿಕ ಹರಕೆ ವಿಧಾನ. ಇಷ್ಟು ದಿನ ಗಿಡ ಮರಗಳಿಗೆ ದಾರ ಕಟ್ಟುವುದು, ತೊಟ್ಟಿಲು ಕಟ್ಟುವುದು ಮತ್ತಿತ್ಯಾದಿ ನೋಡಿದ್ದೇವೆ. ಇಂದು ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸ್ ಅವರ ಗ್ರಾಮ ಕಲ್ಲಹಳ್ಳಿಯಲ್ಲಿ ಎಕ್ಕದ ಗಿಡಕ್ಕೆ ಪ್ಲಾಸ್ಟಿಕ್ ಕಟ್ಟಿರುವುದು ಕಾಣಿಸಿತು. ಎಕ್ಕದ ಗಿಡವನ್ನು ಪೂಜನೀಯ ಎಂದು ಕಡಿಯದೆ ಉಳಿಸಿರುವುದಕ್ಕೆ ಸಂತಸಪಡಬೇಕೋ ಅಥವಾ ಇದಕ್ಕೂ ಪ್ಲಾಸ್ಟಿಕ್ ಕಟ್ಟಿದ್ದಾರೆ ಎಂದು ಬೇಸರಪಡಬೇಕೋ ತಿಳಿಯದಾಯಿತು. ಒಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆ ಈ ಮಟ್ಟಿಗೆ ಹೆಚ್ಚಾಗಿರುವುದು ಆತಂಕ ಸೃಷ್ಠಿಸುವ ವಿಚಾರವಾಗಿದೆ.

ಹಿತಕಿದ ಅವರೇಕಾಳು ಉಪ್ಪಿಟ್ಟು ಯಾರಿಗೆಲ್ಲಾ ಇಷ್ಟ? ಬೆಳ್ಳಿಗೆ ತಿಂಡಿ ಉಪ್ಪಿಟ್ಟು ಎಂದರೆ ಅಯ್ಯೋ ಕಾಂಕ್ರೀಟಾ ಅಂತ ಬೇಸರ ಮಾಡಿಕೊಳ್ಳುವವರೆ ಹಲವರು....
13/01/2025

ಹಿತಕಿದ ಅವರೇಕಾಳು ಉಪ್ಪಿಟ್ಟು ಯಾರಿಗೆಲ್ಲಾ ಇಷ್ಟ? ಬೆಳ್ಳಿಗೆ ತಿಂಡಿ ಉಪ್ಪಿಟ್ಟು ಎಂದರೆ ಅಯ್ಯೋ ಕಾಂಕ್ರೀಟಾ ಅಂತ ಬೇಸರ ಮಾಡಿಕೊಳ್ಳುವವರೆ ಹಲವರು. ಆದರೆ ನಮಗೆ ಮಾತ್ರ ಚಳಿಗಾಲದ ಸೊನೆ ಅವರೆಕಾಯಿ ಉಪಿಟ್ಟು ಎಂದರೆ ಬಹಳವೇ ಇಷ್ಟ. ದೇಶ ವಿದೇಶಗಳ ತಿಂಡಿಗಳ ಮುಂದೆ ಉಪ್ಪಿಟ್ಟು ವಿಶೇಷ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು. ಒಮ್ಮೆ ಉತ್ತರ ಭಾರತ ಪ್ರವಾಸಕ್ಕೆ ಹೋದಾಗ ಅಲ್ಲಿಯ ರೋಟಿ ಪರೋಟ ತಿಂದು ಬೇಸರವಾಗಿದ್ದ ನಮಗೆ ದೆಹಲಿಯ ಸರ್ವಣ ಭವನದಲ್ಲಿ ನೂರಾರು ರೂ ನೀಡಿ ಉಪ್ಪಿಟ್ಟು ತಿಂದಿದ್ದೆವು. ನಿಮಗೂ ಈ ರೀತಿ ಅನುಭವವಾಗಿದೆಯೇ? ಕಾಮೆಂಟ್ ಮಾಡಿ ತಿಳಿಸಿ.

ಪ್ರಸ್ತುತ ಸನ್ನಿವೇಶದಲ್ಲಿ ಸಂಕ್ರಾಂತಿ ಹಬ್ಬದ ಮಹತ್ವ ಮತ್ತು ಹೇಗೆ ಆಚರಿಸಬೇಕೆಂದು ಹೆಗ್ಗವಾಡಿಪುರ ಶಿವಕುಮಾರಸ್ವಾಮಿಗಳ ಮಾತುಗಳು ಲೇಖನದ ರೂಪದಲ್ಲ...
13/01/2025

ಪ್ರಸ್ತುತ ಸನ್ನಿವೇಶದಲ್ಲಿ ಸಂಕ್ರಾಂತಿ ಹಬ್ಬದ ಮಹತ್ವ ಮತ್ತು ಹೇಗೆ ಆಚರಿಸಬೇಕೆಂದು ಹೆಗ್ಗವಾಡಿಪುರ ಶಿವಕುಮಾರಸ್ವಾಮಿಗಳ ಮಾತುಗಳು ಲೇಖನದ ರೂಪದಲ್ಲಿ ಪ್ರಕಟವಾಗಿದೆ. ಆಸಕ್ತರು ಓದಿ ಇತತರೊಂದಿಗೆ ಹಂಚಿಕೊಳ್ಳಿ. ಶಿವಕುಮಾರಸ್ವಾಮಿ ಯವರ ಸಂಪರ್ಕ ಸಂಖ್ಯೆ 7899877940

ವಿಕ್ರಮ ಪತ್ರಿಕೆ ಚಂದಾದಾರಾಗಲು ಸಂಪರ್ಕಿಸಿ 8892923338

ಸಂಕ್ರಾಂತಿ ಎಂದರೆ ಸಂಸ್ಕೃತದಲ್ಲಿ ಸಮ್ಯಕ್ ಕ್ರಾಂತಿ, ಅಂದರೆ ಒಳ್ಳೆಯ ರೀತಿಯಲ್ಲಿ ಪರಿವರ್ತನೆ ಎಂಬ ಅರ್ಥವಿದೆ. ಹಾಗಾಗಿ ಪ್ರತಿಯೊಬ್ಬರೂ ಇಂದಿನ ಸ್ಥಿತಿಗಿಂತ ಉತ್ತಮರಾಗಲು ಏನೆಲ್ಲ ಮಾಡಬೇಕೆಂದು ಆಲೋಚನೆ ಮಾಡಲು ಇದೊಂದು ಸರಿಯಾದ ಸಮಯವೇ ಸರಿ.
ಇಚ್ಚಾ ಮರಣಿಯಾದ ಭೀಷ್ಮ ಪಿತಾಮಹರೂ ಉತ್ತರಾಯಣ ಪುಣ್ಯ ಕಾಲದಲ್ಲಿ ಜೀವ ಬಿಡುವುದಾಗಿ ಶರಶಯೆಯಲ್ಲಿ ಕಾದಿದ್ದರು. ಪ್ರಕೃತಿಯಲ್ಲೂ ಸೂರ್ಯ ತನ್ನ ದಿಕ್ಕನ್ನು ಬದಲಿಸಿ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ಪರ್ವಕಾಲವಾಗಿರುತ್ತದೆ. ಮುಂಗಾರಿನಲ್ಲಿ ಬಿತ್ತಿದ ಎಲ್ಲಾ ಬೆಳೆಗಳು ಕಟಾವಿಗೆ ಬರುವುದರಿಂದ
ರೈತರಿಗೆ ಇದೊಂದು ಸುಗ್ಗಿಯ ಹಬ್ಬ. ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಚರಣೆಗಳಿವೆ. ಕಟಾವು ಮಾಡಿ ತಂದ ಬೆಳೆಗಳನ್ನು ಒಂದೆಡೆ ರಾಶಿ ಹಾಕಿ ಅದಕ್ಕೆ ಪೂಜೆ ಸಲ್ಲಿಸುವುದು, ಕೃಷಿ ಕೆಲಸಗಳಲ್ಲಿ ಸಹಾಯ ಮಾಡಿದ ದನಕರುಗಳಿಗೆ ಮೈ ತೊಳೆದು ಸಿಂಗಾರ ಮಾಡಿ ಕಿಚ್ಚು ಹಾಯಿಸುವುದು, ಎಳ್ಳು ಬೆಲ್ಲವನ್ನು ಒಬ್ಬರಿಗೊಬ್ಬರು ಹಂಚಿಕೊಂಡು ಸವಿಯುವುದು, ಗೆಡ್ಡೆ ಗೆಣಸುಗಳನ್ನು ಬೇಯಿಸಿ ತಿನ್ನುವುದು, ಪೊಂಗಲ್ ತಯಾರಿಸುವುದು, ರಂಗೋಲಿ ಬಿಡಿಸುವುದು, ಗಾಳಿಪಟ ಹಾರಿಸುವುದು, ಪ್ರಕೃತಿ ಮಾತೆಗೆ ಅದರಲ್ಲೂ ವಿಶೇಷವಾಗಿ ಸೂರ್ಯನಿಗೆ, ಭೂಮಿ ತಾಯಿಗೆ ನಮಿಸುವುದು ಹೀಗೆ ಹತ್ತು ಹಲವು ರೀತಿಯಲ್ಲಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಬರಭೂಮಿಯಲ್ಲೂ ದೇಶ ವಿದೇಶಗಳ ನೂರಾರು ಬಗೆಯ ಹಣ್ಣುಗಳನ್ನು ಬೆಳೆದು ರೈತರಿಗೆ ಹೊಸತನದ ಹಾದಿಯನ್ನು ತೋರಿಸಿಕೊಡುವ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಪುರದ ಮಾನ್ಯ ಶಿವಕುಮಾರ ಸ್ವಾಮಿಗಳು ಇತ್ತೀಚಿಗಷ್ಟೇ ಮಾತಿಗೆ ಸಿಕ್ಕಿದ್ದರು.
ನಾವು ರೈತಾಪಿ ವರ್ಗದವರು ಸಂಕ್ರಾಂತಿ ಹಬ್ಬ ನಮಗೆಷ್ಟು ಪ್ರಸ್ತುತ ಎಂಬುದರ ಕುರಿತು ಚರ್ಚೆ ನಡೆಸಿದೆವು. ಅವರು ಹೇಳಿದ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.

ನಮ್ಮಲ್ಲಿ ಪ್ರತಿಯೊಂದು ಆಚಾರಕ್ಕೂ ಅದರ ಹಿಂದೆ ಮಹತ್ತರವಾದ ವಿಚಾರವಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯ ಫಲವಾಗಿ ವಿಚಾರಗಳು ಕಣ್ಮರೆಯಾಗಿ ಕೇವಲ ನಾಮ್ಕಾವಸ್ತೆ ಆಚರಣೆಗಳು ಪ್ರಚಲಿತವಾಗುತ್ತಿವೆ. ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ನಾವು ನಮ್ಮೊಳಗೆ ಚಿಂತನೆ ಮಾಡುವುದನ್ನು ಬಿಟ್ಟು ಕೇವಲ ಬಾಹ್ಯ ಪ್ರಪಂಚದ ಮೆಟೀರಿಯಲ್ ಇಸ್ಟಿಕ್ ವರ್ಲ್ಡ್ ಕಡೆ ಗಮನ ಹರಿಸುತ್ತಿದ್ದೇವೆ. ಆರ್ಥಿಕ ಪ್ರಗತಿಯೊಂದೇ ಪ್ರಗತಿಯೆಂಬ ಬ್ರಾಂತಿಯಲ್ಲಿ ಮುಳುಗಿದ್ದೇವೆ. ನಮ್ಮೊಳಗಿನ ಅಂತಃಶಕ್ತಿ, ಕ್ರಿಯಾತ್ಮಕತೆ, ಹೊಸ ಚಿಂತನೆಗಳ ಬೆಳವಣಿಗೆಗೆ ನಾವೇ ಕೊಳ್ಳಿ ಇಟ್ಟಿದ್ದೇವೆ. ಒಳ್ಳೆಯ ಸಂಬಳ ತರುವ ಕೆಲಸ, ಮದುವೆ, ಮನೆ, ಸೈಟು, ಕಾರು ಮತ್ತಿತರ ವಸ್ತುಗಳಿಗಷ್ಟೇ ನಮ್ಮನ್ನು ನಾವು ಸೀಮಿತಗೊಳಿಸುತ್ತಿದ್ದೇವೆ.

ಕಳೆದ ಒಂದೆರಡು ದಶಕದಿಂದ ಹಲವಾರು ಐಟಿ ಉದ್ಯೋಗಿಗಳು ಸೇರಿದಂತೆ ಉನ್ನತ ಶಿಕ್ಷಣ ಪಡೆದವರೂ ಕೃಷಿಯತ್ತ ಮುಖ ಮಾಡುತ್ತಿರುವುದು ಕೃಷಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಗೆ ಮುನ್ನುಡಿಯಾಗುತ್ತದೆ ಎಂದು ಆಲೋಚಿಸುತ್ತಿದ್ದೆವು. ಆದರೆ ನಾನು ಅಂದುಕೊಂಡ ಮಟ್ಟಿಗೆ ಇದು ಸಫಲವಾಗುತ್ತಿಲ್ಲ.
ಏಕೆಂದರೆ ಹೊಸದಾಗಿ ಬರುವವರು ಸಹ ತೆಂಗು, ಅಡಿಕೆ, ಮಾವು ಎಂಬ ಸಾಂಪ್ರದಾಯಿಕ ಬೆಳೆಗಳನ್ನೇ ಬೆಳೆಯುತ್ತಿದ್ದಾರೆ. ಊರಿನಲ್ಲಿ ಒಬ್ಬ ಟೊಮೇಟೊ ಹಾಕಿದರೆ ಉಳಿದವರೆಲ್ಲರೂ ಟೊಮೇಟೊ ಹಾಕಿ ಕೈ ಸುಟ್ಟುಕೊಳ್ಳುತ್ತಾರೆ.
ಪ್ರಕೃತಿಯಲ್ಲಿ ಅಗಾಧವಾದ ಶಕ್ತಿ ಮತ್ತು ವೈವಿಧ್ಯತೆ ಇದೆ. ಸಾವಿರಾರು ಬಗೆಯ ಹಣ್ಣುಗಳು, ನೂರಾರು ರೀತಿಯ ದವಸ ಧಾನ್ಯಗಳು, ಗೆಡ್ಡೆ ಗೆಣಸುಗಳ ಪ್ರಭೇದಗಳಿವೆ.
ಯಾರು ಸ್ವಲ್ಪ ವಿವೇಚನೆಯಿಂದ ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಪೂರಕ ವಾಗುವಂತಹ ಕೃಷಿ ಮಾಡುತ್ತಿದ್ದಾರೋ ಅವರು ಯಶಸ್ವಿಗಳಾಗುತ್ತಿದ್ದಾರೆ.
ಬದಲಾವಣೆ ಜಗದ ನಿಯಮ. ಇಂದು ನಾವು ಸತ್ಯವೆಂದು, ಇದೇ ಶ್ರೇಷ್ಠವೆಂದು ಪ್ರತಿಪಾದಿಸುವ ತತ್ವಗಳು ನಾಳೆ ಬದಲಾಗಬಹುದು. ಶತಮಾನದ ಹಿಂದೆ ಪೆಟ್ರೋಲ್ ಡೀಸೆಲ್ಗಳನ್ನು ಬಳಸಿ ಯಂತ್ರಗಳನ್ನು, ವಾಹನಗಳನ್ನು ಚಲಿಸಬಹುದೆಂದು ಸಂಶೋಧಿಸಿದಾಗ ಮಾನವನ ಇತಿಹಾಸದಲ್ಲೇ ಇದು ಅತ್ಯಂತ ಶ್ರೇಷ್ಠವಾದ ಸಂಶೋಧನೆ ಎಂದು ಎಲ್ಲರೂ ಭಾವಿಸಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಕಚ್ಚಾತೈಲದ ಕೊರತೆ ಉಂಟಾಗುತ್ತಿರುವ ಸಂದರ್ಭದಲ್ಲಿ ಸೋಲಾರ್ ಮತ್ತು ವಿದ್ಯುತ್ ಚಾಲಿತ ಯಂತ್ರಗಳು, ವಾಹನಗಳು ಆವಿಷ್ಕಾರಗೊಂಡಾಗ ಹಳೆಯದೆಲ್ಲ ಏನೇನೂ ಅಲ್ಲ ಎಂದು ಬಾಸವಾಗುತಿದೆಯಲ್ಲವೇ?
ಹಿರೋಶಿಮಾ ನಾಗಸಾಕಿ ಅಂತಹ ದೊಡ್ಡ ಪಟ್ಟಣಗಳನ್ನು ದ್ವಂಸಗೊಳಿಸಲು 4400ಕೆಜಿ ತೂಕದ ಬಾಂಬುಗಳನ್ನು ಬಳಸಲಾಯಿತು ಎಂದು ವಿಜ್ಞಾನಿಗಳು ತಿಳಿಸುತ್ತಾರೆ. ಆದರೆ ಇಂದು ಭಾರತದಲ್ಲಿ ರೈತರು ಪ್ರತಿ ವರ್ಷ ಹೆಕ್ಟೇರ್ಗೆ ಸರಾಸರಿ 137.9ಕೆಜಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ ಎಂದು ಸರ್ಕಾರದ ಸಮೀಕ್ಷೆಗಳು ತಿಳಿಸುತ್ತದೆ. ಇದು ಯಾವ ಬಾಂಬಿಗೂ ಕಡಿಮೆ ಇಲ್ಲ ಅಲ್ಲವೇ? ಇದರ ಜೊತೆಗೆ ಲೀಟರ್ಗಟ್ಟಲೆ ಕಳೆನಾಶಕ ಕೀಟನಾಶಕಗಳನ್ನು ಯಾವುದೇ ಮಿತಿ ಇಲ್ಲದೆ ಸಿಂಪಡಿಸಲಾಗುತ್ತಿದೆ. ಇಷ್ಟೆಲ್ಲಾ ಶೋಷಣೆಯ ಹೊರತಾಗಿಯೂ ನಮ್ಮ ಭೂಮಿತಾಯಿ ಒಂದಿಷ್ಟು ಇಳುವರಿ ನೀಡುತ್ತಿದ್ದಾಳೆ ಎಂಬುದೇ ವಿಸ್ಮಯ.

ನಮ್ಮಲ್ಲಿ 27 ಮಳೆ ನಕ್ಷತ್ರಗಳಿವೆ. ನನ್ನ ತಾತನ ಕಾಲದಲ್ಲಿ ಯಾವುದೇ ಬೋರ್ವೆಲ್ಗಳಾಗಲಿ ನೀರಾವರಿ ವ್ಯವಸ್ಥೆಗಳಾಗಲಿ ಇರಲಿಲ್ಲ. ಈ 27 ಮಳೆ ನಕ್ಷತ್ರಗಳ ಅನ್ವಯ ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿತ್ತು. ಬಹು ವಾರ್ಷಿಕ ಬೆಳೆಗಳಿಗೆ ಕೆರೆ ಅಥವಾ ತೆರೆದ ಬಾವಿಯಿಂದ ನೀರನ್ನು ಸೇದಿ ಗಿಡಗಳಿಗೆ ಬೇಸಿಗೆಯಲ್ಲಿ ನೀಡುತ್ತಿದ್ದರು.
ಕೃಷ್ಣದೇವರಾಯನ ಕಾಲದಲ್ಲಿ ವಜ್ರ ವೈಡೂರ್ಯಗಳನ್ನು ಬೀದಿಬೀದಿಗಳಲ್ಲಿ ಮಾರಾಟ ಮಾಡುತ್ತಿದ್ದರು ಎಂಬ ಉಲ್ಲೇಖಗಳಿವೆ. ಆದರೆ ಆ ಸಮಯದಲ್ಲಿ ಯಾವುದೇ ಸಾಫ್ಟ್ವೇರ್ ಕಂಪನಿಯಾಗಲಿ ಬೃಹತ್ ಕೈಗಾರಿಕೆಗಳಾಗಲಿ ಇರಲಿಲ್ಲ. ಬದಲಾಗಿ ಕೃಷಿ ಮತ್ತು ಕೃಷಿಯ ಉಪಕಸುಬುಗಳನ್ನೇ ಜನರು ಅವಲಂಬಿಸಿದ್ದರೂ ಈ ಮಟ್ಟಿನ ಸಮೃದ್ಧಿ ಹೇಗೆ ಸಾಧ್ಯವಾಯಿತು ಎಂದು ಎಲ್ಲರೂ ಆಲೋಚಿಸಬೇಕಿದೆ.
ನಾವು ತಿನ್ನುವಂತಹ ಆಹಾರದಿಂದ ನಮ್ಮ ದೇಹದ ರಚನೆಯಾಗುತ್ತದೆ ಅದರಂತೆ ನಮ್ಮ ಆಲೋಚನೆಗಳು ಸಹ. ಭೂಮಿಯನ್ನು ಸಂಪೂರ್ಣ ವಿಷಮಯಗೊಳಿಸಿ ಅದರಿಂದ ಬಂದಂತಹ ಆಹಾರವನ್ನು ಸೇವಿಸಿದಾಗ ಒಳ್ಳೆಯ ಆಲೋಚನೆಗಳು ಮೂಡಲು ಹೇಗೆ ಸಾಧ್ಯ? ಆಲೋಚನೆಗಳಿರಲಿ ಕನಿಷ್ಠ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಯಶಸ್ವಿಯಾಗಿದ್ದೇವೆಯೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ.
ಬೆಳಗ್ಗೆ ಎದ್ದಾಗ ಬಳಸುವ ಪೇಸ್ಟ್ ನಿಂದ ಹಿಡಿದು ಮಲಗುವಾಗ ಬಳಸುವ ಸೊಳ್ಳೆ ಬತ್ತಿಯ ತನಕ ಎಲ್ಲವೂ ರಾಸಾಯನಿಕಗಳಿಂದ ಕೂಡಿದೆ. ನಮ್ಮ ಈ ಪ್ರಕ್ರಿಯೆಗಳಿಂದ ಹವಾಮಾನ ವೈಪರೀತ್ಯ ಮತ್ತು ಪರಿಸರ ಕಲ್ಮಶಗೊಳ್ಳುತ್ತಿದೆ. ಇದರಿಂದ ಬಿತ್ತನೆಗೆ ಸಮಯಕ್ಕೆ ಬರಬೇಕಾಗಿದ್ದ ಮಳೆ ಕಟಾವಿನ ಸಮಯಕ್ಕೆ ಬರುತ್ತಿದೆ. ಬಿಂದಿಗೆಗೆ ಹಗ್ಗ ಕಟ್ಟಿ ರಾಟೆಯ ಸಹಾಯದಿಂದ 20 ಅಡಿ ಆಳದಿಂದ ನೀರನ್ನು ಸೇದುತ್ತಿದ್ದ ನಾವು ಇಂದು ಅದೇ ಜಾಗದಲ್ಲಿ ಸಾವಿರ ಅಡಿ ಆಳದ ಕೊಳವೆಬಾವಿಗಳನ್ನು ಕೊರೆಸಿದ್ದೇವೆ. ನೀರನ್ನು ಮೇಲೆತ್ತಲು ಹಲವು ಹಂತದ ಮೋಟಾರ್ಗಳನ್ನು ಅಳವಡಿಸಿದ್ದೇವೆ.

ಇತ್ತ ನಮ್ಮ ವೇದಗಳಲ್ಲಿನ ಜ್ಞಾನವನ್ನು ಅರಿಯದೆ, ನಮ್ಮ ಬಗ್ಗೆ ನಾವೇ ಕೀಳರಿಮೆ ಬೆಳೆಸಿಕೊಂಡು ಮತ್ಯಾರನ್ನೋ ಅನುಸರಿಸುವುದು ಇನ್ನೆಷ್ಟು ದಿನ?
ನಾನು ಕೆಲ ಕಾಲ ಡಾ ಸುದರ್ಶನ್ ಅವರ ಶಾಲೆಯಲ್ಲಿ ಶಿಕ್ಷಕನಾಗಿದ್ದೆ. ಸೋಲಿಗರು ಬಿಳಿಗಿರಿರಂಗನ ಬೆಟ್ಟದ ಮೇಲೆ ಬೆಳೆಯುವ ಒಂದು ಬಗೆಯ ದಂಟಿನ ಸೊಪ್ಪಿನ ಬೀಜ ಮತ್ತು ಎಲೆಗಳನ್ನು ಅಡುಗೆಗೆ ಹೆಚ್ಚಾಗಿ ಬಳಸುತ್ತಿದ್ದರು. ಅದರಲ್ಲೂ ಸಣ್ಣ ಮಕ್ಕಳಿಗೂ ಇವುಗಳನ್ನು ನೀಡುತ್ತಿದ್ದರೂ ಅವರಿಗೆ ಬಹಳ ಸುಲಭವಾಗಿ ಜೀರ್ಣವಾಗುತ್ತಿತ್ತು. ಒಮ್ಮೆ ವಿದೇಶದ ಯಾವುದೋ ವಿಜ್ಞಾನಿ ಒಬ್ಬರು ಇಲ್ಲಿಗೆ ಭೇಟಿಕೊಟ್ಟು ಆ ಪ್ರಭೇದದ ದಂಟಿನ ಸೊಪ್ಪಿನ ಬೀಜಗಳಲ್ಲಿ ಅತ್ಯಂತ ಹೆಚ್ಚು ಪ್ರೋಟೀನ್ ಅಂಶ ಸೇರಿದಂತೆ ಹಲವಾರು ಉಪಯುಕ್ತ ಪೋಷಕಾಂಶಗಳಿರುತ್ತವೆ. ಅದರಲ್ಲೂ ವಿಶೇಷವಾಗಿ ಲೈಸಿನ್ ಎನ್ನುವ ಅಮೈನೋ ಆಸಿಡ್ ಹೆಚ್ಚಾಗಿರುತ್ತದೆ ಎಂದು ಸಂಶೋಧನೆಗಳ ಮೂಲಕ ತಿಳಿಸಿದರು. ಲೈಸಿನ್ ದೇಹದಲ್ಲಿ ಮೂಳೆಗಳ ಮತ್ತು ಮಾಂಸಖಂಡಗಳ ಬೆಳವಣಿಗೆಗೆ ಸಹಕರಿಸುತ್ತದೆ. ಸಾಮಾನ್ಯವಾಗಿ ಮಾಂಸಾಹಾರದಲ್ಲಿ ಕಂಡು ಬರುವ ಲೈಸಿನ್ ಅಂಶ ಸಸ್ಯದಲ್ಲಿ ಗೋಚರಿಸಿರುವುದು ಆಶ್ಚರ್ಯವೇ ಸರಿ. ತಾಯಿಯ ಎದೆ ಹಾಲಿನಲ್ಲೂ ಅಲ್ಪ ಪ್ರಮಾಣದಲ್ಲಿ ಲೈಸಿನ್ ಇರುವುದಾಗಿ ಇತ್ತೀಚಿನ ಸಂಶೋಧನೆಗಳು ದೃಢಪಡಿಸಿವೆ.
ನೂರಾರು ರೋಗಗಳಿಗೆ ರಾಮಬಾಣದಂತಿರುವ ಹುಣಸೆಹಣ್ಣಿನ ಬದಲಾಗಿ ಟೊಮೆಟೋವನ್ನೇ ಬಹುತೇಕರು ಬಳಸುತ್ತಿದ್ದೇವೆ. ಟ್ಯಾಮರಿಂಡಸ್ ಇಂಡಿಕಸ್ ಎಂಬ ವೈಜ್ಞಾನಿಕ ನಾಮ ವಿರುವ ಹುಣಸೆಹಣ್ಣು ನಮ್ಮದೇ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆ ಜನ್ಮ ತಾಳಿದೆ. ಇದನ್ನು ಬೆಳೆಯಲು ಯಾವುದೇ ರಸಗೊಬ್ಬರ ಕೀಟನಾಶಕ ಬೇಕಿಲ್ಲ. ಚಿಗುರೆಲೆ, ಎಳೆಯ ಕಾಯಿ, ಹಣ್ಣು ಬೀಜ ಎಲ್ಲವನ್ನು ಅಡುಗೆಗೆ ಬಳಸಬಹುದಾಗಿದೆ.
ಹಿಂದೆ ಪ್ರತಿ ಊರಿನಲ್ಲೂ ಹತ್ತಾರು ಹುಣಸೆ ಮರಗಳಿರುತ್ತಿದ್ದವು. ಬೆಂಗಳೂರಿನಂತ ಬನಶಂಕರಿಯ ಸಮೀಪ ಒಂದು ಬಸ್ ನಿಲ್ದಾಣದ ಹೆಸರು ಹುಣಸೆಮರ ಸ್ಟಾಪ್ ಎಂದು ಈಗಲೂ ಇದೆ. ಆದರೆ ಇಂದು ಆ ಜಾಗದಲ್ಲಿ ಹುಣಿಸೆ ಮರಗಳಿಲ್ಲ.

ಕಾಳು ಮೆಣಸಿನ ಪರಿಮಳ ಮತ್ತು ರುಚಿಗೆ ಮನಸೋತು ಪಶ್ಚಿಮಾತ್ಯರು ನಮ್ಮ ದೇಶಕ್ಕೆ ವ್ಯಾಪಾರಕ್ಕೆಂದು ಬಂದು ನೂರಾರು ವರ್ಷ ನಮ್ಮನ್ನು ಆಳಿದರು. ಇಲ್ಲಿದ್ದ ಕಾಳು ಮೆಣಸನ್ನು ಅವರು ಕೊಂಡೊಯ್ದು ನಮಗೆ ಮೆಣಸಿನಕಾಯಿಯನ್ನು ಪರಿಚಯಿಸಿದರು. ಇಂದು ನಮ್ಮೆಲ್ಲಾ ಹೊಟ್ಟೆಯ ಸಮಸ್ಯೆಗೆ ಮೆಣಸಿನಕಾಯಿಯ ಬಹುದೊಡ್ಡ ಕೊಡುಗೆ ಇದೆ ಎಂದರೆ ತಪ್ಪಾಗಲಾರದು.
ಸ್ವಂತಿಕೆ ಇಲ್ಲದೆ ನಮ್ಮತನ ಇಲ್ಲದೆ ಯಾರೋ ಪಶ್ಚಿಮಾತ್ಯರು ಅನುಸರಿಸುತ್ತಾರೆಂದು ನಾವು ಕುರುಡರಾಗಿ ಅಂಧಾನುಕರಣೆಯನ್ನು ಬಿಟ್ಟು ಮೈಕೊಡವಿ ಮೇಲೇಳಬೇಕಾಗಿದೆ.
ನಮ್ಮಲ್ಲಿ ಇರುವುದೆಲ್ಲಾ ಶ್ರೇಷ್ಠ, ಮಿಕ್ಕವರದ್ದೆಲ್ಲ ಕನಿಷ್ಠ ಎಂದು ನಾನು ಹೇಳುತ್ತಿಲ್ಲ. ಜಗತ್ತಿನಲ್ಲಿ ಏನೆಲ್ಲಾ ಒಳ್ಳೆಯದಿದೆಯೋ ಅದು ಹೊಸ ಆಲೋಚನೆಯೇ ಇರಲಿ, ಹೊಸ ಬೆಳೆಯೇ ಇರಲಿ ಅವುಗಳನ್ನು ನಾವು ಬೆಳೆಸುವ ಪ್ರಯತ್ನ ಮಾಡೋಣ. ಅವರು ನಮಗೆ ಕಾಫಿ ಟೀ ಚಟವನ್ನು ಅಂಟಿಸಿದರು. ಇಂದು ನಮ್ಮ ಶಿವಮೊಗ್ಗದ ಹುಡುಗ ಅಡಿಕೆಯಿಂದ ಟೀ ಯನ್ನು ಮಾಡಿ ಜಾಗತಿಕ ಮಟ್ಟದಲ್ಲಿ ಅಡಿಕೆಗೆ ಹೊಸ ರೂಪವನ್ನು ನೀಡುತ್ತಿದ್ದಾನೆ. 2023 ನೇ ಇಸವಿಯನ್ನು ಇಂಟರ್ನ್ಯಾಷನಲ್ ಇಯರ್ ಆಫ್ ಮಿಲ್ಲೆಟ್ಸ್ (ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ) ಎಂದು ವಿಶ್ವ ಸಂಸ್ಥೆ ಘೋಷಿಸಿದೆ.
ವಿಶ್ವಶಾಂತಿಯನ್ನು ಕೋರುವ ಭಾರತವನ್ನು ವಿಶ್ವಗುರುವಾಗಿಸಲು ಇದೊಂದು ಸುವರ್ಣ ಅವಕಾಶ.
ನಾವು ಮಾಡುವ ಪ್ರತಿಯೊಂದು ಕೆಲಸವೂ ಪರಿಸರ ಸ್ನೇಹಿ ಮತ್ತು ಪ್ರಕೃತಿ ಪೂರಕವಾಗಿ ಇದ್ದರೆ ಅದುವೇ ನಾವು ಸಮಾಜಕ್ಕೆ ಕೊಡುವ ದೊಡ್ಡ ಕೊಡುಗೆ.
ಈ ಸಂಕ್ರಾಂತಿಯಂದು ನಾವೆಲ್ಲರೂ ಮೇಲೆ ತಿಳಿಸಿರುವ ಮತ್ತು ಇತರೆ ವಿಷಯಗಳ ಕುರಿತು ಅಂತರ್ಮುಖವಾಗಿ ಚಿಂತಿಸಿ ನಿಜವಾದ ಅರ್ಥದಲ್ಲಿ (ಸಮ್ಯಕ್ ಕ್ರಾಂತಿ) ಹಬ್ಬವನ್ನು ಆಚರಿಸಿ ಸ್ವಸ್ಥ, ಸುಂದರ ಸಮಾಜದ ನಿರ್ಮಾಣಕ್ಕೆ ಕೈಜೋಡಿಸೋಣ. ನಮ್ಮಲ್ಲಿನ ಹನುಮಂತನನ್ನು ಜಾಗೃತಗೊಳಿಸಿ ಅಂತರ್ಮುಖಿಗಳಾಗೋಣ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಹೆಗ್ಗವಾಡಿಪುರ ಶಿವಕುಮಾರ ಸ್ವಾಮಿಗಳು.
ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಮತ್ತು ಶಿವಕುಮಾರರೊಂದಿಗೆ ಮಾತನಾಡಲು ಸಂಪರ್ಕಿಸಿ
7899877940.

ಸಂದೀಪ್ ಮಂಜುನಾಥ್
ಎಂ.ಎಸ್ಸಿ ಕೃಷಿ
ಹುಣಸೂರು

ಹೋರಿ ಇಲ್ಲದೆ ನಾಟಿ ಹಸು ಸಾಕುವುದೆಂದರೆ ಅದೊಂದು ಯುದ್ದವೇ ಸರಿ. ನಮ್ಮ ಮಲೆನಾಡು ಗಿಡ್ಡ ಕರು ಸುಮಾರು 6ತಿಂಗಳಿಂದ ಬೆದೆಗೆ ಬರುತ್ತಿದೆ. ಪ್ರತಿಸಲ ...
12/01/2025

ಹೋರಿ ಇಲ್ಲದೆ ನಾಟಿ ಹಸು ಸಾಕುವುದೆಂದರೆ ಅದೊಂದು ಯುದ್ದವೇ ಸರಿ. ನಮ್ಮ ಮಲೆನಾಡು ಗಿಡ್ಡ ಕರು ಸುಮಾರು 6ತಿಂಗಳಿಂದ ಬೆದೆಗೆ ಬರುತ್ತಿದೆ. ಪ್ರತಿಸಲ ಯಾವುದಾದರೊಂದು ಕಾರಣಕ್ಕೆ ಹೊರಿ ಕೊಡಿಸಲು ಸಾಧ್ಯವಾಗುತ್ತಿರಲಿಲ್ಲ. ಇಂದು ತೋಟಕ್ಕೆ ಹೋದಾಗ ಮೈ ಮೇಲೆ ಎಗರಿ ಬಂದು ಕೆಳಗೆ ಬೀಳಿಸಿತು. ಸದ್ಯ ಅಂತಹ ದೊಡ್ಡ ಪೆಟ್ಟು ಬೀಳಲಿಲ್ಲ. ಇನ್ನು ತಡಮಾಡಬಾರದೆಂದು ಹೆಗ್ಗಡದೇವನಕೋಟೆ ತಾ ಆಲನಹಳ್ಳಿ ಸಮೀಪದ ಸ್ನೇಹಿತರಾದ ಆಕಾಶ್ ಅವರು ಪುಂಗನೂರು ಮತ್ತು ಮಲೆನಾಡು ಗಿಡ್ಡ ಹೋರಿ ಸಾಕಿರುವ ವಿಷಯ ತಿಳಿದಿತ್ತು. ತಕ್ಷಣ ಅಲ್ಲಿಗೆ ಕರೆದುಕೊಂಡು ಹೋಗಿ ಹೋರಿ ಕೊಡಿಸಿದೆವು. ಕೃತಕ ಗರ್ಭಧಾರಣೆ ಮಾಡಿಸದೆ ಹೊರಿ ಕೊಡಿಸಿದೆವೆಂದು ಹೆಮ್ಮೆಯಾಯಿತು. ಆಳುಗಳ ಸಮಸ್ಯೆಯಿಂದ ಇಂದು ಹೋರಿ ಸಾಕುವವರೇ ಅಪರೂಪ. ಅಂತಹದರಲ್ಲಿ ಆಕಾಶ್ ಅವರು ಹೋರಿ ಸಾಕಿ ನಮ್ಮಂತವರಿಗೆ ನೆರವಾಗುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಕಾರ್ಯ. ಅವರಿಗೆ ಧನ್ಯವಾದಗಳು. ಇನ್ನೊಂದು ವಿಚಾರವೆಂದರೆ ಆಕಾಶ್ ಅವರಿಗೆ ಮೈಸೂರು ಭಾಗದಲ್ಲಿ ಎಲೆಲ್ಲಿ ಯಾವ ತಳಿಯ ಹೋರಿಗಳಿವೆ ಎಂಬುದು ಚೆನ್ನಾಗಿ ತಿಳಿದಿದೆ. ಅವರ ಬಳಿ ನಾಟಿ ಹಸುಗಳು ಮಾರಾಟಕ್ಕೂ ಲಭ್ಯವಿದೆ. ನಿಮಗೂ ಬೇಕಿದ್ದರೆ ಸಂಪರ್ಕಿಸಿ +91 98456 52508

ಈ ವರ್ಷ ಓದಿದ ಮೊದಲ ಪುಸ್ತಕ ಡಾ ಎಪಿ ಚಂದ್ರಶೇಖರ್ ಅವರು ಬರೆದ “ಬೆಳೆಯೋಣ ಬನ್ನಿ” ಸಣ್ಣ ಪುಸ್ತಕವಾದರೂ ಹೆಚ್ಚು ವಿಷಯಗಳ ಕುರಿತು ತಿಳಿಸುತ್ತದೆ. ನ...
12/01/2025

ಈ ವರ್ಷ ಓದಿದ ಮೊದಲ ಪುಸ್ತಕ ಡಾ ಎಪಿ ಚಂದ್ರಶೇಖರ್ ಅವರು ಬರೆದ “ಬೆಳೆಯೋಣ ಬನ್ನಿ” ಸಣ್ಣ ಪುಸ್ತಕವಾದರೂ ಹೆಚ್ಚು ವಿಷಯಗಳ ಕುರಿತು ತಿಳಿಸುತ್ತದೆ. ನಾವು ಇಂದು ಬಹಳ ಬಳಸುವ ತರಕಾರಿಗಳಿಗೆ ಯಾವ ವಿಷ ರಾಸಾಯನಿಕಗಳನ್ನು ಬಳಸಿ ಬೆಳೆಯುತ್ತಿದ್ದಾರೆ, ಬೆಳೆದ ನಂತರ ಸಂಸ್ಕರಣೆ ಹೆಸರಿನಲ್ಲಿ ಏನು ನಡೆಯುತ್ತಿದೆ, ಅಷ್ಟಕ್ಕೂ ನಾವು ವರ್ಷದಲ್ಲಿ ಮನೆಗೆ ಬಳಸುವ 2-3ಕೆಜಿ ಶುಂಟಿಯನ್ನು ಮಾರುಕಟ್ಟೆಯಿಂದ ತರಬೇಕೇ? ಹೀಗೆ ಹತ್ತು ಹಲವು ರೀತಿ ಓದುಗರನ್ನು ಕೃಷಿಯತ್ತ ಸೆಳೆಯುತ್ತದೆ. ಕೈತೋಟ ಮಾಡಲು ಪ್ರೆರೇಪಿಸುತ್ತದೆ. ನಿಮಗೂ ಈ ಪುಸ್ತಕ ಬೇಕಿದಲ್ಲಿ ಸಂಪರ್ಕಿಸಿ +91 94804 68772

ಸರ್ವರಿಗೂ ಸ್ವಾಮಿ ವಿವೇಕಾನಂದ ಜಯಂತಿಯ ಶುಭಾಶಯಗಳು. 125 ವರ್ಷಗಳ ಹಿಂದೆ ಅವರು ಹೇಳಿದ ಮಾತುಗಳು ಸಾರ್ವಕಾಲಿಕವಾಗಿದೆ. ಜೀವನದಲ್ಲಿ ಸದಾ ಸಕಾರಾತ್ಮ...
12/01/2025

ಸರ್ವರಿಗೂ ಸ್ವಾಮಿ ವಿವೇಕಾನಂದ ಜಯಂತಿಯ ಶುಭಾಶಯಗಳು. 125 ವರ್ಷಗಳ ಹಿಂದೆ ಅವರು ಹೇಳಿದ ಮಾತುಗಳು ಸಾರ್ವಕಾಲಿಕವಾಗಿದೆ. ಜೀವನದಲ್ಲಿ ಸದಾ ಸಕಾರಾತ್ಮಕ ಚಿಂತನೆಗಳಿರಬೇಕಿದ್ದರೆ ವಿವೇಕಾನಂದರನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಅವರ ವಾಣಿ ಎಂತಹವರಿಗೂ ಏನ್ನಾನಾದರೂ ಸಾಧಿಸಲು ಪ್ರೇರಣೆ ನೀಡುತ್ತದೆ. ವಿಶೇಷವಾಗಿ ಮಕ್ಕಳಿಗೆ ಅವರ ಕುರಿತು ತಿಳಿಸುವ ಕಾರ್ಯವಾಗಬೇಕಲ್ಲವೇ?

11/01/2025

ಉದ್ದಿನ ಕೊಟ್ಟೆ ಕಡಬು ಅಥವಾ ಕರಾವಳಿ ಶೈಲಿಯ ಬಾಳೆ ಎಳೆ ಎಲೆ ಇಡ್ಲಿ. ಇತ್ತೀಚಿಗೆ ಇಡ್ಲಿ ಮಾಡಲು ತಳದಲ್ಲಿ ಬಟ್ಟೆ ಬದಲು ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಅದರ ಬದಲಿಗೆ ಈ ರೀತಿ ಬಾಳೆ ಎಲೆ, ಹಲಸಿನ ಎಲೆ, ತೇಗದ ಎಲೆ ಬಳಸಿದರೆ ಅವುಗಳಲ್ಲಿರುವ ಔಷಧಿಯ ಗುಣಗಳು ಇಡ್ಲಿಗೆ ಸೇರುತ್ತದೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ ಅಲ್ಲವೇ?

ಅಡುಗೆ ಮನೆ ಕಸ ನಗರಪಾಲಿಕೆ ವಾಹನಕ್ಕೆ ಹಾಕುವ ಬದಲು ಮನೆಯಲ್ಲೇ 45-50ದಿನದಲ್ಲಿ ಗೊಬ್ಬರ ಮಾಡಬಹುದು. ಇದರಿಂದ ಅರ್ಧದಷ್ಟು ಕಸ ವಿಲೇವಾರಿ ಸಮಸ್ಯೆ ಕ...
11/01/2025

ಅಡುಗೆ ಮನೆ ಕಸ ನಗರಪಾಲಿಕೆ ವಾಹನಕ್ಕೆ ಹಾಕುವ ಬದಲು ಮನೆಯಲ್ಲೇ 45-50ದಿನದಲ್ಲಿ ಗೊಬ್ಬರ ಮಾಡಬಹುದು. ಇದರಿಂದ ಅರ್ಧದಷ್ಟು ಕಸ ವಿಲೇವಾರಿ ಸಮಸ್ಯೆ ಕಡಿಮೆಯಾಗುತ್ತದೆ. ಸುಂದರ ಸಮಾಜ ನಿರ್ಮಿಸಬಹುದು ಎನ್ನುತ್ತಾರೆ ವಾಸುಕಿ ಅಯ್ಯಂಗರ್.
ಈ ವಾರದ ವಿಕ್ರಮದಲ್ಲಿ ಇವರ ಕುರಿತು ಬರೆದ ಲೇಖನದ ಮೊದಲ ಭಾಗ ಪ್ರಕಟವಾಗಿದೆ. ಆಸಕ್ತರು ಓದಿ ಇತತರೊಂದಿಗೆ ಹಂಚಿಕೊಳ್ಳಿ. ಮನೆಯಲ್ಲೇ ಹಸಿ ಕಸ ಒಣ ಕಸ ವಿಂಗಡಿಸಿ ಹಸಿಕಸದಿಂದ ಕಪ್ಪು ಬಂಗಾರ “ಕಾಂಪೋಸ್ಟ್ ಗೊಬ್ಬರ” ಸಿದ್ದಪಡಿಸುವ ಸರಳ ವಿಧಾನ ಅಳವಡಿಸಿಕೊಳ್ಳೋಣ.

ಸಾಫ್ಟವೇರ್ ಉದ್ಯಮಿ ಬೆಂಗಳೂರು ನಗರದ ಘನತ್ಯಾಜ್ಯ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ತಕ್ಕಮಟ್ಟಿನ ಯಶ ಕಂಡಿದ್ದಾರೆಂದರೆ ನೀವು ನಂಬಲೇ ಬೇಕು. ಮನೆ, ದೇವಾಲಯ, ರಸ್ತೆ, ಉದ್ಯಾನವನ, ಆಪಾರ್ಟಮೆಂಟ್, ವಿದ್ಯಾಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು, ಮದುವೆಯಂತಹ ಶುಭ ಕಾರ್ಯಗಳು ಹೀಗೆ ಹತ್ತು ಹಲವು ಕಡೆ ಹಸಿ-ಕಸ, ಒಣ-ಕಸ ವಿಂಗಡಿಸಿ ಹಸಿಕಸದಿಂದ “ಕಪ್ಪು ಬಂಗಾರ -ಕಾಂಪೋಸ್ಟ್” ತಯಾರಿಸಿ ತ್ಯಾಜ್ಯವಿಲೇವಾರಿ ಸಮಸ್ಯೆಗೆ ತಮ್ಮದೇ ರೀತಿಯ ಕೊಡುಗೆ ನೀಡುತ್ತಿದ್ದಾರೆ ಶ್ರೀ ವಾಸುಕೀ ಅಯ್ಯಂಗಾರ್. ಜನವರಿ ಫೆಬ್ರವರಿ ತಿಂಗಳಲ್ಲಿ ಚಳಿಗೆ ಬಹುತೇಕ ಮರಗಿಡಗಳೆಲ್ಲಾ ಒಣಗಿ ಎಲೆ ಉದುರಿಸುವುದು ಸಾಮಾನ್ಯ ದೃಶ್ಯವಾಗಿರುತ್ತದೆ. ಇದರ ಜೊತೆ ಮದುವೆ ಶುಭಕಾರ್ಯ ಮತ್ತು ಮನೆಗಳಲ್ಲಿನ ತ್ಯಾಜ್ಯ ವಿಲೇವಾರಿ ನಗರಪಾಲಿಕೆಯವರಿಗೆ ದೊಡ್ಡ ಸಮಸ್ಯೆಯಾಗಿರುತ್ತದೆ. ಕೇವಲ ಬೆಂಗಳೂರು ನಗರ ಒಂದರಲ್ಲೇ ಪ್ರತಿ ನಿತ್ಯ 3000-3500 ಟನ್ ಘನ ತ್ಯಾಜ್ಯ ಉತ್ಪತಿಯಾಗುತ್ತಿದೆ ಎಂದು ಸ್ವತಃ ಬಿಬಿಎಂಪಿ ತನ್ನ ಅಂತರ್ಜಾಲತಾಣದಲ್ಲಿ ಪ್ರಕಟಿಸಿದೆ. ಅಧಿಕೃತ ಪ್ರಕಟಣೆಯೇ ಈ ಪ್ರಮಾಣದಲ್ಲಿದ್ದರೆ ಇನ್ನು ಲೆಖಕ್ಕೆ ಸಿಗದ ಕಸವೆಷ್ಟೋ? ಈ ಸಮಸ್ಯಗಳಿಗೆ ಮನೆಮಟ್ಟದಲ್ಲೇ ಸರಳ ಪರಿಹಾರಗಳಿವೆ. ಇಚ್ಚಾಶಕ್ತಿಯಿದ್ದರೆ ಖಂಡಿತ ಮತ್ತೆ ಉದ್ಯಾನನಗರಿ ಖ್ಯಾತಿಯ ಬೆಂಗಳೂರನ್ನು ಸ್ವತ್ಚ ನಗರಗಳ ಪಟ್ಟಿಯಲ್ಲಿ ನೋಡಬಹುದು. ಪ್ರಜೆಗಳ ಸಹಕಾರವಿದ್ದರೆ ಕೇವಲ ಬೆಂಗಳೂರು ಅಷ್ಟೇ ಅಲ್ಲದೆ ವಿಶ್ವದ ಎಲ್ಲಾ ನಗರಗಳನ್ನು ನಂದನವನವನ್ನಾಗಿಸಬಹುದು ಎನ್ನುತ್ತಾರೆ ವಾಸುಕಿ ಅಯ್ಯಂಗಾರ್.

ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿಯ ವಾಸುಕಿ ಅವರು 90ರ ದಶಕದಲ್ಲಿ ತುಮಕೂರಿನ ಸಿದ್ದಗಂಗಾ ಇಂಜಿನೆಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದು ಸುಮಾರು 9 ವರ್ಷ ಅಮೇರಿಕಾದಲ್ಲಿ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ನಂತರ 2005ರಲ್ಲಿ ಬೆಂಗಳೂರಿಗೆ ಆಗಮಿಸಿ ಕನಕಪುರ ರಸ್ತೆಯಲ್ಲಿ ಸ್ವಂತ ಮನೆ ನಿರ್ಮಿಸುತ್ತಾರೆ. ಮೊದಲಿಂದಲೂ ಪರಿಸರ ಕಾಳಜಿ ಹೊಂದಿದ್ದ ಇವರು ಇರುವ ಅಷ್ಟೂ ವಿಸ್ತೀರ್ಣದಲ್ಲಿ ಮನೆ ನಿರ್ಮಿಸದೆ ಕೈ ತೋಟ ಮಾಡಲು ಸಾಕಷ್ಟು ಸ್ಥಳಾವಾಕಾಶ ಮಾಡಿರುತ್ತಾರೆ. ಮುಂದೆ ಅವರಿಂದಲೇ ಅವರ ಅನುಭವ ತಿಳಿಯೋಣ.

ನಲವತ್ತರ ಆಸುಪಾಸಿನಲ್ಲಿರುವವರಿಗೆ ತಾವು ಮಾಡುವ ಕೆಲಸ ಸರಿಯಿಲ್ಲ ಬೇರೇ ಏನಾದರೂ ಸ್ವಂತವಾಗಿ ಮಾಡಬೇಕೆನ್ನುವ ಆಲೋಚನೆ ಬರುವುದು ಸಾಮಾನ್ಯ. 2005-6 ಸಮಯದಲ್ಲಿ ಬೆಂಗಳೂರಿನಲ್ಲಿ ಕಸ ವಿಲೇವಾರಿ ದೊಡ್ಡ ತಲೆನೋವಾಗಿತ್ತು. ಆನೇಕ ಸಂಘ ಸಂಸ್ಥೆಗಳು ಈ ಸಮಸ್ಯಗೆ ಪರಿಹಾರ ಹುಡುಕುತ್ತಿದ್ದವು. ನಮಗೆ ಈ ವಿಷಯ ಹೊಸದು ಮತ್ತು ಅಷ್ಟಾದ ಜ್ಞಾನವೂ ಇರಲಿಲ್ಲ. ಆದರೂ ಈ ಸಮಸ್ಯೆಗೆ ನಮ್ಮಿಂದಾದ ಪರಿಹಾರ ನೀಡಬೇಕೆಂದು ನನ್ನ ಸ್ನೇಹಿತನ ಜೊತೆ ಸೇರಿ ಘನ ತ್ಯಾಜ್ಯ ವಿಲೇವಾರಿ ಮಾಡುವ ಒಂದು ಸಣ್ಣ ಕಂಪೆನಿ ಪ್ರಾರಂಬಿಸಿದೆವು. ಪ್ರಾರಂಭದಲ್ಲಿ ಬಹಳ ಆಸಕ್ತಿಯಿದ್ದರೂ ಕ್ರಾಮೇಣ ಕೇವಲ ಪ್ಲಾಸ್ಟಿಕ್, ಪೇಪರ್, ಇ ವೇಸ್ಟ್ ಗಳನ್ನೇ ಹೆಚ್ಚು ವಿಂಗಡಿಸುತ್ತಿದ್ದ ನಮ್ಮ ಕೆಲಸ ನನಗೆ ಖುಷಿ ಕೊಡುತಿರಲಿಲ್ಲ. ಬದಲಿಗೆ ಹಸಿಕಸದಿಂದ ಗೊಬ್ಬರ ಮಾಡಿ ಅದರಿಂದ ಮನೆಬೇಕಾದ ಸೊಪ್ಪು ತರಕಾರಿ ಬೆಳೆದು ಸಮೃದ್ಧ ಜೀವನ ನಡೆಸಬೇಕೆಂದು ನನ್ನ ಆಶಯವಾಗಿತ್ತು. ಅದೇ ಸಮಯದಲ್ಲಿ ಹುಳಿಮಾವು ಬಯೋ ಸೆಂಟರ್ ನಲ್ಲಿ ತಾರಸಿ ತೋಟದ ಹರಿಕಾರ ಡಾ ವಿಶ್ವನಾಥ್ ಕಡೂರು ಅವರು ಅಡುಗೆ ಮನೆ ತ್ಯಾಜ್ಯಗಳಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಅದರಿಂದ ತಾರಸಿ ತೋಟ ಮಾಡುವುದು ಹೇಗೆ ಎನ್ನುವ ತರಬೇತಿಯಲ್ಲಿ ಭಾಗವಹಿಸಿದೆ. ಈ ತರಬೇತಿ ನನ್ನ ಜೀವನದ ದಿಕ್ಕನ್ನು ಬದಲಿಸಿತು. ತ್ಯಾಜ್ಯವಿಲೇವಾರಿ ಸಮಸ್ಯಗೆ ಇಷ್ಟು ಸರಳ ಪರಿಹಾರವಿದೆಯಂದು ಅರ್ಥವಾಯಿತು. ಮಣ್ಣಿನ ಆರೋಗ್ಯ ಚೆನ್ನಾಗಿದ್ದರೆ ಮಾನವನ ಆರೋಗ್ಯ ಚೆನ್ನಾಗಿರುತ್ತದೆಂದು ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. 2016ರ ಸುಮಾರಿಗೆ ನನ್ನದ್ದೇ ಸ್ವಂತ ಸಾಮಾಜಿಕ ಉದ್ದಿಮೆ “ಸಾಯಿಲ್ ಅಂಡ್ ಹೆಲ್ತ್” ಕಂಪೆನಿ ಪ್ರಾರಂಬಿಸಿದೆ. ಲಾಭವಷ್ಟೇ ನಮ್ಮ ಉದ್ದೇಶವಲ್ಲ. ಬದಲಿಗೆ ಜನರಿಗೆ ತ್ಯಾಜ್ಯವಿಲೇವಾರಿ ಕುರಿತು ಅರಿವು ಮೂಡಿಸುವುದು, ಮನೆಯಲ್ಲಿ ಹೇಗೆ ಸುಲಭವಾಗಿ ಅಡುಗೆ ಮನೆ ತ್ಯಾಜ್ಯದಿಂದ ಗೊಬ್ಬರ ತಯಾರಿಸುವುದು ಎಂದು ತಿಳಿಸುವುದು. ಗೊಬ್ಬರ ತಯಾರಿಸುವ ಮುನ್ನ ಜೀವನದಲ್ಲಿ ನಾವು ಅನುಸರಿಸಬೇಕಾದ ಕೆಲ ಕ್ರಮಗಳನ್ನು ತಿಳಿಯೋಣ.

1. 4R rule : Refuse, Reduce, Reuse & Recycle ಹೀಗೆ ನಾಲ್ಕು ಅಂಶಗಳನ್ನು ಗಮನದಲಿಟ್ಚುಕೊಂಡರೆ ಸಾಕು ತ್ಯಾಜ್ಯ ವಿಲೇವಾರಿ ಸಮಸ್ಯೆ ಅರ್ಧದಷ್ಟು ಕಡಿಮೆಯಾಗುತ್ತದೆ. ನಾವು ಯಾವುದೇ ವಸ್ತುವನ್ನಾಗಲಿ ಖರೀದಿಸುವಾಗ ಯೋಚಿಸಿ ಖರೀದಿಸಬೇಕು. ಅದರಲ್ಲೂ ಒಂದು ಸಲ ಬಳಸಿ ಬಿಸಾಡುವ ಪ್ಲಾಸ್ಟಿಕ್ ಮತ್ತು ಹಾನಿಕಾರಕ ವಸ್ತುಗಳ ಖರೀದಿಯನ್ನು ಆದಷ್ಟು ನಿಲ್ಲಿಸಬೇಕು ( Refuse) ಅಥವಾ ಕಡಿಮೆಗೊಳಿಸಬೇಕು (Reduce). ಒಂದು ವೇಳೆ ಖರೀದಿಸಲೇಬೇಕಾದ ಪರಿಸ್ಥಿತಿ ಎದುರಾದರೆ ಮತ್ತೆ ಮರುಬಳಕೆ ಮಾಡಬಹುದೇ ಎಂದು ಯೋಚಿಸಬೇಕು (Reuse and Recycle) ನಂತರವಷ್ಟೇ ನಾವು ಕಸವನ್ನು ಎಸೆಯುವುದಕ್ಕೆ ಮುಂದಾಗಬೇಕು. ಇದರಿಂದ ನಗರದ ಹೊರವಲಯದ ಲ್ಯಾಂಡ್ ಫಿಲ್ ಗಳಿಗೆ ನಮ್ಮ ಕಸ ಹೋಗುವುದು ಅರ್ಧದಷ್ಟು ಕಡಿಮೆಯಾಗುತ್ತದೆ.
2. ⁠ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಮೂಲದಲ್ಲೇ ವಿಂಗಡಣೆ: ಕೇವಲ ಹಸಿ ಕಸ ಒಣ ಕಸ ಎಂದು ಎರಡು ಬಗೆಯ ವಿಂಗಡಣೆ ಸಾಲದು. ಇವುಗಳನ್ನು ಪ್ರತ್ಯೇಕ ಬಣ್ಣದ ಬುಟ್ಟಿಗಳಲ್ಲಿ ಸಂಗ್ರಹಿಸಬೇಕು. ಅಡುಗೆ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸ ಅಂದರೆ ಹಣ್ಣು ತರಕಾರಿ ಸಿಪ್ಪೆ, ಉಳಿದ ಆಹಾರ, ದೇವರ ಮನೆಯ ಹೂವು, ಕಾಫಿ ಟೀ ಚರಟ ಇತ್ಯಾದಿಗಳನ್ನು ಹಸಿರು ಬಣ್ಣದ ಬುಟ್ಟಿಯಲ್ಲಿ ಸಂಗ್ರಹಿಸಬೇಕು ಮತ್ತು ಪೇಪರ್ ಪ್ಲಾಸ್ಟಿಕ್ ಥರ್ಮಾಕೋಲ್ ರೀತಿಯ ಒಣಕಸಕ್ಕೆ ನೀಲಿ ಬಣ್ಣ. ಇನ್ನು ಒಂದು ಹೆಜ್ಜೆ ಮುಂದು ಹೋಗಿ ಸ್ಯಾನಿಟರಿ ಪ್ಯಾಡ್ ಮತ್ತು ಮಕ್ಕಳ ಡೈಪರ್, ಔಷಧೀಯ ತ್ಯಾಜ್ಯ, ಇ - ತ್ಯಾಜ್ಯ ಹೀಗೆ ಹಲವು ರೀತಿ ವಿಂಗಡಿಸಿ ಮರುಬಳಕೆಗೆ (Recycle) ಕಳುಹಿಸಬಹುದು. ಹೆಂಗಸರು ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಬಳಸುವ ಬದಲು ಮುಟ್ಟಿನ ಕಪ್ ಅಥವಾ ಮರುಬಳಕೆಯ ಬಟ್ಟೆಯ ಪ್ಯಾಡ್ ಬಳಸಿದರೆ ಅವರ ಆರೋಗ್ಯವಷ್ಟೇ ಅಲ್ಲದೆ ಮಣ್ಣಿನ ಆರೋಗ್ಯ ಕಾಪಾಡಬಹುದು.
3. ಅಡುಗೆ ಮನೆಯಿಂದ ಎಷ್ಟು ಹಸಿ ಕಸ ಉತ್ಪತ್ತಿಯಾಗುತ್ತದೆಂದು ಲೆಕ್ಕಹಾಕಬೇಕು: ನಮ್ಮ ಮನೆಯಲ್ಲಿ ಎಷ್ಟು ಮಂದಿ ಇದ್ದೇವೆ? ಎಷ್ಟು ಹಸಿ ಕಸ ಉತ್ಪತ್ತಿಯಾಗುತ್ತದೆ ಎನ್ನುವುದರ ಅಂದಾಜಿದ್ದರೆ ಎಷ್ಟು ಸಂಖ್ಯೆಯ ಕಾಂಪೋಸ್ಟ್ರ್ ಗಳು ಬೇಕಾಗುತ್ತದೆ ಎಂದು ನಿರ್ಧರಿಸಬಹುದು.
4. ಗೊಬ್ಬರ ತಯಾರಿಕಾ ಘಟಕದ ಆಯ್ಕೆ: ಗೊಬ್ಬರ ತಯಾರಿಸಲು ಹಲವಾರು ಮಾರ್ಗಗಳಿವೆ. ನಮ್ಮ ಮನೆಗೆ ಯಾವ ರೀತಿ ಸೂಕ್ತ ಎಂದು ನಾವೇ ನಿರ್ಧರಿಸಬೇಕು. ಹಿತ್ತಲು ಅಥವಾ ಗಿಡಗಳನ್ನು ಬೆಳೆಸಲು ಸ್ಥಳಾವಕಾಶವಿದ್ದರೆ ಪೈಪ್ ಕಾಂಪೋಸ್ಟಿಂಗ್ ಅತ್ಯಂತ ಸರಳ ಮತ್ತು ಕಡಿಮೆ ವೆಚ್ಚದ ವಿಧಾನವಾಗುತ್ತದೆ. ಒಂದು ಮನೆಯಲ್ಲಿ ಮೂವರು ಇದ್ದಾರೆ ಎಂದಿಟ್ಟಕೊಂಡರೆ 6ಪೈಪ್ಗಳಿದ್ದರೆ ಸಾಕು ಒಂದು ಗ್ರಾಮ್ ಹಸಿಕಸ ಆಚೆ ಹಾಕುವ ಪ್ರಮಯವೇ ಬರುವುದಿಲ್ಲ. 6ಇಂಚು ಅಗಲ, 6 ಅಡಿ ಉದ್ದ ಇರುವ 6 ಗೇಜ್ ಪಿವಿಸಿ ಪೈಪ್ ಗಳನ್ನು ಒಂದು ಅಡಿ ಆಳದಲ್ಲಿ ನೆಲದಲ್ಲಿ ಹೂಳಬೇಕು. ಅದಕ್ಕೂ ಮುನ್ನ ಪೈಪ್ ನ ನಾಲ್ಕು ಬದಿಗಳಲ್ಲಿ 5ಎಂ ಎಂ ನಷ್ಟು ಚಿಕ್ಕ ರಂಧ್ರಗಳನ್ನು ಸಾಲಾಗಿ ಸಮಾನಾಂತರದಲ್ಲಿ ಕೊರೆಯಬೇಕು. ಇದರಿಂದ ಗಾಳಿ ಆಡಲು ಅನುಕೂಲವಾಗುತ್ತದೆ. ಮೊದಲಿಗೆ ಎರಡು ಹಿಡಿ ಒಣಗಿದ ಎಲೆಯ ಪುಡಿ ಯನ್ನು ಪೈಪ್ ಒಳಗೆ ಹಾಕಬೇಕು. ನಂತರ ಮನೆಯಲ್ಲಿ ದೊರೆಯುವ ಹಸಿ ಕಸವನ್ನು ಪದರಪದರವಾಗಿ ಹಾಕಬೇಕು. ಒಂದು ವೇಳೆ ಅನ್ನ ಉಳಿದಿದ್ದರೆ ಹಿಂಟೆಯ ರೀತಿ ಇದ್ದರೆ ಅದನ್ನು ಕೈಯಲ್ಲಿ ಪುಡಿ ಮಾಡಿ ಹಾಕಬೇಕು. ಹಣ್ಣುಗಳು ತರಕಾರಿಗಳು ಹಾಳಾಗುತ್ತಿದ್ದರೆ ಅದನ್ನು ಸಣ್ಣಕ್ಕೆ ಹೆಚ್ಚಿ ಹಾಕಬೇಕು. ಒಂದು ಪದರ ತ್ಯಾಜ್ಯ ಮತ್ತೊಂದು ಪದರದಲ್ಲಿ ಕೋಕೋಪೀಟ್ ಅಥವಾ ಒಣಗಿದ ಎಲೆಪುಡಿಯನ್ನು ಹಾಕಿದರೆ ಗೊಬ್ಬರ ಚೆನ್ನಾಗಿ ಆಗುತ್ತದೆ. ಪೈಪ್ ಮೇಲ್ಭಾಗದಲ್ಲಿ ಒಂದು ಎಂಡ್ ಕ್ಯಾಪ್ ಹಾಕಿದರೆ ಮಳೆಯ ನೀರು ಕ್ರೀಮಿ ಕೀಟಗಳು ಒಳಹೋಗದಂತೆ ತಡೆಯುತ್ತದೆ.. ಒಂದು ಪೈಪ್ ತುಂಬಿಸಿ ಮತ್ತೊಂದನ್ನು ತುಂಬಿಸಬೇಕು. ಈ ರೀತಿ ಪೈಪ್ ತುಂಬಿಸಿದ 45-50ದಿನದಲ್ಲಿ ಗೊಬ್ಬರ ಸಿದ್ದವಾಗಿರುತ್ತದೆ. ಇದನ್ನು ಹೊರತೆಗೆಯಬಹುದು ಅಥವಾ ನಾವು ಗಿಗಳ ಸಮೀಪ ಈ ಪೈಪ್ ಇರಿಸಿದರೆ ಗಿಡಕ್ಕೆ ನೀರು ಹಾಕುವ ಬದಲು ಪೈಪ್ ಒಳಗೆ ನೀರು ಹಾಕಿದರೆ ರಂಧ್ರಗಳಿಂದ ಸಾರಯುಕ್ತ ನೀರು ಹೊರ ಹರಿದು ಗಿಡಗಳು ಸೋಂಪಾಗಿ ಬೆಳೆಯುತ್ತದೆ.

ಒಂದು ವೇಳೆ ಸ್ಥಳದ ಕೊರತೆ ಇದ್ದರೆ ಮನೆಯಲ್ಲಿನ ಪೇಂಟ್ ಬಕೆಟ್ ಅಥವಾ ಯಾವುದೇ ರೀತಿಯ ಪ್ಲಾಸ್ಟಿಕ್ ಡಬ್ಬ ಬಳಸಿ ಗೊಬ್ಬರ ತಯಾರಿಸಬಹುದು. ಇದನ್ನು ಜುಗಾಡ್ ಕಾಂಪೋಸ್ಟಿಂಗ್ ಎನ್ನುತ್ತಾರೆ. ಈ ವಿಧನದಲ್ಲೂ ಬಕೆಟ್ ಅಥವಾ ಡಬ್ಬಗಳಿಗೆ ಸುತ್ತಲೂ ಚಿಕ್ಕ ಚಿಕ್ಕ ರಂಧ್ರಮಾಡಿಕೊಳ್ಳಬೇಕು. ಈ ಎಲ್ಲ ವಿಧಾನಗಳು DIY (Do it yourself) ಮಾದರಿಗಳಾಗಿವೆ. ಇನ್ನು ನನ್ನಿಂದ ಇವೆಲ್ಲಾ ಕಷ್ಟ ಎನ್ನುವವರಿಗೆ ಸಿದ್ದಪಡಿಸಿದ ಕಾಂಪೋಸ್ಟರ್ ಗಳು ಲಭ್ಯವಿರುತ್ತದೆ. ಮೆಶ್ ಕಾಂಪೋಸ್ಟ್ರ್, ಸಿಮೆಂಟ್ ರಿಂಗ್ಗಳು, ಲಲಿತ ಬಿನ್, ಬೇರೆ ಬೇರೆ ಕಂಪೆನಿಗಳ ವಿಬಿನ್ನ ಆಕಾರಗಳ ಕಾಂಪೋಸ್ಟ್ರ್ ಗಳಿವೆ ಎನ್ನುತ್ತಾರೆ ವಾಸುಕೀ ಅಯ್ಯಂಗಾರ್.

ಮೇಲೆ ತಿಳಿಸಿದ ಯಾವುದಾದರೂ ಮಾದರಿಗಳನ್ನು ಅಳವಡಿಸಿಕೊಂಡು ಕಪ್ಪ ಬಂಗಾರವಾದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಬಗೆ, ಹಸಿರು ದೇವಸ್ಥಾನಗಳ ಪರಿಕಲ್ಪನೆ, ಹೆಎಚ್ಸ್ ಆರ್ ಲೇಔಟ್ ನ ಸ್ವಚ್ಛಾಗ್ರಹ ಕಲಿಕಾ ಕೇಂದ್ರ, ಜಿರೋ ವೇಸ್ಟ್ ಮದುವೆ ಸೇರಿ ವಾಸುಕೀ ಮತ್ತು ಅವರ ಸಹಚರರು ನಡೆಸುತ್ತಿರುವ ಪರಿಸರ ಸ್ನೇಹಿ ಚಟುವಟಿಕೆಗಳ ಕುರಿತು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.

ಸಂದೀಪ್ ಮಂಜುನಾಥ್

ಹಸಿರು ಜೀವನ ಶೈಲಿ, ಮನೆಯಲ್ಲೇ ಹಸಿಕಸದಿಂದ ಸುಲಭವಾಗಿ ಗೊಬ್ಬರ ತಯಾರಿಸುವಿಕೆ, ಕೈತೋಟ, ಶೂನ್ಯ ತ್ಯಾಜ್ಯ ಸಮಾರಂಭಗಳು ಹೀಗೆ ಹತ್ತು ಹಲವು ರೀತಿಯಲ್ಲ...
11/01/2025

ಹಸಿರು ಜೀವನ ಶೈಲಿ, ಮನೆಯಲ್ಲೇ ಹಸಿಕಸದಿಂದ ಸುಲಭವಾಗಿ ಗೊಬ್ಬರ ತಯಾರಿಸುವಿಕೆ, ಕೈತೋಟ, ಶೂನ್ಯ ತ್ಯಾಜ್ಯ ಸಮಾರಂಭಗಳು ಹೀಗೆ ಹತ್ತು ಹಲವು ರೀತಿಯಲ್ಲಿ ನಗರಗಳ ಘನತ್ಯಾಜ್ಯ ಸಮಸ್ಯೆಗೆ ತಮ್ಮದೇ ರೀತಿಯಲ್ಲಿ ಪರಿಹಾರ ಸೂಚಿಸುತ್ತಿರುವ ಶ್ರೀ ವಾಸುಕಿ ಅಯ್ಯಂಗಾರ್ ಅವರ ಕುರಿತು ಶ್ರೀ ಸಂದೀಪ್ ಮಂಜುನಾಥ್ ಎಂ.ಎಸ್ಸಿ ಕೃಷಿ ಅವರು ಈ ವಾರದ ವಿಕ್ರಮ ವಾರಪತ್ರಿಕೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ಆಸಕ್ತರು ಓದಿ ಸಾಧ್ಯವಾದಷ್ಟು ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಮಾಲಿನ್ಯ ತಡೆಯಲು ಪ್ರಯತ್ನಿಸಬಹುದು. ಹೆಚ್ಚಿನ ಮಾಹಿತಿಗೆ https://www.soilandhealth.in/

ವಿಕ್ರಮ ವಾರ ಪತ್ರಿಕೆ ಚಂದಾದಾರರಾಗಲು ಸಂಪರ್ಕಿಸಿ +91 88929 23338

ಸಾಫ್ಟವೇರ್ ಉದ್ಯಮಿ ಬೆಂಗಳೂರು ನಗರದ ಘನತ್ಯಾಜ್ಯ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ತಕ್ಕಮಟ್ಟಿನ ಯಶ ಕಂಡಿದ್ದಾರೆಂದರೆ ನೀವು ನಂಬಲೇ ಬೇಕು. ಮನೆ, ದೇವಾಲಯ, ರಸ್ತೆ, ಉದ್ಯಾನವನ, ಆಪಾರ್ಟಮೆಂಟ್, ವಿದ್ಯಾಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು, ಮದುವೆಯಂತಹ ಶುಭ ಕಾರ್ಯಗಳು ಹೀಗೆ ಹತ್ತು ಹಲವು ಕಡೆ ಹಸಿ-ಕಸ, ಒಣ-ಕಸ ವಿಂಗಡಿಸಿ ಹಸಿಕಸದಿಂದ “ಕಪ್ಪು ಬಂಗಾರ -ಕಾಂಪೋಸ್ಟ್” ತಯಾರಿಸಿ ತ್ಯಾಜ್ಯವಿಲೇವಾರಿ ಸಮಸ್ಯೆಗೆ ತಮ್ಮದೇ ರೀತಿಯ ಕೊಡುಗೆ ನೀಡುತ್ತಿದ್ದಾರೆ ಶ್ರೀ ವಾಸುಕೀ ಅಯ್ಯಂಗಾರ್. ಜನವರಿ ಫೆಬ್ರವರಿ ತಿಂಗಳಲ್ಲಿ ಚಳಿಗೆ ಬಹುತೇಕ ಮರಗಿಡಗಳೆಲ್ಲಾ ಒಣಗಿ ಎಲೆ ಉದುರಿಸುವುದು ಸಾಮಾನ್ಯ ದೃಶ್ಯವಾಗಿರುತ್ತದೆ. ಇದರ ಜೊತೆ ಮದುವೆ ಶುಭಕಾರ್ಯ ಮತ್ತು ಮನೆಗಳಲ್ಲಿನ ತ್ಯಾಜ್ಯ ವಿಲೇವಾರಿ ನಗರಪಾಲಿಕೆಯವರಿಗೆ ದೊಡ್ಡ ಸಮಸ್ಯೆಯಾಗಿರುತ್ತದೆ. ಕೇವಲ ಬೆಂಗಳೂರು ನಗರ ಒಂದರಲ್ಲೇ ಪ್ರತಿ ನಿತ್ಯ 3000-3500 ಟನ್ ಘನ ತ್ಯಾಜ್ಯ ಉತ್ಪತಿಯಾಗುತ್ತಿದೆ ಎಂದು ಸ್ವತಃ ಬಿಬಿಎಂಪಿ ತನ್ನ ಅಂತರ್ಜಾಲತಾಣದಲ್ಲಿ ಪ್ರಕಟಿಸಿದೆ. ಅಧಿಕೃತ ಪ್ರಕಟಣೆಯೇ ಈ ಪ್ರಮಾಣದಲ್ಲಿದ್ದರೆ ಇನ್ನು ಲೆಖಕ್ಕೆ ಸಿಗದ ಕಸವೆಷ್ಟೋ? ಈ ಸಮಸ್ಯಗಳಿಗೆ ಮನೆಮಟ್ಟದಲ್ಲೇ ಸರಳ ಪರಿಹಾರಗಳಿವೆ. ಇಚ್ಚಾಶಕ್ತಿಯಿದ್ದರೆ ಖಂಡಿತ ಮತ್ತೆ ಉದ್ಯಾನನಗರಿ ಖ್ಯಾತಿಯ ಬೆಂಗಳೂರನ್ನು ಸ್ವತ್ಚ ನಗರಗಳ ಪಟ್ಟಿಯಲ್ಲಿ ನೋಡಬಹುದು. ಪ್ರಜೆಗಳ ಸಹಕಾರವಿದ್ದರೆ ಕೇವಲ ಬೆಂಗಳೂರು ಅಷ್ಟೇ ಅಲ್ಲದೆ ವಿಶ್ವದ ಎಲ್ಲಾ ನಗರಗಳನ್ನು ನಂದನವನವನ್ನಾಗಿಸಬಹುದು ಎನ್ನುತ್ತಾರೆ ವಾಸುಕಿ ಅಯ್ಯಂಗಾರ್.

ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿಯ ವಾಸುಕಿ ಅವರು 90ರ ದಶಕದಲ್ಲಿ ತುಮಕೂರಿನ ಸಿದ್ದಗಂಗಾ ಇಂಜಿನೆಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದು ಸುಮಾರು 9 ವರ್ಷ ಅಮೇರಿಕಾದಲ್ಲಿ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ನಂತರ 2005ರಲ್ಲಿ ಬೆಂಗಳೂರಿಗೆ ಆಗಮಿಸಿ ಕನಕಪುರ ರಸ್ತೆಯಲ್ಲಿ ಸ್ವಂತ ಮನೆ ನಿರ್ಮಿಸುತ್ತಾರೆ. ಮೊದಲಿಂದಲೂ ಪರಿಸರ ಕಾಳಜಿ ಹೊಂದಿದ್ದ ಇವರು ಇರುವ ಅಷ್ಟೂ ವಿಸ್ತೀರ್ಣದಲ್ಲಿ ಮನೆ ನಿರ್ಮಿಸದೆ ಕೈ ತೋಟ ಮಾಡಲು ಸಾಕಷ್ಟು ಸ್ಥಳಾವಾಕಾಶ ಮಾಡಿರುತ್ತಾರೆ. ಮುಂದೆ ಅವರಿಂದಲೇ ಅವರ ಅನುಭವ ತಿಳಿಯೋಣ.

ನಲವತ್ತರ ಆಸುಪಾಸಿನಲ್ಲಿರುವವರಿಗೆ ತಾವು ಮಾಡುವ ಕೆಲಸ ಸರಿಯಿಲ್ಲ ಬೇರೇ ಏನಾದರೂ ಸ್ವಂತವಾಗಿ ಮಾಡಬೇಕೆನ್ನುವ ಆಲೋಚನೆ ಬರುವುದು ಸಾಮಾನ್ಯ. 2005-6 ಸಮಯದಲ್ಲಿ ಬೆಂಗಳೂರಿನಲ್ಲಿ ಕಸ ವಿಲೇವಾರಿ ದೊಡ್ಡ ತಲೆನೋವಾಗಿತ್ತು. ಆನೇಕ ಸಂಘ ಸಂಸ್ಥೆಗಳು ಈ ಸಮಸ್ಯಗೆ ಪರಿಹಾರ ಹುಡುಕುತ್ತಿದ್ದವು. ನಮಗೆ ಈ ವಿಷಯ ಹೊಸದು ಮತ್ತು ಅಷ್ಟಾದ ಜ್ಞಾನವೂ ಇರಲಿಲ್ಲ. ಆದರೂ ಈ ಸಮಸ್ಯೆಗೆ ನಮ್ಮಿಂದಾದ ಪರಿಹಾರ ನೀಡಬೇಕೆಂದು ನನ್ನ ಸ್ನೇಹಿತನ ಜೊತೆ ಸೇರಿ ಘನ ತ್ಯಾಜ್ಯ ವಿಲೇವಾರಿ ಮಾಡುವ ಒಂದು ಸಣ್ಣ ಕಂಪೆನಿ ಪ್ರಾರಂಬಿಸಿದೆವು. ಪ್ರಾರಂಭದಲ್ಲಿ ಬಹಳ ಆಸಕ್ತಿಯಿದ್ದರೂ ಕ್ರಾಮೇಣ ಕೇವಲ ಪ್ಲಾಸ್ಟಿಕ್, ಪೇಪರ್, ಇ ವೇಸ್ಟ್ ಗಳನ್ನೇ ಹೆಚ್ಚು ವಿಂಗಡಿಸುತ್ತಿದ್ದ ನಮ್ಮ ಕೆಲಸ ನನಗೆ ಖುಷಿ ಕೊಡುತಿರಲಿಲ್ಲ. ಬದಲಿಗೆ ಹಸಿಕಸದಿಂದ ಗೊಬ್ಬರ ಮಾಡಿ ಅದರಿಂದ ಮನೆಬೇಕಾದ ಸೊಪ್ಪು ತರಕಾರಿ ಬೆಳೆದು ಸಮೃದ್ಧ ಜೀವನ ನಡೆಸಬೇಕೆಂದು ನನ್ನ ಆಶಯವಾಗಿತ್ತು. ಅದೇ ಸಮಯದಲ್ಲಿ ಹುಳಿಮಾವು ಬಯೋ ಸೆಂಟರ್ ನಲ್ಲಿ ತಾರಸಿ ತೋಟದ ಹರಿಕಾರ ಡಾ ವಿಶ್ವನಾಥ್ ಕಡೂರು ಅವರು ಅಡುಗೆ ಮನೆ ತ್ಯಾಜ್ಯಗಳಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಅದರಿಂದ ತಾರಸಿ ತೋಟ ಮಾಡುವುದು ಹೇಗೆ ಎನ್ನುವ ತರಬೇತಿಯಲ್ಲಿ ಭಾಗವಹಿಸಿದೆ. ಈ ತರಬೇತಿ ನನ್ನ ಜೀವನದ ದಿಕ್ಕನ್ನು ಬದಲಿಸಿತು. ತ್ಯಾಜ್ಯವಿಲೇವಾರಿ ಸಮಸ್ಯಗೆ ಇಷ್ಟು ಸರಳ ಪರಿಹಾರವಿದೆಯಂದು ಅರ್ಥವಾಯಿತು. ಮಣ್ಣಿನ ಆರೋಗ್ಯ ಚೆನ್ನಾಗಿದ್ದರೆ ಮಾನವನ ಆರೋಗ್ಯ ಚೆನ್ನಾಗಿರುತ್ತದೆಂದು ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. 2016ರ ಸುಮಾರಿಗೆ ನನ್ನದ್ದೇ ಸ್ವಂತ ಸಾಮಾಜಿಕ ಉದ್ದಿಮೆ “ಸಾಯಿಲ್ ಅಂಡ್ ಹೆಲ್ತ್” ಕಂಪೆನಿ ಪ್ರಾರಂಬಿಸಿದೆ. ಲಾಭವಷ್ಟೇ ನಮ್ಮ ಉದ್ದೇಶವಲ್ಲ. ಬದಲಿಗೆ ಜನರಿಗೆ ತ್ಯಾಜ್ಯವಿಲೇವಾರಿ ಕುರಿತು ಅರಿವು ಮೂಡಿಸುವುದು, ಮನೆಯಲ್ಲಿ ಹೇಗೆ ಸುಲಭವಾಗಿ ಅಡುಗೆ ಮನೆ ತ್ಯಾಜ್ಯದಿಂದ ಗೊಬ್ಬರ ತಯಾರಿಸುವುದು ಎಂದು ತಿಳಿಸುವುದು. ಗೊಬ್ಬರ ತಯಾರಿಸುವ ಮುನ್ನ ಜೀವನದಲ್ಲಿ ನಾವು ಅನುಸರಿಸಬೇಕಾದ ಕೆಲ ಕ್ರಮಗಳನ್ನು ತಿಳಿಯೋಣ.

1. 4R rule : Refuse, Reduce, Reuse & Recycle ಹೀಗೆ ನಾಲ್ಕು ಅಂಶಗಳನ್ನು ಗಮನದಲಿಟ್ಚುಕೊಂಡರೆ ಸಾಕು ತ್ಯಾಜ್ಯ ವಿಲೇವಾರಿ ಸಮಸ್ಯೆ ಅರ್ಧದಷ್ಟು ಕಡಿಮೆಯಾಗುತ್ತದೆ. ನಾವು ಯಾವುದೇ ವಸ್ತುವನ್ನಾಗಲಿ ಖರೀದಿಸುವಾಗ ಯೋಚಿಸಿ ಖರೀದಿಸಬೇಕು. ಅದರಲ್ಲೂ ಒಂದು ಸಲ ಬಳಸಿ ಬಿಸಾಡುವ ಪ್ಲಾಸ್ಟಿಕ್ ಮತ್ತು ಹಾನಿಕಾರಕ ವಸ್ತುಗಳ ಖರೀದಿಯನ್ನು ಆದಷ್ಟು ನಿಲ್ಲಿಸಬೇಕು ( Refuse) ಅಥವಾ ಕಡಿಮೆಗೊಳಿಸಬೇಕು (Reduce). ಒಂದು ವೇಳೆ ಖರೀದಿಸಲೇಬೇಕಾದ ಪರಿಸ್ಥಿತಿ ಎದುರಾದರೆ ಮತ್ತೆ ಮರುಬಳಕೆ ಮಾಡಬಹುದೇ ಎಂದು ಯೋಚಿಸಬೇಕು (Reuse and Recycle) ನಂತರವಷ್ಟೇ ನಾವು ಕಸವನ್ನು ಎಸೆಯುವುದಕ್ಕೆ ಮುಂದಾಗಬೇಕು. ಇದರಿಂದ ನಗರದ ಹೊರವಲಯದ ಲ್ಯಾಂಡ್ ಫಿಲ್ ಗಳಿಗೆ ನಮ್ಮ ಕಸ ಹೋಗುವುದು ಅರ್ಧದಷ್ಟು ಕಡಿಮೆಯಾಗುತ್ತದೆ.
2. ⁠ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಮೂಲದಲ್ಲೇ ವಿಂಗಡಣೆ: ಕೇವಲ ಹಸಿ ಕಸ ಒಣ ಕಸ ಎಂದು ಎರಡು ಬಗೆಯ ವಿಂಗಡಣೆ ಸಾಲದು. ಇವುಗಳನ್ನು ಪ್ರತ್ಯೇಕ ಬಣ್ಣದ ಬುಟ್ಟಿಗಳಲ್ಲಿ ಸಂಗ್ರಹಿಸಬೇಕು. ಅಡುಗೆ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸ ಅಂದರೆ ಹಣ್ಣು ತರಕಾರಿ ಸಿಪ್ಪೆ, ಉಳಿದ ಆಹಾರ, ದೇವರ ಮನೆಯ ಹೂವು, ಕಾಫಿ ಟೀ ಚರಟ ಇತ್ಯಾದಿಗಳನ್ನು ಹಸಿರು ಬಣ್ಣದ ಬುಟ್ಟಿಯಲ್ಲಿ ಸಂಗ್ರಹಿಸಬೇಕು ಮತ್ತು ಪೇಪರ್ ಪ್ಲಾಸ್ಟಿಕ್ ಥರ್ಮಾಕೋಲ್ ರೀತಿಯ ಒಣಕಸಕ್ಕೆ ನೀಲಿ ಬಣ್ಣ. ಇನ್ನು ಒಂದು ಹೆಜ್ಜೆ ಮುಂದು ಹೋಗಿ ಸ್ಯಾನಿಟರಿ ಪ್ಯಾಡ್ ಮತ್ತು ಮಕ್ಕಳ ಡೈಪರ್, ಔಷಧೀಯ ತ್ಯಾಜ್ಯ, ಇ - ತ್ಯಾಜ್ಯ ಹೀಗೆ ಹಲವು ರೀತಿ ವಿಂಗಡಿಸಿ ಮರುಬಳಕೆಗೆ (Recycle) ಕಳುಹಿಸಬಹುದು. ಹೆಂಗಸರು ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಬಳಸುವ ಬದಲು ಮುಟ್ಟಿನ ಕಪ್ ಅಥವಾ ಮರುಬಳಕೆಯ ಬಟ್ಟೆಯ ಪ್ಯಾಡ್ ಬಳಸಿದರೆ ಅವರ ಆರೋಗ್ಯವಷ್ಟೇ ಅಲ್ಲದೆ ಮಣ್ಣಿನ ಆರೋಗ್ಯ ಕಾಪಾಡಬಹುದು.
3. ಅಡುಗೆ ಮನೆಯಿಂದ ಎಷ್ಟು ಹಸಿ ಕಸ ಉತ್ಪತ್ತಿಯಾಗುತ್ತದೆಂದು ಲೆಕ್ಕಹಾಕಬೇಕು: ನಮ್ಮ ಮನೆಯಲ್ಲಿ ಎಷ್ಟು ಮಂದಿ ಇದ್ದೇವೆ? ಎಷ್ಟು ಹಸಿ ಕಸ ಉತ್ಪತ್ತಿಯಾಗುತ್ತದೆ ಎನ್ನುವುದರ ಅಂದಾಜಿದ್ದರೆ ಎಷ್ಟು ಸಂಖ್ಯೆಯ ಕಾಂಪೋಸ್ಟ್ರ್ ಗಳು ಬೇಕಾಗುತ್ತದೆ ಎಂದು ನಿರ್ಧರಿಸಬಹುದು.
4. ಗೊಬ್ಬರ ತಯಾರಿಕಾ ಘಟಕದ ಆಯ್ಕೆ: ಗೊಬ್ಬರ ತಯಾರಿಸಲು ಹಲವಾರು ಮಾರ್ಗಗಳಿವೆ. ನಮ್ಮ ಮನೆಗೆ ಯಾವ ರೀತಿ ಸೂಕ್ತ ಎಂದು ನಾವೇ ನಿರ್ಧರಿಸಬೇಕು. ಹಿತ್ತಲು ಅಥವಾ ಗಿಡಗಳನ್ನು ಬೆಳೆಸಲು ಸ್ಥಳಾವಕಾಶವಿದ್ದರೆ ಪೈಪ್ ಕಾಂಪೋಸ್ಟಿಂಗ್ ಅತ್ಯಂತ ಸರಳ ಮತ್ತು ಕಡಿಮೆ ವೆಚ್ಚದ ವಿಧಾನವಾಗುತ್ತದೆ. ಒಂದು ಮನೆಯಲ್ಲಿ ಮೂವರು ಇದ್ದಾರೆ ಎಂದಿಟ್ಟಕೊಂಡರೆ 6ಪೈಪ್ಗಳಿದ್ದರೆ ಸಾಕು ಒಂದು ಗ್ರಾಮ್ ಹಸಿಕಸ ಆಚೆ ಹಾಕುವ ಪ್ರಮಯವೇ ಬರುವುದಿಲ್ಲ. 6ಇಂಚು ಅಗಲ, 6 ಅಡಿ ಉದ್ದ ಇರುವ 6 ಗೇಜ್ ಪಿವಿಸಿ ಪೈಪ್ ಗಳನ್ನು ಒಂದು ಅಡಿ ಆಳದಲ್ಲಿ ನೆಲದಲ್ಲಿ ಹೂಳಬೇಕು. ಅದಕ್ಕೂ ಮುನ್ನ ಪೈಪ್ ನ ನಾಲ್ಕು ಬದಿಗಳಲ್ಲಿ 5ಎಂ ಎಂ ನಷ್ಟು ಚಿಕ್ಕ ರಂಧ್ರಗಳನ್ನು ಸಾಲಾಗಿ ಸಮಾನಾಂತರದಲ್ಲಿ ಕೊರೆಯಬೇಕು. ಇದರಿಂದ ಗಾಳಿ ಆಡಲು ಅನುಕೂಲವಾಗುತ್ತದೆ. ಮೊದಲಿಗೆ ಎರಡು ಹಿಡಿ ಒಣಗಿದ ಎಲೆಯ ಪುಡಿ ಯನ್ನು ಪೈಪ್ ಒಳಗೆ ಹಾಕಬೇಕು. ನಂತರ ಮನೆಯಲ್ಲಿ ದೊರೆಯುವ ಹಸಿ ಕಸವನ್ನು ಪದರಪದರವಾಗಿ ಹಾಕಬೇಕು. ಒಂದು ವೇಳೆ ಅನ್ನ ಉಳಿದಿದ್ದರೆ ಹಿಂಟೆಯ ರೀತಿ ಇದ್ದರೆ ಅದನ್ನು ಕೈಯಲ್ಲಿ ಪುಡಿ ಮಾಡಿ ಹಾಕಬೇಕು. ಹಣ್ಣುಗಳು ತರಕಾರಿಗಳು ಹಾಳಾಗುತ್ತಿದ್ದರೆ ಅದನ್ನು ಸಣ್ಣಕ್ಕೆ ಹೆಚ್ಚಿ ಹಾಕಬೇಕು. ಒಂದು ಪದರ ತ್ಯಾಜ್ಯ ಮತ್ತೊಂದು ಪದರದಲ್ಲಿ ಕೋಕೋಪೀಟ್ ಅಥವಾ ಒಣಗಿದ ಎಲೆಪುಡಿಯನ್ನು ಹಾಕಿದರೆ ಗೊಬ್ಬರ ಚೆನ್ನಾಗಿ ಆಗುತ್ತದೆ. ಪೈಪ್ ಮೇಲ್ಭಾಗದಲ್ಲಿ ಒಂದು ಎಂಡ್ ಕ್ಯಾಪ್ ಹಾಕಿದರೆ ಮಳೆಯ ನೀರು ಕ್ರೀಮಿ ಕೀಟಗಳು ಒಳಹೋಗದಂತೆ ತಡೆಯುತ್ತದೆ.. ಒಂದು ಪೈಪ್ ತುಂಬಿಸಿ ಮತ್ತೊಂದನ್ನು ತುಂಬಿಸಬೇಕು. ಈ ರೀತಿ ಪೈಪ್ ತುಂಬಿಸಿದ 45-50ದಿನದಲ್ಲಿ ಗೊಬ್ಬರ ಸಿದ್ದವಾಗಿರುತ್ತದೆ. ಇದನ್ನು ಹೊರತೆಗೆಯಬಹುದು ಅಥವಾ ನಾವು ಗಿಗಳ ಸಮೀಪ ಈ ಪೈಪ್ ಇರಿಸಿದರೆ ಗಿಡಕ್ಕೆ ನೀರು ಹಾಕುವ ಬದಲು ಪೈಪ್ ಒಳಗೆ ನೀರು ಹಾಕಿದರೆ ರಂಧ್ರಗಳಿಂದ ಸಾರಯುಕ್ತ ನೀರು ಹೊರ ಹರಿದು ಗಿಡಗಳು ಸೋಂಪಾಗಿ ಬೆಳೆಯುತ್ತದೆ.

ಒಂದು ವೇಳೆ ಸ್ಥಳದ ಕೊರತೆ ಇದ್ದರೆ ಮನೆಯಲ್ಲಿನ ಪೇಂಟ್ ಬಕೆಟ್ ಅಥವಾ ಯಾವುದೇ ರೀತಿಯ ಪ್ಲಾಸ್ಟಿಕ್ ಡಬ್ಬ ಬಳಸಿ ಗೊಬ್ಬರ ತಯಾರಿಸಬಹುದು. ಇದನ್ನು ಜುಗಾಡ್ ಕಾಂಪೋಸ್ಟಿಂಗ್ ಎನ್ನುತ್ತಾರೆ. ಈ ವಿಧನದಲ್ಲೂ ಬಕೆಟ್ ಅಥವಾ ಡಬ್ಬಗಳಿಗೆ ಸುತ್ತಲೂ ಚಿಕ್ಕ ಚಿಕ್ಕ ರಂಧ್ರಮಾಡಿಕೊಳ್ಳಬೇಕು. ಈ ಎಲ್ಲ ವಿಧಾನಗಳು DIY (Do it yourself) ಮಾದರಿಗಳಾಗಿವೆ. ಇನ್ನು ನನ್ನಿಂದ ಇವೆಲ್ಲಾ ಕಷ್ಟ ಎನ್ನುವವರಿಗೆ ಸಿದ್ದಪಡಿಸಿದ ಕಾಂಪೋಸ್ಟರ್ ಗಳು ಲಭ್ಯವಿರುತ್ತದೆ. ಮೆಶ್ ಕಾಂಪೋಸ್ಟ್ರ್, ಸಿಮೆಂಟ್ ರಿಂಗ್ಗಳು, ಲಲಿತ ಬಿನ್, ಬೇರೆ ಬೇರೆ ಕಂಪೆನಿಗಳ ವಿಬಿನ್ನ ಆಕಾರಗಳ ಕಾಂಪೋಸ್ಟ್ರ್ ಗಳಿವೆ ಎನ್ನುತ್ತಾರೆ ವಾಸುಕೀ ಅಯ್ಯಂಗಾರ್.

ಮೇಲೆ ತಿಳಿಸಿದ ಯಾವುದಾದರೂ ಮಾದರಿಗಳನ್ನು ಅಳವಡಿಸಿಕೊಂಡು ಕಪ್ಪ ಬಂಗಾರವಾದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಬಗೆ, ಹಸಿರು ದೇವಸ್ಥಾನಗಳ ಪರಿಕಲ್ಪನೆ, ಹೆಎಚ್ಸ್ ಆರ್ ಲೇಔಟ್ ನ ಸ್ವಚ್ಛಾಗ್ರಹ ಕಲಿಕಾ ಕೇಂದ್ರ, ಜಿರೋ ವೇಸ್ಟ್ ಮದುವೆ ಸೇರಿ ವಾಸುಕೀ ಮತ್ತು ಅವರ ಸಹಚರರು ನಡೆಸುತ್ತಿರುವ ಪರಿಸರ ಸ್ನೇಹಿ ಚಟುವಟಿಕೆಗಳ ಕುರಿತು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.

ಸಂದೀಪ್ ಮಂಜುನಾಥ್ ಎಂ.ಎಸ್ಸಿ ಕೃಷಿ ಹುಣಸೂರು.

ಪ್ರತಿ ವರ್ಷ ಸ್ವಾಮಿ ವಿವೇಕಾನಂದ ಜಯಂತಿ ಸಮಯದಲ್ಲಿ ವಿವೇಕಾನಂದರ ಜೀವನ ಮೌಲ್ಯಗಳನ್ನು ತಿಳಿಸುವ ಸಣ್ಣ ಪುಸ್ತಕಗಳನ್ನು ಹತ್ತಾರು ಮಕ್ಕಳಿಗೆ ಹಂಚುತ್...
11/01/2025

ಪ್ರತಿ ವರ್ಷ ಸ್ವಾಮಿ ವಿವೇಕಾನಂದ ಜಯಂತಿ ಸಮಯದಲ್ಲಿ ವಿವೇಕಾನಂದರ ಜೀವನ ಮೌಲ್ಯಗಳನ್ನು ತಿಳಿಸುವ ಸಣ್ಣ ಪುಸ್ತಕಗಳನ್ನು ಹತ್ತಾರು ಮಕ್ಕಳಿಗೆ ಹಂಚುತ್ತೇವೆ. ಈ ಮೂಲಕ ಒಂದಿಷ್ಟು ಜನ ಮೋಬೈಲ್ ಬಿಟ್ಟು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ದೇಶದ ಪ್ರಗತಿಯಲ್ಲಿ ಭಾಗಿಯಾದರೆ ನಮಗದೇ ಸಂತೋಷ. ಈ ವರ್ಷ ಸುಪದಳ ತಾನು ಓದುತ್ತಿರುವ ಹುಣಸೂರಿನ ಶಾಸ್ತ್ರಿ ಪಬ್ಲಿಕ್
ಶಾಲೆಯಲ್ಲಿ “ರಾಷ್ಟ್ರ ಜಾಗೃತಿ” ಪುಸ್ತಕವನ್ನು ಸುಮಾರು 30ಮಕ್ಕಳಿಗೆ ನೀಡಿರುತ್ತಾಳೆ. ಅಷ್ಟೇ ಅಲ್ಲದೆ ವಿವೇಕಾನಂದರ ಒಂದು ಹಿತವಚನವನ್ನು ಶಾಲೆಯಲ್ಲಿ ಎಲ್ಲರೆದುರು ಓದಿದಳು. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಹಾಗೆ ಮಕ್ಕಳಿಗೆ ಒಳ್ಳೆಯ ಹವ್ಯಾಸಗಳನ್ನು ಉತ್ತಮರ ಜನುಮದಿನದಂದು ಅವರ ಕುರಿತು ನಾವು ತಿಳಿದುಕೊಂಡು ಮಕ್ಕಳಿಗೂ ಸ್ವಲ್ಪ ಹೇಳಿದರೆ ಒಳಿತಲ್ಲವೇ? - ಸುಧಾ ಸಂದೀಪ್ ಎಂ.ಎಸ್ಸಿ ಕೃಷಿ S4 Naturals ಹುಣಸೂರು.

ಆತ್ಮೀಯರಾದ ಕಣಗಾಲು ಗ್ರಾಮದ ಸಾವಯವ ಕೃಷಿಕ ವೆಂಕಟೇಶ್ ಅವರು ಮನೆಯಲ್ಲೇ ಮೈ ಸೋಪು ತಯಾರಿಸುತ್ತಿದ್ದು ಈ ರೀತಿ ಬಟ್ಟೆ ಬ್ಯಾಗ್ ನಲ್ಲಿ ಪ್ಯಾಕ್ ಮಾಡಿ...
10/01/2025

ಆತ್ಮೀಯರಾದ ಕಣಗಾಲು ಗ್ರಾಮದ ಸಾವಯವ ಕೃಷಿಕ ವೆಂಕಟೇಶ್ ಅವರು ಮನೆಯಲ್ಲೇ ಮೈ ಸೋಪು ತಯಾರಿಸುತ್ತಿದ್ದು ಈ ರೀತಿ ಬಟ್ಟೆ ಬ್ಯಾಗ್ ನಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಅರಿಶಿಣ, ಕಡಲೆ ಹಿಟ್ಟು, ಗೋಮಯ, ಇದ್ದಿಲು ಇತ್ಯಾದಿ ಗಿಡಮೂಲಿಕೆ ಬಳಸಿ ಶರೀರಕ್ಕೆ ಒಳಿತು ಮಾಡುವ ಸೋಪುಗಳು ಇದಾಗಿದ್ದು ಆಸಕ್ತರು ಖರೀದಿಸಬಹುದು. ಅವರ ಸಂಪರ್ಕ ಸಂಖ್ಯೆ +91 79-75656833

ಮಂಡ್ಯದ ಬೆಲ್ಲ, ತಿಪಟೂರು ಕೊಬ್ಬರಿ, ಪಾವಗಡದ ಕಡಲೇ ಬೀಜ ಮತ್ತಿನ್ನೇನು ಬೇಕು? ಸಂಕ್ರಾಂತಿಗೆ “ಸಾವಯವ ಎಳ್ಳು ಬೆಲ್ಲ “ ಬೇಕಿದ್ದರೆ ಸಂಪರ್ಕಿಸಿ ದೇ...
10/01/2025

ಮಂಡ್ಯದ ಬೆಲ್ಲ, ತಿಪಟೂರು ಕೊಬ್ಬರಿ, ಪಾವಗಡದ ಕಡಲೇ ಬೀಜ ಮತ್ತಿನ್ನೇನು ಬೇಕು? ಸಂಕ್ರಾಂತಿಗೆ “ಸಾವಯವ ಎಳ್ಳು ಬೆಲ್ಲ “ ಬೇಕಿದ್ದರೆ ಸಂಪರ್ಕಿಸಿ ದೇಸಿ ಅಂಗಡಿ ಮಂಡ್ಯ. ಸಂಪರ್ಕ ಸಂಖ್ಯೆ 9845382600, 9845382630

ಮತ್ತೊಮ್ಮೆ ಮಂಡ್ಯದ ಮಹೇಶ್ ಅಣ್ಣನ “ದೇಸಿ ಅಂಗಡಿ ಮತ್ತು ಸಿರಿಧಾನ್ಯ ಕೆಫೆಯ” ಸಾವಯವ ತಾಟಿ ಬೆಲ್ಲದ ಮೈಸೂರು ಪಾಕ ಸವಿಯಲು ಅವಕಾಶವಾಯಿತು. ಹಬ್ಬಕ್ಕ...
10/01/2025

ಮತ್ತೊಮ್ಮೆ ಮಂಡ್ಯದ ಮಹೇಶ್ ಅಣ್ಣನ “ದೇಸಿ ಅಂಗಡಿ ಮತ್ತು ಸಿರಿಧಾನ್ಯ ಕೆಫೆಯ” ಸಾವಯವ ತಾಟಿ ಬೆಲ್ಲದ ಮೈಸೂರು ಪಾಕ ಸವಿಯಲು ಅವಕಾಶವಾಯಿತು. ಹಬ್ಬಕ್ಕೆ ಬೇಕಾದ ಒಂದಿಷ್ಟು ದಿನಸಿ ಉತ್ಪನ್ನಗಳನ್ನು ಮಹೇಶ್ ಅಣ್ಣನ ಅಂಗಡಿಯಿಂದ ಖರೀದಿಸಿದೆವು. ಆದೇ ಪೊಟ್ಟಣದಲ್ಲಿ ಸಾವಯವ ಮೈಸೂರು ಪಾಕ್ ಉಡುಗೊರೆ ನೀಡಿದ್ದಾರೆ ಮಹೇಶ್ ಅಣ್ಣ. ಸಂಕ್ರಾಂತಿಗೆ ಕಪ್ಪು ಬೆಲ್ಲ ಬಳಸಿ ಸಿದ್ದಪಡಿಸಿದ “ಎಳ್ಳು ಬೆಲ್ಲ” ಸಹ ಗ್ರಾಹಕರಿಗೆ ನೀಡುತ್ತಿದ್ದಾರೆ ಮಹೇಶ್ ಮತ್ತು ಸೌಮ್ಯ ದಂಪತಿಗಳು. ಆದಷ್ಟು ಇಂತಹ ಸ್ಥಳೀಯ ಉದ್ದಿಮೆಗಳನ್ನು ಪ್ರೋತ್ಸಾಹಿಸೋಣ. ನಿಮಗೂ ಬೇಕಿದ್ದರೆ ಸಂಪರ್ಕಿಸಿ 9845382600, 9845382630.

10/01/2025

ವೈಕುಂಠ ಏಕಾದಶಿಯ ಶುಭದಿನದಂದು ಕಜೆ ವೃಕ್ಷಾಲಯದ ಕು ಪ್ರಚೇತ ರಾಮ ಸಂತ ತುಳಸಿದಾಸ ವಿರಚಿತ “ಶ್ರೀರಾಮಚಂದ್ರ ಕೃಪಾಲು” ಗೀತೆಯನ್ನು ವೈಯಲಿನ್ ಮೂಲಕ ನುಡಿಸಿದ ತುಣುಕನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ಅಂದಹಾಗೆ ಪ್ರಚೇತ ರಾಜ್ಯಮಟ್ಟದ ಗಮಕ ವಾಚನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿದ್ದು ಇದೇ ಭಾನುವಾರ ಬೆಂಗಳೂರಿನಲ್ಲಿ ಖ್ಯಾತ ಗಮಕಿ ಗಂಗಮ್ಮ ಕೇಶವಮೂರ್ತಿ ಅವರ ಸಮುಖದಲ್ಲಿ ಹಾಡಲಿದ್ದಾನೆ. ಬಾಲ ಪ್ರತಿಭೆ ಪ್ರಚೇತನಿಗೆ ಶುಭವಾಗಲಿ.

8 ವರ್ಷಗಳ ಹಿಂದೆ ಇದೇ ದಿವಸ ನಾವು ಕುಟುಂಬ ಸಮೇತ ಚಿತ್ರದುರ್ಗದ ಮುರುಘಾ ಮಠದಲ್ಲಿ ಪದ್ಮಶ್ರೀ ಸುಭಾಷ್ ಪಾಳೇಕರ್ ಅವರ ನೈಸರ್ಗಿಕ ಕೃಷಿ ಕಾರ್ಯಗಾರದಲ...
10/01/2025

8 ವರ್ಷಗಳ ಹಿಂದೆ ಇದೇ ದಿವಸ ನಾವು ಕುಟುಂಬ ಸಮೇತ ಚಿತ್ರದುರ್ಗದ ಮುರುಘಾ ಮಠದಲ್ಲಿ ಪದ್ಮಶ್ರೀ ಸುಭಾಷ್ ಪಾಳೇಕರ್ ಅವರ ನೈಸರ್ಗಿಕ ಕೃಷಿ ಕಾರ್ಯಗಾರದಲ್ಲಿ ಭಾಗವಹಿಸಿ ನಂತರ ಚಿತ್ರದುರ್ಗದ ಕಲ್ಲಿನ ಕೋಟೆ, ಚಂದವಳ್ಳಿ ತೋಟದ ಗುಹೆಗಳನ್ನು ನೋಡಿದೆವು. ಜಗತ್ತಿನ ವಿಸ್ಮಯಗಳಲ್ಲಿ ಚಿತ್ರದುರ್ಗದ ಕೋಟೆಯೂ ಒಂದು. ವಿಶೇಷವಾಗಿ ಚಂದವಳ್ಳಿ ತೋಟದ ಗುಹೆಗಳಂತೂ ಆಬ್ಬಾ ನಮ್ಮ ಪೂರ್ವೀಕರ ಜಾಣ್ಮೆಗೆ ಎಷ್ಟು ಮೆಚ್ಚುಗೆ ಸೂಚಿಸಿದರೂ ಸಾಲದು. ಯಾರೆಲ್ಲಾ ಇನ್ನು ಈ ಕೋಟೆ ನೋಡಿಲ್ಲ ಈ ಬೇಸಿಗೆ ರಜೆಯಲ್ಲಿ ಖಂಡಿತ ಮಕ್ಕಳೊಂದಿಗೆ ಭೇಟಿ ಕೊಡಿ.

ಇದು ಯಾವುದೇ ಉದ್ಯಾನವನವಲ್ಲ. ಸುಳ್ಯ ತಾ ಬೆಳ್ಳಾರೆ ಗ್ರಾಮದ ರೈತ ಶ್ರೀ ತಿರುಮಲೇಶ್ ಭಟ್ ಅವರ ಮನೆ. ದೇಶ ವಿದೇಶಗಳ ಸಾವಿರಾರು ಪ್ರಭೇದಗಳ ಗಿಡಗಳನ್ನ...
09/01/2025

ಇದು ಯಾವುದೇ ಉದ್ಯಾನವನವಲ್ಲ. ಸುಳ್ಯ ತಾ ಬೆಳ್ಳಾರೆ ಗ್ರಾಮದ ರೈತ ಶ್ರೀ ತಿರುಮಲೇಶ್ ಭಟ್ ಅವರ ಮನೆ. ದೇಶ ವಿದೇಶಗಳ ಸಾವಿರಾರು ಪ್ರಭೇದಗಳ ಗಿಡಗಳನ್ನು ಬೆಳೆಸಿ ನೂರಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅವರಿಗೆ ನಮ್ಮ ಶುಭಾಶಯಗಳು.

Address

S4 Naturals. Opposite Hunsur Plywood Factory BM Road Hunsur
Hunsur
571105

Alerts

Be the first to know and let us send you an email when Sudha & Sandeep Manjunath posts news and promotions. Your email address will not be used for any other purpose, and you can unsubscribe at any time.

Contact The Business

Send a message to Sudha & Sandeep Manjunath:

Videos

Share