VK Readers

VK Readers 'ವಿಕ ಕರುನಾಡ ಕೊಟ್ಟೋಣ ಬನ್ನಿ' ಎಂಬ ಈ ಅಭಿಯಾ?

VK - SSR 2025 -ಮೈಸೂರು ಜಿಲ್ಲೆಯ ಎಲ್ಲ ಪ್ರಶಸ್ತಿ ವಿಜೇತ ರೈತರಿಗೆ ಹೃತ್ಪೂರ್ವಕ ಅಭಿನಂದನೆಗಳು.ನಿಮ್ಮ ಪರಿಶ್ರಮ ಮತ್ತು ಸಮರ್ಪಣೆ ಕೃಷಿ ಕ್ಷೇತ್...
18/02/2025

VK - SSR 2025 -ಮೈಸೂರು ಜಿಲ್ಲೆಯ ಎಲ್ಲ ಪ್ರಶಸ್ತಿ ವಿಜೇತ ರೈತರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಪರಿಶ್ರಮ ಮತ್ತು ಸಮರ್ಪಣೆ ಕೃಷಿ ಕ್ಷೇತ್ರದ ಬೆಳವಣಿಗೆಗೆ ಮಹತ್ವದ ಕೊಡುಗೆ! 🌾🏆👏

#ಅಭಿನಂದನೆಗಳು #ಕೃಷಿಕರು #ಕೊಡಗು

VK - SSR 2025 -ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಪ್ರಶಸ್ತಿ ವಿಜೇತ ರೈತರಿಗೆ ಹೃತ್ಪೂರ್ವಕ ಅಭಿನಂದನೆಗಳು.ನಿಮ್ಮ ಪರಿಶ್ರಮ ಮತ್ತು ಸಮರ್ಪಣೆ ಕೃಷಿ ಕ...
18/02/2025

VK - SSR 2025 -ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಪ್ರಶಸ್ತಿ ವಿಜೇತ ರೈತರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಪರಿಶ್ರಮ ಮತ್ತು ಸಮರ್ಪಣೆ ಕೃಷಿ ಕ್ಷೇತ್ರದ ಬೆಳವಣಿಗೆಗೆ ಮಹತ್ವದ ಕೊಡುಗೆ! 🌾🏆👏

#ಅಭಿನಂದನೆಗಳು #ಕೃಷಿಕರು #ಕೊಡಗು

VK - SSR 2025 - ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಪ್ರಶಸ್ತಿ ವಿಜೇತ ರೈತರಿಗೆ ಹೃತ್ಪೂರ್ವಕ ಅಭಿನಂದನೆಗಳು.ನಿಮ್ಮ ಪರಿಶ್ರಮ ಮತ್ತು ಸಮರ್ಪಣೆ ಕೃಷಿ ...
18/02/2025

VK - SSR 2025 - ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಪ್ರಶಸ್ತಿ ವಿಜೇತ ರೈತರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಪರಿಶ್ರಮ ಮತ್ತು ಸಮರ್ಪಣೆ ಕೃಷಿ ಕ್ಷೇತ್ರದ ಬೆಳವಣಿಗೆಗೆ ಮಹತ್ವದ ಕೊಡುಗೆ! 🌾🏆👏

#ಅಭಿನಂದನೆಗಳು #ಕೃಷಿಕರು #ಕೊಡಗು

VK - SSR 2025 ರಾಮನಗರ ಜಿಲ್ಲೆಯ ಎಲ್ಲ ಪ್ರಶಸ್ತಿ ವಿಜೇತ ರೈತರಿಗೆ ಹೃತ್ಪೂರ್ವಕ ಅಭಿನಂದನೆಗಳು.ನಿಮ್ಮ ಪರಿಶ್ರಮ ಮತ್ತು ಸಮರ್ಪಣೆ ಕೃಷಿ ಕ್ಷೇತ್ರ...
17/02/2025

VK - SSR 2025 ರಾಮನಗರ ಜಿಲ್ಲೆಯ ಎಲ್ಲ ಪ್ರಶಸ್ತಿ ವಿಜೇತ ರೈತರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಪರಿಶ್ರಮ ಮತ್ತು ಸಮರ್ಪಣೆ ಕೃಷಿ ಕ್ಷೇತ್ರದ ಬೆಳವಣಿಗೆಗೆ ಮಹತ್ವದ ಕೊಡುಗೆ! 🌾🏆👏

#ಅಭಿನಂದನೆಗಳು #ಕೃಷಿಕರು #ಕೊಡಗು

ಕಾಫಿ ಧಾರಣೆ ಆರೋಹಣ ಸ್ಥಿತಿಯಲ್ಲಿಏರಿಕೆಯಾಗುತ್ತಿದ್ದು ಮುಂಚಿತವಾಗಿ ಕಾಫಿ ಮಾರಾಟ ಮಾಡಿದ ಬೆಳೆಗಾರರಲ್ಲಿನಿರಾಸೆ ಮೂಡಿಸಿದೆ. ಹವಾಮಾನ ವೈಪರೀತ್ಯದಿ...
08/02/2025

ಕಾಫಿ ಧಾರಣೆ ಆರೋಹಣ ಸ್ಥಿತಿಯಲ್ಲಿಏರಿಕೆಯಾಗುತ್ತಿದ್ದು ಮುಂಚಿತವಾಗಿ ಕಾಫಿ ಮಾರಾಟ ಮಾಡಿದ ಬೆಳೆಗಾರರಲ್ಲಿನಿರಾಸೆ ಮೂಡಿಸಿದೆ. ಹವಾಮಾನ ವೈಪರೀತ್ಯದಿಂದ ಕಾಫಿ ಬೆಳೆಯುವ ಬ್ರೆಜಿಲ್‌ ಮತ್ತು ವಿಯೆಟ್ನಾಂನಲ್ಲಿಉತ್ಪಾದನೆಯಲ್ಲಿಇಳಿಕೆ ಕಂಡಿರುವುದರಿಂದ ಭಾರತದ ಕಾಫಿಗೆ ಉತ್ತಮ ಧಾರಣೆ ಬಂದಿದೆ. ಕಾಫಿ ಧಾರಣೆಯಲ್ಲಿಏರಿಳಿತ ಸಾಮಾನ್ಯ. ಆರಂಭದಲ್ಲಿಈ ವರ್ಷವೂ ಏರಿಳಿತ ಕಂಡಿತ್ತು. ಆದರೆ, ಕಳೆದ 10 ದಿನದಲ್ಲಿಆರೋಹಣ ಸ್ಥಿತಿಯಲ್ಲಿಪ್ರತಿ ದಿನ 500 ರಿಂದ 1 ಸಾವಿರ ರೂ. ಏರಿಕೆಯಾಗುತ್ತಿದ್ದು ಶುಕ್ರವಾರ ಮಾರುಕಟ್ಟೆ ದರ ಅರೆಬಿಕಾ ಪಾರ್ಚ್ಮೆಂಟ್‌ 50 ಕೆಜಿ ಚೀಲಕ್ಕೆ 27,800 ರೂ. ಗರಿಷ್ಠ ಧಾರಣೆ ಬಂದಿದೆ.

ಮಲೆನಾಡಿನ ಜಿಲ್ಲೆಗಳಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಸೇತುವಾಗುವ ಬಹುನಿರೀಕ್ಷಿತ ತಾಳಗುಪ್ಪ -ಶಿರಸಿ- ಹುಬ್ಬಳ್ಳಿ ಉದ್ದೇಶಿತ ರೈಲು...
07/02/2025

ಮಲೆನಾಡಿನ ಜಿಲ್ಲೆಗಳಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಸೇತುವಾಗುವ ಬಹುನಿರೀಕ್ಷಿತ ತಾಳಗುಪ್ಪ -ಶಿರಸಿ- ಹುಬ್ಬಳ್ಳಿ ಉದ್ದೇಶಿತ ರೈಲು ಮಾರ್ಗಕ್ಕೆ ಸಂಬಂಧಿಸಿ ಮತ್ತೊಂದು ಗಟ್ಟಿ ಹೆಜ್ಜೆಯ ಕ್ರಮವಾಗಿದೆ. ಈ ಮಾರ್ಗದ ಅಂತಿಮ ಸ್ಥಳ ಸಮೀಕ್ಷೆ ( ಎಫ್‌ಎಲ್‌ಎಸ್‌) ನಡೆಸುವ ಕುರಿತಂತೆ ರೈಲ್ವೆ ಇಲಾಖೆಯು ಹೈದರಾಬಾದ್‌ ಮೂಲದ ಕಂಪನಿಯೊಂದಕ್ಕೆ ಗುತ್ತಿಗೆ ನೀಡಿದೆ. ಮುಂದಿನ ಒಂದು ವರ್ಷದೊಳಗೆ ಈ ಸಮೀಕ್ಷೆ ನಡೆಸುವಂತೆ ಗಡುವು ನೀಡಲಾಗಿದೆ.
ತಾಳಗುಪ್ಪ ಶಿರಸಿ- ಹುಬ್ಬಳ್ಳಿ ಮಾರ್ಗ ನಿರ್ಮಾಣದಿಂದ ಉತ್ತರಕರ್ನಾಟಕದ 15 ಕ್ಕೂ ಹೆಚ್ಚು ಜಿಲ್ಲೆಗಳು ಹಾಗೂ ಮಲೆನಾಡಿನ ಜಿಲ್ಲೆಗಳ ಮಧ್ಯೆ ಉದ್ಯೋಗ, ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ ಎಂಬ ಆಶಾಭಾವ ವ್ಯಕ್ತವಾಗುತ್ತಿದೆ.

ಕಳೆದ ವರ್ಷ 6 ಕೆಜಿ ಮೂಟೆಗೆ ಐದರಿಂದ ಏಳು ಸಾವಿರ ರೂ.ವರೆಗೆ ದರ ಸಿಕ್ಕಿತ್ತು. ಆದರೆ, ಈ ಬಾರಿ ಎರಡು ಸಾವಿರದಿಂದ ಆರಂಭವಾದ ಬೆಲೆ ದಿಢೀರ್‌ ಸಾವಿರ ...
06/02/2025

ಕಳೆದ ವರ್ಷ 6 ಕೆಜಿ ಮೂಟೆಗೆ ಐದರಿಂದ ಏಳು ಸಾವಿರ ರೂ.ವರೆಗೆ ದರ ಸಿಕ್ಕಿತ್ತು. ಆದರೆ, ಈ ಬಾರಿ ಎರಡು ಸಾವಿರದಿಂದ ಆರಂಭವಾದ ಬೆಲೆ ದಿಢೀರ್‌ ಸಾವಿರ ರೂ.ಗೆ ಇಳಿದಿದೆ. ಮಧ್ಯವರ್ತಿಗಳ ಕಾಟದಿಂದ ಮಾರಿದ ತಕ್ಷಣ ಹಣವೂ ಸಿಗುತ್ತಿಲ್ಲ. ಶುಂಠಿ ಬೆಳೆಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಮಧ್ಯವರ್ತಿಗಳ ಮೂಲಕ ಮಾರಾಟ ಮಾಡಬೇಕಿದೆ. ಹೀಗಾಗಿ ತಂಬಾಕು ಹಾಗೂ ಅರಿಶಿನ ಮತ್ತಿತರ ಬೆಳೆಗೆ ಇರುವಂತೆ ಶುಂಠಿ ಖರೀದಿಗೆ ಪ್ರತ್ಯೇಕ ಮಾರುಕಟ್ಟೆ ಅವಶ್ಯ.

ಪೌರಕಾರ್ಮಿಕರು ವಿಶ್ರಾಂತಿ ಪಡೆಯಲು ನಗರದ 42 ಸ್ಥಳಗಳಲ್ಲಿ ಶಾಶ್ವತ ಕೊಠಡಿಗಳ ನಿರ್ಮಾಣ ಮಾಡಲಾಗುವುದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾ...
05/02/2025

ಪೌರಕಾರ್ಮಿಕರು ವಿಶ್ರಾಂತಿ ಪಡೆಯಲು ನಗರದ 42 ಸ್ಥಳಗಳಲ್ಲಿ ಶಾಶ್ವತ ಕೊಠಡಿಗಳ ನಿರ್ಮಾಣ ಮಾಡಲಾಗುವುದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಮಂಗಳವಾರ ಹೇಳಿದರು.

ಪೂರ್ವ ವಲಯ ವ್ಯಾಪ್ತಿಯಲ್ಲಿ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಸಂದರ್ಭದಲ್ಲಿ, ‘ಪೌರಕಾರ್ಮಿಕರ ವಿಶ್ರಾಂತಿಗಾಗಿ ವ್ಯವಸ್ಥೆ ಕಲ್ಪಿಸಬೇಕು’ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ನಗರದಲ್ಲಿ ಪೌರಕಾರ್ಮಿಕರು ವಿಶ್ರಾಂತಿ ಮಾಡುವ ಸಲುವಾಗಿ 42 ಕಡೆ ಶಾಶ್ವತ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಿ ಪೌರಕಾರ್ಮಿಕರು ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಚಳಿಗಾಲ ಮುಗಿಯುವ ಮುನ್ನವೇ ಬೇಸಿಗೆಯ ಆರಂಭವಾಗಿದೆ. ಫೆಬ್ರವರಿಯಲ್ಲೇ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾ...
04/02/2025

ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಚಳಿಗಾಲ ಮುಗಿಯುವ ಮುನ್ನವೇ ಬೇಸಿಗೆಯ ಆರಂಭವಾಗಿದೆ. ಫೆಬ್ರವರಿಯಲ್ಲೇ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಹವಾಮಾನ ಇಲಾಖೆ ಮಾರ್ಚ್‌ನಿಂದ ತೀವ್ರ ಬಿಸಿಲಿನ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮಾರ್ಚ್‌ನಲ್ಲಿ 29 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಈ ಬೇಸಿಗೆಯ ತೀವ್ರತೆಯನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಐತಿಹಾಸಿಕ ವಾಂಖೆಡೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಭಾರತ vs ಇಂಗ್ಲೆಂಡ್‌ 5ನೇ ಟಿ-20 ಪಂದ್ಯದಲ್ಲಿ, ಪ್ರವಾಸಿ ಇಂಗ್ಲೆಂಡ್‌ ...
03/02/2025

ಐತಿಹಾಸಿಕ ವಾಂಖೆಡೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಭಾರತ vs ಇಂಗ್ಲೆಂಡ್‌ 5ನೇ ಟಿ-20 ಪಂದ್ಯದಲ್ಲಿ, ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಅತಿಥೇಯ ಭಾರತ ತಂಡವು ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ-20 ಸರಣಿಯನ್ನು ಭಾರತವು 4-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. ವಾಂಖೆಡೆ ಮೈದಾನದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌, ತನ್ನ ನಿರ್ಧಾರಕ್ಕೆ ಪಶ್ಚಾತಾಪ ಪಡಬೇಕಾದ ಪರಿಸ್ಥಿತಿಯನ್ನು ಭಾರತದ ಸ್ಟಾರ್‌ ಆಟಗಾರ ಅಭಿಷೇಕ್‌ ಶರ್ಮಾ ನಿರ್ಮಿಸಿದರು. ಕೇವಲ 54 ಎಸೆತಗಳಲ್ಲಿ ಭರ್ಜರಿ 135 ರನ್‌ಗಳಿಸಿದ ಅಭಿಷೇಕ ಶರ್ಮಾ, 7 ಬೌಂಡರಿ ಮತ್ತು 13 ಸಿಕ್ಸರ್‌ ಸಿಡಿಸಿ ಇಂಗ್ಲೆಂಡ್‌ ಬೌಲರ್‌ಗಳ ಬೆವರಿಳಿಸಿದರು.

ಒಟ್ಟಿನಲ್ಲಿ ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯನ್ನು 4-1 ಅಂತರದಲ್ಲಿ ಗೆದ್ದುಕೊಂಡುವ ಭಾರತ, ಭಾರತದ ಕ್ರಿಕೆಟ್‌ ಪ್ರಿಯರಿಗೆ ಸರಣಿ ಗೆಲುವಿನ ಉಡುಗೊರೆ ನೀಡಿದೆ.

ಡಾಂಬರೀಕರಣ, ಕಾಂಕ್ರಿಟೀಕರಣದಿಂದ ಮಳೆ ಬಂದಾಗ ನೀರಿನ ನಾಗಾಲೋಟಕ್ಕೆ ಹಲವೆಡೆ ದೊಡ್ಡ ಪ್ರವಾಹವೇ ಸೃಷ್ಟಿಯಾಗುತ್ತಿದೆ. ಮಳೆ ನೀರು ಭೂಮಿಯೊಡಲು ಸೇರಲಾ...
01/02/2025

ಡಾಂಬರೀಕರಣ, ಕಾಂಕ್ರಿಟೀಕರಣದಿಂದ ಮಳೆ ಬಂದಾಗ ನೀರಿನ ನಾಗಾಲೋಟಕ್ಕೆ ಹಲವೆಡೆ ದೊಡ್ಡ ಪ್ರವಾಹವೇ ಸೃಷ್ಟಿಯಾಗುತ್ತಿದೆ. ಮಳೆ ನೀರು ಭೂಮಿಯೊಡಲು ಸೇರಲಾಗದೆ ಹರಿಯುತ್ತಾ ಬಡಾವಣೆಗಳಿಗೆ ನುಗ್ಗುತ್ತಿದೆ. ಕನಿಷ್ಠ ಮಳೆ ನೀರು ಕಾಲುವೆಗಳಲ್ಲಾದರೂ ಇಂಗು ಗುಂಡಿಗಳನ್ನು ನಿರ್ಮಿಸಿದರೆ, ಒಂದೆಡೆ ಪ್ರವಾಹ ಭೀತಿ ದೂರವಾಗುತ್ತದೆ. ಮತ್ತೊಂದೆಡೆ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ವರ್ಷಾಂತ್ಯದೊಳಗೆ 1652 ಇಂಗು ಗುಂಡಿ ನಿರ್ಮಾಣದ ಗುರಿ ಹಾಕಿಕೊಂಡಿದೆ.

ಬೆಂಗಳೂರಿನಲ್ಲಿ ಇಂದು ಕೇಂದ್ರ ಭೂ ಸಾರಿಗೆ ಸಚಿವರು ನಡೆಸಿದ ಸಭೆಯಲ್ಲಿ, ಹುಬ್ಬಳಿ- ಸೊಲ್ಲಾಪರ ಮಾರ್ಗದಲ್ಲಿ ವಾಹನಗಳ ಸಂಚಾರ ಅಧಿಕ ಪ್ರಮಾಣದಲ್ಲಿದೆ...
31/01/2025

ಬೆಂಗಳೂರಿನಲ್ಲಿ ಇಂದು ಕೇಂದ್ರ ಭೂ ಸಾರಿಗೆ ಸಚಿವರು ನಡೆಸಿದ ಸಭೆಯಲ್ಲಿ, ಹುಬ್ಬಳಿ- ಸೊಲ್ಲಾಪರ ಮಾರ್ಗದಲ್ಲಿ ವಾಹನಗಳ ಸಂಚಾರ ಅಧಿಕ ಪ್ರಮಾಣದಲ್ಲಿದೆ. ಈ ಮಾರ್ಗವನ್ನು ಚತುಷ್ಪಥ ರಸ್ತೆಯನ್ನಾಗಿ ನಿರ್ಮಿಸಿದರೆ ಸುಗಮ ಸಂಚಾರ ಹಾಗೂ ಅಂತರ್ ರಾಜ್ಯ ಸಂಪರ್ಕಕ್ಕೆ ಅನುಕೂಲವಾಗುತ್ತದೆ. ಈ ಮಾರ್ಗವು ಪ್ರಮುಖ ಮಾರ್ಗವಾಗಿದ್ದು, ಈ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಗೆ ಮೇಲ್ದರ್ಜೆಗೇರಿಸುವ ಪ್ರಾಮುಖ್ಯತೆಯ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಕೂಡಲೇ ಕೇಂದ್ರ ಸಚಿವರು ತಾತ್ವಿಕ ಒಪ್ಪಿಗೆ ನೀಡಿ, ಈ ಚತುಷ್ಪಥ ಹೆದ್ದಾರಿ ಕಾಮಗಾರಿ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.

ಅವರೆ ಆವಕದಲ್ಲಿ ಕಳೆದೆರಡು ದಿನಗಳಲ್ಲಿ ದಿಢೀರ್‌ ಹೆಚ್ಚಳ ಆಗಿರುವುದರಿಂದ ಏರುಗತಿಯಲ್ಲಿದ್ದ ಅವರೆಕಾಯಿ ದರದಲ್ಲಿ ಒಂದಷ್ಟು ಕುಸಿತ ಕಂಡು ಬಂದಿದೆ. ...
30/01/2025

ಅವರೆ ಆವಕದಲ್ಲಿ ಕಳೆದೆರಡು ದಿನಗಳಲ್ಲಿ ದಿಢೀರ್‌ ಹೆಚ್ಚಳ ಆಗಿರುವುದರಿಂದ ಏರುಗತಿಯಲ್ಲಿದ್ದ ಅವರೆಕಾಯಿ ದರದಲ್ಲಿ ಒಂದಷ್ಟು ಕುಸಿತ ಕಂಡು ಬಂದಿದೆ. ಸಂಕ್ರಾಂತಿ ಹಬ್ಬದ ದಿನಗಳಲ್ಲಿಈ ಬಾರಿ ಅವರೆಗೆ ಬಂಪರ್‌ ಬೆಲೆ ಬಂದಿತ್ತು. ಮಣಿ ಅವರೆಗೆ 80 ರೂಪಾಯಿ, ದಪ್ಪ ಅವರೆಗೆ 70 ರೂ, ತನಕ ಸಗಟು ಮಾರುಕಟ್ಟೆ ದರ ಏರಿಕೆಯಾಗಿತ್ತು. ಇದರಿಂದಾಗಿ ಗ್ರಾಹಕರು 100 ರೂ.ಗಳತನಕ ದುಬಾರಿ ಬೆಲೆ ತೆತ್ತು ಅವರೆಕಾಯಿ ಖರೀದಿಸಿದ್ದರು. ಕಳೆದ ಎರಡು ದಿನಗಳಲ್ಲಿಅವರೆ ಆವಕದಲ್ಲಿ ಹೆಚ್ಚಳ ಆಗುತ್ತಿರುವುದರಿಂದ ಈಗ ಅವರೆ ದರದಲ್ಲಿ ಕುಸಿತ ಕಂಡು ಬಂದಿದೆ.

ರಾಜ್ಯದಲ್ಲಿಬೆಂಗಳೂರು, ರಾಮನಗರ, ದೊಡ್ಡಬಳ್ಳಾಪುರ ಅವರೆಗೆ ಅತಿಹೆಚ್ಚು ಬೇಡಿಕೆ ಇರುವ ಮಾರುಕಟ್ಟೆಯಾಗಿದೆ. ಉಳಿದಂತೆ ಮಹಾರಾಷ್ಟ್ರ, ಪೂನಾ, ಸಾಂಗ್ಲಿ, ಮೀರಜ್‌, ಕರಾಡು ಸೇರಿದಂತೆ ಅವರೆಗೆ ಮಾರುಕಟ್ಟೆ ಇದೆ. ಸದ್ಯಕ್ಕೆ ಹುಣಸೂರಿನಿಂದ ಅವರೆ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಆಂಧ್ರದಿಂದಲೂ ಸ್ವಲ್ಪ ಪ್ರಮಾಣದಲ್ಲಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ದರದಲ್ಲಿ ಕುಸಿತ ಕಂಡಿದೆ.

ಕಾವೇರಿ ನೀರಿನ ಬೆಲೆ ಹೆಚ್ಚಳದ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ವರದಿ ನೀಡಿದ ತಕ್ಷಣ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ನೀರಿ...
29/01/2025

ಕಾವೇರಿ ನೀರಿನ ಬೆಲೆ ಹೆಚ್ಚಳದ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ವರದಿ ನೀಡಿದ ತಕ್ಷಣ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ನೀರಿನ ಅಕ್ರಮ ಸಂಪರ್ಕಗಳ ಸಕ್ರಮೀಕರಣ, ನೀರಿನ ಸಂಪರ್ಕ ಹಾಗೂ ಬಳಕೆಯ ನಿಖರವಾದ ಲೆಕ್ಕವನ್ನು ಪಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಜಲ ಮಂಡಳಿಗೆ 1 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ಚರ್ಚೆಯ ನಂತರ ಬೆಲೆ ಏರಿಕೆ ಬಗ್ಗೆ ತಿಳಿಸಲಾಗುವುದು. ಇದರ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಬಡವರು ಹೆಚ್ಚು ಹಣ ನೀಡಲು ಆಗದಿದ್ದರೆ ಒಂದು ಲೀಟರ್‌ಗೆ ಒಂದು ಪೈಸೆಯಾದರೂ ನೀಡಲಿ ಎಂಬುದು ನಮ್ಮ ಅಭಿಲಾಷೆ. ಇದರಿಂದ ನೀರಿನ ಬಳಕೆಯ ಲೆಕ್ಕ ದೊರೆಯಲಿ ಎನ್ನುವುದು ಇದರ ಉದ್ದೇಶ' ಎಂದು ನೀರಿನ ದರವನ್ನು ಎಷ್ಟು ಏರಿಕೆ ಮಾಡಲಾಗುವುದು ಎಂಬ ಪ್ರಶ್ನೆಗೆ ಉತ್ತರಿಸಿದರು.

ಭಾರತದ ಅರಣ್ಯ ಸ್ಥಿತಿಗತಿ ವರದಿ 2023 ಪ್ರಕಾರ ದೇಶದ ಆರು ಮೆಗಾ ನಗರಗಳ ಅರಣ್ಯ ಪ್ರದೇಶಗಳ ಪೈಕಿ ಬೆಂಗಳೂರು ನಗರದಲ್ಲಿ ಶೇ.  0.59ರಷ್ಟು  ಅರಣ್ಯ ಪ...
28/01/2025

ಭಾರತದ ಅರಣ್ಯ ಸ್ಥಿತಿಗತಿ ವರದಿ 2023 ಪ್ರಕಾರ ದೇಶದ ಆರು ಮೆಗಾ ನಗರಗಳ ಅರಣ್ಯ ಪ್ರದೇಶಗಳ ಪೈಕಿ ಬೆಂಗಳೂರು ನಗರದಲ್ಲಿ ಶೇ. 0.59ರಷ್ಟು ಅರಣ್ಯ ಪ್ರದೇಶ ಹೆಚ್ಚಳವಾಗಿದೆ.2021ರಲ್ಲಿ ನಗರದಲ್ಲಿ 89.02 ಚದರ ಕಿ. ಮೀ. ನಷ್ಟಿದ್ದು ಅರಣ್ಯ ಪ್ರದೇಶ 2023ರ ವೇಳೆಗೆ 89.61 ಚ. ಕಿ. ಮೀ. ಗೆ ಹೆಚ್ಚಳವಾಗಿದೆ. ವಿಶ್ವಸಂಸ್ಥೆಯ ಮಾನದಂಡಗಳ ಪ್ರಕಾರ 10 ದಶಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯಾ ಹೊಂದಿದ್ದರೆ ಬೃಹತ್ ನಗರ ಎಂದು ಕರೆಯಲಾಗುತ್ತದೆ. ಭಾರತದ ದಿಲ್ಲಿ, ಮುಂಬೈ, ಬೆಂಗಳೂರು, ಚೆನ್ನೈ ಹೈದ್ರಾಬಾದ್ ಮತ್ತು ಕೊಲ್ಕತ್ತಾ ಈ ಮಾನದಂಡ ವ್ಯಾಪ್ತಿಗೆ ಒಳಪಡುತ್ತದೆ.

ಇದಲ್ಲದೆ ಅಹಮದಬಾದ್ ಕೂಡ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು ಬೃಹತ್ ನಗರ ವಾಗುವ ಅಂಚಿನಲ್ಲಿದೆ. ಈ ಹಿನ್ನಲೆಯಲ್ಲಿ ಭಾರತದ ಅರಣ್ಯದ ಸ್ಥಿತಿಗತಿ ವರಿದಿಯಲ್ಲಿ ಅಹಮದಾಬಾದ್ ನಗರವನ್ನು ಈ ಪಟ್ಟಿಗೆ ಸೇರಿಸಲಾಗಿದೆ.

31 ಟ್ಯಾಬ್ಲೋಗಳು, ಭಾರತದ ಗುಡ್ಡಗಾಡು ಜನರ ಜಾನಪದ ಶ್ರೀಮಂತಿಕೆ, ಸುಖೋಯ್‌, ರಫೇಲ್‌ ಯುದ್ಧ ವಿಮಾನಗಳು, ಸೇನಾ ಹೆಲಿಕಾಪ್ಟರ್‌ಗಳ ಕಸರತ್ತುಗಳು, ನಾ...
27/01/2025

31 ಟ್ಯಾಬ್ಲೋಗಳು, ಭಾರತದ ಗುಡ್ಡಗಾಡು ಜನರ ಜಾನಪದ ಶ್ರೀಮಂತಿಕೆ, ಸುಖೋಯ್‌, ರಫೇಲ್‌ ಯುದ್ಧ ವಿಮಾನಗಳು, ಸೇನಾ ಹೆಲಿಕಾಪ್ಟರ್‌ಗಳ ಕಸರತ್ತುಗಳು, ನಾರಿ ಶಕ್ತಿ ಭಾರತದ 76ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿಸುವರ್ಣ ಭಾರತ-ಪರಂಪರೆ ಮತ್ತು ಪ್ರಗತಿ ಯ ಧ್ಯೇಯವನ್ನಿಟ್ಟುಕೊಂಡು ದೆಹಲಿಯ ಕರ್ತವ್ಯಪಥದಲ್ಲಿ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ದೇಶದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯ, ಸೇನಾ ಶಕ್ತಿ, ಆರ್ಥಿಕ ಪ್ರಗತಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ದೇಶ-ವಿದೇಶದ ಗಣ್ಯರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಲಾಯಿತು. ಕಣ್ಮನಸೆಳೆಯಿತು.

ಚುಮುಚುಮು ಚಳಿಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಈ ಬಾರಿಯ ಗಣರೋಜ್ಯೋತ್ಸವದ ವಿಶೇಷ ಅತಿಥಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೋ ಸುಬಿಯಾಂಟೋ ಅ‍ವರು ಸಾರೋಟಿನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್‌, ಕೇಂದ್ರ ಸಚಿವರು, ಸೇನಾ ಮುಖ್ಯಸ್ಥರು, ವಿದೇಶಿ ರಾಯಭಾರಿಗಳು, ಹಿರಿಯ ಅಧಿಕಾರಿಗಳು ಹಾಗೂ 10 ಸಾವಿರ ಜನಸಾಮಾನ್ಯ ಅತಿಥಿಗಳು ಭಾರತದ ಸಾಂಸ್ಕೃತಿಕ ವೈಭವ ಮತ್ತು ಸೇನಾ ಶಕ್ತಿಯನ್ನು ಕಣ್ತುಂಬಿಕೊಂಡರು.

ಹುಬ್ಬಳ್ಳಿ: ಸಮೀಪದ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಆಯೋಜಿಸಿರುವ ಪಂಚಕಲ್ಯಾಣ ಮಹೋತ್ಸವದ ಅಂಗವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪಾರ...
25/01/2025

ಹುಬ್ಬಳ್ಳಿ: ಸಮೀಪದ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಆಯೋಜಿಸಿರುವ ಪಂಚಕಲ್ಯಾಣ ಮಹೋತ್ಸವದ ಅಂಗವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪಾರ್ಶ್ವನಾಥರ ಮೂರ್ತಿಗೆ ಮಹಾಮಸ್ತಕಾಭಿಷೇಕ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವಶಾಂತಿಗಾಗಿ ಜೈನ ಧರ್ಮದ ತತ್ವ ಪಾಲಿಸಬೇಕಿದೆ. ತೀರ್ಥಂಕರರ ತತ್ವಗಳು ಸಾರ್ವಕಾಲಿಕವಾಗಿವೆ ಎಂದರು.

ಕುಂತುಸಾಗರ ಮಹಾರಾಜರು, ಗುಣಧರನಂದಿ ಮಹಾರಾಜರು, ಸುರೇಂದ್ರ ಹೆಗ್ಗಡೆ ಸೇರಿದಂತೆ ಹಲವು ಆಚಾರ್ಯರು ಇದ್ದರು.
ನಂತರ, 61 ಅಡಿ ಎತ್ತರದ ಪಾರ್ಶ್ವನಾಥರ ಪ್ರತಿಮೆಗೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಟಿ, ಮಂತ್ರಘೋಷದೊಂದಿಗೆ ವಿವಿಧ ಅಭಿಷೇಕ ಜರುಗಿತು. ಉರಿಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು, ಮಹಾಮಸ್ತಕಾಭಿಷೇಕ ಕಣ್ತುಂಬಿಕೊಂಡರು.

Address

Sanjana Plaza, #74/2, Elephant Rock Road, 4th Floor, Jayanagar 3rd Block
Bangalore
560011

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6am
Friday 10am - 6pm

Alerts

Be the first to know and let us send you an email when VK Readers posts news and promotions. Your email address will not be used for any other purpose, and you can unsubscribe at any time.

Videos

Share