ಕಾರಿಗೆ ಗುದ್ದಿದ ಬೈಕ್.. ಸವಾರನಿಗೆ ಭವಾನಿ ರೇವಣ್ಣ ಫುಲ್ ಆವಾಜ್..
ಹಾಸನ ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಮಾಜಿ ಸಚಿವ ರೇವಣ್ಣ ನೇತೃತ್ವದಲ್ಲಿ ಡಿಸಿ ಕಛೇರಿ ಎದುರು ಪ್ರತಿಭಟನೆ
ಮನವಿ ನೀಡಲು ಡಿಸಿ ಚೇಂಬರ್ಗೆ ಬಂದ ರೇವಣ್ಣ
ಮನವಿ ನೀಡಲು ಬಂದ ವೇಳೆ ಕಂದಾಯ ಸಚಿವರ ವಿಸಿಯಲ್ಲಿ ಭಾಗಿಯಾಗಿದ್ದ ಡಿಸಿ ಸಿ.ಸತ್ಯಭಾಮ
ಡಿಸಿ ಬರೋದು ತಡವಾಗುತ್ತಿದೆ ಎಂದು ವಿಸಿ ಹಾಲ್ಗೇ ಬಂದ ರೇವಣ್ಣ
ಕೊಬ್ಬರಿ ತುಂಬಿದ್ದ ಕವರ್, ಚೀಲ ಹಿಡಿದು ವಿಸಿ ಸಭಾಂಗಣಕ್ಕೆ ಬಂದ ರೇವಣ್ಣ
ವಿಸಿಯಲ್ಲೇ ಬಂದು ನಮ್ ಸಮಸ್ಯೆ ನೋಡಿ ಎಂದು ವಿವರಿಸಿದ ಎಚ್.ಡಿ.ರೇವಣ್ಣ
ರೇವಣ್ಣ ಅವರೇ ವಿಸಿ ಹಾಲ್ಗೆ ಬಂದ ಬಳಿಕ ವಿಸಿ ಬಿಟ್ಟು ಹೊರ ಬಂದ ಡಿಸಿ
ಬಳಿಕ ಡಿಸಿ ಚೇಂಬರ್ನಲ್ಲಿ ಮನವಿ ಸ್ವೀಕಾರ ಮಾಡಿದ ಡಿಸಿ
ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಮಾಜಿ ಸಚಿವ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಡಿಸಿ ಕಛೇರಿ ಎದುರು ಪ್ರತಿಭಟನೆ
ತೆಂಗಿನಕಾಯಿ, ಕೊಬ್ಬರಿ ಸುರಿದು ಪ್ರತಿಭಟನೆ
ಮನವಿ ನೀಡಲು ಡಿಸಿ ಚೇಂಬರ್ಗೆ ತೆರಳಿದ್ದ ರೇವಣ್ಣ
ಈ ವೇಳೆ ಕೊಬ್ಬರಿ, ತೆಂಗಿನಕಾಯಿಗಳನ್ನು ತುಂಬಿಕೊಂಡು ಹೋದ ಜನರು
ಡಿಸಿ ಕಚೇರಿ
ಎತ್ತಿನಹೊಳೆ: ಮತ್ತೆ ಸೋರಿಕೆ
- 13 ಮನೆಗಳಿಗೆ ನುಗ್ಗಿದ ನೀರು: ಗ್ರಾಮಸ್ಥರ ಪ್ರತಿಭಟನೆ
ಸಕಲೇಶಪುರ: ಎತ್ತಿನಹೊಳೆ ಯೋಜನೆ ಪೈಪ್ಲೈನ್ನಲ್ಲಿ ಶನಿವಾರ ಮತ್ತೆ ಭಾರಿ ಪ್ರಮಾಣದ ನೀರು ಪ್ರವಾಹದಂತೆ ಉಕ್ಕಿ ಹರಿದಿದ್ದು. 13 ಮನೆ, ರಸ್ತೆ, ಕಾಫಿ ತೋಟಗಳಿಗೆ ಹಾನಿ ಉಂಟಾಗಿದೆ.
ಯೋಜನೆಯ ಕಾಡಮನೆ ಚೆಕ್ಡ್ಯಾಂ 4 ಮತ್ತು 5ರಿಂದ ಪರೀಕ್ಷಾರ್ಥವಾಗಿ ಶನಿವಾರ ಮಧ್ಯಾಹ್ನ ಹರಿಸಿದ ನೀರು, ತಾಲ್ಲೂಕಿನ ಹಾರ್ಲೆ ಕೂಡಿಗೆ ಬಳಿ ಹಳ್ಳಿಮನೆ ಗ್ರಾಮದಲ್ಲಿ ಪ್ರವಾಹ ಸೃಷ್ಟಿಸಿತ್ತು. ನೀರು ರಭಸವಾಗಿ ಮನೆಯೊಳಕ್ಕೆ ನುಗ್ಗಿತ್ತು. ಮನೆ ಮುಂದೆ ಬಿಸಿಲಿಗೆ ಒಣಗಲು ಹಾಕಿದ್ದ ಕಾಫಿ ಬೀಜಗಳು ಕೊಚ್ಚಿಹೋದವು. ಹೂವಿನ ಕುಂಡಗಳು, ಅಂಗಳದಲ್ಲಿದ್ದ ಎಲ್ಲ ವಸ್ತುಗಳು, ನೀರಿನೊಂದಿಗೆ ತಗ್ಗು ಪ್ರದೇಶದತ್ತ ಹೋಗಿದ್ದವು.
ಎರಡು ಗಂಟೆ ರಭಸವಾಗಿ ನೀರು ನುಗ್ಗಿದ್ದರಿಂದ ಮನೆಗಳ ಗೋಡೆಗಳಿಗೆ, ತಳಪಾಯಕ್ಕೆ ಹಾನಿಯಾಗಿರುವುದು ಕಂಡುಬಂದಿದೆ. ಎಚ್.ಸಿ. ಮೋಹನ್ ಎಂಬವರು ಮರದ ಕೆಲಸ ಮಾಡುವ ಯಂತ್ರಗಳು, ಮರದ ನಾಟಾಗಳು, ಪೀಠೋಪಕರಣಗಳು ನೀರಿನಲ್ಲಿ ಮುಳುಗಿದ್ದು, ಲಕ್ಷಾಂತರ ರೂಪಾ
ಕಾಂಗ್ರೆಸ್ ವಿರುದ್ಧ ಹೋರಾಡಲು ಮೈತ್ರಿ, ಹಾಸನದಿಂದ ಪ್ರಜ್ವಲ್ ಸ್ಪರ್ಧೆ: ದೇವೇಗೌಡ
ಹಾಸನ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರೇ ಸ್ಪರ್ಧೆ ಮಾಡಲಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಘೋಷಣೆ ಮಾಡಿದರು.
ಈ ಮೂಲಕ ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಹೊಳೆನರಸೀಪುರ ತಾಲ್ಲೂಕಿನ ಕಟ್ಟೆಬೆಳಗುಲಿ ಶ್ರೀರಾಮದೇವರ ಕಟ್ಟೆಯಲ್ಲಿ ಶುಕ್ರವಾರ ನಡೆದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಒಟ್ಟಾಗಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲು ತೀರ್ಮಾನ ಮಾಡಿದ್ದೇವೆ. ಪ್ರಜ್ವಲ್ ರೇವಣ್ಣ ಅವರೇ ಮರು ಸ್ಪರ್ಧೆ ಮಾಡಲಿದ್ದಾರೆ’ ಎಂದರು.
ದೇಶದ ದೊಡ್ಡ ವ್ಯಕ್ತಿಯಾಗಿ ಬೆಳೆದಿರುವ ಮೋದಿ ಅವರೊಂದಿಗೆ ಜೆಡಿಎಸ್ ಸೇರಿದ್ದು, ಅಸೂಯೆ, ಟೀಕೆ ಮಾಡದೇ ಬಿಜೆಪಿ ಜೊತೆ ಸೇರಿ ಒಟ್ಟಾಗಿ ಕೆಲಸ ಮಾಡೋಣ. ಹಾಸನದ ಹಾಲಿ ಸಂಸದರನ್ನು ಗೆಲ್ಲಿಸಲು ಶ್
ಅಂದು ಕೊಂಡಿದ್ದೇ ಬೇರೆ ಆಗಿದ್ದೇ ಬೇರೆ....
ಅತ್ತೆಯ ಮಗಳನ್ನು ಅಪಹರಣ ಮಾಡಿ ಈಗ ಪೊಲೀಸರ ಅತಿಥಿಯಾಗಿರುವ ರಾಮು, ಅಂದು ಕೊಂಡಿದ್ದೇ ಬೇರೆ, ನಂತರ ಆಗಿದ್ದೇ ಬೇರೆ ಎಂಬುದು ಇದೀಗ ಬಯಲಾಗಿದೆ.
ಕೆಲ ದಿನಗಳ ಹಿಂದೆ ಅರ್ಪಿತಾಳನ್ನು ಮದುವೆ ಮಾಡಿಕೊಡಿ ಎಂದು ಆಕೆಯ ಪೋಷಕರ ಬಳಿ ಕೇಳಲು ಹೋಗಿದ್ದ. ಆಗ ಹುಡುಗಿ ಸೇರಿ ಎಲ್ಲರೂ ನಿರಾಕರಿಸುತ್ತಿದ್ದಂತೆಯೇ ಹೇಗಾದರೂ ಆಕೆಯನ್ನೇ ಮದುವೆ ಆಗಬೇಕು ಎಂದು ನಿರ್ಧರಿಸಿದ. ಇದಕ್ಕಾಗಿ ಕೆಲ ಸ್ನೇಹಿತರನ್ನು ತನ್ನೊಂದಿಗೆ ಜೊತೆ ಮಾಡಿಕೊಂಡು ಅರ್ಪಿತಾಳನ್ನು ಅಪಹರಣ ಮಾಡಿ ತಾಳಿ ಕಟ್ಟಲು ನಿರ್ಧರಿಸಿದ. ಎಲ್ಲವೂ ಅಂದುಕೊಂಡಂತೆ ನಡೆದು ನಿನ್ನೆ ಬೆಳಗ್ಗೆ ಕಿಡ್ನ್ಯಾಪ್ ಮಾಡಿಯೇ ಬಿಟ್ಟರು.
ನಂತರದಲ್ಲಿ ಎಲ್ಲಾ ಉಲ್ಟಾ ಹೊಡೆಯಿತು. ಅಪಹರಣ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಎಸ್ಪಿ ಅವರ ಸೂಚನೆ ಮೇರೆಗೆ ನಗರಠಾಣರ ಇನ್ಸ್ ಪೆಕ್ಟರ್ ಮೋಹನ್ ಕೃಷ್ಣ, ಪಿಎಸ್ ಐ ಕುಮಾರ್ ಮತ್ತವರ ತಂಡ ಕಾರನ್ನು ಬೆನ್ನಟ್ಟಿತು. ಕಿಡ್ನ್ಯಾಪ್ ಮಾಡುವಾಗ ಇದ್ದ ಇನ್ನೋವಾ ಕಾರಿನ ಜೊತೆ ಮಾರ್ಗ ಮಧ್ಯೆ ಮತ್ತೊಂದು ಕಾರಿನಲ್ಲಿ ಇನ್
ಮದುವೆಗೆ ನಿರಾಕರಣೆ
ಶಿಕ್ಷಕಿ ಅಪಹರಿಸಿ ಯುವಕ ಅಂಡ್ ಟೀಂ ಪರಾರಿ
ಹಾಸನ: ಮದುವೆಯಾಗಲು ನಿರಾಕರಿಸಿದರು ಎಂಬ ಕಾರಣ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಯುವತಿಯನ್ನು ಸಿನಿಮೀಯ ರೀತಿಯಲ್ಲಿ ಕಾರಿನಲ್ಲಿ ಅಪಹರಿಸಿ ಪರಾರಿಯಾಗಿರುವ ಘಟನೆ ನಗರದ ಹೊರ ವಲಯದ ಬಿಟ್ಟಗೌಡನಹಳ್ಳಿ ಬಳಿ ಇಂದು ಬೆಳ್ಳಂ ಬೆಳಿಗ್ಗೆ
ನಡೆದಿದೆ. ಅರ್ಪಿತಾ ಅಪಹರಣಕ್ಕೆ ಒಳಗಾಗಿರುವ ಶಿಕ್ಷಕಿ.ಈ ಬೆಳವಣಿಗೆ ಯುವತಿ ಪೋಷಕರಲ್ಲಿ ಆತಂಕ ತರಿಸಿದ್ದರೆ, ನೆರೆ ಹೊರೆಯವರನ್ನು ಅಕ್ಷರಶಃ ಬೆಚ್ಚಿ ಬೀಳಿಸಿದೆ.
ಸಂಬಂಧಿಕನಿಂದಲೇ ಕೃತ್ಯ:
ಅರ್ಪಿತಾಳ ಹತ್ತಿರದ ಸಂಬಂಧಿಯೂ ಆಗಿರುವ ರಾಮು ಎಂಬಾತ ತನ್ನ ಪೋಷಕರನ್ನು ಕರೆದುಕೊಂಡು ಅರ್ಪಿತಾ ಮನೆಗೆ ಹೋಗಿ ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ ಎಂದು ಕೇಳಿದ್ದ.ಮದುವೆ ಪ್ರಸ್ತಾಪಕ್ಕೆ ಯುವತಿ ಹಾಗೂ ಮನೆಯವರು ಸುತಾರಾಂ ನಿರಾಕರಿಸಿ, ನಾವು ಮದುವೆ ಮಾಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರು.
ಅರ್ಪಿತಾ ಹಾಗೂ ಮನೆಯವರು ಮದುವೆಗೆ ಒಪ್ಪದ ಹಿನ್ನೆಲೆ ಇಂದು ಬೆಳಗ್ಗೆ
ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು ಪಕ್ಕಾ ಪ್
ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣಕ್ಕೆ ಇಂದು ಡಿಸಿ ಆಗಮಿಸಿದ್ದು, ಈ ವೇಳೆ ಸಕಲೇಶಪುರ ಪುರಸಭೆ ನಿರ್ವಹಣೆ ಮಾಡುತ್ತಿರುವ ಸುಭಾಷ್ ಮೈದಾನಕ್ಕೆ ದಿಢೀರ್ ಭೇಟಿ ನೀಡಿದ ಪರಿಶೀಲನೆ ನಡೆಸಿದರು. ಮೈದಾನದಲ್ಲಿ ಅವ್ಯವಸ್ಥೆ ಕಂಡು ಸಕಲೇಶಪುರ ಪುರಸಭೆ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಗರಂ ಆದರು.ಸ್ವಚ್ಛತೆ ಕಾಪಾಡದ, ಮೂಲಭೂತ ಸೌಕರ್ಯ ಕಲ್ಪಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮೈದಾನದಲ್ಲಿ ಕಸದ ರಾಶಿ ಬಿದ್ದಿದೆ, ಥೂ ಥೂ ಥೂ, ನೀವೆಲ್ಲಾ ಏನು ಮಾಡುತ್ತಿದ್ದೀರಾ, ಇದು ಕಂದಾಯ ಇಲಾಖೆಗೆ ಸೇರಿದ ಜಾಗ. ಪುರಸಭೆಯವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಅನೇಕ ಕಾರ್ಯಕ್ರಮಗಳು ಈ ಮೈದಾನದಲ್ಲಿ ನಡೆಯುತ್ತದೆ. ಇಡೀ ಮೈದಾನ ಅನೈರ್ಮಲ್ಯತೆಯಿಂದ ಕೂಡಿದೆ. ಕೂಡಲೇ ಈ ಜಾಗವನ್ನು ಕಂದಾಯ ಇಲಾಖೆ ವಶಕ್ಕೆ ಪಡೆಯಿರಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಹೆಚ್ಚಾಯ್ತು ಕಾಡಾನೆ ಹಾವಳಿ
ಅರಣ್ಯ ಇಲಾಖೆ ಸಿಬ್ಬಂದಿಗಳನ್ನೇ ಬೆನ್ನಟ್ಟಿ ಹೋದ ಕಾಡಾನೆ
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿಕ್ಕಬಿಕ್ಕೋಡು ಗ್ರಾಮದ ಬಳಿ ಘಟನೆ
ಇಟಿಎಫ್ ಹಾಗೂ ಆರ್ ಆರ್ ಟಿ ಸಿಬ್ಬಂದಿಗಳನ್ನ ಅಟ್ಟಿಸಿಕೊಂಡು ಹೋದ ಕಾಡಾನೆ
ರಸ್ತೆ ದಾಟುವಾಗ ಜನರಿಗೆ ರಕ್ಷಣೆ ನೀಡೋದಕ್ಕೆ ಅಂತಾ ನಿಂತಿದ್ದ ಸಿಬ್ಬಂದಿಗಳು
ಅವರನ್ನ ಕಂಡು ಸ್ವಲ್ಪ ದೂರ ಬೆನ್ನಟ್ಟಿ ಹೋದ ಒಂಟಿ ಸಲಗ
ಸ್ಥಳದಿಂದ ಓಡಿ ತಮ್ಮ ಪ್ರಾಣ ಉಳಿಸಿಕೊಂಡ ಸಿಬ್ಬಂದಿಗಳು ಹಾಗೂ ಜನರು
ನಿತ್ಯವೂ ಹೆಚ್ಚಾದ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ
ಕಾಡಾನೆಗಳಿಂದ ಶಾಶ್ವತ ಪರಿಹಾರಕ್ಕಾಗಿ ಒತ್ತಾಯ ಮಾಡ್ತಿರೋ ಜನ
ಹಾಸನ : ವಾಸ ಮನೆಯೊಳಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ
ಹೊತ್ತಿ ಉರಿದ ಮನೆ, ಮನೆಯಲ್ಲಿದ್ದ ವಸ್ತಗಳಿಗೆ ಹಾನಿ
ಅಪಾರ ಪ್ರಮಾಣದ ನಷ್ಟ, ಕಂಗಾಲಾದ ಬಡ ಕುಟುಂಬ
ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು
ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಬಾಣಾವರ ಹೋಬಳಿ, ಚಿಕ್ಕಣ್ಣನ ಕೊಪ್ಪಲು ಗ್ರಾಮದಲ್ಲಿ ಘಟನೆ
ಯಶೋದಮ್ಮ ಎಂಬುವವರಿಗೆ ಸೇರಿದ ಮನೆ
ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಹೊತ್ತಿಕೊಂಡ ಬೆಂಕಿ
ಮಗನ ಮದುವೆಗೆ ಎಂದು ತಂದಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ, ಬಟ್ಟೆಗಳು ಬೆಂಕಿಗಾಹುತಿ
ಸುಟ್ಟು ಕರಕಲಾದ ಮನೆಯ ಪೀಠೋಪಕರಣ, ಆಹಾರ ಪದಾರ್ಥಗಳು
ಯಶೋದಮ್ಮ ನಿನ್ನೆ ರಾತ್ರಿ ಸಂಘದ ಹಣವನ್ನು ಕಟ್ಟಲು ಹೋಗಿದ್ದ ವೇಳೆ ಅವಘಡ
ಮನೆಯಲ್ಲಿದ್ದ ಮಕ್ಕಳನ್ನು ಪಕ್ಕದ ಮನೆಗೆ ಬಿಟ್ಟು ತೆರಳಿದ್ದ ಯಶೋದಮ್ಮ
ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಹಾಸನ.
ಹಾಸನದಲ್ಲಿ ವರುಣಾರ್ಭಟ
ಅರ್ಧ ಗಂಟೆಯಿಂದ ಸುರಿಯುತ್ತಿರೋ ಭರ್ಜರಿ ಮಳೆ
ಗಳಿ ಸಹಿತ ಮಳೆಗೆ ಜನಜೀವನ ಅಸ್ತವ್ಯಸ್ತ
ಹಾಸನಾಂಬೆ ದೇವಿ ದರ್ಶನಕ್ಕೂ ಮಳೆ ಅಡ್ಡಿ
ಮಳೆ ಹಿನ್ನಲೆ ಸರತಿ ಸಾಲಿನಲ್ಲಿದ್ದ ಭಕ್ತರ ಪರದಾಟ
ದೇವಾಲಯದ ಆವರ ಜಲಾವೃತ್ತ
ರಾಜಗೋಪುರದ ಮುಂಭಾಗದಲ್ಲಿ ನಿಂತ ನೀರು
ಮಳೆಯಲ್ಲಿ ದರ್ಶನ ಪಡೆಯಲು ಭಕ್ತರ ಹರಸಾಹಸ
ಬೆಂಗಳೂರಿಗೆ ಪಾದಯಾಥ್ರೆ ಹೊರಟ ರೈತರು
ಅರಸೀಕೆರೆ: ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಮತ್ತು ಕೊಬ್ಬರಿಗೆ ಬೆಂಬಲ ಬೆಲೆ ನೀಡಬೇಕು ಸೆರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಯೋಜಿಸಿರುವ ಅರಸೀಕೆರೆಯಿಂದ ಬೆಂಗಳೂರು ವಿಧಾನಸೌಧದವರೆಗಿನ ಪಾದಯಾತ್ರೆ ಮಂಗಳವಾರ ಅರಸೀಕೆರೆಯಿಂದ ಆರಂಭವಾಯಿತು. ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಿರುವ ಅರಸೀಕೆರೆಯಿಂದ ಬೆಂಗಳೂರುವರೆಗೆ ನಡೆಯುತ್ತಿರುವ ಪಾದಯಾತ್ರೆ ಯಲ್ಲಿ ನೂರಾರು ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದಾರೆ.
ಇಂದು ಆರಂಭವಾಗಿರುವ ಪಾದಯಾತ್ರೆಯು ಅ.4ರಂದು ಬೆಂಗಳೂರು ತಲುಪಲಿದ್ದು, ಅಂದು ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ.
ದರ ಕುಸಿತದಿಂದ ಕೊಬ್ಬರಿ ಮತ್ತು ತೆಂಗಿನ ಕಾಯಿಗೆ ಬೆಲೆ ಇಲ್ಲದಂತಾಗಿದೆ ಎಂದು ಆರೋಪಿಸಿದ ರೈತರು ರಸ್ತೆಯಲ್ಲಿ ಕೊಬ್ಬರಿ ಇಟ್ಟು ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿದರು.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಸರತಿ ಸಾಲಿನಲ್ಲಿ ಬಂದು ಅಹವಾಲು ಸಲ್ಲಿಸಿದ ಶಾಸಕ ಎ.ಮಂಜು
ದೇವಸ್ಥಾನದ ಹಣ ದುರುಪಯೋಗ ಆಗಿರುವ ಬಗ್ಗೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ರನ್ನು ತರಾಟೆಗೆ ತೆಗೆದುಕೊಂಡ ಎ.ಮಂಜು.
ಶಾಸಕರು ಹಾಗೂ ಜಿಲ್ಲಾಧಿಕಾರಿ ನಡುವೆ ವಾಗ್ವಾದ.
ಹಾಸನದಲ್ಲಿ ನಿನ್ನೆ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅರಕಲಗೂಡು ಶಾಸಕ ಎ.ಮಂಜು ಸರತಿ ಸಾಲಿನಲ್ಲಿ ಬಂದು ಅರಸೀಕಟ್ಟೆಯಮ್ಮ ದೇವಸ್ಥಾನದ ಹಣ ದುರುಪಯೋಗ ಆಗಿರುವ ಬಗ್ಗೆ ಜಿಲ್ಲಾಧಿಕಾರಿಗೆ ಗಮನಕ್ಕೆ ತಂದರು. ಈ ವೇಳೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ರನ್ನು ಶಾಸಕ ಎ.ಮಂಜು ತರಾಟೆಗೆ ತೆಗೆದುಕೊಂಡರು. ಎ.ಮಂಜು ಅವರನ್ನು ನೋಡುತ್ತಿದ್ದಂತೆಯೇ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಎದ್ದು ನಿಂತರು. ನಿಮ್ಮ ಗಮನ ಸೆಳೆಯಲು ಸರತಿ ಸಾಲಿನಲ್ಲಿ ಬಂದಿದ್ದೇನೆ ಎಂದು ಶಾಸಕ ಎ.ಮಂಜು ಹೇಳುತ್ತಿದ್ದಂತೆ ನಾವು ನಿಮ್ಮ ಸೇವೆ ಮಾಡಲು ಸೇವೆ ಮಾಡಲು ಸದಾ ಸಿದ್ದರಿದ್ದೇವೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು. ಇದು ನನ್ನ ಸೇವೆ ಅಲ್ಲಾ, ನೀವು ಸರಿಯಾಗಿ ಸೇವೆ ಮಾಡುತ
ಹಾಸನ: ಮುಂದಿನ 100 ದಿನದಲ್ಲಿ 42 ಕಿಮೀ ವರೆಗಿನ ಮೊದಲ ಹಂತದ ಎತ್ತಿನಹೊಳೆ ಯೋಜನೆಗೆ ನೀರು ಹರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸಕಲೇಶಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ಸಂಬಂಧ ಈಗಾಗಲೇ ₹14 ಸಾವಿರ ಕೋಟಿ ವೆಚ್ಚವಾಗಿದೆ. ಮೊದಲ ಹಂತದ ನೀರು ಹರಿಸಲು ಅರಣ್ಯ ಇಲಾಖೆ, ಕಂದಾಯ ಮತ್ತು ವಿದ್ಯುತ್ ಸರಬರಾಜು ಇಲಾಖೆ ಸಮನ್ವಯದಿಂದ ಕೆಲಸ ಮಾಡುವ ಮೂಲಕ ಯೋಜನೆ ಸಾಕಾರಗೊಳಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಹೇಳಿದರು.
ಮೊದಲ ಹಂತದ ಯೋಜನೆ ಸಾಗುವ ಜಾಗದಲ್ಲಿ 10 ಸಾವಿರ ಅಡಿ ಭೂಮಿ ಸಂಬಂಧ ವ್ಯಾಜ್ಯ ನಡೆಯುತ್ತಿದ್ದು ಇದಕ್ಕಾಗಿ ಮೂರು ವರ್ಷದಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. ಈ ಬಗ್ಗೆಯೂ ಗಮನ ಹರಿಸುವಂತೆ ಹಾಗೂ ಕೂಡಲೇ ಪರಿಹಾರ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಎತ್ತಿನಹೊಳೆ ಯೋಜನೆಯ ಮೊದಲ ಹಂತದ ನೀರನ್ನು ಎತ್ತುವಳಿ ಮಾಡುವುದು ಪ್ರಥಮ ಆದ್ಯತೆಯಾಗಿದ್ದು, ನಂತರ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ
ಅಧಿಕಾರಿಗಳನ್ನು ಕಂಟ್ರೋಲ್ ಗೆ ತೆಗೆದುಕೊಳ್ಳಲು ಹೀಗೆ ಮಾತನಾಡಬೇಕಾ ಸಚಿವರೇ?
ತಮ್ಮದೇ ಸರ್ಕಾರಿ ಅಧಿಕಾರಿಗಳನ್ನು ಸಾರ್ವಜನಿಕವಾಗಿ ನಿಂದಿಸುವುದು ಸಚಿವ ಸ್ಥಾನಕ್ಕೆ ತಕ್ಕುದಲ್ಲ
ಹಾಸನ: ಸಹಕಾರ ಸಚಿವ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಮಾತಾಡುವಾಗ ಅದರಲ್ಲೂ ವಿಶೇಷವಾಗಿ ಅಧಿಕಾರಿಗಳ ಕುರಿತು ಮಾತಾಡುವಾಗ ನಾಲಿಗೆ ಹರಿಬಿಡುವುದು ಸಹಜ ಎನ್ನುವಂತಾಗಿದೆ. ಹಾಸನನಲ್ಲಿ ದ್ವಜಾರೋಹಣ ಮಾಡಿದ ನಂತರ ಹಾಸನದ ಯೂತ್ ಹಾಸ್ಟೆಲ್ ನಲ್ಲಿ ಸಭೆ ನಡೆಸುವ ಮೊದಲು ಅಪರ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಬಗ್ಗೆ ಮಾತನಾಡಿರುವುದು ಅಧಿಕಾರಿ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಅವರು ಮಾತನಾಡುವಾಗ ಎಎಸ್ಪಿಕ ಕುರಿತು, ಅವನೆಲ್ಲಿ, ನೀವೆಲ್ಲ ಕೆಲಸ ಮಾಡುತ್ತಿದ್ದರೆ, ಅವನು ದೆವ್ವದ ಹಾಗೆ ಕೂತಿರ್ತಾನೆ ಅನ್ನುತ್ತಾರೆ. ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಅಧಿಕಾರ ಸಚಿವರಿಗೆ ಇದೆ, ಅದರೆ ಬೇರೆ ಅಧಿಕಾರಿಗಳ ಮುಂದೆ ಇನ್ನೊಬ್ಬ ಅಧಿಕಾರಿಯನ್ನು ಅದೂ ಆ ನಿರ್ದಿಷ್ಟ ಅಧಿ
ಬಾರದ ಅಂಬುಲೆನ್ಸ್ ; ಹುಟ್ಟುವ ಮುನ್ನವೇ ಕಣ್ಮುಚ್ಚಿದ ಮಗು
ಬೇಲೂರು: ಸರಿಯಾದ ಸಮಯಕ್ಕೆ ಆರೋಗ್ಯ ಸೇವೆ ದೊರೆಯದೆ ಭೂಮಿಗೆ ಬರುವ ಮೊದಲೇ ಶಿಶುವೊಂದು ಕಣ್ಮುಚ್ಚಿರುವ ಅಮಾನವೀಯ ಘಟನೆ ಪಟ್ಟಣದಲ್ಲಿ ನಡೆದಿದೆ.
ಬೇಲೂರು ಪಟ್ಟಣದ ಮೂರು ಕಿಮೀ ದೂರದಲ್ಲಿರುವ ಬಡಾವಣೆಯ ನಿವಾಸಿ ಆಶಾ ಮಗುವನ್ನು ಕಳೆದುಕೊಂಡ ತಾಯಿ. ವೈದ್ಯರು ಆಶಾಗೆ ಆಗಸ್ಟ್15 ಕ್ಕೆ ಡೆಲಿವರಿ ಡೇಟ್ ಕೊಟ್ಟಿದ್ದರು. ಆದರೆ ಮಂಗಳವಾರ ರಾತ್ರಿ ಗರ್ಬಿಣಿ ಮಹಿಳೆ ಆಶಾಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಆಶಾ ಪತಿ ವಾದಿರಾಜ್ ಹಾಸನಕ್ಕೆ ಹೋಗಿದ್ದು, ಆಶಾ ಸಹೋದರ ಕೂಡ ಹೊರಗೆ ಹೋಗಿದ್ದರು. ಹೆರಿಗೆ ನೋವು ಕಾಣಿಸಿಕೊಳ್ಳುತ್ತಲೇ 108, ನಗುಮಗು ಅಂಬ್ಯಲೆನ್ಸ್ಗಳಿಗೆ ಆಶಾ ಪೋಷಕರು ಫೋನ್ ಮಾಡಿದ್ದಾರೆ. ಆದರೆ ಆಂಬುಲೆನ್ಸ್ ಸೇವೆ ಸಿಬ್ಬಂದಿ ಕರೆಯನ್ನು ಸ್ವೀಕರಿಸಲಿಲ್ಲ ಎನ್ನಲಾಗಿದೆ. ಇದರಿಂದ ಇನ್ನಷ್ಟು ಆತಂಕಿತರಾದ ಆಶಾ ಪೋಷಕರು ಅಂಬ್ಯಲೆನ್ಸ್ಗಾಗಿ ಹಾಸನಕ್ಕೆ ಕರೆ ಮಾಡಿದ್ದಾರೆ. ಅಷ್ಟರಲ್ಲಿ ಮನೆಗೆ ಬಂದ ಆಶಾ ಸಹೋದರ ಹಾಸನದಿಂದ ಅಂಬ್ಯಲೆನ್ಸ್ ಬರುವುದನ್ನು ಕಾಯದೆ ಖ
ಕಾಫಿ ತೋಟಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿ
- ಹದಿನೈದುಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ
- ಐವರು ಮಹಿಳಾ ಕಾರ್ಮಿಕರಿಗೆ ಗಂಭೀರ ಗಾಯ.
- ಗಾಯಾಳುಗಳು ಸಕಲೇಶಪುರ ಹಾಗೂ ಹಾಸನ ಆಸ್ಪತ್ರೆಗೆ ರವಾನೆ
ಸಕಲೇಶಪುರ: ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕ್ಅಪ್ ವಾಹನ ಪಲ್ಟಿಯಾಗಿ ಹದಿನೈದಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹೆಬ್ಬಸಾಲೆ ಗ್ರಾಮದ ಬಳಿ ನಡೆದಿದೆ. ಸಕಲೇಶಪುರ ಪಟ್ಟಣದ ಸಮೀಪವಿರುವ ಕುಡಗರಗಳ್ಳಿ, ಆಚಂಗಿ, ಗ್ರಾಮದಿಂದ ಮಹಿಳಾ ಕಾರ್ಮಿಕರನ್ನು ಹಾರ್ಲೆ ಕಾಫಿ ತೋಟದ ಕೆಲಸಕ್ಕೆ ಪಿಕ್ಅಪ್ ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಹೆಬ್ಬಸಾಲೆ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ವಾಹನ ಪಲ್ಟಿಯಾಗಿದೆ. ಪಿಕ್ಅಪ್ ವಾಹನದಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಹಿಳಾ ಕಾರ್ಮಿಕರಿದ್ದು, ಐವರು ಮಹಿಳಾ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸಕಲೇಶಪುರ ಹಾಗೂ ಹಾಸನ ಆಸ್ಪತ್ರೆಗೆ ರವಾ
ಕೇಂದ್ರದ ಕಾರ್ಮಿಕ, ರೈತ ವಿರೋಧಿ ನೀತಿಗಳ ವಿರುದ್ಧ ಜೆಸಿಟಿಯು ಪ್ರತಿಭಟನೆ
ಹಾಸನ: ದುಡಿತದ ಅವಧಿಯನ್ನು ದಿನಕ್ಕೆ 12 ಗಂಟೆಗೆ ಹೆಚ್ಚಿಸಿರುವ ಆದೇಶ ಹಿಂಪಡೆಯುವುದು, ಜೀವನ ಯೋಗ್ಯ ಕನಿಷ್ಠ ವೇತನವನ್ನು 31,500 ರೂ. ಗೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಬುಧವಾರ ಹಾಸನದಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಕೇಂದ್ರದ 9 ವರ್ಷಗಳ ಬಿಜೆಪಿ ಸರ್ಕಾರದ ಕಡೆ ಹೊರಳಿ ನೋಡಿದರೆ ಜನಸಾಮಾನ್ಯರ ಜೀವನ ಮತ್ತು ಜೀವನೋಪಾಯದ ಮೇಲೆ ಮರಣಾಂತಿಕ ದಾಳಿಯನ್ನು ಎಸೆಗಿರುವುದು ನಮಗಿಂದು ವೇದ್ಯವಾಗುತ್ತಿದೆ. ಸಂಕಷ್ಟಗಳ ಸರಮಾಲೆಯನ್ನೇ ಜನರಿಗೆ ಉಡುಗೊರೆಯಾಗಿ ಕೇಂದ್ರ ಸರ್ಕಾರ ನೀಡಿದೆ. ನಿರುದ್ಯೋಗ ಪೆಡಂಭೂತದಂತೆ ಹೆಚ್ಚುತ್ತಿದೆ. ನೋಟುಗಳ ಅಮಾನ್ಯಕರಣದ ತರುವಾಯ ಜನರು ಅಂಚಿಗೆ ತಳ್ಳಲ್ಪಟ್ಟರು ಕಪ್ಪು ಹಣ ಬಿಳಿಯಾಯಿತೇ ವಿನಃ ಇನ್ನೇನು ಆಗಿಲ್ಲ. ಈ ಕುರಿತು ಸತ್ಯ ಹೊರಬರಲು ಕೇಂದ್ರ ಸರಕಾರ
ಖ್ಯಾತ ಜೋತಿಷಿ ವೇಣುಸ್ವಾಮಿ ಮೊರೆ ಹೋದ ಎಚ್ಡಿ ರೇವಣ್ಣ ಕುಟುಂಬ
ಖ್ಯಾತ ಜೋತಿಷಿ ವೇಣುಸ್ವಾಮಿ ಮೊರೆ ಹೋದ ಎಚ್ಡಿ ರೇವಣ್ಣ ಕುಟುಂಬ
•
ಹಾಸನ: ಮಾಜಿ ಸಚಿವ ಎಚ್ಡಿ ರೇವಣ್ಣ ಅವರ ಕುಟುಂಬ ಖ್ಯಾತ ಜ್ಯೋತಿಷಿ ಮನೆಗೆ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ತೆಲಂಗಾಣದ ಖ್ಯಾತ ಜ್ಯೋತಿಷಿ ಆಗಿರುವ ವೇಣುಸ್ವಾಮಿ ಅವರನ್ನು ಎಚ್.ಡಿ.ರೇವಣ್ಣ ಫ್ಯಾಮಿಲಿ ಭೇಟಿ ಮಾಡಿದೆ. ಈ ವೇಳೆ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ, ಪುತ್ರರಾದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಜ್ಯೋತಿಷಿಗಳ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.
ರೇವಣ್ಣ ಕುಟುಂಬ ವೇಣುಸ್ವಾಮಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ರೇವಣ್ಣ ದಂಪತಿ ಹಾರ ಬದಲಾಯಿಸಿಕೊಂಡಿರುವುದು ಕಾಣಬಹುದಾಗಿದೆ.
ಮಾಜಿ ಪ್ರಧಾನಿ ಎಚ್ಡಿಡಿ ಕುಟುಂಬದಲ್ಲಿ ರಾಜಕೀಯ ಸಮರ ನಡೆಯುತ್ತಿದ್ದೆ ಎಂಬ ಮಾತು ಚುನಾವಣೆಯ ಆರಂಭದಿಂದಲೂ ಕೇಳಿ ಬಂದಿತ್ತು. ಆದರೆ ಹಲವು ಸಂದರ್ಭದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ರೇವಣ್ಣ ಅವರು, ನಾನು ಮತ್ತು ಕುಮಾರಣ
ಭೂಮಿಯೂ ಇಲ್ಲ, ದಲಿತರಿಗೆ ಸ್ಮಶಾನವೂ ಇಲ್ಲ
ಮನೆಯೊಳಗೇ ಶವ ಹೂಳಲು ಯತ್ನ
ಅರಕಲಗೂಡು: ಮೃತದೇಹ ಹೂಳಲು ಜಾಗ ಇಲ್ಲ ಎಂಬ ಕಾರಣಕ್ಕೆ ಕುಟುಂಬವೊAದು ಮನೆ ಮುಂದೆಯೇ ಶವ ಹೂಳಲು ಮುಂದಾದ ಘಟನೆ ತಾಲೂಕಿನ ಶಂಭುನಾಥಪುರದಲ್ಲಿ ನಡೆದಿದೆ. ಗ್ರಾಮದ ಗಿಡ್ಡಯ್ಯ(54) ಎಂಬುವರು ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಆದರೆ ಅವರ ಅಂತ್ಯಕ್ರಿಯೆ ನಡೆಸಲು ದಲಿತ ಕುಟುಂಬಗಳಿಗೆ ಭೂಮಿಯೇ ಇಲ್ಲ, ಇದಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿದರೂ ಈವರೆಗೂ ಮಂಜೂರಾತಿ ಎಂಬುದು ಮರೀಚಿಕೆಯಾಗಿದೆ. ದಲಿತ ಕುಟುಂಬಗಳಿಗೆ ಇದುವರೆಗೂ ಸ್ಮಶಾನ ಭೂಮಿಯೇ ಸಿಕ್ಕಿಲ್ಲ. ಹಲವು ವರ್ಷಗಳಿಂದ ಸ್ಮಶಾನ ಭೂಮಿಗಾಗಿ ದಲಿತ ಕುಟುಂಬಗಳು ಹೋರಾಟ ಮಾಡುತ್ತಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲ. ಸ್ಮಶಾನ ಭೂಮಿ ಮಂಜೂರು ಮಾಡಲು ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿರುವುದರಿಂದ ಸ್ಮಶಾನ ಇಲ್ಲದ ಕಾರಣಕ್ಕೆ ಮನೆ ಮುಂದೆಯೇ ಅಂತ್ಯ ಸಂಸ್ಕಾರ ನಡೆಸಲು ಸಿದ್ಧತೆ ನಡೆಸಿದ್ದರು. ಸುದ್ದಿ ತಿಳಿದ ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ದೌಡಾಯಿಸಿ ಮನೆ ಮುಂದೆ ಅಂತ್ಯ ಸಂಸ್ಕಾರ ಮಾಡು
ಹಾಸನ : ಮನೆಗೆ ನುಗ್ಗಿ ನಾಯಿ ಹೊತ್ತೊಯ್ದು ಚಿರತೆ
ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಉಂಗರಗೆರೆ ಗ್ರಾಮದಲ್ಲಿ ಘಟನೆ
ಕುಮಾರ್ ಎಂಬುವವರ ಮನೆಯ ಸಾಕುನಾಯಿ
ರಸ್ತೆಯ ಪಕ್ಕದಲ್ಲಿರುವ ಕುಮಾರ್ ಮನೆ
ರಾತ್ರಿ ವೇಳೆ ಮನೆಯ ಬಳಿ ಬಂದ ಚಿರತೆ
ಮನೆಯ ಸುತ್ತಮುತ್ತ ಓಡಾಡಿ ಹೊಂಚು ಹಾಕುವ ಚಿರತೆ
ನಂತರ ಕಾಂಪೌಂಡ್ ಹಾರಿ ಮಲಗಿದ್ದ ನಾಯಿ ಬಳಿ ಬಂದ ಚಿರತೆ
ಚಿರತೆ ಬಂದರು ನಿದ್ರೆಯಲ್ಲಿ ಮಲಗಿದ್ದ ನಾಯಿ
ನಂತರ ನಾಯಿಯನ್ನು ಕೊಂದು ಹೊತ್ತೊಯ್ದ ಚಿರತೆ
ನಾಯಿಯನ್ನು ಭೇಟೆಯಾಡುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ಚಿರತೆ ದಾಳಿಯಿಂದ ಆತಂಕಗೊಂಡಿರುವ ಗ್ರಾಮಸ್ಥರು
ಕೂಡಲೇ ಬೋನು ಇಟ್ಟು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯ ಕುಮಾರ್ ಒತ್ತಾಯ
ಪಶ್ಚಿಮಘಟ್ಟದ ರಮಣೀಯ ಸ್ಥಳಗಳಲ್ಲಿ ಪ್ರವಾಸಿಗರ ಮೋಜು ಮಸ್ತಿ. ಐಷಾರಾಮಿ ಜೀಪು, ಕಾರುಗಳಲ್ಲಿ ರೇಸ್ ನಡೆಸುತ್ತಿರುವ ಪ್ರವಾಸಿಗರು. ಪ್ರವಾಸಿಗರ ವರ್ತನೆಗೆ ಸ್ಥಳೀಯರ ಆಕ್ರೋಶ.
ಪಶ್ಚಿಮಘಟ್ಟದ ರಮಣೀಯ ಸ್ಥಳಗಳಲ್ಲಿ ಪ್ರವಾಸಿಗರ ಮೋಜು ಮಸ್ತಿ ಮಿತಿಮೀರಿದೆ. ಐಷಾರಾಮಿ ಜೀಪು, ಕಾರುಗಳಲ್ಲಿ ಪ್ರವಾಸಿಗರು ರೇಸ್ ನಡೆಸುತ್ತಿದ್ದಾರೆ. ಪ್ರವಾಸಿಗರ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹೊಸಹಳ್ಳಿ ಗುಡ್ಡ ಸುತ್ತಮುತ್ತ ರೇಸರ್ಗಳ ಹಾವಳಿ ಹೆಚ್ಚಾಗಿದೆ. ಪ್ರಕೃತಿ ಸೌಂದರ್ಯವನ್ನು ಮೋಜು ಮಸ್ತಿಗಾಗಿ ಕೆಲ ಪ್ರವಾಸಿಗರು ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು ಪ್ರವಾಸಿಗರು ಸೊಪ್ಪು ಹಾಕದೆ ಪುಂಡಾಟಿಕೆ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರ ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಪರಿಸರ ನಾಶವಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿದ್ದಾರೆ.
ಮಳೆ ಆರಂಭಕ್ಕೂ ಮುನ್ನವೇ ಭೂಕುಸಿತ. ಬಿರುಕು ಬಿಟ್ಟ ರಾಷ್ಟ್ರೀಯ ಹೆದ್ದಾರಿ. ಮಣ್ಣು ಕುಸಿದಿದ್ದರಿಂದ ನೆಲಕ್ಕುರುಳಿದ ವಿದ್ಯುತ್ ಕಂಬ. ದರ್ಗಾ ಬಳಿಯೇ ಬಿದ್ದ ವಿದ್ಯುತ್ ಕಂಬ. ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ.
ಮಳೆ ಆರಂಭಕ್ಕೂ ಮುನ್ನವೇ ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭೂಕುಸಿತ ಉಂಟಾಗಿದ್ದು, ರಾಷ್ಟ್ರೀಯ ಹೆದ್ದಾರಿ ಬಿರುಕು ಬಿಟ್ಟಿದೆ. ನಿನ್ನೆಯಿಂದ ಸಕಲೇಶಪುರ ತಾಲ್ಲೂಕು ಭಾಗದಲ್ಲಿ ಮುಂಗಾರು ಚುರುಕುಗೊಂಡಿದ್ದು ಸಕಲೇಶಪುರ ತಾಲ್ಲೂಕಿನ, ದೋಣಿಗಾಲ್ ಬಳಿ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ ರಸ್ತೆ ಬಿರುಕು ಬಿಟ್ಟಿದೆ. ಪಕ್ಕದಲ್ಲೇ ನಿರ್ಮಿಸಿರುವ ತಡೆಗೋಡೆ ಮೇಲೆ ಮಣ್ಣು ಕುಸಿಯುತ್ತಿದೆ. ಮಣ್ಣು ಕುಸಿತ ಹಾಗೂ ಭಾರಿ ಗಾಳಿಗೆ ವಿದ್ಯುತ್ ಕಂಬ ನೆಲಕ್ಕುರುಳಿದೆ. ದರ್ಗಾ ಬಳಿಯೇ ವಿದ್ಯುತ್ ಕಂಬ ಬಿದ್ದಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಮಳೆ ಜೋರಾಗುತ್ತಿರುವ ಪರಿಣಾಮ ತಡೆಗೋಡೆ ಮೇಲೆ ಮಣ್ಣು ಕುಸಿಯುತ್ತಿದ್ದು ರಸ್ತೆ ಬಿರುಕು ಜಾಸ್ತಿಯಾಗುತ್ತಿದೆ. ಪ್ರತಿನಿತ್ಯ ಶಿರಾಡಿಘಾಟ್ ರಸ್ತೆಯಲ
ಪಶ್ಚಿಮಘಟ್ಟದ ರಮಣೀಯ ಸ್ಥಳಗಳಲ್ಲಿ ಪ್ರವಾಸಿಗರ ಮೋಜು ಮಸ್ತಿ. ಐಷಾರಾಮಿ ಜೀಪು, ಕಾರುಗಳಲ್ಲಿ ರೇಸ್ ನಡೆಸುತ್ತಿರುವ ಪ್ರವಾಸಿಗರು. ಪ್ರವಾಸಿಗರ ವರ್ತನೆಗೆ ಸ್ಥಳೀಯರ ಆಕ್ರೋಶ.
ಪಶ್ಚಿಮಘಟ್ಟದ ರಮಣೀಯ ಸ್ಥಳಗಳಲ್ಲಿ ಪ್ರವಾಸಿಗರ ಮೋಜು ಮಸ್ತಿ ಮಿತಿಮೀರಿದೆ. ಐಷಾರಾಮಿ ಜೀಪು, ಕಾರುಗಳಲ್ಲಿ ಪ್ರವಾಸಿಗರು ರೇಸ್ ನಡೆಸುತ್ತಿದ್ದಾರೆ. ಪ್ರವಾಸಿಗರ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹೊಸಹಳ್ಳಿ ಗುಡ್ಡ ಸುತ್ತಮುತ್ತ ರೇಸರ್ಗಳ ಹಾವಳಿ ಹೆಚ್ಚಾಗಿದೆ. ಪ್ರಕೃತಿ ಸೌಂದರ್ಯವನ್ನು ಮೋಜು ಮಸ್ತಿಗಾಗಿ ಕೆಲ ಪ್ರವಾಸಿಗರು ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು ಪ್ರವಾಸಿಗರು ಸೊಪ್ಪು ಹಾಕದೆ ಪುಂಡಾಟಿಕೆ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರ ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಪರಿಸರ ನಾಶವಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿದ್ದಾರೆ.
ಮಳೆ ಆರಂಭಕ್ಕೂ ಮು
ಟೊಮೆಟೊ ಬೆಲೆ ಗಗನಕ್ಕೇರಿದ ಹಿನ್ನಲೆ. ಲಕ್ಷಾಂತರ ರೂ ಮೌಲ್ಯದ ಟೊಮೆಟೊ ಕಳ್ಳತನ. ಸುಮಾರು ಒಂದುವರೆ ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೊಟೊ ಕಳ್ಳತನ ಮಾಡಿರುವ ಚೋರರು.
ಟೊಮೆಟೊ ಬೆಲೆ ಗಗನಕ್ಕೇರಿದ ಹಿನ್ನಲೆಯಲ್ಲಿ ಲಕ್ಷಾಂತರ ರೂ ಮೌಲ್ಯದ ಟೊಮೆಟೊ ಕಳ್ಳತನ ಮಾಡಿರುವ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಧರಣಿ ಎಂಬುವವರು ತಮ್ಮ ಜಮೀನಿನಲ್ಲಿ ಟೊಮೊಟೊ ಬೆಳೆದಿದ್ದರು. ಉತ್ತಮವಾದ ಇಳುವರಿ ಬಂದಿದ್ದು ಕಳೆದ ಮೂರು ದಿನಗಳಿಂದ ಟೊಮೊಟೊ ಕುಯ್ದು ಮಾರಾಟ ಮಾಡುತ್ತಿದ್ದರು. ಕಳೆದ ರಾತ್ರಿ ಹೊಲಕ್ಕೆ ನುಗ್ಗಿರುವ ಕಳ್ಳರು ಐವತ್ತರಿಂದ ಅರವತ್ತು ಬ್ಯಾಗ್ನಷ್ಟು ಟೊಮೊಟೊ ಕುಯ್ದಿದ್ದು, ಅಂದಾಜು ಒಂದುವರೆ ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೊಟೊ ಕಳ್ಳತನ ಮಾಡಿಕೊಂಡು ಚೋರರು ಎಸ್ಕೇಪ್ ಆಗಿದ್ದಾರೆ. ಇಂದು ಬೆಳಿಗ್ಗೆ ಧರಣಿ ತಮ್ಮ ಜಮೀನಿನ ಬಳಿ ಹೋದಾಗ ಟೊಮೊಟೊ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು, ಹಳೇಬೀಡು ಪೊಲೀಸರಿಗೆ ಧರಣಿ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ, ಪ
ಹಾಸನ ಜಿಲ್ಲೆಯಲ್ಲಿ ಮುಂದುವರಿದ ಕಾಡಾನೆಗಳ ದಾಂಧಲೆ. ಅಡಿಕೆ, ಬಾಳೆ ಹಾಗೂ ತೆಂಗಿನ ಗಿಡಗಳನ್ನು ನಾಶ ಮಾಡಿದ ಒಂಟಿಸಲಗ. ಮನೆಯ ಹಿಂದಿನ ಕೋಣೆಯಲ್ಲಿಟ್ಟಿದ್ದ ಬಾಳೆಗೋನೆಗಳನ್ನು ಹೊರ ಎಳೆದು ತಿಂದು ಹಾಕಿರುವ ಕಾಡಾನೆ.
ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ದಾಂಧಲೆ ಮುಂದುವರಿದಿದೆ. ಒಂಟಿಸಲಗವೊಂದು ಮನೆಯ ಸಮೀಪವೇ ಬಂದು ಅಪಾರ ಪ್ರಮಾಣದ ಬೆಳೆ ನಾಶ ಮಾಡಿರುವ ಘಟನೆ ಬೇಲೂರು ತಾಲ್ಲೂಕಿನ, ದೊಡ್ಡಸಾಲಾವರ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ಮಾಜಿ ಜಿ.ಪಂ. ಸದಸ್ಯ ವೈ.ಎನ್.ಕೃಷ್ಣೇಗೌಡರ ಮನೆಯ ಸಮೀಪ ಬಂದಿರುವ ಒಂಟಿಸಲಗ ಮನೆಯ ಹಿಂಬದಿಯ ತೋಟದಲ್ಲಿ ಬೆಳಿದಿದ್ದ ಅಡಿಕೆ, ಬಾಳೆ ಹಾಗೂ ತೆಂಗಿನ ಗಿಡಗಳನ್ನು ನಾಶ ಮಾಡಿದೆ. ಅಷ್ಟೇ ಅಲ್ಲದೆ ಮನೆಯ ಹಿಂದಿನ ಕೋಣೆಯಲ್ಲಿಟ್ಟಿದ್ದ ಬಾಳೆಗೋನೆಗಳನ್ನು ಹೊರ ಎಳೆದು ತಿಂದು ಹಾಕಿದ್ದು, ಕಾಡಾನೆ ಕಂಡ ಕೃಷ್ಣೇಗೌಡ ಕುಟುಂಬಸ್ಥರು ಕೆಲಕಾಲ ಆತಂಕಗೊಂಡಿದ್ದರು. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕೃಷ್ಣೇಗೌಡ ಮನೆಯ ಆವರಣದಲ್ಲಿದ್ದ ಒಂಟಿಸಲಗ ನಿಂತಿದ್ದು ಕಾಡಾನೆ ವಿಡಿಯೋ ಕೃಷ್ಣೇಗೌಡರ ಪುತ್ರನ ಮೊ
ರೀಲ್ಸ್ಗಾಗಿ ನಕಲಿ ಗನ್ ಹಿಡಿದು ಓಡಾಡಿದ ಯುವಕರ ವಶ
ಹಾಸನ: ರೀಲ್ಸ್ಗಾಗಿ ನಕಲಿ ಗನ್ ಹಿಡಿದು ಬುಲೆಟ್ ಬೈಕಿನಲ್ಲಿ ಓಡಾಡಿದ್ದ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯುವಕರು ಗನ್ ಹಿಡಿದು ಮನಬಂದಂತೆ ಆರ್.ಸಿ.ರೋಡ್, 80 ಅಡಿ ರಸ್ತೆ, ರಿಂಗ್ ರಸ್ತೆಯಲ್ಲಿ ಕೆಎ-13 EK-5679 ನಂಬರ್ನ ಬುಲೆಟ್ ಬೈಕ್ ಹಾಡುಹಗಲೇ ಗನ್ ಹಿಡಿದು ರಸ್ತೆಯಲ್ಲೆಲ್ಲಾ ಓಡಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇಬ್ಬರು ಯುವಕರು ಬೈಕಿನಲ್ಲಿ ಓಡಾಡುತ್ತಿದ್ದು, ಹುಇಂಬದಿ ಕುಳಿತ್ತಿದ್ದ ವ್ಯಕ್ತಿ ಕೈಯಲ್ಲಿ ಗನ್ ಇತ್ತು. ರೀಲ್ಸ್ಗಾಗಿ ವಿಡಿಯೋ ಮಾಡಿಕೊಂಡು ಸಾಮಾಜಿಲ್ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು.
ಹಾಸನ ನಗರದಲ್ಲಿ ಹೆಚ್ಚುತ್ತಿರುವ ವೀಲ್ಹಿಂಗ್ ಪುಂಡರ ಹಾವಳಿ ಹೆಚ್ಚುತ್ತಿರುವ ನಡುವೆಯೇ ಜನನಿಬಿಡ ಪ್ರದೇಶದಲ್ಲಿ ಗನ್ ಹಿಡಿದು ಅತಿರೇಕದ ವರ್ತನೆ ತೋರಿರುವ ಯುವಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಾರ್ವಜನಿಕರು
ಅನಾಹುತಗಳು ಸಂಭವಿಸುವ ಮುನ್ನ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಬೈಕಿನಲ್ಲಿ ನಕ
ಪವರ್ ಕಟ್: ವಿದ್ಯಾರ್ಥಿಗಳು ಸುಸ್ತು
ಹಾಸನ: ಲಕ್ಷಾಂತರ ಶುಲ್ಕ ಕಟ್ಟಿ ಹಗಲು ರಾತ್ರಿ ಕಣ್ಣೀಗೆ ಎಣ್ಣೆ ಬಿಟ್ಟುಕೊಂಡು ಓದಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ತಮ್ಮ ದಾಖಲೆ ಪರಿಶೀಲನೆಗೆ ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ. ಕಾರಣ ವಿದ್ಯುತ್ ಕಟ್.. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದ ಅಧಿಕಾರಿಗಳು.
ಇತ್ತೀಚೆಗೆ ಸಿಇಟಿ ರ್ಯಾಂಕ್ ಪ್ರಕಟವಾಗಿದ್ದು, ದಾಖಲೆ ಪರಿಶೀಲನೆಗೆ ಅಧಿಕಾರಿಗಳು ಶುಕ್ರವಾರ ದಿನಾಂಕ ನಿಗದಿಪಡಿಸಿದ್ದರು. ಅದರಂತೆ ವಿದ್ಯಾರ್ಥಿಗಳು ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಚೇರಿ ಬಳಿ ಬೆಳಗ್ಗೆ 9 ಗಂಟೆ ಸುಮಾರಿಗೆ ಆಗಮಿಸಿದ್ದರು. ಆದರೆ ವಿದ್ಯುತ್ ಇಲ್ಲದ್ದರಿಂದ ವಿದ್ಯಾರ್ಥಿಗಳು ಬೆಳಗ್ಗೆಯಿಂದ ಕಾದು ಕುಳಿತ್ತಿದ್ದರು.
ಶುಕ್ರವಾರ ಸಿಟಿ ಬಸ್ ನಿಲ್ದಾಣದ ಸುತ್ತಮುತ್ತ ವಿದ್ಯುತ್ ಇರುವುದಿಲ್ಲ ಎಂದು ಸೆಸ್ಕ್ ಎರಡು ದಿನ ಮೊದಲೇ ಪ್ರಕಟಣೆ ಹೊರಡಿಸಿತ್ತು. ಇದು ಗೊತ್ತಿದ್ದರೂ ದಾಖಲೆ ಪರಿಶೀಲನೆಗೆ ಪರ್ಯಾಯ ವ್ಯವಸ್
ಅನ್ನ ಭಾಗ್ಯ ಯೋಜನೆ ಜಾರಿಯಾಗದಂತೆ ಕೇಂದ್ರ ಕುತಂತ್ರ: ಕೈ ಮುಖಂಡರ ಆಕ್ರೋಶ
ಹಾಸನ: ಕೇಂದ್ರ ಸರ್ಕಾರವು ರಾಜ್ಯದ ಜನಗಳಿಗೆ ಅಕ್ಕಿ ನೀಡುವ ನಮ್ಮ ಸರ್ಕಾರದ ತೀರ್ಮಾನಕ್ಕೆ ಅಡ್ಡಗಾಲು ಹಾಕುವ ಮೂಲಕ ರಾಜ್ಯದ ಜನತೆಯ ವಿರುದ್ದ ದ್ವೇಷದ ರಾಜಕಾರಣ ಪ್ರಾರಂಭಿಸಿದೆ ಅನ್ನ ಭಾಗ್ಯ ಯೋಜನೆ ಜಾರಿಗೊಳಿಸದಂತೆ ಕುತಂತ್ರ ಮಾಡಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಅಕ್ಕಿ ನೀಡುತ್ತಿಲ್ಲ ಎಂದು ಆರೋಪಿಸಿ ಕೆಪಿಸಿಸಿ ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದಲ್ಲಿ ಇಂದು ಖಾಲಿ ತಟ್ಟೆಯನ್ನು ಹಿಡಿದು ಪ್ರತಿಭಟನೆ ನಡೆಸಿತು. ನಗರದ ಕಾಂಗ್ರೆಸ್ ಕಚೇರಿಯೀಮದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ªವ್ಯಕ್ತಪಡಿಸಿದರು.
ಜಿಲ್ಲಾಧಿ
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಸಂತತಿ ಹೆಚ್ಚುತ್ತಲೆ ಇದೆ. ಸಕಲೇಶಪುರ ತಾಲ್ಲೂಕಿನ, ಮಳಲಿ ಗ್ರಾಮದ ಬಳಿ ಮರಿಗಳು ಸೇರಿ ನಲವತ್ತಕ್ಕೂ ಹೆಚ್ಚು ಕಾಡಾನೆಗಳು ಒಂದು ಕಾಫಿ ತೋಟದಿಂದ ರಸ್ತೆ ದಾಟಿ ಮತ್ತೊಂದು ಕಾಫಿ ತೋಟಕ್ಕೆ ಹೋಗಿವೆ. ಕಾಡಾನೆಗಳು ರಸ್ತೆ ದಾಟುತ್ತಿರುವ ವೇಳೆ ವಾಹನ ಸವಾರರು ರಸ್ತೆಯಲ್ಲಿ ನಿಂತು ಕಾಡಾನೆಗಳು ರಸ್ತೆ ದಾಟುವ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಕಾಡಾನೆಗಳ ಉಪಟಳದಿಂದ ಮಲೆನಾಡು ಭಾಗದ ಜನರು ಹೈರಾಣಾಗಿ ಹೋಗಿದ್ದಾರೆ. ಕಾಡಾನೆಗಳ ಸಂಚಾರದಿಂದ ಕಾಫಿ, ಮೆಣಸು ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು ಸೂಕ್ತ ಪರಿಹಾರದ ಜೊತೆಗೆ ಹೊಸದಾಗಿ ಬಂದಿರುವ ಕಾಂಗ್ರೆಸ್ ಸರ್ಕಾರವಾದರೂ ಇತ್ತ ಗಮನಹರಿಸಿ ಎರಡು ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ಈ ಭಾಗದ ಜನರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ
ಹಾಸನದ ಜನ ದಡ್ಡರಾ?..
ಜೆಡಿಎಸ್ ಭದ್ರಕೋಟೆ ಭೇದಿಸಲು ಪ್ರೀತಂಗೌಡರಿಗೆ ಅನುಕೂಲವಾಗಿದ್ದು ಹಾಸನದ ಜನರ ದಡ್ಡತನವಾ.. ದಕ್ಷಿಣ ಕನ್ನಡ ಜಿಲ್ಲೆಯ ಜನರೆದುರು ಹಾಸನವನ್ನು ಹೀಗೆಳೆದರಾ ಪ್ರೀತಂ ಗೌಡರು...
ಸ್ವಾಭಿಮಾನಕ್ಕಾಗಿ ಸ್ವರೂಪ್ ಗೆ ಮತ ಎಂಬ ಜೆಡಿಎಸ್ ಪ್ರಚಾರಕ್ಕೆ ಅಸ್ತ್ರ ಕೊಟ್ಟ ಪ್ರೀತಂ ಗೌಡರು