ಹಾಸನ ಎಕ್ಸ್ ಪ್ರೆಸ್

ಹಾಸನ ಎಕ್ಸ್ ಪ್ರೆಸ್ Your news partner
(3)

ಸ್ಪೀಕರ್ ಆಗಿ ಕಲಾಪ ನಡೆಸಿಕೊಟ್ಟ ಕೆಎಂಶಿಅರಸೀಕೆರೆ: ಬೆಳಗಾವಿ ಅಧಿವೇಶನದಲ್ಲಿ ಸಭಾಪತಿ ಸ್ಥಾನ ಅಲಂಕರಿಸಿ ಸದನದ ಕಲಾಪಗಳನ್ನು ನಡೆಸಿಕೊಡುವುದರೊಂದಿ...
06/12/2023

ಸ್ಪೀಕರ್ ಆಗಿ ಕಲಾಪ ನಡೆಸಿಕೊಟ್ಟ ಕೆಎಂಶಿ

ಅರಸೀಕೆರೆ: ಬೆಳಗಾವಿ ಅಧಿವೇಶನದಲ್ಲಿ ಸಭಾಪತಿ ಸ್ಥಾನ ಅಲಂಕರಿಸಿ ಸದನದ ಕಲಾಪಗಳನ್ನು ನಡೆಸಿಕೊಡುವುದರೊಂದಿಗೆ ಕ್ಷೇತ್ರದ ಮತದಾರ ಮಹತ್ವವನ್ನು ಎತ್ತಿ ಹಿಡಿಯುವ ಮೂಲಕ ಶಾಸಕ ಕೆ.ಎಂ ಶಿವಲಿಂಗೇಗೌಡ ಗಮನ ಸೆಳೆದಿದ್ದಾರೆ.
ಸತತ ನಾಲ್ಕು ಬಾರಿ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿರುವ ಶಿವಲಿಂಗೇಗೌಡರು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗುತ್ತಾರೆ ಎಂಬ ಆಶಯ ಕ್ಷೇತ್ರದ ಜನತೆಯದಾಗಿತ್ತು. ಸಚಿವ ಸ್ಥಾನಮಾನದಿಂದ ವಂಚಿತರಾದರೂ ಬೆಳಗಾವಿ ಅಧಿವೇಶನದಲ್ಲಿ ಮಂಗಳವಾರ ಸಭಾಪತಿ ಸ್ಥಾನ ಅಲಂಕರಿಸಿದ್ದನ್ನು ಕಂಡ ಕ್ಷೇತ್ರದ ಜನತೆ ಸಂತಸ ಪಡುವಂತೆ ಮಾಡಿತು.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕರು, ಕರ್ನಾಟಕದ ವಿಧಾನಸಭೆಗೆ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ವಿಶೇಷ ಗೌರವವಿದೆ. ಇಂಥ ಒಂದು ಮಹಾಸಭೆಯ ಕಲಾಪವನ್ನು ಕೆಲ ಸಮಯ ನನ್ನ ಅಧ್ಯಕ್ಷತೆಯಲ್ಲಿ ನಡೆಸಿಕೊಡಲು ಅನುವು ಮಾಡಿಕೊಟ್ಟ ಸಭಾಪತಿಗಳಾದ ಯು.ಟಿ.ಖಾದರ್ ಅವರಿಗೆ ನಾನು ಆಭಾರಿಯಾಗಿದ್ದೇನೆ ಹಾಗೂ ಇಂಥ ಒಂದು ಉನ್ನತ ಸ್ಥಾನದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ರೈತನ ಮಗನೊಬ್ಬನನ್ನ ವಿಧಾನಸಭೆ ಸಭಾಪತಿ ಸ್ಥಾನದಲ್ಲಿ ಕೂರುವ ಹಂತಕ್ಕೆ ಬೆಳೆಸಿದ ಕ್ಷೇತ್ರದ ಮತದಾರರಿಗೆ ನಾನು ಋಣಿಯಾಗಿದ್ದೇನೆ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊAಡರು. ದಿನದ ಬಹುತೇಕ ಸಮಯವನ್ನ ಜನರ ಮಧ್ಯೆ ಕಳೆಯುವ ರೈತಾಪಿ ವರ್ಗ, ಕಾರ್ಮಿಕರು ಸೇರಿದಂತೆ ಶೋಷಿತ ಸಮುದಾಯಗಳ ನೋವು ನಲಿವುಗಳನ್ನ ಹತ್ತಿರದಿಂದ ಬಲ್ಲವರಾಗಿರುವ ಶಿವಲಿಂಗೇಗೌಡರು, ಮಂತ್ರಿ ಗಿರಿ, ಸಭಾಪತಿ ಹೀಗೆ ಯಾವುದೇ ಸ್ಥಾನಮಾನ ಕಲ್ಪಿಸಿಕೊಟ್ಟರೂ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವಂತಹ ಜನಪ್ರತಿನಿಧಿಯಾಗಿದ್ದು, ಇವರನ್ನ ಸಭಾಪತಿ ಸ್ಥಾನದಲ್ಲಿ ಕಂಡು ಖುಷಿಯಾಯಿತು ಎಂದು ಗಂಡಸಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಂಜು ರಾಜ್ ಸಂತಸ ವ್ಯಕ್ತಪಡಿಸಿದರು.

06/12/2023

ಸಮಗ್ರ ವರದಿ ಪಡೆದು ತನಿಖೆ

ಬೆಳಗಾವಿ: ಕಾಡಾನೆ ಸೆರೆ ಕಾರ್ಯಾಚರಣೆ ಮಾರ್ಗಸೂಚಿಯಲ್ಲಿ ನ್ಯೂನ್ಯತೆ ಕಂಡುಬAದಿವೆ. ಹಾಗಾಗಿ ಅದನ್ನು ಬದಲಿಸಿ, ಮುಂದೆ ದುರ್ಘಟನೆ ನಡೆಯದಂತೆ ಕ್ರಮ ವಹಿಸುತ್ತೇವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿರುವ ಮಾರ್ಗಸೂಚಿಯಲ್ಲಿ ಬಹಳಷ್ಟು ನ್ಯೂನ್ಯತೆಗಳಿವೆ. ಪುಂಡಾನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ಕರ್ನಾಟಕ ಬಿಟ್ಟರೆ ಬೇರೆಡೆ ನಡೆಯುವುದಿಲ್ಲ. ಹಾಗಾಗಿ ತಜ್ಞರ ಸಲಹೆ ಪಡೆದು ಮುಂದುವರಿಯುತ್ತೇವೆ ಎಂದರು. ಅರ್ಜುನ ಆನೆಯ ಸಾವಿನ ಬಗ್ಗೆ ಉನ್ನತಮಟ್ಟದ ತನಿಖೆಗೆ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಮಗ್ರ ರೀತಿಯ ವರದಿ ತರಿಸಿಕೊಂಡು ತನಿಖೆ ಮಾಡುತ್ತೇವೆ. ಲೋಪ ಕಂಡುಬAದರೆ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.
ಹಾಸನ ಜಿಲ್ಲೆಯಲ್ಲಿ ಅರಣ್ಯಾಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಖಂಡ್ರೆ, ಭ್ರಷ್ಟಾಚಾರದಲ್ಲಿ ತೊಡಗಿದ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ ಎಂದರು.
ನೂರಾರು ಜನ ಭೇಟಿ:
ಹೆತ್ತೂರು ವರದಿ: ಅರ್ಜುನನ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ಬಧವಾರವೂ ನೂರಾರು ಮಂದಿ ಭೇಟಿ ನೀಡಿದ್ದರು. ಯಸಳೂರು ಹೋಬಳಿ ದಬ್ಬಳಿಕಟ್ಟೆ ನೇಡು ತೋಪಿನಲ್ಲಿ ದಸರಾ ಅಂಬಾರಿ ಆನೆ ಅರ್ಜುನನ ಸಮಾಧಿ ಬಳಿಗೆ ನೂರಾರು ಮಂದಿ ಭೇಟಿ ನೀಡಿ ಪೂಜೆ ಮಾಡುವ ದೃಶ್ಯ ಸಾಮಾನ್ಯವಾಗಿತ್ತು. ವಿವಿಧ ವಾಹನಗಳು ಈ ಅರಣ್ಯ ಪ್ರದೇಶಕ್ಕೆ ಬರುತ್ತಿರುವುದರಿಂದ ಸಮಾಧಿ ಸಮೀಪ ವಾಹನ ಚಲಿಸಿದಂತೆ ತಂತಿ ಬೇಲಿ ಅಳವಡಿಸಲಾಗಿದೆ. ಸಮಾಧಿ ಸ್ಥಳಕ್ಕೆ ಆರ್‌ಎಫ್‌ಒ ಯಸ್ಮಾ ಮಾಚಮ್ಮ, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್, ವಿಜಯಕುಮಾರ್, ಬೀಟ್ ಫಾರೆಸ್ಟರ್ ಪ್ರದೀಪ್ ಕುಮಾರ್ ಇತರರು ಸಂಜೆವರೆಗೂ ಸ್ಥಳದಲ್ಲಿದ್ದರು.

06/12/2023

ಪ್ರತ್ಯೇಕ ಅಪಘಾತ: 3 ಸಾವು

ಹಾಸನ: ಜಿಲ್ಲೆಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮೃತಪಟ್ಟಿದ್ದಾರೆ.
ಮಂಗಳವಾರ ರಾತ್ರಿ ತಾಲೂಕಿನ ದುದ್ದ ಸಮೀಪದ ಸಿದ್ದಾಪುರ ಗೇಟ್ ಬಳಿ
ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಓರ್ವ ಮೃತಪಟ್ಟಿದ್ದಾನೆ. ನಗರದ ಮಲ್ನಾಡ್ ಇಂಜಿನಿಯರಿAಗ್ ಕಾಲೇಜಿನಲ್ಲಿ 3ನೇ ಸೆಮಿಸ್ಟರ್‌ನ್ಲಿ ವ್ಯಾಸಂಗ ಮಾಡುತ್ತಿದ್ದ ಶಿವಮೊಗ್ಗದ ವಿದ್ಯಾನಗರದ ಧವನ್(21) ಮೃತ. ಶಿವಮೊಗ್ಗದಿಂದ ಹಾಸನಕ್ಕೆ ಬರುತ್ತಿದ್ದಾಗ ಎದುರಿಂದ ವೇಗವಾಗಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ.
ಎರಡೂ ಕಾಲು, ಬೆನ್ನು, ತಲೆಗೆ ಪೆಟ್ಟು ಬಿದ್ದು ಗಾಯಗೊಂಡ ಧವನ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗಿನ ಜಾವ ಮೃತಪಟ್ಟಿದ್ದಾನೆ. ಡಿಕ್ಕಿ ಹೊಡೆದ ಬೈಕ್ ಸವಾರ ಸಹ ತೀವ್ರ ಪೆಟ್ಟು ತಿಂದು ಚಿಕಿತ್ಸೆ ಪಡೆಯುತ್ತಿದ್ದಾನೆ. ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದೇ ದಿನ ರಾತ್ರಿ ಎಸ್.ಎಂ.ಕೃಷ್ಣನಗರ ರಸ್ತೆ ದಾಟುತ್ತಿದ್ದ ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಂತರ ಆಕೆಯ ಮೇಲೆಯೇ ಹರಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಗಂಗಾವತಿ ಮೂಲಕ ಮರಿಯಮ್ಮ(45) ಎಂದು ಗುರುತಿಸಲಾಗಿದೆ. ಕಳೆದ ಆರು ವರ್ಷಗಳಿಂದ ಕೃಷ್ಣನಗರದಲ್ಲಿ ಗುಡಿಸಲು ಹಾಕಿಕೊಂಡು ವಾಸವಿದ್ದ ಮರಿಯಮ್ಮ, 2 ತಿಂಗಳಿAದ ಕೃಷ್ಣ ನಗರದಲ್ಲಿ ನಿರ್ಮಾಣವಾಗುತ್ತಿರುವ ವೈದ್ಯರ ವಸತಿ ಗೃಹ ಕಟ್ಟಡದಲ್ಲಿ ಕೂಲಿ ಕೆಲಸ ಮಾಡಿಕೊಂಡು, ಅಲ್ಲೇ ಪಕ್ಕದ ಶೆಡ್‌ನಲ್ಲಿ ವಾಸಿಸುತ್ತಿದ್ದರು. ರಾತ್ರಿ ಅಂಗಡಿಗೆ ಹೋಗಿ ರಸ್ತೆ ದಾಟುತ್ತಿದ್ದಾಗ ವಾಹನ ಚಾಲಕನ ನಿರ್ಲಕ್ಷö್ಯ ಬಲಿಯಾಗಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಆಲೂರು ತಾಲೂಕು ಬೈರಾಪುರದ ಇಂಡಿಯಲ್
ಆಯಿಲ್ ಪೆಟ್ರೋಲ್ ಬಂಕ್ ಎದುರು ಸೋಮವಾರ ಬೆಳಗಿನ ಜಾವ ಕೆಎಸ್‌ಆರ್‌ಟಿಸಿ ಡಿಕ್ಕಿ ಹೊಡೆದು ಬೈಕ್ ಮೃತಪಟ್ಟಿದ್ದಾರೆ. ಇದೇ ತಾಲೂಕಿನ ಬ್ಯಾಡರಹಳ್ಳಿಯ ಯತೀಶ್(48) ಮೃತ. ಗಂಭೀರ ಗಾಯಗೊಂಡ ಇವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರ್ಜುನ ಸಾವಿನ ಕಾರಣ ಸಮಾಧಿಕೊಂದರೆAಬ ಕೂಗು: ಆರಿಲ್ಲ ಅಗಲಿಕೆಯ ನೋವು: ಹಲವರ ವಿರುದ್ಧ ಎಫ್‌ಐಆರ್ಹಾಸನ: ಬೇಲೂರು ತಾಲೂಕು ಬಿಕ್ಕೋಡು ವ್ಯಾಪ್ತಿಯಲ್...
06/12/2023

ಅರ್ಜುನ ಸಾವಿನ ಕಾರಣ ಸಮಾಧಿ
ಕೊಂದರೆAಬ ಕೂಗು: ಆರಿಲ್ಲ ಅಗಲಿಕೆಯ ನೋವು: ಹಲವರ ವಿರುದ್ಧ ಎಫ್‌ಐಆರ್

ಹಾಸನ: ಬೇಲೂರು ತಾಲೂಕು ಬಿಕ್ಕೋಡು ವ್ಯಾಪ್ತಿಯಲ್ಲಿ ಮೂರು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಹಾಗೂ ಮೂರು ಪುಂಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಿದ ನಂತರ ಸಕಲೇಶಪುರ ಭಾಗಕ್ಕೆ ತೆರಳಿದ್ದ ಕ್ಯಾಪ್ಟನ್ ಅರ್ಜುನ ಶಾಶ್ವತವಾಗಿ ಕಣ್ಮರೆಯಾಗಿದ್ದಾನೆ.
ತನ್ನ ಮೇಲೆರಗಿದ ಕಾಡಾನೆ ಜೊತೆ ವಿರಾವೇಶದಿಂದ ಕಾದಾಡಿ, ವೀರ ಮರಣ ಹೊಂದಿದ್ದಾನೆ. ಆದರೆ ಮಡಿಯುವ ಮುನ್ನ ಅರ್ಜುನನಿಗೆ ಏನಾಯಿತು ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಮಾವುತರು ಹೇಳುವಂತೆ ಮೊದಲ ಅಟ್ಯಾಕ್‌ನಲ್ಲಿ ಕಾಡಾಣೆಯನ್ನು ಅರ್ಜುನ ಸಮಥವಾಗಿ ಹಿಮ್ಮೆಟ್ಟಿಸಿದ್ದ. ಅರ್ಜುನನ ಘೀಳಿಗೆ ಹೆದರಿದ ಪುಂಡಾನೆ, ಸುಮಾರು 300 ಮೀಟರ್ ಓಡಿ ಹೋಗಿತ್ತು. ನಂತರದಲ್ಲಿ ಏನಾಯಿತೋ ಅರ್ಜುನ ದಿಢೀರ್ ನೆಲಕ್ಕುರುಳಿದ. ನೋಡ ನೋಡುತ್ತಿದ್ದಂತೆಯೇ ಇಹಲೋಕ ತ್ಯಜಿಸಿದ.
ಅಧಿಕಾರಿಗಳು ತಪ್ಪು ಮಾಡಿದರೇ:
ಈ ಕುರಿತು ಅಳುತ್ತಲೇ ಮಾತನಾಡಿದ ಮಾವುತ ವಿನು, ಕಾಡಾನೆ ಕಣ್ಣೆದುರಿಗೆ ಬಂದ ಮೇಲೂ
ಯಾರೂ ಡಾಟ್ ಮಾಡಲಿಲ್ಲ. ಮಾಡಿದ್ದರೆ ಅರ್ಜುನ ಉಳಿಯುತ್ತಿದ್ದ. ಬಳಿಕ ಗಾಳಿಯಲ್ಲಿ ಹಾರಿಸಿದ ಗುಂಡು ಆಕಸ್ಮಿಕವಾಗಿ ಅರ್ಜುನನ ಬಲಗಾಲಿಗೆ ತಲುಲಿತು,ಅದೇ ವೇಳೆಗೆ ಕೂಳೆ ಚುಚ್ಚಿತು, ಒಟ್ಟಿನಲ್ಲಿ ಅರ್ಜುನನ ಬಲ ಕುಗ್ಗಿತು. ಅದೇ ವೇಳೆಗೆ ಪುಂಡಾನೆ ದಾಳಿ ಮಾಡಿ ಕೋರಿಯಿಂದ ಬಲವಾಗಿ ಇರಿದಿದ್ದರಿಂದ ಆತನನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಗದ್ಗದಿತರಾದರು.
ನನ್ನ ಆನೆಯನ್ನು ತಂದು ಕೊಡಿ ಎಂದು ಅಳುತ್ತಲೇ ಕೇಳಿದ ವಿನು, ಕಾಡಾನೆಗೆ ಫೈರ್ ಮಾಡಲು ಹೋಗಿ ನನ್ನ ಆನೆಗೆ ಹೊಡೆದಿದ್ದೇ ಸಾವಿಗೆ ಕಾರಣ ಎಂದು ಅಂದು ನಡೆದ ಘಟನೆ ವಿವರಿಸಿದರು.
ಪ್ರಶಾಂತ್‌ನಿಗೆ ಮಿಸ್ ಫೈರ್ ಆಗಿ ಅರವಳಿಕೆ ಚುಚ್ಚುಮದ್ದು ಹೊಡೆಯಲಾಯಿತು. ಅದೇ ವೇಳೆಗೆ ಕಾಡಾನೆ ವಾಪಸ್ ಹೋಗಿದ್ದರಿಂದ ನಾನು ಇಳಿದು ಪ್ರಶಾಂತನಿಗೆ ನೀರು ಹಾಕಲು ಹೋದೆ. ವಾಪಸ್ ಬರುವಷ್ಟರಲ್ಲಿ ಅನಾಹುತ ಆಗಿ ಹೋಯ್ತು ಎಂದು ಮೌನವಾದರು. ಅರ್ಜುನನೊಂದಿಗೆ ಎಷ್ಟೋ ಕಡೆಗೆ ಕಾರ್ಯಾಚರಣೆಗೆ ಹೋಗಿದ್ದೀನಿ, ಅದೆಷ್ಟೋ ಹುಲಿ, ಕಾಡಾನೆಗಳನ್ನು ಕ್ಯಾಪ್ಚರ್ ಮಾಡಿದ್ದೀನಿ, ಆದರೀಗ ನನ್ನ ಕ್ಯಾಪ್ಟನ್ ನನ್ನೊಂದಿಗಿಲ್ಲ ಎಂದು ಕಂಬನಿ ಮಿಡಿದರು.
ನಮ್ಮ ಮೈಸೂರಿನವರಿಗೆ ಅರ್ಜುನ ಎಂದರೆ ತುಂಬಾ ಇಷ್ಟ. ಅವನು ಹೋಗುವ ಮುಂಚೆ ದೇವರು ನನ್ನನ್ನು ಕರೆದುಕೊಳ್ಳಬೇಕಿತ್ತು. ಅಪ್ಪ, ಅಮ್ಮನಿಗೆ ಹೇಗೆ ಮುಖ ತೋರಿಸಲಿ, ಆವತ್ತಿನಿಂದ ಅವರು ಏನೂ ತಿಂದಿಲ್ಲವAತೆ ಎಲ್ಲಾ ಹಾಗೇ ಇದ್ದಾರೆ, ನನ್ನ ಮಕ್ಕಳೂ ಏನೂ ತಿಂದಿಲ್ಲ, ಸ್ಕೂಲಿಗೂ ಹೋಗಿಲ್ಲ, ಅರ್ಜುನ ಗಂಟೆ ಅಲ್ಲಾಡಿಸುತ್ತಿದ್ದಂತೆಯೇ ಬೆಲ್ಲ ತಂದು ನಿಂತು ಕೊಳ್ಳೋರು, ಈಗ ಯಾರ ಎದುರು ನಿಲ್ಲುತ್ತಾರೆ, ದಯವಿಟ್ಟು ನನ್ನ ಆನೆಯನ್ನು ಕೊಡಿ ಸರ್, 2015-2016 ರಿಂದ ನಾನು ಅರ್ಜುನನ ಜೊತೆಗಿದ್ದೇನೆ. 3 ಬಾರಿ ಅಂಬಾರಿ ಹೊತ್ತೆವು ಎಂದು ನೆನಪಿಸಿಕೊಂಡರು.
ಕಡೆಗೆ ಹೊರಡುವ ಮುನ್ನ ಸಿಸಿಎಫ್, ಡಿಎಫ್‌ಒ ಎಷ್ಟೇ ಸಮಾಧಾನ ಮಾಡಿದರೂ, ವಿನು ಬಿಕ್ಕಿ ಬಿಕ್ಕಿ ಅಳುವುದನ್ನು ನಿಲ್ಲಿಸಲಿಲ್ಲ. ಧೈರ್ಯವಾಗಿರು ಎಂದು ಸಮಾಧಾನ ಮಾಡಿದರೂ ಅರ್ಜುನನನ್ನು ಹೇಗೆ ಮರೆಯಲಿ ಸಾರ್ ಎಂದು ತಬ್ಬಿಕೊಂಡು ಅತ್ತ.

ಪುಂಡಾನೆ ಹಿಡಿಯದೇ ಬಿಡಲ್ಲ
ಅರ್ಜುನನನ್ನು ಕೊಂದ ಕಾಡಾನೆಯನ್ನ ಸೆರೆ ಹಿಡಿದೇ ತೀರುತ್ತೇವೆ ಎಂದು
ಮತ್ತೊಬ್ಬ ಮಾವುತ ಗುಂಡಣ್ಣ ಶಪಥ ಮಾಡಿದರು. ಅದನ್ನು ಹಿಡಿದು ಜನರ ಮುಂದೆ ತರುತ್ತೇವೆ.
ಅರ್ಜುನ ಇಲ್ಲವಾಗಿದ್ದು ನಮಗೆ ನೋವು ತಂದಿದೆ. ಆದ್ರೆ ಮನಸ್ಸು ಗಟ್ಟಿಮಾಡಿಕೊಂಡಿದ್ದೇವೆ. ನಾವು ಮತ್ತೆ ಬರುತ್ತೇವೆ. ಅರ್ಜುನನನ್ನು ಬಲಿ ಪಡೆದ ಆನೆ ಹಿಡಿಯಲೇ ಬೇಕಿದೆ. ಹಿಡಿಯುತ್ತೇವೆ ಎಂದರು.

ಹಲವರ ವಿರುದ್ಧ ಎಫ್‌ಐಆರ್

ಈ ನಡುವೆ ಸರ್ಕಾರಿ ಕೆಲಸಕ್ಕೆ ಅಡ್ಡಿ, ನಿಂದನೆ, ಪೊಲೀಸರ ಮೇಲೆ ಹಲ್ಲೆ ಆರೋಪದಡಿ ಯಸಳೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಂಗಳವಾರ ಮಧ್ಯಾಹ್ನ ಮೃತ ಅರ್ಜುನನ ಅಂತ್ಯ ಸಂಸ್ಕಾರ ಮಾಡಲು ಗುಂಡಿ ತೆಗೆಯುತ್ತಿದ್ದ ವೇಳೆ 20-30 ಮಂದಿ ಅಕ್ರಮ ಕೂಟ ಕಟ್ಟಿಕೊಂಡು ಅರಣ್ಯಾಧಿಕಾರಿಗಳಿಗೆ, ಪೊಲೀಸರಿಗೆ, ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಾ, ಬೇರೆಡೆ ಶವ ಸಂಸ್ಕಾರ ಮಾಡಿ, ಪ್ರತಿಮೆ ನಿರ್ಮಿಸಿ ಎಂದು ಕೂಗಾಡುತ್ತಿದ್ದರು. ಎಷ್ಟೇ ಸಮಾಧಾನ ಮಾಡಿದರೂ ಕೇಳದೆ ಜೆಸಿಬಿಯಿಂದ ಗುಂಡಿ ತೆಗೆಯಲು ಅಡ್ಡಿ ಪಡಿಸಿದರು.ಯಸಳೂರು ಪೊಲೀಸ್ ಅಧಿಕಾರಿ ಗಿರೀಶ್ ಹಲ್ಲೆ ಸಹ ಮಾಡಿದ್ದಾರೆ ಎನ್ನಲಾಗಿದೆ. ನೂಕಾಟದಲ್ಲಿ ಇತರೆ ಪೊಲೀಸರಿಗೂ ಗಾಯಗಳಾಗಿವೆ. ಕೆಲವರು ಪೊಲೀಸರ ಮೇಲೂ ಹಲ್ಲೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

06/12/2023

ಅರ್ಜುನನಿಲ್ಲದೆ ಹೊರಟ ಸಂಗಡಿಗರು
ಮೂರು ವಾರ ಕಾರ್ಯಾಚರಣೆ ಸ್ಥಗಿತ: ಶೀಘ್ರವೇ ಆರಂಭ ಎಂದ ಸಿಸಿಎಫ್

ಬೇಲೂರು: ಅಂಬಾರಿ ಆನೆ, ಕ್ಯಾಪ್ಟನ್ ಅರ್ಜುನ ವೀರ ಮರಣ ಹಿನ್ನೆಲೆ, ಜಿಲ್ಲೆಯ ಮಲೆನಾಡು
ಭಾಗದಲ್ಲಿ ನಡೆಯುತ್ತಿದ್ದ ಪುಂಡಾನೆ ಸೆರೆ, ಸ್ಥಳಾಂತರ ಹಾಗೂ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ತಾಲೂಕಿನ ಬಿಕ್ಕೋಡು ಗ್ರಾಮದ ಬಳಿಯ ಆನೆ ಕ್ಯಾಂಪ್‌ನಲ್ಲಿ ಮಾತನಾಡಿದ ಹಾಸನ ವೃತ್ತದ ಮುಖ್ಯ
ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ರವಿಶಂಕರ್, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಐದು ಸಾಕಾನೆಗಳನ್ನು ವಾಪಸ್ ಶಿಬಿರಕ್ಕೆ ಕಳುಹಿಸುತ್ತಿದ್ದೇವೆ. ಹತ್ತು ದಿನ ಬಿಟ್ಟು ಮತ್ತೆ ಕಾರ್ಯಾಚರಣೆ
ಆರಂಭಿಸಲು ತೀರ್ಮಾನ ಮಾಡಿದ್ದೇವೆ ಎಂದರು.
ಅರ್ಜುನ ಮರಣ ನಂತರ ಮಾವುತರು, ಕಾವಾಡಿಗಳು ಹಾಗೂ ನಮ್ಮ ಸಿಬ್ಬಂದಿ ದು:ಖದಲ್ಲಿದ್ದಾರೆ. ಅವರೆಲ್ಲರೂ ಸುಧಾರಿಸಿಕೊಳ್ಳಲಿ. ಆನೆಗಳೂ ಸ್ವಲ್ಪ ದಿನ ಸುಧಾರಿಸಿಕೊಂಡ ನಂತರ ಕಾರ್ಯಾಚರಣೆ
ಶುರು ಮಾಡುತ್ತೇವೆ ಎಂದರು.
ಒಟ್ಟು 9 ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಬೇಕಿತ್ತು. ಈಗಾಗಲೇ ಮೂರು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಹಾಕಲಾಗಿದೆ. 3 ಪುಂಡಾನೆಗಳನ್ನು ಸ್ಥಳಾಂತರ ಮಾಡಲಾಗಿದೆ. ಬಾಕಿ ಕಾರ್ಯಾಚರಣೆಯನ್ನು ಖಂಡಿತಾ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.
ಜನರ ಮುಂದೆಯೇ ನಡೆದಿದೆ:
ಗುಂಡೇಟಿನಿAದ ಅರ್ಜುನ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆ ನಡೆಸದೇ ಅಂತ್ಯಕ್ರಿಯೆ ನಡೆಸಲಾಗಿದೆ ಎಂಬಿತ್ಯಾದಿ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿ, ಹಾಸನ ಪಶುವೈದ್ಯಕೀಯ ಕಾಲೇಜಿನ ಡಾ.ಗಿರೀಶ್, ಮತ್ತವರ ತಂಡ ಮರಣೋತ್ತರ ಪರೀಕ್ಷೆಯನ್ನು ಯಾವುದೇ ಮುಚ್ಚು ಮರೆ ಇಲ್ಲದೆ ಸಾರ್ವಜನಿಕವಾಗಿಯೇ ನಡೆಸಿದೆ. ಅರ್ಜುನನ ಕಾಲಿಗೆ ಗುಂಡು ತಗುಲಿದ ವಿಚಾರ ಹೌದಾದರೆ ಮುಂದೆ ಖಂಡಿತಾ ತನಿಖೆ ಮಾಡುತ್ತೇವೆ ಎಂದ ಅವರು, ಆ ತರ ಏನೂ ಆಗಿಲ್ಲ. ಇದ್ದಿದ್ದರೆ ಮರಣೋತ್ತರ ಪರೀಕ್ಷೆ ವೇಳೆ ಗೊತ್ತಾಗುತ್ತಿತ್ತು.ನಾಲ್ಕೂ ಕಾಲು ಹೊರಗಡೆ ಕಾಣುತ್ತಿದ್ದವು. ವೈದ್ಯರು ಎಲ್ಲವನ್ನೂ ತಪಾಸಣೆ ಮಾಡಿಯೇ ಪೋಸ್ಟ್ ಮಾಟಂ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು
ಪ್ರಶಾಂತ ಆನೆಗೆ ಅರವಳಿಕೆ ಚುಚ್ಚುಮದ್ದು ಹೊಡೆದ ವಿಚಾರವಾಗಿ, ನೀವು, ಜನರು ಏನು ಹೇಳುತ್ತಿದ್ದಾರೆಯೋ ಅದರ ಬಗ್ಗೆ ತನಿಖೆ ಮಾಡಿಸುತ್ತೇವೆ. ಆಗಿದೆಯೋ, ಆಗಿಲ್ಲವೋ ಎಂಬುದನ್ನು ಮೊದಲು ಖಚಿತ ಪಡಿಸಿಕೊಳ್ಳಬೇಕು. ನಂತರ ನಿಮಗೆ ಮಾಹಿತಿ ಕೊಡುತ್ತೇನೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಪೂಜೆ ಮಾಡಿ ಬೀಳ್ಕೊಡುಗೆ: ಅರ್ಜುನ ಆನೆಯ ಹಠಾತ್ ಸಾವು ಹಿನ್ನೆಲೆ, ಕಳೆದ ನ.24 ರಿಂದ ಶುರು ವಾಗಿದ್ದ ಆಪರೇಷನ್ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು, ಉಳಿದ ಧನಂಜಯ, ಪ್ರಶಾಂತ, ಕರ್ನಾಟಕದ ಭೀಮ, ಅಶ್ವತ್ಥಾಮ ಮತ್ತು ಸುಗ್ರೀವ ಆನೆಗಳು ವಾಪಸ್ ಶಿಬಿರಕ್ಕೆ ತೆರಳಿದವು.
ಇದಕ್ಕೂ ಮುನ್ನ ಸಾಕಾನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡಲಾಯಿತು. ಬೇಸರದಿಂದಲೇ ಅಧಿಕಾರಿಗಳು ಕಳುಹಿಸಿಕೊಟ್ಟರು. ಬರುವಾಗ ಮಾವುತರು, ಕಾವಾಡಿಗಳು ಎಷ್ಟು ಜನರಿದ್ದರೋ ಅಷ್ಟೇ ಇದ್ದರು. ಆದರೆ ಆರು ಪಳಗಿದ ಆನೆಗಳ ಪೈಕಿ ಅರ್ಜುನ ಇಲ್ಲದ ಖಾಲಿತನ ಎದ್ದು ಕಾಣುತ್ತಿತ್ತು. ನೋವಿನಲ್ಲೇ ಮಾವುತರು, ಕಾವಾಡಿಗರು ಐದು ಆನೆಗಳೊಂದಿಗೆ ಲಾರಿ ಏರಿ ಹೊರಟರು. ಈ ವೇಳೆ ಡಿಸಿಎಫ್ ಮೋಹನ್‌ಕುಮಾರ್, ಎಸಿಎಫ್ ಮಹದೇವ್ ಹಾಗೂ ಸಿಬ್ಬಂದಿ ಇದ್ದರು.

ಗಾಢಮೌನ... ಕರಗದ ಕಣ್ಣೀರು
ಇನ್ನು ಬಿಕ್ಕೋಡು ಬಳಿಯ ಕ್ಯಾಂಪ್ ಆವರಣದಲ್ಲಿ ಅರ್ಜುನನಿಲ್ಲದೆ ನೀರವ ಮೌನ ಆವರಿಸಿತ್ತು.
ಮಾವುತರು, ಕಾವಾಡಿಗಳ ದುಃಖ, ಕಣ್ಣೀರು ಇನ್ನೂ ಆರಿರಲೇ ಇಲ್ಲ. ಕ್ಯಾಪ್ಟನ್ ಅರ್ಜುನ ತಂಡದಲ್ಲಿದ್ದ ಎಲ್ಲರನ್ನೂ ಕಾಯುತ್ತಿದ್ದ, ಬೆಳಗ್ಗೆ ಮೊದಲೇ ಎದ್ದು ಉಳಿದವರನ್ನು ಎಬ್ಬಿಸುತ್ತಿದ್ದ. ಕುಟುಂಬದ ಹಿರಿಯಣ್ಣನನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ ಎಂದು ಮಾವುತರು ಕಣ್ಣೀರು ಸುರಿಸಿದರು.ಅಂದು ನಾವು ಕ್ಯಾಪ್ಟನ್ ಜೊತೆ ಬಂದಿದ್ದೆವು, ಇಂದು ಅವನಿಲ್ಲದೆ ಹೋಗುತ್ತಿರುವುದು ಅತೀವ ನೋವು ತರಿಸಿದೆ ಎಂದು ಅಧಿಕಾರಿಗಳ ಎದುರು ಗಳಗಳನೆ ಕಣ್ಣೀರಿಟ್ಟರು.

ಹಿರಿಯ ಪತ್ರಕರ್ತರಾದ ಸಾಲಗಾಮೆ ಸತ್ಯನಾರಾಯಣ ಅವರು ಇಂದು ಸಂಜೆ 6 ಗಂಟೆಗೆ ಸಾಲಗಾಮೆ ಗ್ರಾಮದ ಅವರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. 83 ವರ್ಷ ವಯಸ್...
06/12/2023

ಹಿರಿಯ ಪತ್ರಕರ್ತರಾದ ಸಾಲಗಾಮೆ ಸತ್ಯನಾರಾಯಣ ಅವರು ಇಂದು ಸಂಜೆ 6 ಗಂಟೆಗೆ ಸಾಲಗಾಮೆ ಗ್ರಾಮದ ಅವರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. 83 ವರ್ಷ ವಯಸ್ಸಿನ ಶ್ರೀಯುತವರು ಅನಾರೋಗ್ಯದಿಂದ ಬಳಲುತ್ತಿದ್ದರು. ಗುರುವಾರ ಮಧ್ಯಾಹ್ನ 12 ಗಂಟೆಗೆ ಮೃತರ ಅಂತ್ಯಕ್ರಿಯೆ ಸಾಲಗಾಮೆಯಲ್ಲಿ ನೆರವೇರಲಿದೆ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.

06/12/2023

ರಾಜ್ಯ ಚುನಾವಣಾ ಆಯೋಗವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ-2023ರ ಅನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪುರಸಭೆಯ 7ನೇ ವಾರ್ಡ್ ಮತ್ತು ಹೊಳೆನರಸೀಪುರ ಪುರಸಭೆಯ 11ನೇ ವಾರ್ಡ್ ಹಾಗೂ ಸಕಲೇಶಪುರ ಪುರಸಭೆಯ 7 ನೇ ವಾರ್ಡ್ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಖಾಲಿ ಸ್ಥಾನಗಳಿಗೆ ಆದೇಶ ಸಂಖ್ಯೆ: SECK/ULB/BELN/1/2023-ULB, ಬೆಂಗಳೂರು, ದಿನಾಂಕ: 04/12/2023 ರಂತೆ ನಡೆಸಲು ಆದೇಶಿಸಲಾಗಿರುತ್ತದೆ. ಚುನಾವಣಾ ಸದಾಚಾರ ಸಂಹಿತೆಯು ದಿನಾಂಕ: 08/12/2023 ರಿಂದ 30/12/2023 ರವರೆಗೆ ಆಯಾ ನಗರ ಸ್ಥಳೀಯ ಸಂಸ್ಥೆಗಳ ವಾರ್ಡುಗಳ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ. ಚುನಾವಣೆ ನಡೆಯುವ ಪ್ರದೇಶಗಳಲ್ಲಿ ಸದಾಚಾರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ತಂಡವನ್ನು ರಚಿಸಲಾಗಿರುತ್ತದೆ.

ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ-2023ರ ಚುನಾವಣೆ ನಡೆಸಲು ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಚುನಾವಣಾ ವೇಳಾಪಟ್ಟಿಯು ಈ ಕೆಳಕಂಡಂತಿರುತ್ತದೆ.

ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ: 08/12/2023
ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ 15/12/2023
ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ 16/12/2023
ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ 18/12/2023
ಮತದಾನ ದಿನಾಂಕ 27/12/2023
ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಗಳ ವರೆಗೆ)
ಮತಗಳ ಎಣಿಕೆ ದಿನಾಂಕ 30/12/2023
(ಬೆಳಿಗ್ಗೆ 8.00 ಗಂಟೆಯಿಂದ ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ)

06/12/2023

ಕೇಬಲ್ ಟೆಲಿವಿಷನ್ ನೆಟ್ ವರ್ಕ್: ದೂರುಗಳ ಆಹ್ವಾನ
ಹಾಸನ: ಕೇಬಲ್ ಟೆಲಿವಿಷನ್ ನೆಟ್ ವರ್ಕ್ (ವಿನಿಯಮನ)ಅಧಿನಿಯಮ 1995 ರನ್ವಯ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯ ನಿರ್ಣಯದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ದೂರು ಕೋಶ ತೆರೆಯಲಾಗಿದೆ.
ಸಾರ್ವಜನಿಕರು ಸ್ಥಳೀಯ ಕೇಬಲ್ ವಾಹಿನಿಗಳಲ್ಲಿ ಪ್ರಸಾರವಾಗುವ ಸುದ್ದಿ, ಜಾಹಿರಾತು ಹಾಗೂ ಮತ್ತಿತರ ಕಾರ್ಯಕ್ರಮಗಳ ಬಗ್ಗೆ ಯಾವುದಾದರು ದೂರುಗಳಿದ್ದಲ್ಲಿ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಭವನ, ಬಿ.ಎಂ. ರಸ್ತೆ, ಹಾಸನ ಇಲ್ಲಿಗೆ ದೂರುಗಳನ್ನು ಸಲ್ಲಿಸಬಹುದಾಗಿದೆ.
ದೂರು ಸಲ್ಲಿಸಲು ಡಿ.13 ಕಡೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಂಪರ್ಕಿಸುವAತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

06/12/2023

ತುಂತುರು ನೀರಾವರಿ ಘಟಕಗೆ ಅರ್ಜಿ ಆಹ್ವಾನ

ಹಾಸನ: 2023-24ನೇ ಸಾಲಿನ ಪಿ.ಎಂ.ಕೆ.ಎಸ್.ವೈ. ಸೂಕ್ಷö್ಮ ನೀರಾವರಿ (ಎಸ್.ಸಿ.ಪಿ) ಯೋಜನೆಯಡಿ ಪರಿಶಿಷ್ಟ ಜಾತಿ (ಎಸ್.ಸಿ.) ರೈತರಿಗೆ ತುಂತುರು ನೀರಾವರಿ ಘಟಕಗಳನ್ನು ವಿತರಿಸಲು ಕಾರ್ಯಕ್ರಮ ನಿಗದಿಯಾಗಿರುತ್ತದೆ. ತುಂತುರು ನೀರಾವರಿ ಘಟಕಗಳ ಅವಶ್ಯಕತೆ ಇರುವ ರೈತರಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಿದ ಎಲ್ಲಾ ಪರಿಶಿಷ್ಟ ಜಾತಿ ರೈತರಿಗೆ ತುಂತುರು ನೀರಾವರಿ ಘಟಕಗಳನ್ನು ನೀಡಲಾಗುವುದು. ಪ್ರತಿ ತುಂತುರು ನೀರಾವರಿ ಘಟಕಕ್ಕೆ 19,429/- ರೂಗಳ ಸಹಾಯಧನವಿದ್ದು, ರೈತರು 4,139/- ರೂಗಳನ್ನು ರೈತರ ವಂತಿಕೆಯಾಗಿ ಬ್ಯಾಂಕ್‌ಗೆ ಪಾವತಿ ಮಾಡಬೇಕಾಗಿರುತ್ತದೆ.
ತುಂತುರು ನೀರಾವರಿ ಘಟಕಗಳನ್ನು ಪಡೆಯಲು ದಾಖಲಾತಿಗಳಾದ ಅರ್ಜಿ ನಮೂನೆ, ಆದಾರ್ ಕಾರ್ಡ್, ಪಹಣಿ, ಜಮೀನಿನ ಚಕ್ಕುಬಂದಿ, ನೀರಿನ ಲಭ್ಯತೆ ಪ್ರಮಾಣ ಪತ್ರ, ಪೋಟೋ, ಬ್ಯಾಂಕ್ ಪಾಸ್ ಬುಕ್, ಜಾತಿ ಪ್ರಮಾಣ ಪತ್ರ ದಾಖಲಾತಿಗಳನ್ನು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಸಲ್ಲಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು, ಹಾಸನ ಇವರು ತಿಳಿಸಿರುತ್ತಾರೆ.

ಡಾ:ಬಿ.ಆರ್. ಅಂಬೇಡ್ಕರ್ ಅವರ ಆಶಯ ಅಳವಡಿಸಿಕೊಳ್ಳಲು ಕರೆಹಾಸನ: ಸಂವಿಧಾನ ಶಿಲ್ಪಿ ಡಾ:ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಎಲ್ಲಾರು ಜೀವನದಲ್ಲಿ...
06/12/2023

ಡಾ:ಬಿ.ಆರ್. ಅಂಬೇಡ್ಕರ್ ಅವರ ಆಶಯ ಅಳವಡಿಸಿಕೊಳ್ಳಲು ಕರೆ

ಹಾಸನ: ಸಂವಿಧಾನ ಶಿಲ್ಪಿ ಡಾ:ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಎಲ್ಲಾರು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಜಿ ಶಾಸಕರಾದ ಹೆಚ್.ಕೆ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ ,ಸಮಾಜ ಕಲ್ಯಾಣ ಇಲಾಖೆವಯಿತಿಂದ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿಂದು ಏರ್ಪಡಿಸಲಾಗಿದ್ದ ಡಾ:ಬಿ.ಆರ್.ಅಂಬೇಡ್ಕರ್ ಅವರ ೬೭ನೇ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿ ಮಹಾನ್ ಪುರುಷರ ಪುಣ್ಯ ಸ್ಮರಣೆಯನ್ನು ಇಂದು ರಾಷ್ಟçದಾದ್ಯಂತ ಆಚರಿಸಲಾಗುತ್ತಿದೆ. ಡಾ:ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ದೇಶದ ಆಡಳಿತ ನಡೆಸಲು ಬುನಾದಿಯಾಗಿದೆ ಎಂದು ತಿಳಿಸಿದರು.
ಇಂದಿಗೂ ಜಾತಿ ಪದ್ದತಿ, ಅಸ್ಪೃಶತೆ, ಮರ್ಯಾದ ಹತ್ಯೆ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದನ್ನು ಪ್ರತಿದಿನ ಪತ್ರಿಕೆ ಹಾಗೂ ಟಿ.ವಿ.ಗಳಲ್ಲಿ ಸುದ್ದಿಯಾಗುತ್ತಿರುವುದನ್ನು ನೋಡಬಹುದಾಗಿದೆ. ಸಮಾಜದಲ್ಲಿ ಎಲ್ಲರೂ ತಲೆ ತಗ್ಗಿಸುವಂತಹ ಹೀನಕೃತ್ಯಗಳಾಗಿವೆ. ಇವುಗಳನ್ನು ಕೊನೆಗಾಣಿಸಲು ಕಾನೂನುನಡಿ ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸತ್ಯಭಾಮ ಅವರು ಮಾತನಾಡಿ ಡಾ:ಬಿ.ಆರ್.ಅಂಬೇಡ್ಕರ್ ಅವರು ಸಾಮಾಜಿಕ ಕ್ರಾಂತಿ ಮಾಡಿದ್ದಾರೆ ಯಾವುದೇ ಸಂದರ್ಭದಲ್ಲಿಯೂ ಸ್ವಾಭಿಮಾನ ಬಿಡಬೇಡಿ, ಸಮುದಾಯದ ಹಿತ ಬಲಿಕೊಡಬೇಡಿ ಎಂದು ಹೇಳಿರುವ ಅಂಬೇಡ್ಕರ್ ಅವರು ಸ್ವಾಭಿಮಾನ ಹಾಗೂ ಸ್ವಾವಲಂಬನೆ ಬದುಕು ನಡೆಸಿ ಎಂದು ತಿಳಿಸಿದ್ದಾರೆ.

ಸ್ವಾಭಿಮಾನಕ್ಕೆ ಇನ್ನೋಂದು ಹೆಸರೆ ಡಾ:ಬಿ.ಆ.ಅಂಬೇಡ್ಕರ್ ಅವರು ಅದಂತೆ ಎಲ್ಲರೂ ತಮ್ಮ ಶ್ರಮದಿಂದ ಜೀವನ ನಡೆಸಬೇಕು ಎಂದರಲ್ಲದೆ, ಅವರ ಅಶಯಗಳನ್ನು ಪಾಲನೆ ಮಾಡುತ್ತಿದ್ದೇವೆಯೇ ಎಂದು ಪ್ರಶ್ನೆ ಮಾಡಿಕೊಳ್ಳಿ ಎಂದರು.

ದಲಿತ ಸಂಘಟನೆ ಮುಖಂಡರಾದ ಹೆಚ್.ಕೆ ಸಂದೇಶ್ ಅವರು ಮಾತನಾಡಿ ಪ್ರತಿಯೊಬ್ಬರು ಪ್ರೀತಿ ವಿಸ್ವಾದಿಂದ ಬದುಕು ಕಟ್ಟಿಕೊಳ್ಳುವಂತೆ ಡಾ:ಬಿ.ಆ.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದ್ದಾರೆ ಎಂದರು.
ಸ್ವಾತಂತ್ರö್ಯ ಹೊರಾಟಗಾರರಾದ ಹೆಚ್.ಎಂ.ಶಿವಣ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಈ.ಕೃಷ್ಣೇಗೌಡ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಲಕ್ಷೆö್ಮÃಗೌಡ ಮತ್ತಿರರ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಂಡರುಗಳು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗÀವಹಿಸಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಡಾ:ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಗಣ್ಯರೆಲ್ಲರು ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.

ಮೃತ ಪಟ್ಟ ಅರ್ಜುನ ಆನೆ ಮರಣೋತ್ತರ ಪರೀಕ್ಷೆ ಮಾಡದೆ ಅಂತ್ಯ ಸಂಸ್ಕಾರ ಮಾಡಿರುವುದ ಅನುಮಾನಕ್ಕೆ ಕಾರಣ ಉನ್ನತ ಮಟ್ಟದ ತನಿಖೆಗೆ ಮಾಜಿ ಮಂತ್ರಿ ಹೆಚ್ ...
06/12/2023

ಮೃತ ಪಟ್ಟ ಅರ್ಜುನ ಆನೆ ಮರಣೋತ್ತರ ಪರೀಕ್ಷೆ ಮಾಡದೆ ಅಂತ್ಯ ಸಂಸ್ಕಾರ ಮಾಡಿರುವುದ ಅನುಮಾನಕ್ಕೆ ಕಾರಣ ಉನ್ನತ ಮಟ್ಟದ ತನಿಖೆಗೆ ಮಾಜಿ ಮಂತ್ರಿ ಹೆಚ್ ಕೆ ಕುಮಾರ್ ಸ್ವಾಮಿ ಒತ್ತಾಯ

ಸಕಲೇಶಪುರ :- ಎಂಟು ಬಾರಿ ದಸರ ಅಂಬಾರಿ ಹೊತ್ತ ಅರ್ಜುನ ಆನೆಯನ್ನು ಕಾಡಾನೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಕೈಗೊಂಡ ತಾಲ್ಲೂಕಿನ ಯಸಳೂರು ಹೋಬಳಿಯ ಬಾಳೆಕೆರೆ ಕಾಡಿನಲ್ಲಿ ಕಾರ್ಯಾಚರಣೆ ಮಾಡುವ ಸಂದರ್ಭದಲ್ಲಿ ಅನುಮಾನಾಸ್ಪದ ವಾಗಿ ಸಾವನ್ನು ಅಪ್ಪಿದ್ದು ಆ ಕಳೇಬರವನ್ನು ಯಾವುದೇ ಮರಣೋತ್ತರ ಪರೀಕ್ಷೆ ಮಾಡದೆ ಅಂತ್ಯಕ್ರಿಯೆ ಮಾಡಿರುವ ಜಿಲ್ಲಾಡಳಿತ ಅರಣ್ಯ ಇಲಾಖೆಯ ಸಂಪೂರ್ಣ ಕಾರ್ಯಾಚರಣೆ ಬಗ್ಗೆ ಸರ್ಕಾರ ಸೂಕ್ತ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಬುಧವಾರ ನಗರದಲ್ಲಿ ಇರುವ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ನಡದ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು ನಂತರ ಮಾತನಾಡಿದ ಇವರು ಯಾವುದೇ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಯಾವುದೇ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲ ವಾಗಿದೆ ಈ ಹಿಂದೆ ನಡೆದ ಕಾರ್ಯಾಚರಣೆಯಲ್ಲಿ ಶಾರ್ಪ್ ಶೂಟರ್ ವೆಂಕಟೇಶ್ ಮತ್ತು ಈಗ ದಸರ ಆನೆ ಅರ್ಜುನ್ ಸಾವಿಗೆ ಅರಣ್ಯ ಇಲಾಖೆಯೆ ನೇರ ಹೊಣೆ ಮತ್ತು ಅರ್ಜುನ್ ಆನೆಗೆ ಮಿಸ್ ಪೈರ್ ಕಾರಣ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು ಇದಕ್ಕೆ ಪುಷ್ಟಿ ನೀಡುವಂತೆ ಸಾವಿನ ನಂತರ ಯಾವುದೇ ಮರಣೋತ್ತರ ಪರೀಕ್ಷೆ ಮಾಡದೆ ಇರುವುದೆ ಆಗಿದೆ ಈ ವಿಚಾರವನ್ನು ಖಂಡಿಸಿದ ಸ್ಥಳಿಯ ಜನರು ಮತ್ತು ಪರಿಸರವಾದಿಗಳು, ಹೋರಾಟಗಾರರ ಮೇಲೆ ಪೋಲಿಸ್ ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸುತ್ತೆನೆ ಅರಣ್ಯ ಇಲಾಖೆ ಅರವಳಿಕೆ ಹೊಡೆಯುವ ಶಾರ್ಪ್ ಶೂಟರ್ ಇಲ್ಲಿಯವರೆಗೆ ನೇಮಿಸಿಲ್ಲ ಮತ್ತು ಕಾಡಾನೆ ದಾಳಿ ಮಾಡುವ ಸಂದರ್ಭದಲ್ಲಿ ಕಾಡಾನೆಗೆ ಅರಿವಳಿಕೆ ನೀಡಿದ್ದರೆ ಮತ್ತು ಬೆದರು ಗುಂಡು ಹೊಡೆದಿದ್ದರೆ ಅರ್ಜುನನನ್ನು ಉಳಿಸ ಬಹುದಿತ್ತು ಮತ್ತು ಅರ್ಜುನನ ಮಾವುತನನ್ನು ಈ ಕಾರ್ಯಾಚರಣೆಯಲ್ಲಿ ಬಳಸಿಲ್ಲ ಏಕೆ ಎಂದು ಅರಣ್ಯ ಇಲಾಖೆ ವೈಫಲ್ಯ ಕಾಣುತ್ತಿದೆ ಎಂದು ಹೇಳಿದರು. ಈ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಮಾಜಿ ಪುರಸಭಾ ಅದ್ಯಕ್ಷ ಕಾಡಪ್ಪ, ಜೆ ಡಿ ಎಸ್ ಮುಖಂಡರಾದ ಸಚಿನ್ ಪ್ರಸಾದ್, ಪ್ರಕಾಶ್, ಸ ಬಾ ಬಾಸ್ಕರ್, ಆನೆ ಮಹಲ್ ಹಸೆನರ್ ಉಪಸ್ಥಿತರಿದ್ದರು.

ಕಾರ್ಯಾಚರಣೆ ಸಿಬ್ಬಂದಿಗೆ ತರಬೇತಿಬೆಳಗಾವಿ: ಆನೆ ಸೇರಿದಂತೆ ವನ್ಯಮೃಗಗಳು ಕಾಡಿನಿಂದ ನಾಡಿಗೆ ಬರುತ್ತಿರುವುದು ಹೆಚ್ಚಾಗುತ್ತಿದ್ದು, ಕಾರ್ಯಾಚರಣೆ ...
05/12/2023

ಕಾರ್ಯಾಚರಣೆ ಸಿಬ್ಬಂದಿಗೆ ತರಬೇತಿ

ಬೆಳಗಾವಿ: ಆನೆ ಸೇರಿದಂತೆ ವನ್ಯಮೃಗಗಳು ಕಾಡಿನಿಂದ ನಾಡಿಗೆ ಬರುತ್ತಿರುವುದು ಹೆಚ್ಚಾಗುತ್ತಿದ್ದು, ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ವನ್ಯಮೃಗಗಳೂ ಸಾವಿಗೀಡಾಗುತ್ತಿರುವುದು ಆಂತಕದ ವಿಷಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಕಾರ್ಯಪಡೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲು ಕ್ರಮ ಕೈಗೊಳ್ಳುಲು ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬೆಳಗಾವಿಯಯಲ್ಲಿ ನಡೆದ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ. ಜಾರ್ಜ್, ಬೋಸರಾಜ್ ಮತ್ತು ಕೆ.ಎನ್.ರಾಜಣ್ಣ ಹಾಗೂ ಮೂರೂ ಜಿಲ್ಲೆಗಳ ಶಾಸಕರ ಉಪಸ್ಥಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದ ಆನೆ-ಮಾನವ ಸಂಘರ್ಷ ಹೆಚ್ಚಾಗಿರುವ 9 ಜಿಲ್ಲೆಗಳಿಗೆ
ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ವಾರದಲ್ಲಿ ಕನಿಷ್ಠ 2 ದಿನ ನಿಯೋಜಿತ ಜಿಲ್ಲೆಯಲ್ಲೇ ಉಳಿದು ಪರಿಸ್ಥಿತಿ ನಿಭಾಯಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ಆನೆ ನಾಡಿಗೆ ಬಾರದಂತೆ ತಡೆಯಲು ಉತ್ತಮ ಮಾರ್ಗೋಪಾಯ ಎಂದರೆ ರೈಲ್ವೆ ಬ್ಯಾರಿಕೇಡ್ ಅವಳವಡಿಕೆ. ಆದರಿದು ಒಂದೆರಡು ವರ್ಷದಲ್ಲಿ ಆಗುವ ಕೆಲಸವಲ್ಲ. ಬಜೆಟ್‌ನಲ್ಲಿ 100 ಕೋಟಿ ಹಂಚಿಕೆ ಮಾಡಲಾಗಿದ್ದು, ಆನೆ ಹಾವಳಿ ಹೆಚ್ಚಾಗಿರುವ ಕಡೆ ಬ್ಯಾರಿಕೇಡ್ ಹಾಕಲು ಕ್ರಮ ವಹಿಸಲಾಗಿದೆ. ಆನೆ ಸಮಸ್ಯೆ ಇರುವ ಭಾಗದ ಶಾಸಕರೊಂದಿಗೆ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡೋಣ ಎಂದರು.
ಕಳೆದ ಏಪ್ರಿಲ್‌ನಿಂದೀಚೆಗೆ ರಾಜ್ಯದಲ್ಲಿ ಒಟ್ಟು 43 ಜನ, ಮಾನವ-ವನ್ಯಜೀವಿ ಸಂಘರ್ಷದಲ್ಲಿ ಸಾವಿಗೀಡಾಗಿದ್ದು, ಈ ಪೈಕಿ 30 ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಚಾಮರಾಜನಗರದಲ್ಲಿ 10, ಕೊಡಗು ಜಿಲ್ಲೆಯಲ್ಲಿ 7, ರಾಮನಗರ 3, ಬೆಂಗಳೂರು ಮತ್ತು ಮೈಸೂರು, ಹಾಸನ ವೃತ್ತದಲ್ಲಿ ತಲಾ ಇಬ್ಬರು, ಶಿವಮೊಗ್ಗದಲ್ಲಿ ಒಬ್ಬರು ಆನೆ ದಾಳಿಯಿಂದ ಸಾವಿಗೀಡಾಗಿದ್ದಾರೆ ಎಂದು ವಿವರಿಸಿದರು.
ಉಳಿದಂತೆ ಕಾಡುಹಂದಿ ದಾಳಿಗೆ ಇಬ್ಬರು, ಮೊಸಳೆಗೆ ಒಬ್ಬರು ಬಲಿಯಾಗಿದ್ದಾರೆ. ಕರಡಿ ದಾಳಿಯಿಂದ ಇಬ್ಬರು ಸಾವಿಗೀಡಾಗಿದ್ದರೆ, ಚಿರತೆ ದಾಳಿಯಿಂದ 3 ಸಾವು ಸಂಭವಿಸಿದೆ. ಹುಲಿ ದಾಳಿಯಿಂದ 4 ಸಾವು ಸಂಭವಿಸಿದ್ದರೆ, ಕೋತಿ ಕಚ್ಚಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಸಚಿವ ಬೋಸರಾಜ್ ಮಾತನಾಡಿ, ಆನೆಯಿಂದ ಹೆಚ್ಚಿನ ಸಾವು ಸಂಭವಿಸಿದೆ. ವೈಜ್ಞಾನಿಕವಾಗಿ ವಿದ್ಯುತ್ ತಂತಿ ಬೇಲಿ ಹಾಕಿದರೂ ಅತ್ಯಂತ ಬುದ್ಧಿವಂತಿಕೆಯಿAದ ಆನೆ ದಾಟಿ ಬರುತ್ತಿವೆೆ. ಹೀಗಾಗಿ ಆನೆ ತಡೆಯಲು ಸೂಕ್ತ ವ್ಯವಸ್ಥೆ ರೂಪಿಸಬೇಕಾಗುತ್ತದೆ. ಬೆಳೆ ಹಾನಿ ಹೆಚ್ಚಾಗುತ್ತಿದೆ. ಕಾಫಿ ತೋಟಗಳಲ್ಲಿ ಆನೆಗಳು ಉಳಿಯುತ್ತಿವೆ. ಹೀಗಾಗಿ ಆನೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕೆಂದರು.
ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಮಾತನಾಡಿ, ಕಾಡಾನೆಗಳು ಕಾಡಿನಿಂದ ನಾಡಿಗೆ ಗುಂಪು ಗುಂಪಾಗಿ ಬರುತ್ತಿದ್ದು, ಸಾರ್ವಜನಿಕರು ಭಯದಿಂದ ಜೀವನ ಸಾಗಿಸಬೇಕಿದೆ. ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿಕೊಡಿ ಎಂದು ಮನವಿ ಮಾಡಿದರು.
ಕಾಡಾನೆ ಹಾವಳಿಯಿಂದ ನನ್ನ ಕ್ಷೇತ್ರದ ಜನರು ಆತಂಕಗೊAಡು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಜನರ ಭಯ ಹೋಗಲಾಡಿಸಲು ಅರಣ್ಯ ಇಲಾಖೆಯಿಂದ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಸಿಬ್ಬಂದಿ ಮಾಡಬೇಕು ಹಾಗೂ ಅರಣ್ಯ ಇಲಾಖೆ ಕಚೇರಿಗಳಿಗೆ ಸಮರ್ಪಕ ಸಿಬ್ಬಂದಿ, ವಾಹನ ನೀಡಬೇಕೆಂದು ಮನವಿ ಮಾಡಿದರು.
ಕಾಡಾನೆ ದಾಳಿಯಿಂದ ಪ್ರಾಣ ಹಾನಿಯಾದ ಕುಟುಂಬಸ್ಥರಿಗೆ ನೀಡುತ್ತಿರುವ ಪರಿಹಾರವನ್ನು 15 ರಿಂದ 25 ಲಕ್ಷಕ್ಕೆ ಏರಿಸಬೇಕು. ಆನೆ ಕಾರಿಡಾರ್ ನಿರ್ಮಾಣ ಮಾಡಿ ನಮ್ಮ ಭಾಗದ ಕಾಡಾನೆಗಳನ್ನು ಸ್ಥಳಾಂತರಿಸಿ ಜನರು ನೆಮ್ಮದಿಯಿಂದ ಜೀವಿಸಲು ಅವಕಾಶ ಮಾಡಿಕೊಡಿ ಎಂದು ವಿನಂತಿಸಿದರು.
ಸಭೆಯಲ್ಲಿ ಪರಿಷತ್ ಉಪ ಸಭಾಪತಿ ಪ್ರಾಣೇಶ್, ಶಾಸಕರಾದ ಸಿಮೆಂಟ್ ಮಂಜು, ನಯನಾ ಮೋಟಮ್ಮ, ರಾಜೇಗೌಡ, ಎಸ್.ಎ. ಬೋಪಣ್ಣ, ಶ್ರೀನಿವಾಸ್, ಮಂತರ್‌ಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಆನೆ ಜೊತೆಗೆ ಚಿರತೆ ಹಾವಳಿಯೂ ಹೆಚ್ಚಾಗಿದೆ. ಜನ ಭಯ ಭೀತಿಯಿಂದ ಬದುಕುವಂತಾಗಿದೆ. ನಾವು ಕ್ಷೇತ್ರಕ್ಕೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ವನ್ಯಜೀವಿ-ಮಾನವ ಸಂಘರ್ಷ ತಡೆಯಲು ಕ್ರಮ ಕೈಗೊಳ್ಳಲೇಬೇಕು ಜೊತೆಗೆ ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ದೊರಕಿಸಲು ಈ ಅಧಿವೇಶನದಲ್ಲೇ ಚರ್ಚಿಸಿ ತೀರ್ಮಾ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಾಸನ:ಅಂಬಾರಿ ಆನೆ ಅರ್ಜುನನ ಸಾವು ಇಡೀ ರಾಜ್ಯಕ್ಕೆ ನೋವುಂಟು ಮಾಡಿದೆ, ರಾಜ್ಯಾದ್ಯಂತ ಜನರು ಕಣ್ಣೀರು ಹಾಕುತ್ತಿದ್ದಾರೆ, ಅರ್ಜುನನ ಮಾವುತ ಬಿಕ್ಕಿ...
05/12/2023

ಹಾಸನ:ಅಂಬಾರಿ ಆನೆ ಅರ್ಜುನನ ಸಾವು ಇಡೀ ರಾಜ್ಯಕ್ಕೆ ನೋವುಂಟು ಮಾಡಿದೆ, ರಾಜ್ಯಾದ್ಯಂತ ಜನರು ಕಣ್ಣೀರು ಹಾಕುತ್ತಿದ್ದಾರೆ, ಅರ್ಜುನನ ಮಾವುತ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅರ್ಜುನನ್ನು ಮುದ್ದಿಸಿ ಕಣ್ಣೀರು ಹಾಕಿದ್ದಾರೆ. ಎದ್ದೇಳು ರಾಜ ನಾನು ಬಂದಿದ್ದೀನಿ, ಬಾ ಮನೆಗೆ ಹೋಗೋಣ, ನಿನಗೆ ಮುದ್ದೆ ಮಾಡಿ ಕೊಡ್ತಿನಿ, ಊಟ ಕೊಡ್ತಿನಿ ಬಾರೋ, ಅನ್ಯಾಯವಾಗಿ ನಿನ್ನ ಇಲ್ಲಿಗೆ ಕರ್ಕೊಬಂದು ಸಾಯಿಸಿ ಬಿಟ್ರಲ್ಲ, ಅರ್ಜುನನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ನೋಡಿ ವಿಡಿಯೋ....

ಹಾಸನ:ಅಂಬಾರಿ ಆನೆ ಅರ್ಜುನನ ಸಾವು ಇಡೀ ರಾಜ್ಯಕ್ಕೆ ನೋವುಂಟು ಮಾಡಿದೆ, ರಾಜ್ಯಾದ್ಯಂತ ಜನರು ಕಣ್ಣೀರು ಹಾಕುತ್ತಿದ್ದಾರೆ, ಅರ್ಜುನನ ಮಾ.....

ಅನ್ಯಾಯವಾಗಿ ಸಾಯಿಸಿದ್ರಿ; ಸತ್ತ ಮೇಲಾದರು ನ್ಯಾಯ ಕೊಡಿಸಿ- ಅರ್ಜುನ ಆನೆ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ ಹಾಸನ: " ಅರ್ಜುನ ಆನೆಯನ್ನು ಅನ್ಯಾಯವಾ...
05/12/2023

ಅನ್ಯಾಯವಾಗಿ ಸಾಯಿಸಿದ್ರಿ; ಸತ್ತ ಮೇಲಾದರು ನ್ಯಾಯ ಕೊಡಿಸಿ- ಅರ್ಜುನ ಆನೆ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ
ಹಾಸನ: " ಅರ್ಜುನ ಆನೆಯನ್ನು ಅನ್ಯಾಯವಾಗಿ ಸಾಯಿಸಿದ್ರಿ; ಸತ್ತ ಮೇಲಾದರು ನ್ಯಾಯ ಕೊಡಿಸಿ " ಎಂದು ಅರಣ್ಯ ಇಲಾಖೆಗೆ ಧಿಕ್ಕಾರ ಹಾಕುತ್ತಾ ಸ್ಥಳೀಯರು ಅರ್ಜುನ ಆನೆ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ ನಡೆಸಿದರು.

ಒಂಟಿ ಸಲಗ ಸೆರೆ ಕಾರ್ಯಾಚರಣೆಯ ವೇಳೆ ಮೃತಪಟ್ಟಿದ್ದ ಅರ್ಜುನ ಆನೆಯನ್ನು ಮೃತಪಟ್ಟ ಸ್ಥಳ ಹಾಸನದ ಸಕಲೇಶಪುರ ತಾಲ್ಲೂಕಿನ ದಬ್ಬಳ್ಳಿಕಟ್ಟೆ ನೆಡು ತೋಪಿನಲ್ಲಿಯೇ ಗುಂಡಿ ತೋಡಿಸಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಇದಕ್ಕೆ ಸ್ಥಳೀಯರು ಹಾಗೂ ಮಾವುತರು ವಿರೋಧ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳ ಅಚಾತುರ್ಯದಿಂದ ಅರ್ಜುನ ಆನೆ ಸಾವಾಗಿದೆ. ಆನೆಯ ಸಾವಿನ ನಂತರವಾದರೂ ಸೂಕ್ತ ಸ್ಥಳದಲ್ಲಿ ಅಂದರೆ, ಆನೆ ಹುಟ್ಟಿ ಬೆಳೆದ ಬಳ್ಳೆ ಸಾಕಾನೆ ಶಿಬಿರದಲ್ಲಿ ಅಂತ್ಯ ಸಂಸ್ಕಾರ ಮಾಡಿ ಸ್ಮಾರಕ ಮಾಡುವ ಮೂಲಕ ನ್ಯಾಯ ಒದಗಿಸಿ ಎಂದು ಮಾವುತವು ಹಾಗೂ ಸ್ಥಳೀಯರು ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ. ಆದರೂ, ಅರಣ್ಯ ಇಲಾಖೆ ಕಿವಿಗೊಡದೇ ಅಂತ್ಯ ಸಂಸ್ಕಾರ ಮಾಡಿದೆ. ಸೂಕ್ತ ಸ್ಥಳದಲ್ಲಿ ಅಂತ್ಯಕ್ರಿಯೆಗೆ ಆಗ್ರಹಿಸಿದ ಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ ಓಡಿಸಿದ್ದಾರೆ.



ಅರಣ್ಯ ಇಲಾಖೆ ಎಡವಟ್ಟಿನಿಂದ ಅರ್ಜುನ ಸಾವು?
ಅರ್ಜುನ ಆನೆ ಸಾವಿನ ಬಗ್ಗೆ ಮಾವುತರೊಬ್ಬರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“ ಸೆರೆ ಹಿಡಿಯಬೇಕಿದ್ದ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಲು ಇಂಜೆಕ್ಷನ್ ಶೂಟ್ ಮಾಡಲಾಗಿತ್ತು. ಅದು ಗುರಿ ತಪ್ಪಿ ಪ್ರಶಾಂತ್ ಎಂಬ ಸಾಕಾನೆ ಮೇಲೆ ಬಿತ್ತು. ನಂತರ, ಬೇರೊಂದು ಇಂಜೆಕ್ಷನ್ ನೀಡಿ ಅದನ್ನು ಸುಧಾರಿಸಲಾಯಿತು. ಆ ವೇಳೆಗೆ, ಕಾಡಾನೆ ಮೇಲೆ ಅರ್ಜುನ ದಾಳಿ ಮಾಡಿತು. ಆಗ ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದರು. ಆ ಗುಂಡು ಅಚಾನಕ್ಕಾಗಿ ಅರ್ಜುನನ ಕಾಲಿಗೆ ಬಿದ್ದಿತು. ಗುಂಡು ತಗುಲಿದ್ದರಿಂದ ಅರ್ಜುನ ಸುತ್ತಮುತ್ತಲಿದ್ದ ಮರಗಳನ್ನು ಬೀಳಿಸಿತು. ಅರ್ಜುನ ಆನೆ ನಡೆಯಲಾಗದ ಪರಿಸ್ಥಿತಿಯಲ್ಲಿತ್ತು. ಈ ವೇಳೆ, ಸೆರೆ ಹಿಡಿಯಬೇಕಿದ್ದ ಕಾಡಾನೆಯೇ ಅರ್ಜುನನ ಮೇಲೆ ದಾಳಿ ಮಾಡಿತು” ಎಂದು ಮಾವುತ ವಿಡಿಯೋದಲ್ಲಿ ಹೇಳಿದ್ದಾರೆ.
ಅರ್ಜುನನ ಸಾವಿನ ತನಿಖೆಗೆ ಒತ್ತಾಯ
ವನ್ಯಜೀವಿ ಪ್ರಿಯರು ಹಾಗೂ ಹೋರಾಟಗಾರರು ಅರ್ಜುನ ಆನೆಯ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಒತ್ತಾಯಿಸಿದ್ದಾರೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಬೆಂಗಳೂರಿನ ಮಲ್ಲೇಶ್ವರದಲ್ಲಿ ಮಂಗಳವಾರ ಸಂಜೆ 4ಗಂಟೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. 'ಅಂಬಾರಿ ಆನೆ ಅರ್ಜುನ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷ ಆಗಬೇಕು' ಎಂದು ಆಗ್ರಹಿಸಿದ್ದಾರೆ.

ಕಾರ್ಯಾಚರಣೆಗೆ 64 ವರ್ಷದ ಅರ್ಜುನನನ್ನು ಬಳಸಿದ್ದೇ ತಪ್ಪು
ವನ್ಯ ಜೀವಿ ತಜ್ಞರು ಹೇಳುವಂತೆ, ವಯಸ್ಸಾದ ಕಾರಣಕ್ಕೆ ಅರ್ಜುನನಿಗೆ ಅಂಬಾರಿ ಹೋರುವುದನ್ನೇ ನಿಲ್ಲಿಸಲಾಗಿದೆ. 64 ವರ್ಷದ ಅರ್ಜುನನ್ನು ಕಾಡಿನ ಪುಂಡಾನೆ/ ಒಂಟಿ ಸಲಗಗಳ ಸೆರೆ ಕಾರ್ಯಾಚರಣೆಗೆ ಬಳಸಬಾರದಿತ್ತು. ಅರಣ್ಯ ಇಲಾಖೆ ಕಾರ್ಯಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಅರ್ಜುನ  : ಬದುಕಿದ್ದಾಗ ರಾಜನಂತೆ ಮೆರೆದ,  ಸತ್ತಾಗ ಮಾವುತನ ರಕ್ಷಿಸಿ ವೀರ ಮರಣವನ್ನಪ್ಪಿದಅರ್ಜುನ, ಮೈಸೂರು ದಸಾರದ ಸಮಯದಲ್ಲಿ ತುಂಬಾನೇ ಕೇಳಿ ಬರ...
04/12/2023

ಅರ್ಜುನ : ಬದುಕಿದ್ದಾಗ ರಾಜನಂತೆ ಮೆರೆದ, ಸತ್ತಾಗ ಮಾವುತನ ರಕ್ಷಿಸಿ ವೀರ ಮರಣವನ್ನಪ್ಪಿದ
ಅರ್ಜುನ, ಮೈಸೂರು ದಸಾರದ ಸಮಯದಲ್ಲಿ ತುಂಬಾನೇ ಕೇಳಿ ಬರುತ್ತಿದ್ದ ಹೆಸರು... 8 ವರ್ಷಗಳ ಮೈಸೂರು ದಸರಾದಲ್ಲಿ ಅಂಬಾರಿಯನ್ನು ಹೊತ್ತು ಸಾಗಿದ ಹೆಗ್ಗಳಿಕೆ ಅರ್ಜುನನಿಗೆ ಸಲ್ಲುತ್ತೆ, ಅಂಬಾರಿ ಹೊತ್ತು ಅರ್ಜುನ ಹೆಜ್ಜೆ ಹಾಕುತ್ತಿದ್ದರೆ ಲಕ್ಷಾಂತಕರ ಕಣ್ಣು ಈ ಗಜನ ಮೇಲೆ. ಅಲ್ಲದೆ ವೀರತ್ವದಲ್ಲಿಯೂ ಗುರುತಿಸಿಕೊಂಡಿದ್ದ ಅರ್ಜುನ ಇನ್ನು ನೆನಪು ಮಾತ್ರ. ಘೋರ ಸಾವನ್ನಪ್ಪಿದ ಅರ್ಜುನ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಬಾಗಿಯಾಗಿದ್ದ ಅರ್ಜುನ ತನ್ನ ಮಾವುತನ ರಕ್ಷಿಸಲು ಹೋಗಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.
ಕಾಡಾನೆ ವಿರುದ್ಧ ಒಬ್ಬಂಟಿಯಾಗಿ ಕಾದಾಟಕ್ಕಿಳಿದ ಅರ್ಜುನ ಬೇರೆಯವರ ರಕ್ಷಣೆ ಮಾಡಿ ತನ್ನ ಪ್ರಾಣ ಬಿಟ್ಟಿದ್ದಾನೆ, ಬದುಕಿದ್ದಾಗ ರಾಜನಂತೆ ಮೆರೆದ, ಸತ್ತಾಗ ವೀರನಾಗಿ ಸತ್ತ ನಮ್ಮ ಅರ್ಜುನ.ಅರ್ಜುನನ ಅಕಾಲಿಕ ಮರಣ ಎಂಥವರ ಮನಸ್ಸು ಕದಡುತ್ತಿದೆ ಅರ್ಜುನ ಹೇಗೆ ಸತ್ತ ಎಂದು ಕೇಳಿದಾಗ ಅವನ ಮೇಲೆ ತುಂಬಾನೇ ಗೌರವ ಮೂಡುತ್ತದೆ. ಕಾಡಾನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಅಂದರೆ ಸಾಮಾನ್ಯವಾದ ಕಾರ್ಯವಲ್ಲ. ಅದರಲ್ಲೂ ಒಂಟಿ ಸಲಗವೆಂದ ಮೇಲೆ ಅಪಾಯ ಇನ್ನೂ ಹೆಚ್ಚು, ಎಷ್ಟು ಸುರಕ್ಷತೆವಹಿಸಿದರೂ ಸಾಲದು.
ಸಕಲೇಶಪುರು ತಾಲ್ಲೂಕಿನ ಯಸಳೂರು ವಲಯದ ಬಾಳೆಕೆರೆ ಕಾಡಾನೆಯಲ್ಲಿ ರೇಡಿಯೋ ಕಾಲರ್ ಅಳವಡಿಕೆ ಮಾಡಲು ಆನೆಗಳ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗಿತ್ತು.ಎಲ್ಲರು ಒಂಟಿಸಲಗವನ್ನು ಹಿಡಿಯಲು ಪ್ಲ್ಯಾನ್ ಮಾಡಿದರು. ಆದರೆ ಒಂಟಿ ಸಲಗ ರೊಚ್ಚಿಗೆದ್ದು ಆಕ್ರಮಣ ಮಾಡಲು ಬರುತ್ತದೆ, ಮೊದಲಿಗೆ ಸಾಕಾನೆಗಳ ಮೇಲೆ ದಾಳಿ ಮಾಡುತ್ತದೆ. ಒಂಟಿಸಲಗದ ಆರ್ಭಟಕ್ಕೆ ಹೆದರಿದ ಇತರ ಆನೆಗಳು ಅಲ್ಲಿಂದ ಜಾಗ ಖಾಲಿ ಮಾಡುತ್ತವೆ, ಆವಾಗ ಆ ಒಂಟಿ ಸಲಗ ಅಲ್ಲಿದ್ದ ಅರಣ್ಯಾಧಿಕಾರಿಗಳು ಹಾಗೂ ಮಾವುತನ ಮೇಲೆ ದಾಳಿಗೆ ಮುಂದಾಗುತ್ತದೆ, ಇದನ್ನು ನೋಡಿದ ಅರ್ಜುನ ಅವರ ರಕ್ಷಣೆ ಮುಂದಾಗುತ್ತಾನೆ. ಆ ಕಾಡಾನೆಯನ್ನು ಸಮರ್ಥವಾಗಿ ಎದುರಿಸಿ ನಿಲ್ಲುತ್ತಾನೆ. ಅರ್ಜುನ ಮೊದಲಿನಿಂದಲೂ ಹಾಗೆಯೇ ಎಂಥದ್ಧೇ ಪರಿಸ್ಥಿತಿ ಇರಲಿ ಹೆದರಿ ಹಿಂದೇಟು ಹಾಕುತ್ತಿರಲಿಲ್ಲ .ಒಂಟಿಯಾಗಿಯೇ ಸಲಗವನ್ನು ಎದುರಿಸಿದೆ, ಅಷ್ಟೊತ್ತಿಗೆ ಅರಣ್ಯ ಸಿಬ್ಬಂದಿ ಹಾಗೂ ಮಾವುತ ಸುರಕ್ಷಿತ ಸ್ಥಳ ತಲುಪುತ್ತಾರೆ, ಕಾಡಾನೆ ಅರ್ಜುನನ ಹೊಟ್ಟೆಗೆ ತಿವಿದಿದೆ. ಅರ್ಜುನ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದ ಮೇಲೆ ಕುಸಿದು ಬಿದ್ದ ಎಂದು ಅದನ್ನು ಪ್ರತ್ಯಕ್ಷ ನೋಡಿದವರು ಹೇಳುತ್ತಾರೆ. ತನ್ನ ನಂಬಿ ಬಂದವರನ್ನು ರಕ್ಷಿಸಿ ಅರ್ಜುನ ವೀರ ಮರನವೊಂದಿದ್ದಾನೆ.
ತನ್ನನ್ನು ತನ್ನ ಮನೆಯವರಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ಅರ್ಜುನ ಮರಣವೊಂದಿದ ಎಂದು ತಿಳಿದಾಗ ಅರ್ಜುನ ಆನೆಯನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಮನಕಲುವಂತಿತ್ತು, ಆತ ಅರ್ಜುನನ ಅಗಲಿಕೆಯ ನೋವು ಸಹಿಸಲಾಗದೆ ಕುಸಿದುಬಿದ್ದಿದ್ದಾನೆ, ಮಾವುತನನ್ನು ಆಸ್ಪತ್ರೆಗೆ ಕರೆದುಕೊಮಡು ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ. ಅರ್ಜುನನ ಸಾವು ಜನತೆಗೆ, ಅರಣ್ಯ ಇಲಾಖೆಗೆ ಭರಿಸಲಾರದ ನಷ್ಟ, ಅವನು ಈ ಆನೆಗಳನ್ನು ಸೆರೆ ಹಿಡಿಯುವ ಕಾರ್ಯದಲ್ಲಿ ತನ್ನ ಸಾಮರ್ಥ್ಯ ಜೊತೆಗೆ ಬುದ್ಧಿವಂತಿಕೆಯಿಂದ ಗಮನ ಸೆಳೆಯುತ್ತಿದ್ದ. ಬಹುಶಃ ಇತರ ಆನೆಗಳು ಹೆದರಿ ಓಡದಿದ್ದರೆ ಎಲ್ಲರೂ ಸೇರಿ ಆ ಒಂಟಿಸಲಗವನ್ನು ಹಿಡಿಯಬಹುದಿತ್ತೇನೋ, ಅರ್ಜುನ ಒಂಟಿಯಾಗಿ ಕಾದಾಡಿ ಮರಣವೊಂದಿದ್ದಾನೆ. ತನ್ನ ಮಾವುತನಿಗಾಗಿ ತನ್ನ ಪ್ರಾಣವನ್ನೇ ನೀಡಿದ್ದಾನೆ.
ಅರ್ಜುನ ಇಡೀ ಕನ್ನಡಿಗರಿಗೆ ಚಿರಪರಿಚಿತ, ಏಕೆಂದರೆ ಅವನು ಅಂಬಾರಿ ಹೊತ್ತಿದ್ದರಿಂದ ಎಲ್ಲರಿಗೂ ಅರ್ಜುನ ಆನೆಯ ಮೇಲೆ ಪ್ರೀತಿ ಹೆಚ್ಚು. ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಅರ್ಜುನ ಇನ್ನು ನೆನಪು ಮಾತ್ರ, ತಾಯಿ ಚಾಮುಂಡೇಶ್ವರಿ ಸದ್ಗತಿ ಕರುಣಿಸಲಿ ಎಂಬುವುದೇ ಎಲ್ಲರ ಪ್ರಾರ್ಥನೆ.. nbsp;ಅರ್ಜುನನ ಬಗ್ಗೆ ಮತ್ತಷ್ಟು ಮಾಹಿತಿ* 2012ರಿಂದ 2019ರವರೆಗೆ ಸತತ 8 ಬಾರಿ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ6,040 ಕೆಜಿ ಮೈತೂಕ ಹೊಂದಿದಅರ್ಜುನ 1960ರಲ್ಲಿ ಜನನಅರ್ಜುನನ ನಂತರ ಅಭಿಮನ್ಯು ಅಂಬಾರಿ ಹೊರುತ್ತಿದ್ದಾನೆ."

ಅರ್ಜುನನ ಅಗಲಿಕೆಗೆ CM ಕಂಬನಿ; ಎಚ್ಚರವಹಿಸಲು HDK ಸಲಹೆ ಬೆಂಗಳೂರು:   ಸಕಲೇಶಪುರ ತಾಲ್ಲೂಕಿನ ಯಸಳೂರು ಬಾಳೆಕೆರೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ...
04/12/2023

ಅರ್ಜುನನ ಅಗಲಿಕೆಗೆ CM ಕಂಬನಿ; ಎಚ್ಚರವಹಿಸಲು HDK ಸಲಹೆ
ಬೆಂಗಳೂರು: ಸಕಲೇಶಪುರ ತಾಲ್ಲೂಕಿನ ಯಸಳೂರು ಬಾಳೆಕೆರೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ, ರೆಡಿಯೊ ಕಾಲರ್ ಅಳವಡಿಕೆ ಕಾರ್ಯಾಚರಣೆ ಸಂದರ್ಭದಲ್ಲಿ ಒಂಟಿ ಸಲಗದ ತಿವಿತದಿಂದ ಮೃತಪಟ್ಟ ಅರ್ಜುನನ ಅಕಾಲಿಕ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೈಕ್ರೊ ಬ್ಲಾಗಿಂಗ್ ಎಕ್ಸ್ನ ತಮ್ಮ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಅವರು, ಐತಿಹಾಸಿಕ ಮೈಸೂರು ದಸರಾದ ಕೇಂದ್ರ ಬಿಂದುವಾದ ಜಂಬೂಸವಾರಿಯನ್ನು ಎಂಟು ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟು ಜನರ ಪ್ರೀತಿಗೆ ಪಾತ್ರವಾಗಿದ್ದ ಆನೆ ‘ಅರ್ಜುನ’ ಇನ್ನಿಲ್ಲ ಎಂಬ ಸುದ್ದಿ ಕೇಳಿ ನೋವಾಯಿತು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬರೋಬ್ಬರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು, ಅತ್ಯಂತ ಸಂಯಮದಿಂದ ಮೆರವಣಿಗೆಯಲ್ಲಿ ಸಾಗುವ ಮೂಲಕ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ ಅರ್ಜುನ ಕಾಡಾನೆ ಜೊತೆಗಿನ ಕಾದಾಟದಲ್ಲಿ ಮೃತಪಟ್ಟಿದೆ. ಲಕ್ಷಾಂತರ ಜನರ ನಡುವೆ ಗಾಂಭೀರ್ಯದಿಂದ ಸಾಗುತ್ತಿದ್ದ ಅರ್ಜುನನ ನಡಿಗೆ ನನ್ನಂತಹ ಕೋಟ್ಯಂತರ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಇರಲಿದೆ’ ಎಂದಿದ್ದಾರೆ.
https://twitter.com/CMofKarnataka/status/1731659798800945523


ಅರ್ಜುನನ ಅಗಲಿಕೆಗೆ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರೂ ಬೇಸರ ವ್ಯಕ್ತಪಡಿಸಿದ್ದಾರೆ. ಅವರೂ ಎಕ್ಸ್ ವೇದಿಕೆಯಲ್ಲಿ ಅರ್ಜುನನಿಗೆ ಸಂತಾಪ ಸೂಚಿಸಿದ್ದಾರೆ.
‘ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆಗಳ ಸೆರೆಗೆ ನಡೆಸಿದ ಕಾರ್ಯಾಚರಣೆ ವೇಳೆ ಒಂಟಿ ಸಲಗದ ದಾಳಿಗೆ ತುತ್ತಾಗಿ ಸಾಕಾನೆ ಅರ್ಜುನ ವೀರಮರಣ ಹೊಂದಿದ ಘಟನೆ ತಿಳಿದು ಬಹಳ ನೋವುಂಟಾಯಿತು. ದಸರಾ ಅಂಬಾರಿಯನ್ನು ಹೊತ್ತು ಸಾಗಿದ್ದ ಅರ್ಜುನ ಇನ್ನು ನೆನಪಷ್ಟೇ’ ಎಂದಿದ್ದಾರೆ.
‘ಸ್ಥಳಾಂತರ ಕಾರ್ಯಾಚರಣೆ ವೇಳೆ ಸಾಕಾನೆಗಳು-ಕಾಡಾನೆಗಳ ನಡುವಿನ ಭೀಕರ ಕಾಳಗದ ವೇಳೆ ಇತರೆ ಸಾಕಾನೆಗಳು ಪಲಾಯನ ಮಾಡಿದರೆ, ಅರ್ಜುನ ಮಾತ್ರ ಒಂಟಿ ಸಲಗದ ಜತೆ ವಿರೋಚಿತವಾಗಿ ಸೆಣಸಾಡಿತ್ತು. ಇಂಥ ವಿರೋಚಿತ ಆನೆ ಸಾವನ್ನಪ್ಪಿರುವುದು ಅತ್ಯಂತ ದುಃಖದ ಸಂಗತಿ. ಕಾಡಾನೆಗಳನ್ನು ಸೆರೆ ಹಿಡಿಯುವಾಗ ತಮ್ಮ ಪ್ರಾಣ ರಕ್ಷಣೆಯ ಜತೆಗೆ ವನ್ಯಮೃಗಗಳ ಜೀವಕ್ಕೆ ಹಾನಿ ಆಗದಂತೆ ಅರಣ್ಯ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಲಿ. ಅರ್ಜುನನ ಆತ್ಮಕ್ಕೆ ಚಿರಶಾಂತಿ ಸಿಗಲಿ. ಆ ತಾಯಿ ಚಾಮುಂಡೇಶ್ವರಿ ಸದ್ಗತಿ ಕರುಣಿಸಲಿ’ ಎಂದಿದ್ದಾರೆ.
https://twitter.com/hd_kumaraswamy/status/1731634681605755370

ಕಾಂಗ್ರೆಸ್ ನಮ್ಮನ್ನು ಹೊರಗಿಟ್ಟಾಗ ಮೋದಿ, ಅಮಿತ್ ಶಾ ಸ್ವಾಗತಿಸಿದರು: ಹೆಚ್ಡಿ ದೇವೇಗೌಡ   ಹಾಸನ: ನಮ್ಮನ್ನು ಕಾಂಗ್ರೆಸ್ ಪಕ್ಷ ಹೊರಗಿಟ್ಟಾಗ ಪ್ರ...
04/12/2023

ಕಾಂಗ್ರೆಸ್ ನಮ್ಮನ್ನು ಹೊರಗಿಟ್ಟಾಗ ಮೋದಿ, ಅಮಿತ್ ಶಾ ಸ್ವಾಗತಿಸಿದರು: ಹೆಚ್ಡಿ ದೇವೇಗೌಡ

ಹಾಸನ: ನಮ್ಮನ್ನು ಕಾಂಗ್ರೆಸ್ ಪಕ್ಷ ಹೊರಗಿಟ್ಟಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ವಾಗತ ಮಾಡಿದರು ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಹೇಳಿದರು.
ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈ ಬಗ್ಗೆ ಕಾಂಗ್ರೆಸ್ ದಳವನ್ನು ಟೀಕಿಸುತ್ತಿದೆ.
ಈ ನಡುವೆ, ಕಾಂಗ್ರೆಸ್ ಜೊತೆಗಿನ ಸಂಬಂಧ ಕಡಿದುಕೊಂಡಿದ್ದರ ಬಗ್ಗೆ ಹಾಸನದಲ್ಲಿ ಸ್ಪಷ್ಟನೆ ನೀಡಿದ ದೇವೇಗೌಡ, ನಮ್ಮ ಪಕ್ಷ ಜಾತ್ಯತೀತ ಜನತಾದಳ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದಾಗ ರಾಷ್ಟ್ರದ ಎಲ್ಲಾ ಜಾತ್ಯಾತೀತ ಪಕ್ಷಗಳ ಮುಖಂಡರು ಬಂದಿದ್ದರು. ಆದರೆ ನಮ್ಮನ್ನ ಹೊರಗೆ ಇಡಲೇಬೇಕೆಂದು ತೀರ್ಮಾನ ಮಾಡಿದ್ದು ಯಾರು? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಸರ್ಕಾರ ತೆಗೆದವರು ಯಾರು? ಯಾರು ನಮ್ಮನ್ನು ಹೊರಗಿಡಬೇಕೆಂದು ಪ್ರಯತ್ನ ಮಾಡಿದರೋ ಅವರೇ ಸರ್ಕಾರ ಕೆಡವಿದರು. ನಮ್ಮನ್ನು ಹೊರಗೆ ದೂಡಿದ್ದು ಕಾಂಗ್ರೆಸ್. ನಮ್ಮನ್ನು ಹೊರಗಿಟ್ಟಾಗ ಮೋದಿ ಮತ್ತು ಶಾ ನಮ್ಮನ್ನ ಸ್ವಾಗತ ಮಾಡಿದರು ಎಂದು ದೇವೇಗೌಡ ಹೇಳಿದರು.
ಜೆಡಿಎಸ್ ಲೆಕ್ಕಕ್ಕೆ ಇಲ್ಲ, ಆಟಕ್ಕೆ ಇಲ್ಲ, ಕೆಲವೇ ದಿನದಲ್ಲಿ ಅದು ಇರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಲಘುವಾಗಿ ಮಾತನಾಡಿದ್ದಾರೆ. ಮೋದಿಯವರು ಪ್ರಧಾನಿಯಾಗಿ ವೈಯಕ್ತಿಕವಾಗಿ ನನ್ನ ಬಗ್ಗೆ ಗೌರವ ಹೊಂದಿದ್ದಾರೆ. ಕಾಂಗ್ರೆಸ್ ನಡವಳಿಕೆಯನ್ನು ಗಮನಿಸಿದ ಮೋದಿ, ಶಾ ನಮ್ಮನ್ನ ಸ್ವಾಗತ ಮಾಡಿದ್ದಾರೆ. ಮುಂದಿನ ರಾಜಕೀಯ ಬೆಳವಣಿಗೆ ಹಾಗೂ ಕರ್ನಾಟಕದಲ್ಲಿ ನಾವು ಬಿಜೆಪಿ ಜೊತೆ ಕೈ ಜೋಡಿಸುತ್ತೇವೆ ಎಂದರು.
ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ ಇದರಲ್ಲಿ ಮುಚ್ಚುಮರೆ ಇಲ್ಲ. ನಮ್ಮ ಪಕ್ಷ ಉಳಿಬೇಕು, ಜನತಾ ಪರಿವಾರ ಆರಂಭವಾದಾಗಿಂದ ಉಳಿಸಿಕೊಂಡು ಬಂದಿದ್ದೇವೆ. ರೈತರ, ಬಡವರ ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿದ್ದೇವೆ. ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು ಯಾರು? ಎಂದು ಕೇಳಿದರು.
ಈ ಪಕ್ಷವನ್ನು ಮುಗಿಸೇ ಬಿಡುತ್ತೇವೆ ಎಂದಾಗ ಮೋದಿಯವರು ನಮಗೆ ಒಂದು ಅವಕಾಶ ಮಾಡಿಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರು ಮುಂದಿನ ದಿನಗಳಲ್ಲಿ ಪ್ರಧಾನಿ, ಗೃಹ ಸಚಿವರು, ಬಿಜೆಪಿ ಅಧ್ಯಕ್ಷರ ಜೊತೆ ಚರ್ಚೆ ಮಾಡುತ್ತಾರೆ. ಅಂತಿಮವಾಗಿ ಲೋಕಸಭಾ ಚುನಾವಣೆ ಬಗ್ಗೆ ನಿರ್ಣಯ ಮಾಡುತ್ತಾರೆ. ನಾವು 28 ಸ್ಥಾನಗಳಿಗೆ ಸ್ಪರ್ಧೆ ಮಾಡಲು ಐಕ್ಯತೆಯಿಂದ ಒಮ್ಮತದ ನಿರ್ದಾರಕ್ಕೆ ಬರುತ್ತೇವೆ ಎಂದರು.
ಮುಂದಿನವಾರ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಕರೆಯಬಹುದು. ಆಗ ಕುಮಾರಸ್ವಾಮಿ ಹೋಗಿ ಮಾತುಕತೆ ಮುಗಿಸುತ್ತಾರೆ. ಮುಂದಿನ ವಾರ ಜೆಡಿಎಸ್ ಬಿಜೆಪಿ ಚುನಾವಣಾ ಮೈತ್ರಿ ಬಗ್ಗೆ ಅಂತಿಮ ಮಾತುಕತೆ ನಡೆಯಬಹುದು ಎಂದರು.
ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದೆ. ಆದರೆ ವಾಸ್ತವ ಮರೆಮಾಚಲು ಆಗಲ್ಲ. ರಾಹುಲ್ ಗಾಂಧಿ ಅವರು ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ಗೆ ಕರ್ನಾಟಕದಲ್ಲಿ 136 ಗೆದ್ದೆವು ಎನ್ನುವ ಅಹಂ ಇತ್ತು. ಅದರ ವಿರುದ್ಧ ಹೋರಾಟ ಮಾಡುವ ಶಕ್ತಿ ಮೋದಿಯವರ ನಾಯಕತ್ವದಲ್ಲಿ ಜೆಡಿಎಸ್ ಸಹಕಾರದಿಂದ ಹೋರಾಟ ಮಾಡುತ್ತೇವೆ ಎಂದರು.
ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸಿಎಂ ಆಗಿ ಲೂಟಿ ಮಾಡಿ ಯಾರಿಗಾದರು ಹಣ ಕೊಟ್ಟರಾ? ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ಮಾಡಿದರು, ದೆಹಲಿಯಲ್ಲಿ ಯಾರಿಗಾದರು ಹಣ ಕೊಟ್ಟರಾ? ನಾನು ಸಿಎಂ ಆಗಿ ಕೆಲಸ ಮಾಡಿದೆ, ಯಾರಿಗಾದರು ಹಣ ಕೊಟ್ಟಿದ್ದೇನಾ? ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ತೆಲಂಗಾಣದಲ್ಲಿ ಚುನಾವಣೆ ಗೆಲ್ಲಲು ಎಷ್ಟು ಹಣ ಇಲ್ಲಿಂದ ಹೋಗಿದೆ? ಚುನಾವಣಾ ಆಯೋಗ ಎಷ್ಟು ಹಣ ಜಪ್ತಿ ಮಾಡಿದೆ? ಎಂದು ಪ್ರಶ್ನಿಸಿದ ದೇವೇಗೌಡರು, ತೆಲಂಗಾಣದಲ್ಲಿ ಕಾಂಗ್ರೆಸ್ ಕರ್ನಾಟಕದ ಹಣ ಹಂಚಿ ಗೆದ್ದಿದೆ ಎಂದು ಟೀಕಿಸಿದರು.

ಭವಾನಿ ಸಿಟ್ಟಾಗಿ ಮಾತನಾಡಿದ್ದಾರೆ; ಪತ್ನಿ ವರ್ತನೆಯಿಂದ ನೋವಾಗಿದ್ದರೆ ರಾಜ್ಯದ ಜನರ ಕ್ಷಮೆ ಕೇಳುತ್ತೇನೆ - ಎಚ್ಡಿ ರೇವಣ್ಣ ಬೆಳಗಾವಿ: ಅಪಘಾತದ ಸಂ...
04/12/2023

ಭವಾನಿ ಸಿಟ್ಟಾಗಿ ಮಾತನಾಡಿದ್ದಾರೆ; ಪತ್ನಿ ವರ್ತನೆಯಿಂದ ನೋವಾಗಿದ್ದರೆ ರಾಜ್ಯದ ಜನರ ಕ್ಷಮೆ ಕೇಳುತ್ತೇನೆ - ಎಚ್ಡಿ ರೇವಣ್ಣ
ಬೆಳಗಾವಿ: ಅಪಘಾತದ ಸಂದರ್ಭದಲ್ಲಿ ಭವಾನಿ ರೇವಣ್ಣ ವರ್ತನೆಗೆ ಮಾಜಿ ಸಚಿವ ಎಚ್ಡಿ ರೇವಣ್ಣ ಅವರು ಕ್ಷಮೆ ಕೋರಿದ್ದಾರೆ. ಸುವರ್ಣಸೌಧದಲ್ಲಿ ಸೋಮವಾರ ಮಾತನಾಡಿ, ಪತ್ನಿ ವರ್ತನೆಯ ಬಗ್ಗೆ ಯಾರಿಗಾದರೂ ನೋವಾದರೆ ಕ್ಷಮೆ ಕೋರುತ್ತೇನೆ ಎಂದರು.
" ಬೈಕ್ ಸವಾರ ಕುಡಿದು ಬೈಕ್ ಓಡಿಸಿದ್ದ. ನಾವೇನು ಅವರ ಬಳಿ ಡ್ಯಾಮೇಜ್ ಹಣ ಕೊಡಿ ಎಂದು ಕೇಳಲಿಲ್ಲ. ಏನಾದರೂ ಹೆಚ್ಚು ಕಮ್ಮಿ ಆಗಿದ್ರೆ ಯಾರು ಹೊಣೆ? ಬೇಕಾದರೆ ಭವಾನಿ ರೇವಣ್ಣ ಅವರಿಂದಲೂ ಕ್ಷಮೆ ಕೇಳಿಸುತ್ತೇನೆ. ಸಿಟ್ಟಾಗಿ ಭವಾನಿ ಮಾತನಾಡಿದ್ದಾರೆ " ಎಂದರು.
ಹೆಚ್ಚು ಕಡಿಮೆ ಆಗಿದ್ದರೆ ಏನಾಗುತ್ತಿತ್ತು?
ಬೈಕ್ ಅವನೇ ಬಂದು ಸೈಡ್ ನಿಂದ ಕಾರಿಗೆ ಗುದ್ದಿದ್ದಾನೆ. ಹೆಚ್ಚು ಕಡಿಮೆ ಆಗಿದ್ದರೆ ಏನಗಾಗುತ್ತಿತ್ತು? ಅವರು ಏನೂ ಅಹಂಕಾರ ಮಾಡಿಲ್ಲ. ಭವಾನಿ ಅವರು ಯಾರದ್ದೋ ಸ್ನೇಹಿತನ ಕಾರಿನಲ್ಲಿ ಹೋಗಿದ್ದರು. ಅವರು ಸಿಟ್ಟನಲ್ಲಿ ಮಾತನಾಡಿದ್ದಾರೆ ಎಂದರು.

ನಮ್ಮಕುಟುಂಬ ಯಾರಿಗೂ ನೋವು ಆಗುವ ಕೆಲಸ ಮಾಡಲ್ಲ. ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಏನಾಗುವುದು? ಅದನ್ನು ಬೇಕಂತಲೇ ಯಾರೋ ವೈರಲ್ ಮಾಡಿದ್ದಾರೆ. ಅವರು ಬೈಕ್ನವನ ಪ್ರಾಣದ ಬಗ್ಗೆ ಮಾತನಾಡಿಲ್ಲ. ಇವರದ್ದೇ ಪ್ರಾಣ ಹೋಗಿದ್ದರೆ ಏನು ಮಾಡುವುದು? ಎಂದು ಪ್ರಶ್ನಿಸಿದರು.

ಭವಾನಿ ಯಾವತ್ತೂ ಯಾರಿಗೂ ನೋವು ಮಾಡಿಲ್ಲ
ಈ ಘಟನೆಯಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಭವಾನಿ ಯಾವತ್ತೂ ಯಾರಿಗೂ ನೋವು ಮಾಡಿಲ್ಲ. ಸ್ನೇಹಿತರ ಕಾರು ಅಂತ ಹಾಗೇ ಮಾಡಿದ್ದಾರೆ. ನಮ್ಮ ಕುಟುಂಬ ಆ ತರ ಇಲ್ಲ. ಗಾಡಿ ಅವಘಡ ಆದ ಮೇಲೆ ದೂರು ಕೊಡದಿದ್ದರೆ ತಪ್ಪಾಗಲ್ಲವಾ? ಎಂದು ಪ್ರಶ್ನಿಸಿದರು.
ದೊಡ್ಡ ವಿಚಾರ ಮಾಡಬೇಡಿ ಎಂದು ರೇವಣ್ಣ ಮನವಿ
ಘಟನೆ ನಡೆದ ಬಳಿಕ ಠಾಣೆಗೆ ತಿಳಿಸಬೇಕಲ್ಲವಾ? ಯಾರಿಗಾದರೂ ನೋವಾಗಿದ್ದರು ವಿಷಾದ ವ್ಯಕ್ತಪಡಿಸುತ್ತೇನೆ. ಅವರು ಕುಡಿದು ಬಂದು ಮುಂದೆನೇ ಗುದ್ದಿದ್ದಾರೆ. ಕಾರಿನಲ್ಲಿದ್ದವರ ಪ್ರಾಣಕ್ಕೆ ತೊಂದರೆ ಆಗಿದ್ದರೆ? ಎಷ್ಟೇ ನಿಧಾನವಾಗಿ ಹೋಗಿದ್ದರು ಬಂದು ಮಧ್ಯದಲ್ಲಿ ಗುದ್ದಿದ್ದಾನೆ. ಅದನ್ನು ದೊಡ್ಡ ವಿಚಾರ ಮಾಡಬೇಡಿ ಎಂದು ಮನವಿ ಮಾಡಿದರು. ಅವರ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

ಏನಿದು ಘಟನೆ?
ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಅವರು ಸಂಚರಿಸುತ್ತಿದ್ದ ಕಾರು ಡಿಸೆಂಬರ್ 3 (ಭಾನುವಾರ) ಮೈಸೂರಿನ ಸಾಲಿಗ್ರಾಮದ ಬಳಿ ಅಪಘಾತಕ್ಕೀಡಾಗಿತ್ತು. ವಿರುದ್ಧ ಮಾರ್ಗದಲ್ಲಿ ಬಂದಿದ್ದ ಬೈಕ್ ಸವಾರರು ಕಾರಿಗೆ ಡಿಕ್ಕಿ ಹೊಡೆದಿದ್ದರು. ಇದರಿಂದ ಕೋಪಗೊಂಡಿದ್ದ ಭವಾನಿ ರೇವಣ್ಣ ಅವರು ಬೈಕ್ ಸವಾರನ ಮೇಲೆ ಅವ್ಯಾಚ ಪದಗಳಿಂದ ಬೈದು ಗಲಾಟೆ ಮಾಡಿದ್ದರು. ಅಪಘಾತದ ಬಳಿಕ ಬೈಕ್ ಸವಾರನ ಆರೋಗ್ಯವನ್ನು ವಿಚಾರಿಸದೇ ಹರಿಹಾಯ್ದಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ನೆಟ್ಟಿಗರು ಭವಾನಿ ರೇವಣ್ಣ ಅವರ ವರ್ತನೆಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು.

Address

Hassan

Alerts

Be the first to know and let us send you an email when ಹಾಸನ ಎಕ್ಸ್ ಪ್ರೆಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಹಾಸನ ಎಕ್ಸ್ ಪ್ರೆಸ್:

Videos

Share


Other Media/News Companies in Hassan

Show All

You may also like