Hassan News 24×7

Hassan News 24×7 The page where u will get hassan district and state news updates daily

ತಿಂಗಳಾಂತ್ಯಕ್ಕೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ ಕಾಮಗಾರಿ ಸ್ಥಳ ಪರಿಶೀಲನೆ ಬಳಿಕ ಪ್ರಜ್ವಲ್ ರೇವಣ್ಣ ಭರವಸೆನಗರದ ಚನ್ನಪಟ್ಟಣ ನೂತನ ಬಸ್ ನಿಲ್ದಾ...
22/11/2023

ತಿಂಗಳಾಂತ್ಯಕ್ಕೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ

ಕಾಮಗಾರಿ ಸ್ಥಳ ಪರಿಶೀಲನೆ ಬಳಿಕ ಪ್ರಜ್ವಲ್ ರೇವಣ್ಣ ಭರವಸೆ

ನಗರದ ಚನ್ನಪಟ್ಟಣ ನೂತನ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಕಾಮಗಾರಿ ಒಂದು ಮಾರ್ಗದ ಕಾಮಗಾರಿ ನವೆಂಬರ್ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.
ಮೇಲ್ ಸೇತುವೆ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಾಸನಾಂಬ ಜಾತ್ರಾ ಮಹೋತ್ಸವದ ಪ್ರಾರಂಭಕ್ಕೂ ಮುನ್ನ ಒಂದು ಬದಿಯ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಇಂಜಿನಿಯರ್ ಗಳು ಭರವಸೆ ನೀಡಿದ್ದರು ಆದರೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಸ್ವರೂಪ್ ಪ್ರಕಾಶ್,ನಗರಸಭೆ ಸದಸ್ಯ ಗಿರೀಶ್ ಚನ್ನವೀರಪ್ಪ, ಮಾಧ್ಯಮ ವಕ್ತಾರ ಹೊಂಗೆರೆ ರಘು ಇತರರು ಇದ್ದರು.

20/11/2023

Bad day..

Well played team India..
19/11/2023

Well played team India..

19/11/2023
ಭರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಕ್ರಿಕೆಟ್ ಅಂತಿಮ ಪಂದ್ಯದ ಉಚಿತ ನೇರ ಪ್ರಸಾರ
18/11/2023

ಭರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಕ್ರಿಕೆಟ್ ಅಂತಿಮ ಪಂದ್ಯದ ಉಚಿತ ನೇರ ಪ್ರಸಾರ

16/11/2023

ಹಾಸನಾಂಬೆ ದರ್ಶನೋತ್ಸವ 8.72 ಕೋಟಿ ರೂ ಸಂಗ್ರಹ

ವಿಶೇಷ ದರ್ಶನ ಟಿಕೆಟ್ ಮಾರಾಟ- ಕಾಣಿಕೆ ಹುಂಡಿಯಿಂದ ದಾಖಲೆ ಹಣ ಸಂಗ್ರಹ

ಹಾಸನ :ಶ್ರೀ ಹಾಸನಾಂಬೆ ದರ್ಶನೋತ್ಸವ ಸಂದರ್ಭದಲ್ಲಿ ವಿಶೇಷ ದರ್ಶನದ ಟಿಕೆಟ್ ಹಾಗೂ ಕಾಣಿಕೆಹುಂಡಿ ಎಣಿಕೆಯಿಂದ ಸುಮಾರು 8,72,41,531 ಹಣ ಸಂಗ್ರಹದೊಂದಿಗೆ ದಾಖಲೆ ನಿರ್ಮಿಸಿದೆ.

ಶ್ರೀ ಹಾಸನಾಂಬೆ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ನವೆಂಬರ್ 15ರಂದು ಮುಕ್ತಾಯಗೊಂಡಿದ್ದು ಇಂದು ಬೆಳಿಗ್ಗೆ 9 ರಿಂದಲೇ ಜಿಲ್ಲಾಧಿಕಾರಿ ಸಿ ಸತ್ಯಭಾಮ ಉಪಯುಭಾಗಾಧಿಕಾರಿ ಮಾರುತಿ ಉಸ್ತುವಾರಿಯಲ್ಲಿ 53 ಬ್ಯಾಂಕ್ ಸಿಬ್ಬಂದಿ, ಕಂದಾಯ ಇಲಾಖೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ 200 ಕ್ಕೂ ಹೆಚ್ಚು ಮಂದಿ ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು .

ಈ ಬಾರಿ ವಿಶೇಷವಾಗಿ ಇಡಲಾಗಿದ್ದ ಇ- ಹುಂಡಿ ಮೂಲಕ 4,64,000 ರೂ ಸಂಗ್ರಹವಾಗಿದೆ, ಹಾಗೂ ಕಾಣಿಕೆ ಹುಂಡಿಯಿಂದ 2,50,77,497 ರೂ ಕಾಣಿಕೆ ಹಣ ಸಂಗ್ರಹವಾಗಿದೆ ಹಾಗೂ 62 ಗ್ರಾಂ ಚಿನ್ನ , 161 ಗ್ರಾಂ ಬೆಳ್ಳಿ ಕಾಣಿಕೆ ಬಂದಿದೆ.

15/11/2023

ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ವರ್ಲ್ಡ್ ಕಪ್ ಫೈನಲ್ ಪ್ರವೇಶಿಸಿದ ಭಾರತ ಕ್ರಿಕೆಟ್ ತಂಡ... ಈ ಜಯದೊಂದಿಗೆ ಸತತ 10ನೇ ಗೆಲುವನ್ನು ದಾಖಲಿಸಿದ ಭಾರತ ತಂಡ...

15/11/2023

ಶ್ರೀ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಹಾಕುವ ಸಂದರ್ಭದಲ್ಲಿ ಪ್ರಜ್ವಲಿಸುತ್ತಿರುವ ಹಣತೆ...💥🙏💐

ಶ್ರೀ ಹಾಸನಾಂಬೆ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ
ಮಹೋತ್ಸವ ೨೦೨೩ ನ.೧೫ ರಂದು ವಿದ್ಯುಕ್ತವಾಗಿ ತೆರೆ.

2024. ಅಕ್ಟೋಬರ್ 24 ರಿಂದ ನವಂಬರ್ 3ರವರೆಗೆ ೧೧ ದಿನ ಹಾಸನಾಂಬೆ ದರ್ಶನೋತ್ಸವ ಜರುಗಲಿದೆ.

ಮಹಿಳೆಯರಿಗೆ ಗುಡ್ ನ್ಯೂಸ್ : ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ತೋರಿಸಿ ಪ್ರಯಾಣಿಸಲು ಸಾರಿಗೆ ಸಂಸ್ಥೆ ಅವಕಾಶ ನೀಡಿ ಆದೇಶ ಹೊರಡಿಸಿದೆ.
14/11/2023

ಮಹಿಳೆಯರಿಗೆ ಗುಡ್ ನ್ಯೂಸ್ :

ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ತೋರಿಸಿ ಪ್ರಯಾಣಿಸಲು ಸಾರಿಗೆ ಸಂಸ್ಥೆ ಅವಕಾಶ ನೀಡಿ ಆದೇಶ ಹೊರಡಿಸಿದೆ.

12/11/2023

ಚಿಕ್ಕಮಗಳೂರಿನ ಮಲ್ಲೇನಹಳ್ಳಿಯ ಬಿಂಡಿಗ ದೇವಿರಮ್ಮ 🙏🙏🙏೧೨-೧೧-೨೩

ಪ್ರತಿ ವರ್ಷದೀಪಾವಳಿ ಸಮಯದಲ್ಲಿ ಮಾತ್ರ ಭಕ್ತರಿಗೆ ದರ್ಶನ ನೀಡುವ ಬೆಟ್ಟದ ದೇವಿರಮ್ಮ ದೇವಸ್ಥಾನ ತೆರೆಯಲಾಗಿದ್ದು, ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ದೀಪಾವಳಿ ಅಂಗವಾಗಿ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ 3 ಸಾವಿರ ಅಡಿಗಳಷ್ಟು ಎತ್ತರದ ಗುಡ್ಡದಲ್ಲಿರುವ ಬಿಂಡಿಗ ದೇವಿರಮ್ಮ ದೇವಸ್ಥಾನದಲ್ಲಿ ದೇವರಿಗೆ ಮೂರು ದಿನಗಳ ಕಾಲ ವಿಶೇಷ ಪೂಜೆ ಇದ್ದು, ದೇವಿಯನ್ನು ನೋಡಲು ಜನಸಾಗರವೇ ಹರಿದು ಬಂದಿದೆ.

ಹಾಸನಾಂಬೆ ದರ್ಶನೋತ್ಸವದಲ್ಲಿ 'ಬೆಳಕಿನ' ಸಿಂಗಾರ
11/11/2023

ಹಾಸನಾಂಬೆ ದರ್ಶನೋತ್ಸವದಲ್ಲಿ 'ಬೆಳಕಿನ' ಸಿಂಗಾರ

ಹಾಸನ: ಹಾಸನಾಂಬೆ ಜಾತ್ರಾ ಮಹೋತ್ಸವ ಕ್ಕೆ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆ ಶಿಷ್ಟಾಚಾರದ ದರ್ಶನದ ವ್ಯವಸ್ಥೆ ಮತ್ತು ಗಣ್ಯರ ...
10/11/2023

ಹಾಸನ: ಹಾಸನಾಂಬೆ ಜಾತ್ರಾ ಮಹೋತ್ಸವ ಕ್ಕೆ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆ ಶಿಷ್ಟಾಚಾರದ ದರ್ಶನದ ವ್ಯವಸ್ಥೆ ಮತ್ತು ಗಣ್ಯರ ಗರ್ಭಗುಡಿ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಭಂಧಿಸಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಆದೇಶ ಹೊರಡಿಸಿದ್ದಾರೆ.

ಧರ್ಮ ದರ್ಶನದ ಸಾಮಾನ್ಯ ಸಾಲಿನಲ್ಲಿ ಹೆಚ್ಚಿನ ಭಕ್ತರು ಆಗಮಿಸುತ್ತಿರುವುದರಿಂದ ಭದ್ರತೆ ಮತ್ತು ಸುರಕ್ಷತಾ ದೃಷ್ಟಿಯಿಂದ ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಎಲ್ಲಾ ಶಿಷ್ಟಾಚಾರದ ದರ್ಶನದ ವ್ಯವಸ್ಥೆಯನ್ನು ಅಂತ್ಯಗೊಳಸಲಾಗಿದೆ.
ಹಾಗೂ ದೇವಸ್ಥಾನದ ಗರ್ಭಗುಡಿಗೆ ದೇವಾಲಯದ ಅರ್ಚಕರನ್ನು ಹೊರತುಪಡಿಸಿ ಬೇರೆಯವರು ಗರ್ಭಗುಡಿ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಭಂಧಿಸಲಾಗಿದೆ ಎಂದು ತಿಳಿಸಲಾಗಿದೆ.

ಹಾಸನಾಂಬೆ ದರ್ಶನೋತ್ಸವ
10/11/2023

ಹಾಸನಾಂಬೆ ದರ್ಶನೋತ್ಸವ

10/11/2023

ಹಾಸನಾಂಬೆ ದರ್ಶನ ವೇಳೆ ಕರೆಂಟ್ ಶಾಕ್.. ಭಕ್ತಾದಿಗಳ ನೂಕುನುಗ್ಗಲು.. ಕೆಲವರಿಗೆ ಗಾಯ....

ಭಾರತೀಯ ಜನತಾ ಪಾರ್ಟಿಯ(BJP) ನೂತನ ರಾಜ್ಯಾಧ್ಯಕ್ಷರಾಗಿ  ವಿಜಯೇಂದ್ರ ನೇಮಕ
10/11/2023

ಭಾರತೀಯ ಜನತಾ ಪಾರ್ಟಿಯ(BJP) ನೂತನ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ

08/11/2023

ಅಧಿದೇವತೆ ಶ್ರೀ ಹಾಸನಾಂಬೆ ಸನ್ನಿಧಿಯಲ್ಲಿ ಮಳೆ ಸುರಿದರು ಆರದ ಕರ್ಪೂರ. 🙏💐

ಸುರಿಯುತ್ತಿದ್ದ ಮಳೆಯ ನಡುವೆಯೂ ಆರದೆ ಪ್ರಜ್ವಲಿಸುತ್ತಾ ಸಂಪೂರ್ಣ ಉರಿದ ಕರ್ಪೂರ.🙏💐

ಶ್ರೀ ಹಾಸನಾಂಬೆ ದೇವಿಯ ಮಹಿಮೆ ಮತ್ತೊಮ್ಮೆ ಸಾಬೀತು.🙏💐

ಕಳೆದ ಬಾರಿಯೂ ದೇವಾಲಯದ ಗರ್ಭಗುಡಿಯ ಬಾಗಿಲಿನ ಎದುರು ಹಚ್ಚಿದ್ದ ದೀಪ ಮಳೆ ಸುರಿಯುತ್ತಿದ್ದರು ಆರಿರಲಿಲ್ಲ🙏💐

ಶ್ರೀ ಹಾಸನಾಂಬೆ ದೇವಿಯ ಇಂದಿನ ದರ್ಶನ
04/11/2023

ಶ್ರೀ ಹಾಸನಾಂಬೆ ದೇವಿಯ ಇಂದಿನ ದರ್ಶನ

ಹಾಸನಾಂಬೆ ದರ್ಶನ ಪಡೆದ ಗಣ್ಯರು....ಸಹಸ್ರಾರು ಭಕ್ತರು..🙏
04/11/2023

ಹಾಸನಾಂಬೆ ದರ್ಶನ ಪಡೆದ ಗಣ್ಯರು....ಸಹಸ್ರಾರು ಭಕ್ತರು..🙏

02/11/2023

ನ.೧೫ ರವರೆಗೆ ನಡೆಯುವ ಶ್ರೀ ಹಾಸನಾಂಬೆ, ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಭಕ್ತಾಧಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಮನವಿ.

-ಸ್ವರೂಪ್ ಪ್ರಕಾಶ್,ಶಾಸಕರು
ಹಾಸನ ವಿಧಾನಸಭೆ ಕ್ಷೇತ್ರ

02/11/2023

ಹಾಸನಾಂಬೆ ದರ್ಶನ ಆರಂಭ...ಇಂದಿನಿಂದ ನವೆಂಬರ್ ೧೫ ರವರೆಗೆ ದರ್ಶನ...

ಹಾಸನಾಂಬ ದರ್ಶನೋತ್ಸವ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ...
02/11/2023

ಹಾಸನಾಂಬ ದರ್ಶನೋತ್ಸವ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ...

Hasanamba temple is a Hindu temple located in Hassan, Karnataka, dedicated to the Goddess Shakti or Amba. The temple was built in the 12th century and touris...

ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ದರ್ಶನ ಹಾಗೂ ಪೂಜಾ ಅವಧಿಯ ವಿವರ ನವೆಂಬರ್ 2ರಿಂದ ನವೆಂಬರ್ 15ರವರೆಗೆ...
29/10/2023

ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ದರ್ಶನ ಹಾಗೂ ಪೂಜಾ ಅವಧಿಯ ವಿವರ ನವೆಂಬರ್ 2ರಿಂದ ನವೆಂಬರ್ 15ರವರೆಗೆ ದರ್ಶನ್ ಉತ್ಸವ ಜರುಗಲಿದ್ದು ನವಂಬರ್ 2 ಮತ್ತು ನವೆಂಬರ್ 15ರಂದು ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ ನವಂಬರ್ 2 ರಂದು ಮಧ್ಯಾಹ್ನ 12 ಗಂಟೆಗೆ ಧಾರ್ಮಿಕ ವಿಧಿ ವಿಧಾನದೊಂದಿಗೆ ದೇವಿಯ ಗರ್ಭಗುಡಿಯ ಬಾಗಿಲು ತೆರೆಯಲಾಗುವುದು.

ನೆರವಿಗೆ ಮನವಿ...
29/10/2023

ನೆರವಿಗೆ ಮನವಿ...

ಹಾಸನಾಂಬ ದರ್ಶನೋತ್ಸವಕ್ಕೆ ಹೊಸ ಮೆರಗು ನವೆಂಬರ್-೨ ರಿಂದ ೧೫ ರವರೆಗೆ ವಿವಿಧ ರೀತಿಯ ಕಾರ್ಯಕ್ರಮ ಆಯೋಜನೆ... ನಾಡಿನ ಸಮಸ್ತ ಜನತೆಗೆ ಜಿಲ್ಲಾಡಳಿತ ...
27/10/2023

ಹಾಸನಾಂಬ ದರ್ಶನೋತ್ಸವಕ್ಕೆ ಹೊಸ ಮೆರಗು ನವೆಂಬರ್-೨ ರಿಂದ ೧೫ ರವರೆಗೆ ವಿವಿಧ ರೀತಿಯ ಕಾರ್ಯಕ್ರಮ ಆಯೋಜನೆ... ನಾಡಿನ ಸಮಸ್ತ ಜನತೆಗೆ ಜಿಲ್ಲಾಡಳಿತ ಆಹ್ವಾನ..

ಹಾಸನಾಂಬ ದರ್ಶನೋತ್ಸವಕ್ಕೆ ಹೊಸ ಮೆರಗುಪ್ರವಾಸೋದ್ಯಮ ಪ್ಯಾಕೆಜ್ ಟೂರ್-  ಹೆಲಿ ಟೂರಿಸಂ -ಯುವಕರನ್ನು ಆಕರ್ಷಿಸಲು ನಾನಾ ಕಾರ್ಯಕ್ರಮಹಾಸನ:  ನವಂಬರ್...
27/10/2023

ಹಾಸನಾಂಬ ದರ್ಶನೋತ್ಸವಕ್ಕೆ ಹೊಸ ಮೆರಗು

ಪ್ರವಾಸೋದ್ಯಮ ಪ್ಯಾಕೆಜ್ ಟೂರ್- ಹೆಲಿ ಟೂರಿಸಂ -ಯುವಕರನ್ನು ಆಕರ್ಷಿಸಲು ನಾನಾ ಕಾರ್ಯಕ್ರಮ

ಹಾಸನ: ನವಂಬರ್ 2 ರಿಂದ 15 ರವರೆಗೆ ನಡೆಯಲಿರುವ ಹಾಸನಾಂಬ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ , ಸಾರಿಗೆ, ಲೋಕೋಪಯೋಗಿ ಇಲಾಖೆಗಳ ಸಹಯೋಗದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ತಿಳಿಸಿದರು .

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಜಿಲ್ಲಾಡಳಿತ , ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ನವಂಬರ್ 3 ರಿಂದ 14ರವರೆಗೆ ಪ್ಯಾಕೇಜ್ ಟೂರ್ ಆಯೋಜಿಸಲಾಗಿದೆ. ನಾಲ್ಕು ವಿಭಾಗದಲ್ಲಿ ಟೂರ್ ಪ್ಯಾಕೇಜ್ ಅನ್ನು ಬಿಡುಗಡೆ ಮಾಡಲಾಗಿದ್ದು

1 ನೇ ಪ್ಯಾಕೇಜ್ ನಲ್ಲಿ :ಪ್ರಾಕೃತಿಕ ನೈಸರ್ಗಿಕ ಪ್ರವಾಸ ತಾಣಗಳನ್ನು ಗುರುತಿಸಲಾಗಿದೆ.

ಹಾಸನದಿಂದ- ವಿಜಯದುರ್ಗ ದೇವಾಲಯ- ಪಾಳ್ಯ ಜನಾರ್ದನ ಸ್ವಾಮಿ ದೇವಸ್ಥಾನ- ಕೆಂಚಮ್ಮನ ಹೊಸಕೋಟೆ ದೇವಾಲಯ - ಬಿಸಿಲೆ ಘಾಟ್- ಮೂಕನ ಮನೆ ಫಾಲ್ಸ್- ಮಂಜ್ರಬಾದ್ ಕೋಟೆ-ಹಾಸನ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯ ಒಳಗೊಂಡಿದ್ದು 195ಕಿಮೀ ಪ್ರವಾಸದ ಮಾರ್ಗವಾಗಿದೆ. ವಯಸ್ಕರ 425 ಹಾಗೂ ಮಕ್ಕಳಿಗೆ 325 ಶುಲ್ಕವನ್ನು ನಿಗದಿಪಡಿಸಲಾಗಿದೆ.

2 ನೆ ಪ್ಯಾಕೇಜ್ ನಲ್ಲಿ: ವೈಚಾರಿಕ ಐತಿಹಾಸಿಕ ಪ್ರವಾಸಿ ಸರ್ಕ್ಯೂಟ್ ಅನ್ನು ಗುರುತಿಸಲಾಗಿದೆ.

ಬೇಲೂರು ಹಳೇಬೀಡು ಮಾರ್ಗದಲ್ಲಿ ಹಾಸನದಿಂದ ಹೊರಟು ದೊಡ್ಡಗದ್ದವಳ್ಳಿ -ಚೆನ್ನಕೇಶವ ದೇವಾಲಯ- ಬೇಲೂರು ಯಗಚಿ ಜಲಾಶಯ- ಜೈನರ ಬಸದಿ -ಪುಷ್ಪಗಿರಿ ಬೆಟ್ಟ- ಹಳೇಬೀಡು ಜಾವಗಲ್ ಲಕ್ಷ್ಮಿ ನರಸಿಂಹ ದೇವಾಲಯ- ಕೊಂಡಜ್ಜಿ -ಮಳೆಮಲ್ಲೇಶ್ವರ ದೇವಸ್ಥಾನ- ಸಿಗೆಗುಡ್ಡ -ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯ ಒಳಗೊಂಡಿದ್ದು 143 ಕಿಲೋ ಮೀಟರ್ ಮಾರ್ಗದ ಸಾರಿಗೆ ದರ 350 ವಯಸ್ಕರಿಗೆ ಹಾಗೂ ಮಕ್ಕಳಿಗೆ 250 ನಿಗದಿಪಡಿಸಲಾಗಿದೆ.

ಪ್ಯಾಕೇಜ್ 3 ರಲ್ಲಿ :

ಹಾಸನ ನಗರದಿಂದ ಹೊರಟು ಕೋರವಂಗಲ- ಹಾರನಹಳ್ಳಿ -ಮಾಲೇಕಲ್ ತಿರುಪತಿ -ಶಿವಾಲಯ ದೇವಾಲಯ -ಜೇನುಕಲ್ ಸಿದ್ದೇಶ್ವರ ಬೆಟ್ಟ -ಮಹಾತ್ಮ ಗಾಂಧಿ ಚಿತ್ತಾಬಸ್ಮ -ಶಾಂತಿಗ್ರಾಮ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯ ಒಟ್ಟು 119 ಕಿಲೋಮೀಟರ್ ವಯಸ್ಕರಿಗೆ 325 ಮಕ್ಕಳಿಗೆ 225 ದರ ನಿಗದಿ ಮಾಡಲಾಗಿದೆ .

ಪ್ಯಾಕೇಜ್ 4 ರಲ್ಲಿ :
ಹಾಸನದಿಂದ ಹೊರಟು ನುಗ್ಗೆಹಳ್ಳಿ -ಜನಿವಾರ ಕೆರೆ ಸಾಹಸ ಕ್ರೀಡೆ -ಶ್ರವಣಬೆಳಗೊಳ ಶಾಂತಿ ಗ್ರಾಮ- ಭೋಗ ಯೋಗ ನರಸಿಂಹ ಸ್ವಾಮಿ ದೇವಾಲಯ- ಗೆಂಡೆಕಟ್ಟೆ ಫಾರೆಸ್ಟ್ -ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯ ಒಟ್ಟು ೧೪೦ ಕಿಮೀ ಪ್ರವಾಸ ಮಾರ್ಗ ಇದಾಗಿದ್ದು ವಯಸ್ಕರಿಗೆ 350 ಹಾಗೂ ಮಕ್ಕಳಿಗೆ 250 ದರ ನಿಗದಿ ಮಾಡಲಾಗಿದೆ .

ಪ್ಯಾಕೇಜ್ 5 ರಲ್ಲಿ ಸಾಹಸ ಪ್ರವಾಸೋದ್ಯಮದಡಿ: ಆಸಕ್ತರು ಭಾಗವಹಿಸಬಹುದಾಗಿದ್ದು

ಚಾರಣಾ ಪ್ರಿಯರಿಗೆ ಅವಕಾಶ ಕಲ್ಪಿಸಲಾಗಿದ್ದು ಹಾಸನದಿಂದ ಹೊರಟು ಹೆರೂರು ಗವಿ ಬೆಟ್ಟ -ಪಟ್ಲಬೆಟ್ಟ- ಬಿಸಿಲೆ ಘಾಟ್- ಹೊಸಹಳ್ಳಿ ಗುಡ್ಡ -ಅಗನಿಗುಡ್ಡ -ಬೆಟ್ಟದ ಬೈರವೇಶ್ವರ -ಮಗಜಹಳ್ಳಿ ಜಲಪಾತ- ಮೂಕನ ಮನೆ ಜಲಪಾತ ವೀಕ್ಷಣೆ ಮಾಡಬಹುದಾಗಿದೆ .

ಎಲ್ಲಾ ಪ್ಯಾಕೇ ಟೂರ್ಗಳಿಗೆ ಶಕ್ತಿ ಯೋಜನೆ ಅನ್ವಯಿಸುವುದಿಲ್ಲ, ಪ್ರತಿದಿನ ಹಾಸನ ನಗರ ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 7:00 ಗಂಟೆಗೆ ಹಾಸನ ನಗರ ಬಸ್ ನಿಲ್ದಾಣದಲ್ಲಿ ಮುಕ್ತಾಯಗೊಳ್ಳುತ್ತದೆ .

ಒಂದು ಬಸ್ ನಲ್ಲಿ ಕನಿಷ್ಠ 20 ಮಂದಿ ಪ್ರವಾಸಿಗರು ಇದ್ದಲ್ಲಿ ಮಾತ್ರ ಪ್ರವಾಸ ಆರಂಭಿಸಲಾಗುವುದು .ಊಟ ಉಪಹಾರ ವೆಚ್ಚವನ್ನು ಪ್ರತ್ಯೇಕವಾಗಿ ಪ್ರವಾಸಿಗರೇ ಬರಿಸಬೇಕಾಗುತ್ತದೆ. ಪ್ರತಿ ಬಸ್ ನಲ್ಲಿ ಪ್ರವಾಸಿ ತಾಣಗಳ ಬಗ್ಗೆ ಉಚಿತವಾಗಿ ಮಾರ್ಗದರ್ಶನ ನೀಡಲು ಪ್ರವಾಸಿ ಮಾರ್ಗದರ್ಶಿಗಳು ನಿಯೋಜಿಸಲಾಗಿದ್ದು .

ಸಕಲೇಶಪುರ ಸರ್ಕ್ಯೂಟ್ ಹೊರತುಪಡಿಸಿ ಬೇಲೂರು ಅರಸೀಕೆರೆ ಮತ್ತು ಶ್ರವಣಬೆಳಗೊಳ ಪ್ಯಾಕೇಜ್ ಟೂರ್ನಲ್ಲಿ ಉಚಿತ ಊಟದ ವ್ಯವಸ್ಥೆ ಇರಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ತಿಪ್ಪೇಸ್ವಾಮಿ ಮಾಹಿತಿ ನೀಡಿದರು.

ಆಗಸದಿಂದ ಹಾಸನ:

ಈ ಕಾರ್ಯಕ್ರಮದಡಿ ನವಂಬರ್ 3 ರಿಂದ 6 ರವರೆಗೆ ಹೆಲಿಟೂರಿಸಂ ಆಯೋಜಿಸಲಾಗಿದ್ದು ಡೆಕ್ಕನ್ ಚಾರ್ಟರ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಮೂಲದ ಸಂಸ್ಥೆಯಿಂದ ಹೆಲಿ ಟೂರಿಸಂ ರೂಪಿಸಲಾಗಿದ್ದು ಪ್ರತಿಯೊಬ್ಬರಿಗೆ 4,300 ದರ ನಿಗದಿ ಮಾಡಲಾಗಿದೆ. ಎರಡು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕ ಇರುವುದಿಲ್ಲ .

ಬೆಳಗ್ಗೆ 9:00 ರಿಂದ ಸಂಜೆ 5:30ರ ವರೆಗೆ ಹೆಲಿಟರಿಸಂ ಸಮಯ ನಿಗದಿಪಡಿಸಲಾಗಿದ್ದು ೬ ರಿಂದ ೭ ನಿಮಿಷ ಹೆಲಿಕ್ಯಾಪ್ಟರ್ ಮೂಲಕ ಹಾರಾಟ ನಿಗದಿ ಮಾಡಲಾಗಿದೆ. ಪ್ರತಿ ಹಾರಾಟದಲ್ಲಿ ಆರು ಪ್ರಯಾಣಿಕರನ್ನು ಕೊಂಡಲಾಗುತ್ತಿದ್ದು , ಹಾಸನ ನಗರದ ಪರಿಸರದ ರಮಣೀಯ ನೋಟ ವೀಕ್ಷಣೆಗೆ ಅವಕಾಶವಿದ್ದು ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನ , ಸಿಗೆಗುಡ್ಡ, ಶ್ರೀ ಹಾಸನಾಂಬ ದೇವಾಲಯ, ದೇವಿಗೆರೆ ಕೊಳ , ಗೆಂಡೆಕಟ್ಟೆ ಅರಣ್ಯ ಪ್ರದೇಶವನ್ನು ಹೆಲಿ ಟೂರಿಸಂ ಮೂಲಕ ವೀಕ್ಷಣೆ ಮಾಡಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಹಾಗೂ ಟಿಕೆಟ್ ಬುಕಿಂಗ್ ಗೆ ಇಲಾಖೆಯ ಸಹಾಯಕ ಅಭಿಯಂತರ ಮನು ಅವರ ದೂರವಾಣಿ ಸಂಖ್ಯೆ 9008181879 ಹಾಗೂ ಡೆಕ್ಕನ್ ಚಾರ್ಟರ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ಯಾಸಿನ್ ಅವರ ದೂರವಾಣಿ ಸಂಖ್ಯೆ 94483 97710 9900027530 ಸಂಪರ್ಕಿಸಬಹುದಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲೆಯ ಯುವ ಸಮುದಾಯವನ್ನು ಗುರಿಯಾಗಿಸಿಕೊಂಡು ಸಾಹಸ ಕ್ರೀಡೆಗಳತ್ತ ಆಕರ್ಷಿಸಲು ಜಿಲ್ಲಾಡಳಿತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಪ್ಯಾರಾ ಸೈಲಿಂಗ್ ಮತ್ತು ಪ್ಯಾರಾಮೊಟಾರಿಂಗ್ ವಾಯು ಸಾಹಸ ಕ್ರೀಡೆಗಳನ್ನು ನವೆಂಬರ್ ೨ ರಿಂದ ೧೫ ದರವರೆಗೆ ಭುವನಹಳ್ಳಿ ವಿಮಾನ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು ಮೂಲದ ಸ್ಕೈ ಅವೇಕ್ಸ್ ಅಡ್ವೆಂಚರಸ್ ಸಂಸ್ಥೆಯಿಂದ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದ್ದು ಪ್ಯಾರಾಶೈಲಿಂಗಿಗೆ ಪ್ರತಿ ವೆಕ್ತಿಗೆ 500, ಪ್ಯಾರ ಮೋಟಾರಿಂಗ್ ಪ್ರತಿ ವ್ಯಕ್ತಿಗೆ 2000 ನಿಗದಿ ಪಡಿಸಲಾಗಿದೆ. ಪ್ರತಿ ವ್ಯಕ್ತಿಯನ್ನು ಆಕಾಶದಲ್ಲಿ ನಾಲ್ಕರಿಂದ ಐದು ನಿಮಿಷ ಹಾರಿಸಲಾಗುತ್ತದೆ.

ಈ ಸಂಬಂಧ ಸಂಸ್ಥೆಯು 50 ವರ್ಷದ ಸಾಹಸ ಕ್ರೀಡೆಗಳ ಅನುಭವವಿದ್ದು ಸುರಕ್ಷತೆಯಿಂದ ಹೆಲ್ಮೆಟ್ ಗಾರ್ಡ್ ಇತರೆ ಪರಿಕರಗಳನ್ನು ಸಂಸ್ಥೆಯ ಒದಗಿಸುತ್ತದೆ. ಜಿಲ್ಲಾಡಳಿತದಿಂದ ತುರ್ತು ವೈದಕೀಯ ವ್ಯವಸ್ಥೆಯನ್ನು ಸ್ಥಳದಲ್ಲಿ ಒದಗಿಸಲಾಗಿದ್ದು. ಹಾಸನಾಂಬ ಜಾತ್ರಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಾರ್ವಜನಿಕರ ಮನೋರಂಜನೆಗಾಗಿ ಇಂತಹ ಕಾರ್ಯಕ್ರಮಗಳನ್ನು ಜಿಲ್ಲಾಡಳಿತದಿಂದ ಆಯೋಜಿಸಲಾಗಿದೆ ಎಂದು ಡಿಸಿ ಸತ್ಯಭಾಮಾ ಹೇಳಿದರು.

ನಗರದ ಕಲಾ ಕಾಲೇಜು ಮೈದಾನದಲ್ಲಿ ನವಂಬರ್ 5 ಮತ್ತು 12ರಂದು ಎರಡು ಭಾನುವಾರಗಳು ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉಳಿದಂತೆ ಮಹಾರಾಜ ಪಾರ್ಕ್ ನಲ್ಲಿ ನ.೨ ರಿಂದ ೧೫ ರವರೆಗೆ 15 ದಿನವೂ ಕಾರಂಜಿ ವ್ಯವಸ್ಥೆಯೊಂದಿಗೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಾಸನಾಂಬ ದೇವಸ್ಥಾನ ಆಡಳಿತಾಧಿಕಾರಿ ಮಾರುತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಹರೀಶ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಇದ್ದರು.

Show quoted text

ಹಾಸನಾಂಬ ಅದ್ದೂರಿ ದರ್ಶನೋತ್ಸವಕ್ಕೆ ಸಕಲಸಿದ್ಧತೆಹಾಸನ: ಜಿಲ್ಲೆಯ ಅಧಿದೇವತೆ ಹಾಸನಾಂಬ ಜಾತ್ರಾ ಮಹೋತ್ಸವ ನವೆಂಬರ್ 2 ರಿಂದ 15 ರವರೆಗೆ ಜರುಗಲಿದ್...
26/10/2023

ಹಾಸನಾಂಬ ಅದ್ದೂರಿ ದರ್ಶನೋತ್ಸವಕ್ಕೆ ಸಕಲಸಿದ್ಧತೆ

ಹಾಸನ: ಜಿಲ್ಲೆಯ ಅಧಿದೇವತೆ ಹಾಸನಾಂಬ ಜಾತ್ರಾ ಮಹೋತ್ಸವ ನವೆಂಬರ್ 2 ರಿಂದ 15 ರವರೆಗೆ ಜರುಗಲಿದ್ದು ಜಿಲ್ಲಾಡಳಿತದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಾಸನಾಂಬ ದೇವಸ್ಥಾನ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮಾರುತಿ ತಿಳಿಸಿದರು .

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ನವಂಬರ್ ೨ ರಂದು ಮಧ್ಯಾಹ್ನ 12 ಗಂಟೆಗೆ ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜೆ ಕೈಂಕರ್ಯ ಬಳಿಕ ದೇವಾಲಯದ ಗರ್ಭಗುಡಿ ಬಾಗಿಲನ್ನು ತೆರೆಯಲಾಗುವುದು, ನವಂಬರ್ ಎರಡು ಹಾಗೂ ಬಾಗಿಲು ಮುಚ್ಚುವ ದಿನಾಂಕ ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ ಎಂದು ಹೇಳಿದರು .

ಈ ಬಾರಿಯ ಹಾಸನಾಂಬ ದರ್ಶನೋತ್ಸವಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ , ಸೇರಿದಂತೆ ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್ ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು .

ಈ ಬಾರಿಯ ಹಾಸನಾಂಬ ದರ್ಶನೋತ್ಸವಕ್ಕೆ 10 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಶಕ್ತಿ ಯೋಜನೆ ಸೇರಿದಂತೆ ದಸರಾ ಸಂದರ್ಭದಲ್ಲಿ ದರ್ಶನೋತ್ಸವ ಇರುವುದರಿಂದ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಆದ್ದರಿಂದ ಈ ಬಾರಿ ಮೂಲ ಸೌಕರ್ಯ ಹೆಚ್ಚಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

೮ ವರ್ಷದ ಬಳಿಕ ದೇವಾಲಯಕ್ಕೆ ಈ ಬಾರಿ ಬಣ್ಣ ಹಚ್ಚಲಾಗಿದ್ದು ಕಾಮಗಾರಿ ಬಹುತೇಕ ಪೂರ್ಣವಾಗಿದೆ. ಸಣ್ಣಪುಟ್ಟ ದುರಸ್ತಿ ಕಾಮಗಾರಿಗಳು ನಡೆದಿದ್ದು ನೂತನ ಕಳಸ ಪ್ರತಿಷ್ಠಾಪನೆಯೂ ಮಾಡಲಾಗುತ್ತಿದೆ ಎಂದು ವಿವರಿಸಿದರು .

ನೀರು- ಮಜ್ಜಿಗೆ ವೃದ್ಧ ರಿಗೆ ಪ್ರತ್ಯೇಕ ದಾರಿ:

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಬಾರಿ ಆಗಮಿಸುವ ಹಿನ್ನೆಲೆಯಲ್ಲಿ ದೇವಾಲಯದ ಸಮೀಪದ ಬ್ರಾಹ್ಮಣ ಬೀದಿ, ಗ್ಯಾರೇಜ್ ರಸ್ತೆ ಹಾಗೂ ಸುತ್ತಮುತ್ತಲು ಹೆಚ್ಚಿನ ಬ್ಯಾರಿಕೆಡ್ ಅಳವಡಿಕೆ ಮಾಡಲಾಗುತ್ತಿದೆ. ಜರ್ಮನ್ ಟೆಂಟ್ ಹಾಗೂ ಭಕ್ತರ ಸಾಗುವ ರಸ್ತೆಯುದ್ದಕ್ಕೂ ಮ್ಯಾಟ್ ವ್ಯವಸ್ಥೆ ಮಾಡಲಾಗುತ್ತಿದೆ. ಕುಡಿಯುವ ನೀರು, ಮಜ್ಜಿಗೆ ದಾನಿಗಳ ಸಹಾಯದಿಂದ ವ್ಯವಸ್ಥೆ ಮಾಡುವ ಕ್ರಮ ಕೈಗೊಳ್ಳಲಾಗಿದ್ದು ವೃದ್ಧರಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆಯನ್ನು ಸಹ ಈ ಬಾರಿಯ ವಿಶೇಷವಾಗಿದೆ.

ಮಹಾಭಾರತ ಪ್ರದರ್ಶನ:
ದೇವರ ದರ್ಶನಕ್ಕೆ ಸಾಗುವ ಮಾರ್ಗ ಮಧ್ಯದಲ್ಲಿನ ನಿರ್ದಿಷ್ಟ ಪ್ರದೇಶದಲ್ಲಿ ಎಲ್ಇಡಿ ಪರದೆಯನ್ನು ಅಳವಡಿಸಿ ಪೌರಾಣಿಕ ಮಹಾಭಾರತ ಚಿತ್ರಕಥೆ ಪ್ರದರ್ಶನವನ್ನು ಮಾಡಲಾಗುತ್ತಿದೆ ಎಂದು ಡಿಸಿ ತಿಳಿಸಿದರು.

೧೦೦೦/೩೦೦ ರೂ ಪಾಸ್: ಕ್ಯೂ ಅರ್ ಕೊಡ್

ಒಂದು ಸಾವಿರ ಹಾಗೂ 300 ಮತದ ಪಾಸ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದ್ದು ಅಕ್ರಮ ತಡೆಯುವ ನಿಟ್ಟಿನಲ್ಲಿ ಕ್ಯೂಆರ್ ಕೋಡ್ ಒಳಗೊಂಡಂತಹ ಪಾಸ್ ವಿತರಣೆ ಮಾಡಲಾಗುತ್ತಿದೆ. ಪ್ರತಿ ಭಕ್ತರು ದರ್ಶನಕ್ಕೆ ಆಗಮಿಸುವ ವೇಳೆ ಈ ಪಾಸ್ ಗಳನ್ನು ಸ್ಕ್ಯಾನ್ ಮಾಡಲಾಗುವುದು ಒಂದು ಬಾರಿ ಸ್ಕ್ಯಾನ್ ಮಾಡಿದ ಪಾಸ್ ಮತ್ತೊಮ್ಮೆ ಬಳಕೆಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿ ಭಕ್ತರಿಗೆ ದೊನ್ನೆ ಪ್ರಸಾದ:

ಈ ಬಾರಿ ದರ್ಶನಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ದರ್ಶನದ ನಂತರ ದೊನ್ನೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ನವಂಬರ್ 2 ಹಾಗೂ ನವೆಂಬರ್ ಹದಿನೈದು ಹೊರತುಪಡಿಸಿ ಪ್ರತಿದಿನವೂ 24 ಗಂಟೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ನಿಗದಿತ ಸ್ಥಳದಲ್ಲಿ ಐವತ್ತು ಶೌಚಾಲಯ , ಅಂಗವಿಕಲರಿಗೆ ಎರಡು ಎಲೆಕ್ಟ್ರಾನಿಕ್ ವೀಲ್ ಚೇರ್ ಹಾಗೂ 20 ಸಾಧಾರಣ ವೀಲ್ ಚೇರನ್ನು ವ್ಯವಸ್ಥೆ ಮಾಡಲಾಗಿದೆ.

ಗರ್ಭಗುಡಿಯ ಸಮೀಪ ಹಾಗೂ ಇತರಡೆ ಅವ ನಿಯಂತ್ರಿತ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಭಕ್ತರ ಅನುಕೂಲಕ್ಕೆ ತಕ್ಕಂತೆ ಸುಗಮ ದರ್ಶನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಪ್ರಮುಖ ಬ್ಯಾರಿಕೆಡ್ ಪಾಯಿಂಟ್ಗಳಲ್ಲಿ ಕಂದಾಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು, 36 ವಾಕಿ ಟಾಕಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು .

ಎರಡು ತುರ್ತು ವಾಹನ ದೊಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುವುದು , ಅಗ್ನಿ ಅವಘಡ ನಿಯಂತ್ರಣಕ್ಕೆ ಫೈರ್ ಎಗ್ಸಾಸ್ಟಿಂಗ್ ಸಿಲೆಂಡರ್ ಆಯಕಟ್ಟು ಪ್ರದೇಶದಲ್ಲಿ ಅಳವಡಿಸಲಾಗುತ್ತಿದೆ.

ನಗರಸಭೆ ಹಿಂಭಾಗ ಪಾರ್ಕಿಂಗ್:

ನಗರಸಭೆ ಹಿಂಭಾಗದ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಐಪಿ ಸೇರಿದಂತೆ ಆಡಳಿತ ಮಂಡಳಿಯಿಂದ ನಿಯೋಜನೆ ಮಾಡಿರುವ ನಿರ್ದಿಷ್ಟ ವಾಹನಗಳಿಗೆ ಮಾತ್ರ ದೇವಾಲಯದ ಬಳಿಗೆ ತೆರಳಲು ಅವಕಾಶ ಮಾಡಲಾಗಿದೆ ಉಳಿದಂತೆ ಯಾವುದೇ ವಾಹನವನ್ನು ದೇವಾಲಯದ ಸಮೀಪ ಬಿಡುವುದಿಲ್ಲ ಎಂದರು.

ದೇವಾಲಯದ ಖಾತೆಯಲ್ಲಿ ೮.೫ ಕೊಟಿ:

ಹಾಸನಾಂಬ ದರ್ಶನೋತ್ಸವ ಸುಸೂತ್ರವಾಗಿ ನಡೆಯಲು 3.5 ಕೋಟಿ ಅನುದಾನ ಬಳಕೆಗೆ ಅಂದಾಜಿಸಲಾಗಿದ್ದು ದೇವಾಲಯದ ಬ್ಯಾಂಕ್ ಖಾತೆಯಲ್ಲಿ 8.5 ಕೋಟಿ ಹಣ ಇದೆ ಎಂದು ಮಾಹಿತಿ ನೀಡಿದರು . ಇದುವರೆಗೂ ಸಹ ಭಕ್ತರಿಂದ ಬಂದಂತಹ ಹಣದಿಂದಲೇ ದೇವಾಲಯದ ದುರಸ್ತಿ ಹಾಗೂ ದರ್ಶನ ಉತ್ಸವಕ್ಕೆ ಬಳಕೆ ಮಾಡಲಾಗುತ್ತಿದೆ ಭಕ್ತರ ಹಣ ಪೋಲಾಗದಂತೆ ಬಳಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸತ್ಯಭಾಮಾ ಹೇಳಿದರು.

ಮಹಾರಾಜ ಪಾರ್ಕ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ;

ನಗರದ ಮಹಾರಾಜ ಪಾರ್ಕ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಯೋಜನೆ ಮಾಡಲಾಗುತ್ತಿದ್ದು 15 ದಿನವು ಧ್ವನಿ ಮತ್ತು ಬೆಳಕಿನ ಕಾರಂಜಿ ವ್ಯವಸ್ಥೆಯನ್ನು ಕಲ್ಪಿಸಲು ನಗರಸಭೆಗೆ ತಿಳಿಸಲಾಗಿದೆ ಎಂದರು.

ಸಿಬ್ಬಂದಿಗಳಿಗೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಆಶಾ ಕಾರ್ಯಕರ್ತೆಯರಿಗೆ ಕಂದಾಯ ಇಲಾಖೆ ವತಿಯಿಂದಲೇ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ವಿವರಿಸಿದರು.

ಮಹಿಳಾ ಪೊಲೀಸ್ ವ್ಯವಸ್ಥೆಗೆ ಕ್ರಮ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ಮಾತನಾಡಿ ಈ ಬಾರಿ ಶಕ್ತಿ ಯೋಜನೆ ಜಾರಿಯಲ್ಲಿರುವುದರಿಂದ ಹೆಚ್ಚಿನ ಮಹಿಳಾ ಭಕ್ತರು ಹಾಸನಾಂಬ ದರ್ಶನೋತ್ಸವಕ್ಕೆ ಆಗಮಿಸಲಿದ್ದಾರೆ. ಕಳೆದ ಬಾರಿಗಿಂತ ಒಂದುವರೆ ಪಟ್ಟು ಹೆಚ್ಚಿನ ಭಕ್ತರ ನಿರೀಕ್ಷೆಯಿದ್ದು ಮಹಿಳಾ ಪೊಲೀಸರನ್ನು ಹೆಚ್ಚು ನಿಯೋಜನೆ ಮಾಡುವ ಸಂಬಂಧ ಕ್ರಮ ಕೈಗೊಳ್ಳಲಾಗಿದೆ.

ಎಂಟು ತಂಡಗಳನ್ನು ರಚಿಸಿ ಸೂಕ್ತ ಬಂದೂಬಸ್ತ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. 10.7 ಕಿಲೋಮೀಟರ್ ದರ್ಶನ ಮಾರ್ಗ ವ್ಯವಸ್ಥೆ ಮಾಡಲಾಗಿದ್ದು ನಗರದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ರೂಟ್ ಮ್ಯಾಪ್ ಸೇರಿದಂತೆ ಸಿಬ್ಬಂದಿ ನಿಯೋಜನೆ ಸಂಬಂಧ ಮುಂದಿನ ಎರಡು ಮೂರು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಂಡು ಮಾಹಿತಿ ನೀಡಲಾಗುವುದು ಎಂದ ಅವರು ದೇವಸ್ಥಾನದ ಒಳಗೆ ಹಾಗೂ ಹೊರಗೆ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸಮನ್ವಯತೆಯಿಂದ ಕೆಲಸ ಮಾಡಲಿದ್ದು ಆಯಕಟ್ಟು ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು .
ನಿಗದಿತ ಸ್ಥಳದಲ್ಲಿ ಬ್ಯಾರಿಕೆಡ್ ವ್ಯವಸ್ಥೆ ಸೇರಿದಂತೆ ವಾಚ್ ಟವರ್ ಬಗ್ಗೆಯೂ ಚಿಂತನೆ ನಡೆದಿದೆ ಎಂದರು.

ಶಾಸಕರಾದ ಸ್ವರೂಪ್ ಪ್ರಕಾಶ್ ಮಾತನಾಡಿ ಜಿಲ್ಲೆಯ ಅಧಿದೇವತೆಯ ಹಾಸನಂಬ ದರ್ಶನೋತ್ಸವ ಈ ಬಾರಿ ಅದ್ದೂರಿಯಾಗಿ ನಡೆಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎಂಟು ವರ್ಷದ ನಂತರ ಗರ್ಭಗುಡಿಗೆ ಸೇರಿದಂತೆ ಮುಖ್ಯ ಗೋಪುರಕ್ಕೆ ಬಣ್ಣ ಹಾಕಲಾಗಿದ್ದು, ಹೊಸದಾಗಿ ಕಳಸ ಪ್ರತಿಷ್ಠಾಪನೆ ಸಹ ಮಾಡಲಾಗತ್ತಿದೆ.

ನವೆಂಬರ್ ಎರಡು ಮತ್ತು 15ನೇ ತಾರೀಕು ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ ಉಳಿದ ದಿನಗಳಲ್ಲಿ 24 ಗಂಟೆ ದರ್ಶನದ ಅವಕಾಶ ಕಲ್ಪಿಸಲಾಗಿದ್ದು ಸಾರ್ವಜನಿಕರು ಸಹಕರಿಸಬೇಕು ಹಾಗೂ ಹಾಸನಾಂಬ ದರ್ಶನೋತ್ಸವ ಯಶಸ್ವಿಯಾಗಿ ಪೂರ್ಣಗೊಳಿಸಲು ಎಲ್ಲರು ಕೈಜೋಡಿಸಿ ಎಂದು ಮನವಿ ಮಾಡಿದರು .

ಹಾಸನಾಂಬ ದಶಂಬೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಸೇರಿದಂತೆ ನೆರೆ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ನಗರದ ರಸ್ತೆಗಳನ್ನು ಗುಂಡಿ ಮುಚ್ಚುವ ಕೆಲಸ ಸೇರಿದಂತೆ ಸೌಂದರ್ಯಿಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸ್ವರೂಪ್ ಹೇಳಿದರು.

ಬರುವಂತಹ ಲಕ್ಷಾಂತರ ಮಂದಿ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಲಾ, ವಾರ್ತಾ ಅಧಿಕಾರಿ ಮೀನಾಕ್ಷಮ್ಮ ಹಾಗೂ ಇತರೆ ಅಧಿಕಾರಿಗಳು ಇದ್ದರು.

21/10/2023

*ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್*

ಬೆಂಗಳೂರು, ಆ. 21: ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ 3.75 ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಮೂಲಕ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ 38.75ಗೆ ಏರಿಕೆಯಾಗಿದೆ.

UGC/ AICTE/ ICAR ವೇತನ ಶ್ರೇಣಿಗಳ ಬೋಧಕ ಸಿಬ್ಬಂದಿ ಹಾಗೂ NJPC ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳ ತುಟ್ಟಿಭತ್ಯೆಯನ್ಬು ಶೇ. 4 ರಷ್ಟು ಹೆಚ್ಚಿಸಿ (ಶೇ 46 ಕ್ಕೆ ಪರಿಷ್ಕರಿಸಿ) ಸರ್ಕಾರ ಆದೇಶ ಹೊರಡಿಸಿದೆ.

ಸರ್ವರಿಗೂ ಸ್ವಾಗತ......
23/09/2023

ಸರ್ವರಿಗೂ ಸ್ವಾಗತ......

ಸೆ.೨೫ ರಂದು ಹಾಸನದಲ್ಲಿ "ಜನತಾದರ್ಶನ "ಸ್ಥಳದಲ್ಲೆ ಜನರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಲು ಸಿಎಂ ಸೂಚನೆಹಾಸನ: ಮುಖ್ಯಮಂತ್ರಿ ನಿರ್ದೇಶನದಂತೆ  ಸೆ....
21/09/2023

ಸೆ.೨೫ ರಂದು ಹಾಸನದಲ್ಲಿ "ಜನತಾದರ್ಶನ "

ಸ್ಥಳದಲ್ಲೆ ಜನರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಲು ಸಿಎಂ ಸೂಚನೆ

ಹಾಸನ: ಮುಖ್ಯಮಂತ್ರಿ ನಿರ್ದೇಶನದಂತೆ ಸೆ.25ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸಂಕೀರ್ಣದಲ್ಲಿ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜನತಾ ದರ್ಶನ ಕಾರ್ಯಕ್ರಮದ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಈ ಜನತಾ ದರ್ಶನದಲ್ಲಿ ಜಿಲ್ಲೆಯ ಹೆಚ್ಚಿನ ಜನರು ಭಾಗವಹಿಸಲಿದ್ದು, ಸಾರ್ವಜನಿಕರಿಂದ ಸ್ವೀಕೃತವಾಗುವ ಅಹವಾಲುಗಳಿಗೆ ತಕ್ಷಣ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪೂರ್ವಸಿದ್ಧತೆ ಕೈಗೊಳ್ಳಲು ಸೂಚಿಸಲಾಗಿದೆ.

ಜನತಾ ದರ್ಶನದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಾರಿಗೆ ವ್ಯವಸ್ಥೆ ಸೇರಿದಂತೆ ಇತರೆ ವ್ಯವಸ್ಥೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು, ತಹಶೀಲ್ದಾರರು ಹಾಜರಿರಲಿದ್ದಾರೆ. ಸಾರ್ವಜನಿಕರು ಕುಂದು ಕೊರತೆ ನಿವಾರಣಾ ವ್ಯವಸ್ಥೆ (IPGRS)
https://ipgrs.karnataka.gov.in ತಂತ್ರಾಂಶದಲ್ಲಿ ಸ್ಥಳದಲ್ಲಿಯೇ ಗಣಕಯಂತ್ರ ಮೂಲಕ ಅರ್ಜಿ ಮಾಹಿತಿ ದಾಖಲಿಸುವುದ ರೊಂದಿಗೆ ಪರಿಹಾರ ಕಂಡುಕೊಳ್ಳಬಹುದು. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಆಗಮಿಸಿ ನೋಂದಾಯಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

೧೫ ದಿನಕ್ಕೆ ಒಮ್ಮೆ ಪ್ರತಿ ತಾಲ್ಲೂಕಿನಲ್ಲಿ ಸಭೆ:

ಪ್ರತಿ ೧೫ ದಿನಕ್ಕೆ ಒಮ್ಮೆ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಡಿಸಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗ ಳೊಂದಿಗೆ ಜನರ ಸಮಸ್ಯೆ ಆಲಿಸಲು ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಸ್ಥಳದಲ್ಲಿಯೇ ಜನರ ಸಮಸ್ಯೆ ಆಲಿಸಲಾಗುವುದು ಖಾತೆ ಬದಲಾವಣೆ , ಪಹಣೆ ತಿದ್ದುಪಡಿ ಸೇರಿದಂತೆ ಕಂದಾಯ , ಕೃಷಿ, ತೋಟಗಾರಿಕೆ ಹಾಗೂ ಇತರೆ ಇಲಾಖೆಗಳ ಸಮಸ್ಯೆ ಆಲಿಸಿ ಸ್ಥಳದಲ್ಲೆ ಪರಿಹಾರ ಒದಗಿಸಲಾಗು ವುದು ಹಾಗೂ ಅರ್ಜಿ ಸ್ವೀಕೃತ ಪ್ರತಿ ನೀಡಲಾಗುವುದು ಎಂದು ವಿವರಿಸಿದರು.

ಈ ಸಂಧರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಲಾ, ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಮ್ಮ ಇದ್ದರು.

ಹಾಸನ ನಗರದ ಸಿಟಿ ಬಸ್ ನಿಲ್ದಾಣ ಸಮೀಪದ ಪೆಂಡಾಲ್ ನಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಶ್ರೀ  ಗಣಪತಿ ಮೂರ್ತಿ,🙏
19/09/2023

ಹಾಸನ ನಗರದ ಸಿಟಿ ಬಸ್ ನಿಲ್ದಾಣ ಸಮೀಪದ ಪೆಂಡಾಲ್ ನಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಶ್ರೀ ಗಣಪತಿ ಮೂರ್ತಿ,🙏

ಹಾಸನದ ಹಾಸನಾಂಬ ಕಲಾಕ್ಷೇತ್ರದ ಎದುರು ಪ್ರತಿಷ್ಠಾಪನೆ ಮಾಡಲಾಗಿರುವ ಪಾಂಚಜನ್ಯ ಹಿಂದೂ ಗಣಪತಿ.‌‌..🙏
19/09/2023

ಹಾಸನದ ಹಾಸನಾಂಬ ಕಲಾಕ್ಷೇತ್ರದ ಎದುರು ಪ್ರತಿಷ್ಠಾಪನೆ ಮಾಡಲಾಗಿರುವ ಪಾಂಚಜನ್ಯ ಹಿಂದೂ ಗಣಪತಿ.‌‌..🙏

ನಿಮ್ಮ ಮೊಬೈಲ್ ಕಳೆದು ಹೋದರೆ ಅಥವಾ ಕಳ್ಳತನವಾದರೆ ಆತಂಕ ಬೇಡ ಪೊಲೀಸ್ ಇಲಾಖೆಯಿಂದ ನೂತನ ಆಪ್ ಬಿಡುಗಡೆ... ಈ ಕೆಳಗಿನ ಸೂಚನೆಗಳನ್ನು ಪಾಲಿಸಿ👇
19/09/2023

ನಿಮ್ಮ ಮೊಬೈಲ್ ಕಳೆದು ಹೋದರೆ ಅಥವಾ ಕಳ್ಳತನವಾದರೆ ಆತಂಕ ಬೇಡ ಪೊಲೀಸ್ ಇಲಾಖೆಯಿಂದ ನೂತನ ಆಪ್ ಬಿಡುಗಡೆ... ಈ ಕೆಳಗಿನ ಸೂಚನೆಗಳನ್ನು ಪಾಲಿಸಿ👇

ಅರಸೀಕೆರೆ ಶ್ರೀ ಮಾಡಾಳು ಗೌರಮ್ಮ ಪ್ರತಿಷ್ಠಾಪನ ಮಹೋತ್ಸವ 2023
19/09/2023

ಅರಸೀಕೆರೆ ಶ್ರೀ ಮಾಡಾಳು ಗೌರಮ್ಮ ಪ್ರತಿಷ್ಠಾಪನ ಮಹೋತ್ಸವ 2023

ಏಷಿಯಾ ಕಪ್ ೨೦೨೩ ಭಾರತದ ಮಡಿಲಿಗೆ
17/09/2023

ಏಷಿಯಾ ಕಪ್ ೨೦೨೩ ಭಾರತದ ಮಡಿಲಿಗೆ

10/09/2023

ಮನೆಯ ಅಂಗಳಕ್ಕೆ ಎಂಟ್ರಿ ಕೊಟ್ಟ ಒಂಟಿ ಸಲಗ

ಕಾಡಾನೆಗೆ ಸೈರನ್ ಹಾಕಿ ಎಸ್ಕಾರ್ಟ್ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ

ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಬೆಳ್ಳಂಬೆಳಿಗ್ಗೆ ಒಂಟಿಸಲಗವೊಂದು ಮನೆಯ ಅಂಗಳಕ್ಕೆ ಎಂಟ್ರಿ ಕೊಟ್ಟಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಕೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸಂತೋಷ್ ಶೆಟ್ಟಿ ಎಂಬುವವರ ಮನೆಯ ಕಾಂಪೌಂಡ್ ಒಳಗೆಲ್ಲಾ ಮನಸೋಇಚ್ಛೆ ಓಡಾಡಿದೆ. ಕಾಡಾನೆ ಕಂಡ ಕೂಡಲೇ ಸತೀಶ್ ಶೆಟ್ಟಿ ಮನೆಯವರು ಗಾಬರಿಯಿಂದ ಮನೆಯೊಳಗೆ ಓಡಿ ಹೋಗಿದ್ದಾರೆ. ಮನೆಯ ಸಮೀಪ ಓಡಾಡಿದ ನಂತರ ಒಂಟಿಸಲಗ ರಸ್ತೆಗೆ ಬಂದಿದೆ.


ಅರಣ್ಯ ಇಲಾಖೆ ಸಿಬ್ಬಂದಿ ಒಂಟಿಸಲಗಕ್ಕೆ ಸೈರನ್ ಹಾಕಿ ಎಸ್ಕಾರ್ಟ್ ನೀಡಿದ್ದು, ರಸ್ತೆ ದಾಟಿ ಕಾಫಿ ತೋಟದೊಳಗೆ ಹೋಗಿದೆ. ಕೊಲ್ಲಹಳ್ಳಿ ಗ್ರಾಮದ ಸುತ್ತಮುತ್ತ ಕಾಡಾನೆ ಸಂಚರಿಸುತ್ತಿದ್ದು ಎಚ್ಚರಿಕೆಯಿಂದ ಓಡಾಡುವಂತೆ ಸ್ಥಳೀಯರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ.

ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಕಾಡಾನೆ ಹಾವಳಿಯಿಂದ ಕಾಫಿ ತೋಟದ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.

ಹಾಸನ ಜಿಲ್ಲಾಡಳಿತದ ಪ್ರಮುಖ ಸರ್ಕಾರಿ ಹುದ್ದೆಯಲ್ಲಿ "ನಾರಿ ಶಕ್ತಿ"
07/09/2023

ಹಾಸನ ಜಿಲ್ಲಾಡಳಿತದ ಪ್ರಮುಖ ಸರ್ಕಾರಿ ಹುದ್ದೆಯಲ್ಲಿ "ನಾರಿ ಶಕ್ತಿ"

ಸಪ್ತ ಸಾಗರದಾಚೆಯಲ್ಲೊ ಚಲನ ಚಿತ್ರದ ವಿಜಯಯಾತ್ರೆ ಅಂಗವಾಗಿ ಹಾಸನಕ್ಕೆ ಆಗಮಿಸಿದ್ದ ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರುಕ್ಮಿಣಿ ಅನಂತ್ ಮತ್ತು ಚಿತ್...
06/09/2023

ಸಪ್ತ ಸಾಗರದಾಚೆಯಲ್ಲೊ ಚಲನ ಚಿತ್ರದ ವಿಜಯಯಾತ್ರೆ ಅಂಗವಾಗಿ ಹಾಸನಕ್ಕೆ ಆಗಮಿಸಿದ್ದ ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರುಕ್ಮಿಣಿ ಅನಂತ್ ಮತ್ತು ಚಿತ್ರ ತಂಡ ನಗರದ ಎನ್ ಆರ್ ವೃತ್ತದಲ್ಲಿನ ಡಾ.ಪುನಿತ್ ರಾಜ್ ಕುಮಾರ್ ಪುತ್ಥಳಿ ಗೆ ಮಾಲಾರ್ಪಣೆ ಮಾಡಿದರು.

Address

Bm Road
Hassan

Telephone

9972629740

Website

Alerts

Be the first to know and let us send you an email when Hassan News 24×7 posts news and promotions. Your email address will not be used for any other purpose, and you can unsubscribe at any time.

Contact The Business

Send a message to Hassan News 24×7:

Videos

Share

Category


Other Media in Hassan

Show All