Vishwa vokkaligara Jagruti

Vishwa vokkaligara Jagruti Contact information, map and directions, contact form, opening hours, services, ratings, photos, videos and announcements from Vishwa vokkaligara Jagruti, Magazine, Bangalore.

ಯುವಕರೇ ನಾಚುವಂತೆ ಸದಾ ಚಟುವಟಿಕೆಯಿಂದ ಇರುವ ಶ್ರೀಯುತ ಬಿ ಕೃಷ್ಣೇಗೌಡ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು   #ಗೌಡರಸೇನೆ  #ಗೌಡತಿಯರಸೇ...
21/02/2024

ಯುವಕರೇ ನಾಚುವಂತೆ ಸದಾ ಚಟುವಟಿಕೆಯಿಂದ ಇರುವ ಶ್ರೀಯುತ ಬಿ ಕೃಷ್ಣೇಗೌಡ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
#ಗೌಡರಸೇನೆ #ಗೌಡತಿಯರಸೇನೆ #ಗೌಡರಯುವಸೇನೆ #ಬಿಕೃಷ್ಣೇಗೌಡ #ಮಂಡ್ಯಒಕ್ಕಲಿಗರು #ಒಕ್ಕಲಿಗರು

20/02/2024

॥ಜೈ ಶ್ರೀ ಗುರುದೇವ್॥
ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ದಿನಾಂಕ 20.02.2024ರಂದು ಏರ್ಪಡಿಸಿದ್ದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು "ಶ್ರೀ ಶ್ರೀ ಶ್ರೀ ಡಾ॥ ನಿರ್ಮಲಾನಂದನಾಥ ಮಹಾ ಸ್ವಾಮೀಜಿರವರ" 11ನೇ‌ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಸಂಭ್ರಮದಲ್ಲಿ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳವರು ಭಕ್ತರಿಗೆ ದರ್ಶನ ನೀಡಿದ್ದು ಈಗೇ....!!!
#ನಿರ್ಮಲನಂದನಾಥಸ್ವಾಮೀಜಿ #ನಂಜಾವಧೂತಸ್ವಾಮೀಜಿ #ರಾಜ್ಯಒಕ್ಕಲಿಗರಸಂಘ #ಚುಂಚನಗಿರಿ #ಒಕ್ಕಲಿಗರು #ಮಂಡ್ಯಒಕ್ಕಲಿಗರು

॥ಜೈ ಶ್ರೀ ಗುರುದೇವ್॥ದಿನಾಂಕ 20.2.2024 ಮಂಗಳವಾರ ಬೆಳಿಗ್ಗೆ 10:30 ಗಂಟೆಗೆ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ  ಬಿಜಿಎಸ್ ಸಭಾಂಗ...
20/02/2024

॥ಜೈ ಶ್ರೀ ಗುರುದೇವ್॥
ದಿನಾಂಕ 20.2.2024 ಮಂಗಳವಾರ ಬೆಳಿಗ್ಗೆ 10:30 ಗಂಟೆಗೆ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ *ಜ್ಞಾನ - ವಿಜ್ಞಾನ - ತಂತ್ರಜ್ಞಾನ ಮೇಳ 2024 ಹಾಗೂ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಗಳವರ 11ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಹಾಗೂ ವಿಜ್ಞಾತಂ 2024 ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ* ದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ *ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು* ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಎಲ್ಲಾ ಸ್ವಾಮೀಜಿಗಳವರು, ಬಾಬಾ ಮಸ್ತ್ ನಾಥ್ ವಿಶ್ವವಿದ್ಯಾಲಯದ ಕುಲಪತಿಗಳು, ರಾಜಸ್ಥಾನದ ತಿಜಾರ ಶಾಸಕರಾದ *ಪೂಜ್ಯ ಶ್ರೀ ಮಹಂತ್ ಬಾಲಕ್ ನಾಥ ಯೋಗಿ ಸ್ವಾಮೀಜಿಯವರು,* ಗುಜರಾತ್ ರಾಜ್ಯದ ಆರ್ಶ ವಿದ್ಯಾಮಂದಿರದ ಅಧ್ಯಕ್ಷರಾದ *ಪೂಜ್ಯ ಶ್ರೀ ಸ್ವಾಮಿ ಪರಮಾತ್ಮಾನಂದ ಸರಸ್ವತಿ ಸ್ವಾಮೀಜಿಯವರು,* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹತ್ತನೇ ಅಧ್ಯಕ್ಷರಾದ *ಶ್ರೀ ಎಸ್. ಸೋಮನಾಥ್ ಅವರು,* ಕೃಷಿ ಸಚಿವರಾದ *ಶ್ರೀ ಎನ್ ಚಲುವರಾಯ ಸ್ವಾಮಿ ಅವರು,* ಮಾಜಿ ಉಪಮುಖ್ಯಮಂತ್ರಿಗಳಾದ *ಡಾ. ಸಿ.ಎನ್.ಅಶ್ವಥ್ ನಾರಾಯಣ್ ಅವರು,* ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಅಧ್ಯಕ್ಷರಾದ *ಡಾ.ಗುರುರಾಜ್ ಕರ್ಜಿಗಿ ಅವರು,* ಆದಿಚುಂಚನಗಿರಿ ವಿಶ್ವವಿದ್ಯಾಲಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು. *ಇದೇ ಸಂದರ್ಭದಲ್ಲಿ ಪರಮಪೂಜ್ಯ ಮಹಾ ಸ್ವಾಮೀಜಿಯವರು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹತ್ತನೇ ಅಧ್ಯಕ್ಷರಾದ *ಶ್ರೀ ಎಸ್. ಸೋಮನಾಥ್ ಅವರಿಗೆ *ವಿಜ್ಞಾತಂ* ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಿದರು. ಹಾಗೂ ಗುರುತೋರಿದ ಸ್ವರ್ಣ ಪಥ ಮತ್ತು ಪರಮಪೂಜ್ಯರು ಹಾಗೂ ಗೋರಕ್ಷ ಭೊಧೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.*
#ನಿರ್ಮಲನಂದನಾಥಸ್ವಾಮೀಜಿ #ನಂಜಾವಧೂತಸ್ವಾಮೀಜಿ #ಚುಂಚನಗಿರಿ #ಒಕ್ಕಲಿಗರು #ರಾಜ್ಯಒಕ್ಕಲಿಗರಸಂಘ

ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ 11ನೇ ಪಟ್ಟಾಭಿಷೇಕ ಮಹೋತ್ಸವದ ಶುಭಾಶಯಗಳು  #ನಿರ್ಮಲನಂದನಾಥಸ್ವಾಮೀಜಿ  #ಚುಂಚನಗಿರಿ   ...
20/02/2024

ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ 11ನೇ ಪಟ್ಟಾಭಿಷೇಕ ಮಹೋತ್ಸವದ ಶುಭಾಶಯಗಳು
#ನಿರ್ಮಲನಂದನಾಥಸ್ವಾಮೀಜಿ #ಚುಂಚನಗಿರಿ #ರಾಜ್ಯಒಕ್ಕಲಿಗರಸಂಘ #ನಂಜಾವಧೂತಸ್ವಾಮೀಜಿ

ಫೆಬ್ರವರಿ ತಿಂಗಳ ಸಂಚಿಕೆ
15/02/2024

ಫೆಬ್ರವರಿ ತಿಂಗಳ ಸಂಚಿಕೆ

ಸಜ್ಜೇಪಾಳ್ಯ ಜಮೀನಿನ ಉಳಿವಿಗಾಗಿ ಒಕ್ಕಲಿಗರ ಹೋರಾಟ.      #ನಿರ್ಮಲನಂದನಾಥಸ್ವಾಮೀಜಿ  #ಮಂಡ್ಯಒಕ್ಕಲಿಗರು  #ನಂಜಾವಧೂತಸ್ವಾಮೀಜಿ    #ರಾಜ್ಯಒಕ್ಕ...
15/02/2024

ಸಜ್ಜೇಪಾಳ್ಯ ಜಮೀನಿನ ಉಳಿವಿಗಾಗಿ ಒಕ್ಕಲಿಗರ ಹೋರಾಟ.
#ನಿರ್ಮಲನಂದನಾಥಸ್ವಾಮೀಜಿ #ಮಂಡ್ಯಒಕ್ಕಲಿಗರು #ನಂಜಾವಧೂತಸ್ವಾಮೀಜಿ #ರಾಜ್ಯಒಕ್ಕಲಿಗರಸಂಘ #ಮತ್ತೊಮ್ಮೆ_ಹುಟ್ಟಿಬನ್ನಿ_ಗುರುದೇವ #ಚುಂಚನಗಿರಿ #ಒಕ್ಕಲಿಗರು

ಕೃಷ್ಣಪ್ಪ ರಂಗಮ್ಮ ಶಿಕ್ಷಣ ಟ್ರಸ್ಟ್ (ರಿ) ಗೆ ಸೇರಿದ ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿಯ ಸಜ್ಜೆಪಾಳ್ಯ ಗ್ರಾಮದ ಜಮೀನು ಒಟ...

11/02/2024

ದಿನಾಂಕ 12.02.2024 ಸೋಮವಾರ ಬೆಳಿಗ್ಗೆ 7.30 ಗಂಟೆಗೆ .

ನಾಡು ಕಂಡ ಸರಳ ಸಜ್ಜನ ರಾಜಕಾರಣಿಭವ್ಯ ವಿಧಾನ ಸೌಧದ ನಿರ್ಮಾತೃ ಶ್ರೀ ಕೆಂಗಲ್ ಹನುಮಂತಯ್ಯಅವರ ಜನ್ಮದಿನದಂದು ಗೌರವ ನಮನಗಳು     #ನಿರ್ಮಲನಂದನಾಥಸ್...
10/02/2024

ನಾಡು ಕಂಡ ಸರಳ ಸಜ್ಜನ ರಾಜಕಾರಣಿ
ಭವ್ಯ ವಿಧಾನ ಸೌಧದ ನಿರ್ಮಾತೃ
ಶ್ರೀ ಕೆಂಗಲ್ ಹನುಮಂತಯ್ಯ
ಅವರ ಜನ್ಮದಿನದಂದು ಗೌರವ ನಮನಗಳು
#ನಿರ್ಮಲನಂದನಾಥಸ್ವಾಮೀಜಿ #ಮಂಡ್ಯಒಕ್ಕಲಿಗರು #ನಂಜಾವಧೂತಸ್ವಾಮೀಜಿ #ರಾಜ್ಯಒಕ್ಕಲಿಗರಸಂಘ #ಮತ್ತೊಮ್ಮೆ_ಹುಟ್ಟಿಬನ್ನಿ_ಗುರುದೇವ #ಚುಂಚನಗಿರಿ #ಒಕ್ಕಲಿಗರಸಂಘ

ಸಜ್ಜೆಪಾಳ್ಯ ಜಮೀನಿನ ಸತ್ಯ ಕಥೆ      #ನಿರ್ಮಲನಂದನಾಥಸ್ವಾಮೀಜಿ  #ಮಂಡ್ಯಒಕ್ಕಲಿಗರು  #ನಂಜಾವಧೂತಸ್ವಾಮೀಜಿ    #ಮತ್ತೊಮ್ಮೆ_ಹುಟ್ಟಿಬನ್ನಿ_ಗುರು...
07/02/2024

ಸಜ್ಜೆಪಾಳ್ಯ ಜಮೀನಿನ ಸತ್ಯ ಕಥೆ
#ನಿರ್ಮಲನಂದನಾಥಸ್ವಾಮೀಜಿ #ಮಂಡ್ಯಒಕ್ಕಲಿಗರು #ನಂಜಾವಧೂತಸ್ವಾಮೀಜಿ #ಮತ್ತೊಮ್ಮೆ_ಹುಟ್ಟಿಬನ್ನಿ_ಗುರುದೇವ #ಚುಂಚನಗಿರಿ #ರಾಜ್ಯಒಕ್ಕಲಿಗರಸಂಘ #ಒಕ್ಕಲಿಗ #ಒಕ್ಕಲಿಗರಸಂಘ

ಕೃಷ್ಣಪ್ಪ ರಂಗಮ್ಮ ಶಿಕ್ಷಣ ಟ್ರಸ್ಟ್ (ರಿ) ಗೆ ಸೇರಿದ ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿಯ ಸಜ್ಜೆಪಾಳ್ಯ ಗ್ರಾಮದ ಜಮೀನು ಒಟ...

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 71 ನೇ  ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ 79ನೇ ಜಯಂತೋತ್ಸವದ ಶುಭಾಶಯಗಳುಶಾ...
18/01/2024

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 71 ನೇ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ
79ನೇ ಜಯಂತೋತ್ಸವದ ಶುಭಾಶಯಗಳು

ಶಾಲೆ, ಕಾಲೇಜು, ಆಸ್ಪತ್ರೆ, ಪರಿಸರ, ಪ್ರಾಣಿ ಸಂರಕ್ಷಣೆ, ವೇದಾಧ್ಯಯನ, ಕೃಷಿ ಸೇರಿದಂತೆ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಶ್ರೀಗಳ ಸೇವೆ ಅಪಾರ.

|


#ನಿರ್ಮಲನಂದನಾಥಸ್ವಾಮೀಜಿ #ಮಂಡ್ಯಒಕ್ಕಲಿಗರು #ನಂಜಾವಧೂತಸ್ವಾಮೀಜಿ #ಮತ್ತೊಮ್ಮೆ_ಹುಟ್ಟಿಬನ್ನಿ_ಗುರುದೇವ #ಚುಂಚನಗಿರಿ

18/01/2024
 #ಮತ್ತೊಮ್ಮೆ_ಹುಟ್ಟಿಬನ್ನಿ_ಗುರುದೇವ....... ಭೈರವೈಕ್ಯರ 11 ನೇ ವರ್ಷದ ಪುಣ್ಯಾರಾಧನೆಭೈರವೈಕ್ಯ  ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಯುಗ ಯೋಗಿ ತ್...
13/01/2024

#ಮತ್ತೊಮ್ಮೆ_ಹುಟ್ಟಿಬನ್ನಿ_ಗುರುದೇವ.......
ಭೈರವೈಕ್ಯರ 11 ನೇ ವರ್ಷದ ಪುಣ್ಯಾರಾಧನೆ

ಭೈರವೈಕ್ಯ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಯುಗ ಯೋಗಿ ತ್ರಿವಿಧ ದಾಸೋಹದ ಹರಿಕಾರ ಸಂತ ಶ್ರೇಷ್ಠ ಡಾ: ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಶ್ರೀಗಳ 11 ನೇ ವರ್ಷದ ಪುಣ್ಯಾರಾಧನಾ...

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠದ 71ನೇ ಪೀಠಾಧಿಪತಿಯಾಗಿ, ಕ್ಷೇತ್ರದ ಪ್ರವರ್ಧಮಾನಕ್ಕೆ ಕಟಿಬದ್ಧರಾಗಿ, ಜಗದ್ಗುರುವಾಗಿ, ಗದ್ದುಗೆ ಏರಿದ ಕ್ಷಣದಿಂದ ಕೊನೆಯ ಕ್ಷಣದವರೆಗೆ ತಮ್ಮ ಇಡೀ ಬದುಕನ್ನೇ ಅದರ ಅಭಿವೃದ್ಧಿಗಾಗಿ ಮೀಸಲಿಟ್ಟವರು. ಅಹರ್ನಿಸಿ ನಿರಂತರವಾಗಿ ಧರ್ಮದ ಏಳ್ಗೆಗೆ ಶ್ರಮಿಸಿದವರು. ತಮ್ಮ ಬಾಳನ್ನೇ ಚಂದನದಂತೆತೇಯ್ದ ಮಹಾಮಹಿಮರು.

ಸ್ವಾಮೀಜಿಯವರು ಮೊದಲ ಆದ್ಯತೆ ನೀಡಿದ್ದು ಶಿಕ್ಷಣ ಕ್ಷೇತ್ರಕ್ಕೆ.

ಹಳ್ಳಿಗರ ಉದ್ಧಾರ ಆಗಬೇಕಾದರೆ ನಮ್ಮ ಗ್ರಾಮೀಣ ಮಹಾಜನತೆ ಮೊದಲು ಅಕ್ಷರಸ್ಥರಾಗಬೇಕೆಂದು ಅವರು ಸಂಕಲ್ಪ ತೊಟ್ಟಿದ್ದರು. ಅದಕ್ಕಾಗಿ ದೀನ-ದಲಿತರು ಮತ್ತು ಹಿಂದುಳಿದ ವರ್ಗದ ಬಡವರಿಗಾಗಿ ಶಾಲೆಗಳನ್ನು, ಮಹಾವಿದ್ಯಾಲಯಗಳನ್ನು, ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುತ್ತಾ ಬಂದರು.
ಈ ಕೈಂಕರ್ಯದಲ್ಲಿ ಗೌರಿಶಂಕರದ ಎತ್ತರಕ್ಕೆ ಬೆಳೆದ ಅವರು, ಅಖಂಡ ವಿಶ್ವವಿದ್ಯಾಲಯವಾಗಿ ತಲೆ ಎತ್ತಿ ನಿಂತರು. ಅವರ ದೂರದೃಷ್ಟಿಯ ಫಲ ಈ ಕ್ಷಣದಲ್ಲಿ ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದಾದ್ಯಂತ 650 ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ.1000000 ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಉಚಿತ ದಾಸೋಹ:

ಹಸಿದು ಬಂದವರಿಗೆ ಅನ್ನ ನೀಡಬೇಕು ಎನ್ನುವ ಕಾರಣಕ್ಕಾಗಿ ಶ್ರೀಕ್ಷೇತ್ರ ಆದಿ ಚುಂಚನಗಿರಿಯಲ್ಲಿ ಉಚಿತ ದಾಸೋಹ ಪದ್ಧತಿ ಅಳವಡಿಸಿಕೊಂಡು ಶ್ರದ್ಧಾ ಭಕ್ತಿಗಳಿಂದ ಅಂತಹ ಕೈಂಕರ್ಯ ಮಾಡುತ್ತಾ ಬಂದವರು. ಈಗ ಪ್ರತಿದಿನ ಕನಿಷ್ಠ ಏಳು ಪಂಕ್ತಿಗಳಷ್ಟು (ಪ್ರತಿ ಪಂಕ್ತಿಯಲ್ಲಿ ಮೂರು ಸಾವಿರ ಜನ) ಮಂದಿ ಉಚಿತವಾಗಿ ಪ್ರಸಾದ ತೆಗೆದುಕೊಳ್ಳುತ್ತಾರೆ.

ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ:

ಕಡು ಬಡವರಿಗೆ ದೊಡ್ಡ-ದೊಡ್ಡ ಆಸ್ಪತ್ರೆಗೆ ಹೋಗಲು ಕಷ್ಟಸಾಧ್ಯ ಎಂದು ಅರಿತ ಸ್ವಾಮೀಜಿ, ಜವರಹಳ್ಳಿ ಎಂಬ ಕುಗ್ರಾಮ ಆರಿಸಿಕೊಂಡು ಬೃಹತ್ ಆಸ್ಪತ್ರೆ ತಾವೇ ಕಟ್ಟಿ ಬೆಂಗಳೂರಿನ ಹೈಟೆಕ್ ಆಸ್ಪತ್ರೆಯಲ್ಲಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದಲ್ಲಿ ದೊರೆಯುವಂತೆ ಮಾಡಿದವರು. ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಮಹಿಳೆಯರು ಹೆರಿಗೆ ಸಂದರ್ಭದಲ್ಲಿ ಅನುಭವಿಸುತ್ತಿದ್ದ ನೋವು ಅರಿತು, ಅದಕ್ಕಾಗಿ ಬೆಳ್ಳೂರು ಕ್ರಾಸ್ ಬಳಿ ವಿಶೇಷ ಘಟಕ ತೆರೆದು ನಿರಂತರವಾಗಿ ನಡೆಸುತ್ತಾ ಬಂದವರು.

ಅನ್ನ, ಆರೋಗ್ಯ ಮತ್ತು ಶಿಕ್ಷಣ ದಾಸೋಹಗಳಿಗೆ ಆದ್ಯತೆ ನೀಡಿದ ಬಾಲಗಂಗಾಧರನಾಥ ಸ್ವಾಮೀಜಿ, ಒಬ್ಬ ಯುಗ ಯೋಗಿಯಾಗಿ, ದಾರ್ಶನಿಕರಾಗಿ, ಸೇವಾ ಧುರೀಣರಾಗಿ, ಪರಿವ್ರಾಜಕರಾಗಿ, ಶ್ರೀ ಗುರುವಾಗಿ ನಿಷ್ಠೆಯಿಂದ ಯಾವ ಲಾಭಾಕಾಂಕ್ಷೆಯೂ ಇಲ್ಲದೆ ನಿರಂತರ ಸೇವೆಯಲ್ಲಿ ತೊಡಗಿಕೊಂಡವರು.

ವಿಶ್ವಪರ್ಯಟನೆ

ತಮ್ಮ ಜೋಳಿಗೆ ಹಿಡಿದು ಒಂಬತ್ತು ಬಾರಿ ವಿಶ್ವ ಪರ್ಯಟನ ಮಾಡಿ ಶ್ರೀಮಠದಲ್ಲಿ ಓದಿ, ಮುಂದೆ ದೊಡ್ಡವರಾಗಿ ವಿದೇಶಗಳಲ್ಲಿ ನೆಲೆಸಿ, ವೈದ್ಯರಾಗಿಯೋ, ಎಂಜಿನಿಯರರಾಗಿಯೋ ಕಾರ್ಯ ನಿರ್ವಹಿಸುತ್ತಿದ್ದ ಅನಿವಾಸಿ ಭಾರತೀಯರಿಂದ ಹಣ ತಂದು, ಅದರಿಂದ ಕ್ಷೇತ್ರವನ್ನು ಸಂವರ್ಧನೆಗೆ ತಂದವರು. ಶೈಕ್ಷಣಿಕ ಕ್ಷೇತ್ರದ ಮಹಾನ್ ರೂವಾರಿ ಆದವರು. ಅವರ ದೂರದೃಷ್ಟಿ ಫಲ ಈ ಹೊತ್ತು ಕರ್ನಾಟಕದಲ್ಲಿ ಶ್ರೀ ಆದಿಚುಂಚನಗಿರಿ ಟ್ರಸ್ಟ್ ಹೆಸರಿನಲ್ಲಿ ನೂರಾರು ವಿದ್ಯಾಸಂಸ್ಥೆಗಳು ಜ್ಞಾನಸೇವೆ ಮಾಡುತ್ತಿವೆ.

ಕರ್ಮಯೋಗಿ:

ಅವರಿಗೆ ಶ್ರೀ ಕಾಲಭೈರವೇಶ್ವರನಲ್ಲಿ ಮಹಾನ್ ನಂಬಿಕೆ ಇತ್ತು. ತಾಯಿ ಶ್ರೀ ಚೌಡೇಶ್ವರಿಯನ್ನು ಜಗನ್ಮಾತೆಯಂದೇ ನಂಬಿದ್ದರು. ಯಾವ ಕ್ಷಣವೂ ಅವರು ರಾಹುಕಾಲ, ಗುಳಿಕಾಲ ನೋಡಿದವರಲ್ಲ. ಎಲ್ಲ ಕಾಲವೂ ಒಳ್ಳೆಯ ಕಾಲ ಎಂದು ಭಾವಿಸಿದವರು ಅವರು. ಎಲ್ಲ ಗಳಿಗೆ ಒಳ್ಳೆಯ ಗಳಿಗೆ ಎಂದು ಹೇಳಿದವರು ಅವರು. ಎಲ್ಲ ದಿನವೂ ಒಳ್ಳೆಯ ದಿನವೆಂದು ಪರಿಭಾವಿಸಿದ ಮಹನೀಯರು ಅವರು. ಆಯಾಸ ಲೆಕ್ಕಿಸದೆ ನಿರಂತರವಾಗಿ ಕೆಲಸ ಮಾಡುತ್ತಾ ಬಂದರು. ಲಾಭಾಪೇಕ್ಷೆ ಬಯಸದ ಅವರೊಬ್ಬ ಕರ್ಮಯೋಗಿ.

ಅಬಲೆಯರ ರಕ್ಷಣೆ;

ಅಬಲೆಯರು ಸಬಲೆಯರಾಗಲು ಶ್ರೀ ಕ್ಷೇತ್ರದಲ್ಲಿ ಶ್ರೀ ಮಠದ ವತಿಯಿಂದ ಅನೇಕ ಕಾರ್ಯಕ್ರಮ ನಿಯೋಜಿಸಿದ್ದಾರೆ. ಅವೆಲ್ಲ ಸಾಂಗೋಪಾಂಗವಾಗಿ ನಡೆಯುತ್ತಿವೆ. ಅಂಧರಿಗಾಗಿ ರಾಮನಗರದ ಅರ್ಚಕರಹಳ್ಳಿ ಬಳಿ ಅಂಧ ಮಕ್ಕಳ ಶಾಲೆ ತೆರೆದು, ಅವರ ಸಮಗ್ರ ಅಭಿವೃದ್ಧಿಗಾಗಿ ವಸತಿ ವ್ಯವಸ್ಥೆ ಕಲ್ಪಿಸಿ, ಆಶ್ರಯ, ಅನ್ನ, ಬಟ್ಟೆ, ಪುಸ್ತಕ, ವಿದ್ಯೆ ಒದಗಿಸಿದ ಪುಣ್ಯಾತ್ಮರು. ಕೇವಲ ಓದಿದರೆ ಸಾಲದು ಅವರ ಕರಕುಶಲ ಕಲೆಗಳು ಅಭಿವೃದ್ಧಿ ಆಗಬೇಕು, ಕಲಾಭಿವ್ಯಕ್ತಿ ಬೆಳಗಿ ಬದುಕಿನಲ್ಲಿ ಬೆಳಗಬೇಕು ಎನ್ನುವ ಕಾರಣದಿಂದ ಬಗೆ-ಬಗೆ ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ತಂದವರು.

ಜಾನಪದ ಕಲೆಗಳ ರಕ್ಷಣೆ:

ಜಾನಪದ ಕಲೆಗಳ ಅಭಿವೃದ್ಧಿಗಾಗಿ ಶ್ರಮಿಸಿದವರು ನಮ್ಮ ಸ್ವಾಮೀಜಿ. ಕ್ಷೇತ್ರದಲ್ಲಿ ವರ್ಷಕ್ಕೆ ಮೂರು ಬಾರಿ ಜಾತ್ರೆ ನಡೆಸುತ್ತಾ, ರಾಜ್ಯದ ಮೂಲೆ-ಮೂಲೆಗಳಿಂದ ಬರುವ ಕಲಾ ತಂಡದ ಕಲಾವಿದರಿಗೆ ಆಶ್ರಯಕೊಟ್ಟು, ಪ್ರತಿಭೆ ಬೆಳಗಿಸಿ, ಮರಳಿ ಊರಿಗೆ ಕಳುಹಿಸುವಾಗ ಪ್ರತಿಯೊಬ್ಬರಿಗೆ ಪಂಚೆ, ವಲ್ಲಿ, ಅಂಗಿ, ಸೀರೆ-ಖಣ, ಮಂಗಳ ದ್ರವ್ಯ ಕೊಟ್ಟು, ಬಸ್ ಚಾರ್ಜ್ ವ್ಯವಸ್ಥೆ ಮಾಡಿ, ಸತ್ಕರಿಸಿ ಕಳುಹಿಸುತ್ತಿದ್ದರು. ಅಂತಹ ಜಾನಪದ ಕಲಾಪ್ರೇಮಿ ನಮ್ಮ ನಲ್ಮೆಯ ಸ್ವಾಮೀಜಿ.
ರಾಮನಗರದ ಬಳಿ ಜಾನಪದ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲು ಎಚ್.ಎಲ್. ನಾಗೇಗೌಡರಿಗೆ ಎಲ್ಲ ರೀತಿಯ ಸಹಕಾರ ಕೊಟ್ಟು, ಅದರ ರೂಪ ಕಂಡು ಖುಷಿಪಟ್ಟವರು ಅವರು.

ವನಸಂವರ್ಧನ:

ಮಳೆಗಾಲದ ಸಂದರ್ಭದಲ್ಲಿ ಹಳ್ಳಿ-ಹಳ್ಳಿಗಳಲ್ಲಿ, ರಸ್ತೆ-ರಸ್ತೆಗಳಲ್ಲಿ ಐದು ಕೋಟಿ ಸಸಿ ನೆಡುವ ಕಾರ್ಯಕ್ರಮ ಹಾಕಿಕೊಂಡು ಯಶಸ್ವಿಯಾದವರು. ನಾನು ಮತ್ತು ನನ್ನ ಕುಟುಂಬದವರು ಅವರ ಈ ವನ ಸಂವರ್ಧನ ಕಾರ್ಯಕ್ರಮದಲ್ಲಿ ನಿಷ್ಠೆಯಿಂದ ಪಾಲ್ಗೊಂಡಿದ್ದೇವೆ. ಸ್ವಾಮೀಜಿ ಸ್ವತಃ ಒಬ್ಬ ರೈತನ ಹಾಗೆ ಸಸಿ ನೆಟ್ಟು, ನೀರು ಎರೆಯುತ್ತಿದ್ದುದನ್ನು ಕಂಡು ಸಂತೋಷಗೊಂಡು ಸ್ಫೂರ್ತಿ ಪಡೆದು, ಇನ್ನಷ್ಟು ಕೆಲಸ ಮಾಡಿದ್ದೇವೆ.

ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಇಂದಿನ ದಿನಗಳಲ್ಲಿ ಆಧುನಿಕ ಜೀವನ ನಿಭಾಯಿಸುವ ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎನ್ನುವ ಕಾರಣ 20 ವರ್ಷಗಳ ಹಿಂದೆ ಮಹಿಳಾ ಶಿಬಿರ ಆಯೋಜಿಸಿದ ಮಹಾತ್ಮ ಅವರು.

ಸರ್ವಧರ್ಮ ಸಮ್ಮೇಳನ,

ಕವಿಗೋಷ್ಠಿ,
ಸಂಸ್ಕೃತ ಸಮ್ಮೇಳನ,
ನಾಟಕೋತ್ಸವ, ಸಂಸ್ಕೃತ,
ನೈತಿಕ ಶಿಬಿರಗಳು,
ಅರ್ಚಕರ ಸಮಾವೇಶ ನಡೆಸುತ್ತಾ
ಜ್ಞಾನ ಪ್ರಸಾರಕ್ಕೆ ಕ್ಷೇತ್ರ ಮೀಸಲಿಟ್ಟವರು.
ಮಕ್ಕಳು ಪ್ರತಿದಿನವೂ ಯೋಗಾಭ್ಯಾಸ ನಡೆಸಬೇಕು ಎಂದು ಆಶಿಸಿ, ಉಚಿತ ಶಿಬಿರ, ಆಯುರ್‌ಸಂವರ್ಧನ ಕಾರ್ಯಾಗಾರ ನಡೆಸಿಕೊಂಡು ಬಂದವರು.

ಜಾನಪದ ಸಂಗ್ರಹ,

ಸಾಹಿತ್ಯ ಶಿಬಿರ,
ವೈಜ್ಞಾನಿಕ ವಿಚಾರ ಸಂಕಿರಣ ಎಲ್ಲವನ್ನೂ ಮಠದಲ್ಲಿ ನಡೆಸುತ್ತಾ ಗ್ರಾಮೀಣ ರೈತರಿಗೆ ಅದೆಲ್ಲದರ ಸೌಲಭ್ಯ ದೊರಕುವಂತೆ ಮಾಡಿ, ಜ್ಞಾನದ ಪರಿಧಿ ವಿಸ್ತರಿಸಿದವರು.

ರೈತರು ಸಂಕಷ್ಟದಲ್ಲಿದ್ದಾಗ 1992ರಲ್ಲಿ ರ್ಯಲಿಗೆ ಕರೆಕೊಟ್ಟು ರೈತ ಸಮುದಾಯವನ್ನು ಸಂಘಟಿಸಿದ ಮಹಾನ್ ದಾರ್ಶನಿಕರು.
ಬಲಗಾಲಗಳಲ್ಲಿ ರಾಸುಗಳಿಗೆ ಉಚಿತ ಮೇವು ನೀಡಿದವರು

ಇಂತಹ ಯುಗಯೋಗಿ ನಮಗೆಲ್ಲ ಗುರುವಾಗಿ ಮತ್ತೊಮ್ಮೆ ಮೂಡಿಬರಲಿ ಎಂದು ಕಾಲ ಭೈರವೇಶ್ವರನಲ್ಲಿ ಪ್ರಾರ್ಥಿಸುತ್ತೇನೆ.

ಪ್ರಶಸ್ತಿ ಮತ್ತು ಗೌರವಗಳು

*2010 ರಲ್ಲಿ. ಪದ್ಮಭೂಷಣ

*1990 ರಾಷ್ಟ್ರೀಯ ಏಕತಾ ಪ್ರಶಸ್ತಿ; ಗ್ಲೋಬಲ್‌ ಎಕನಾಮಿಕ್‌ ಕೌನ್ಸಿಲ್‌, ನವ ದೆಹಲಿ

* 1993 ಅಭಿನವ ವಿವೇಕಾನಂದ; ವಿಶ್ವ ಧಾರ್ಮಿಕ ಶೃಂಗಸಭೆ, ಚಿಕಾಗೋ, ಯುಎಸ್‌ಎ

*2004 ಪರಿಸರ ರತ್ನ- ಕರ್ನಾಟಕ ಸರ್ಕಾರ

* 2006 ವಿದ್ಯಾಸಾಮ್ರಾಟ್‌- ಜೈನ್‌ ಕೌನ್ಸಿಲ್‌- ಕರ್ನಾಟಕ

* 2007 ಸೇವಾಸೂರ್ಯ-ನಿವಾರಣಾ ಸಂಸ್ಥೆ; ಬೆಂಗಳೂರು

* 2007 ಸನಾತನ ಧರ್ಮರತ್ನ- ಹಿಂದೂ ದೇವಾಲಯಗಳ ಮಹಾ ಒಕ್ಕೂಟ- ಉತ್ತರ ಅಮೇರಿಕಾ, ಯುರೋಪ್‌

* 2008 ವೈದ್ಯಸೇವಾರತ್ನ- ಶ್ರೀ ಆದಿಚುಂಚನಗಿರಿ ಮಠ- ಬಾಲಗಂಗಾಧರ ನಗರ

* 2008 ಗೌರವ ಡಾಕ್ಟರೇಟ್‌-ಅಂತಾರಾಷ್ಟ್ರೀಯ ವೇದಿಕ್‌ ಹಿಂದೂ ವಿಸ್ವವಿದ್ಯಾಲಯ, ಅಮೇರಿಕಾ.

#ಮತ್ತೊಮ್ಮೆ_ಹುಟ್ಟಿಬನ್ನಿ_ಗುರುದೇವ #ನಂಜಾವಧೂತಸ್ವಾಮೀಜಿ #ಮಂಡ್ಯಒಕ್ಕಲಿಗರು #ಚುಂಚನಗಿರಿ #ಒಕ್ಕಲಿಗರು #ನಿರ್ಮಲನಂದನಾಥಸ್ವಾಮೀಜಿ #ಬಾಲಗಂಗಾಧರನಾಥಸ್ವಾಮೀಜಿ

11/01/2024

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಹೇಳಿಕೆ. ಕನ್ನಡ ನಾಮಫಲಕ ಆಂದೋಲನ ಯಶಸ್ವಿಯಾಗಿದೆ. ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಇದು ಕನ್ನಡಿಗರ ಜಯ, ಕರ್ನಾಟಕ ರಕ್ಷಣಾ ವೇದಿಕೆಯ ಜಯ. ಈ ಹೋರಾಟವನ್ನು ಬೆಂಬಲಿಸಿದ ಎಲ್ಲ ಕನ್ನಡಪರ ಚಳವಳಿಗಾರರಿಗೆ, ಮಾಧ್ಯಮಮಿತ್ರರಿಗೆ, ಕರವೇ ಮುಖಂಡರು, ಕಾರ್ಯಕರ್ತರಿಗೆ, ಜನಸಾಮಾನ್ಯರಿಗೆ ಕೃತಜ್ಞತೆಗಳು.

#ನಾರಾಯಣಗೌಡರು #ಕರವೇ #ಕರ್ನಾಟಕ #ಕನ್ನಡ #ಮಂಡ್ಯಒಕ್ಕಲಿಗರು #ನಂಜಾವಧೂತಸ್ವಾಮೀಜಿ #ಚುಂಚನಗಿರಿ #ಒಕ್ಕಲಿಗರು

10/01/2024

ಯುಗಯೋಗಿ 'ಪದ್ಮಭೂಷಣ' ಪುರಸ್ಕೃತ ಪರಮಪೂಜ್ಯ ಜಗದ್ಗುರು

ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ

ಮಹಾಸ್ವಾಮೀಜಿಯವರ

79ನೇ ಜಯಂತ್ಯುತ್ಸವ ಹಾಗೂ 11ನೇ ವರ್ಷದ ಸಂಸ್ಮರಣಾ ಮಹೋತ್ಸವ.

Sri Sri Nirmalanandanatha Maha Swamiji ಶ್ರೀ ಕಾಲಭೈರವೇಶ್ವರ ಸ್ವಾಮಿ MK ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ Sri Sri Sri Adichunchanagiri Mata Sri Sri Sri Nirmalanandanatha Swamiji ಶ್ರೀ ಕಾಲಭೈರವಸ್ವಾಮೀ ಆದಿಚುಂಚನಗಿರಿ Sri kalabhairava Swami Adichunchanagiri MK Sri Sri Nanjavadhutha MahaSwamiji ಶ್ರೀ ಶ್ರೀ ಶ್ರೀ ನಂಜವಧುಥ ಮಹಸ್ವಮಿಜಿ ಮಕ್ MK sri kalabhairava swami adichunchanagiri Tumkur Times Namma City Tumkur H D Kumaraswamy #ಮಂಡ್ಯಒಕ್ಕಲಿಗರು #ನಂಜಾವಧೂತಸ್ವಾಮೀಜಿ #ಚುಂಚನಗಿರಿ #ನಾರಾಯಣಗೌಡರು #ಒಕ್ಕಲಿಗರು

ಆತ್ಮೀಯ ಒಕ್ಕಲಿಗ ಉದ್ಯಮಿಗಳಿಗೆ ಹಾಗೂ ವ್ಯಾಪಾರಸ್ಥರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವ ಮಹತ್ವಕಾಂಕ್ಷೆಯಿಂದ  # # first circle business Exp...
05/01/2024

ಆತ್ಮೀಯ ಒಕ್ಕಲಿಗ ಉದ್ಯಮಿಗಳಿಗೆ ಹಾಗೂ ವ್ಯಾಪಾರಸ್ಥರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವ ಮಹತ್ವಕಾಂಕ್ಷೆಯಿಂದ # # first circle business Expo # # ವತಿಯಿಂದ # # ಅರಮನೆ ಮೈದಾನದಲ್ಲಿ ( palace ground ) ದೊಡ್ಡಮಟ್ಟದ ವೇದಿಕೆ ಆಯೋಜಿಸುತ್ತಿದ್ದು, ಈ ಸುವರ್ಣ ಅವಕಾಶವನ್ನು ಎಲ್ಲ ಉದ್ಯಮಿಗಳು ಹಾಗೂ ವ್ಯಾಪಾರಸ್ಥರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿ ಹಾಗೂ ನಿಮಗಾಗಿ ಆಯೋಜಿಸುತ್ತಿರುವ # business Expo event # # ಅನ್ನು ಯಶಸ್ವಿಗೊಳಿಸಿ.

ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುವ ಎಲ್ಲಾ ಸಂಘ ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿ ಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.

# #ಇಂತಿ
ವಿಶ್ವ ಒಕ್ಕಲಿಗರ ಜಾಗೃತಿ ಪತ್ರಿಕೆ
#ನಾರಾಯಣಗೌಡರು #ಒಕ್ಕಲಿಗರು #ಚುಂಚನಗಿರಿ #ನಂಜಾವಧೂತಸ್ವಾಮೀಜಿ #ಮಂಡ್ಯಒಕ್ಕಲಿಗರು

27/12/2023

ಜೈ ಶ್ರೀ ಗುರುದೇವ್
ಶೃಂಗೇರಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದಲ್ಲಿ ಆಯೋಜಿಸಲಾಗಿರುವ ಸುವರ್ಣ ಮಹೋತ್ಸವ ಗುರುವಂದನಾ ಕಾರ್ಯಕ್ರಮ
#ಮಂಡ್ಯಒಕ್ಕಲಿಗರು #ನಂಜಾವಧೂತಸ್ವಾಮೀಜಿ #ಚುಂಚನಗಿರಿ #ಒಕ್ಕಲಿಗರು #ನಾರಾಯಣಗೌಡರು #ಕನ್ನಡ

ಕನ್ನಡ ಸಾಹಿತ್ಯ ಪರಿಷತ್ತ ಸ್ಥಾಪಿಸಿರುವ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರು ಭಾಜನರಾಗಿದ್ದಾರ...
26/12/2023

ಕನ್ನಡ ಸಾಹಿತ್ಯ ಪರಿಷತ್ತ ಸ್ಥಾಪಿಸಿರುವ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರು ಭಾಜನರಾಗಿದ್ದಾರೆ.
ಕನ್ನಡ ಸಾಮ್ರಾಟ್ ಶ್ರೀ ಟಿ ಎ ನಾರಾಯಣ ಗೌಡರಿಗೆ ಅಭಿನಂದನೆಗಳು. ಕರ್ನಾಟಕ ಜಾನಪದ ಸೇವಾ ಟ್ರಸ್ಟ್ (ರಿ) ಮತ್ತು ಕನ್ನಡದ ಸಾಹಿತ್ಯ ಪರಿಷತ್ ನವರಿಗೆ ತುಂಬು ಹೃದಯದ ಧನ್ಯವಾದಗಳು.
#ಕರವೇ #ನಾರಾಯಣಗೌಡರು #ಕನ್ನಡ #ಕರ್ನಾಟಕ #ಮಂಡ್ಯಒಕ್ಕಲಿಗರು #ನಂಜಾವಧೂತಸ್ವಾಮೀಜಿ #ಚುಂಚನಗಿರಿ #ಒಕ್ಕಲಿಗರು Sri Sri Nirmalanandanatha Maha Swamiji ಶ್ರೀ ಕಾಲಭೈರವೇಶ್ವರ ಸ್ವಾಮಿ MK ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ Sri Sri Sri Adichunchanagiri Mata

24/12/2023

ಹನುಮ ಜಯಂತಿಯ ಶುಭಾಶಯಗಳು #ಮಂಡ್ಯಒಕ್ಕಲಿಗರು #ನಂಜಾವಧೂತಸ್ವಾಮೀಜಿ #ಒಕ್ಕಲಿಗರು #ಚುಂಚನಗಿರಿ Sri Sri Nirmalanandanatha Maha Swamiji ಶ್ರೀ ಕಾಲಭೈರವೇಶ್ವರ ಸ್ವಾಮಿ MK Sri Sri Sri Nirmalanandanatha Swamiji ಶ್ರೀ ಕಾಲಭೈರವಸ್ವಾಮೀ ಆದಿಚುಂಚನಗಿರಿ Sri kalabhairava Swami Adichunchanagiri MK Sri Sri Nanjavadhutha MahaSwamiji ಶ್ರೀ ಶ್ರೀ ಶ್ರೀ ನಂಜವಧುಥ ಮಹಸ್ವಮಿಜಿ ಮಕ್ MK sri kalabhairava swami adichunchanagiri H D Kumaraswamy Namma City Tumkur ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ Sri Sri Sri Adichunchanagiri Mata

ಪರಭಾಷಿಕರ ತರ್ಜುಮೆಇನ್ನೂ ಏನೇನು ನೊಡ್ಬೇಕಪ್ಪ ಈ ಜನ್ಮದಲ್ಲಿ  sri kalabhairava swami adichunchanagiri Sri Sri Sri Nirmalanandanath...
16/12/2023

ಪರಭಾಷಿಕರ ತರ್ಜುಮೆ
ಇನ್ನೂ ಏನೇನು ನೊಡ್ಬೇಕಪ್ಪ ಈ ಜನ್ಮದಲ್ಲಿ
sri kalabhairava swami adichunchanagiri Sri Sri Sri Nirmalanandanatha Swamiji Sri Sri Nanjavadhutha MahaSwamiji ಶ್ರೀ ಶ್ರೀ ಶ್ರೀ ನಂಜವಧುಥ ಮಹಸ್ವಮಿಜಿ ಮಕ್ MK ಶ್ರೀ ಕಾಲಭೈರವಸ್ವಾಮೀ ಆದಿಚುಂಚನಗಿರಿ Sri kalabhairava Swami Adichunchanagiri MK ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ Sri Sri Sri Adichunchanagiri Mata Sri Sri Nirmalanandanatha Maha Swamiji ಶ್ರೀ ಕಾಲಭೈರವೇಶ್ವರ ಸ್ವಾಮಿ MK Sri kalabhairaveshwara Swamy prasana MK ಶ್ರೀ ಕಾಲಭೈರವೇಶ್ವರ ಸ್ವಾಮೀ ಪ್ರಸನ್ನ Bharatiya Janata Party (BJP) Tumkur Times BJP Tumkur Rural Namma City Tumkur HD devegowda brigade H D Kumaraswamy H D Devegowda @

ಇಂದು ತುಮಕೂರು ಜಿಲ್ಲಾ CEO ಅವರು ನಮ್ಮ ಪತ್ರಿಕೆಗೆ ಶುಭ ಕೋರಿದರು. ಧನ್ಯವಾದಗಳು ಪ್ರಭು ಸರ್ 🙏 sri kalabhairava swami adichunchanagiri ...
16/12/2023

ಇಂದು ತುಮಕೂರು ಜಿಲ್ಲಾ CEO ಅವರು ನಮ್ಮ ಪತ್ರಿಕೆಗೆ ಶುಭ ಕೋರಿದರು. ಧನ್ಯವಾದಗಳು ಪ್ರಭು ಸರ್ 🙏
sri kalabhairava swami adichunchanagiri Sri Sri Sri Nirmalanandanatha Swamiji Sri Sri Nanjavadhutha MahaSwamiji ಶ್ರೀ ಶ್ರೀ ಶ್ರೀ ನಂಜವಧುಥ ಮಹಸ್ವಮಿಜಿ ಮಕ್ MK ಶ್ರೀ ಕಾಲಭೈರವಸ್ವಾಮೀ ಆದಿಚುಂಚನಗಿರಿ Sri kalabhairava Swami Adichunchanagiri MK ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ Sri Sri Sri Adichunchanagiri Mata Sri kalabhairaveshwara Swamy prasana MK ಶ್ರೀ ಕಾಲಭೈರವೇಶ್ವರ ಸ್ವಾಮೀ ಪ್ರಸನ್ನ Sri Sri Nirmalanandanatha Maha Swamiji ಶ್ರೀ ಕಾಲಭೈರವೇಶ್ವರ ಸ್ವಾಮಿ MK B Suresh Gowda Tumkur Times Namma City Tumkur H D Kumaraswamy HD devegowda brigade H D Devegowda Bharatiya Janata Party (BJP) JDS Dasarahalli #ಮಂಡ್ಯಒಕ್ಕಲಿಗರು #ನಂಜಾವಧೂತಸ್ವಾಮೀಜಿ #ಆದಿಚುಂಚನಗಿರಿ #ತುಮಕೂರು #ಚುಂಚನಗಿರಿ #ಒಕ್ಕಲಿಗರು

ಪರಮಪೂಜ್ಯ ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳ 79 ನೇ ಜನ್ಮದಿನೋತ್ಸವದ ಆಚರಣೆ  sri kalabhairava swami adichunc...
13/12/2023

ಪರಮಪೂಜ್ಯ ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳ 79 ನೇ ಜನ್ಮದಿನೋತ್ಸವದ ಆಚರಣೆ
sri kalabhairava swami adichunchanagiri ಶ್ರೀ ಕಾಲಭೈರವಸ್ವಾಮೀ ಆದಿಚುಂಚನಗಿರಿ Sri kalabhairava Swami Adichunchanagiri MK Sri Sri Nanjavadhutha MahaSwamiji ಶ್ರೀ ಶ್ರೀ ಶ್ರೀ ನಂಜವಧುಥ ಮಹಸ್ವಮಿಜಿ ಮಕ್ MK Sri Sri Sri Nirmalanandanatha Swamiji Sri Sri Nirmalanandanatha Maha Swamiji ಶ್ರೀ ಕಾಲಭೈರವೇಶ್ವರ ಸ್ವಾಮಿ MK #ಮಂಡ್ಯಒಕ್ಕಲಿಗರು #ಆದಿಚುಂಚನಗಿರಿ #ಒಕ್ಕಲಿಗರು #ತುಮಕೂರು #ಮಂಡ್ಯ #ಚುಂಚನಗಿರಿ #ನಂಜಾವಧೂತಸ್ವಾಮೀಜಿ #ಹಾಸನ #ಬೆಂಗಳೂರು #ಕೋಲಾರ #ದೊಡ್ಡಬಳ್ಳಾಪುರ #ಶಿವಮೊಗ್ಗ

ಪೂಜ್ಯ ಗುರುಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳಿಗೆ ಜನ್ಮ ದಿನದ ಶುಭಾಶಯಗಳು 🙏     #ಮಂಡ್ಯಒಕ್ಕಲಿಗರು  #ನಂಜಾವಧೂತಸ್ವಾಮೀಜಿ    #ಚುಂಚನ...
08/12/2023

ಪೂಜ್ಯ ಗುರುಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳಿಗೆ ಜನ್ಮ ದಿನದ ಶುಭಾಶಯಗಳು 🙏
#ಮಂಡ್ಯಒಕ್ಕಲಿಗರು #ನಂಜಾವಧೂತಸ್ವಾಮೀಜಿ #ಚುಂಚನಗಿರಿ #ಒಕ್ಕಲಿಗರು #ಆದಿಚುಂಚನಗಿರಿ #ತುಮಕೂರು #ಮಂಡ್ಯ

ಜೈ ಶ್ರೀ ಗುರುದೇವ 🙏 🙏ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ ಕಾಂಬೋಡಿಯಾ ದೇಶದ ಆಂಗ್ಕೋರ್ ವಾಟ್' ನಗರದಲ್ಲಿರುವ ಹಿಂದೂ ದೇವಾಲಯಕ್ಕೆ (Combodia An...
07/12/2023

ಜೈ ಶ್ರೀ ಗುರುದೇವ 🙏 🙏

ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ ಕಾಂಬೋಡಿಯಾ ದೇಶದ ಆಂಗ್ಕೋರ್ ವಾಟ್' ನಗರದಲ್ಲಿರುವ ಹಿಂದೂ ದೇವಾಲಯಕ್ಕೆ (Combodia Angkor Wat) ಪ್ರಪಂಚದ 8ನೇ ಅದ್ಭುತವಾಗಿ ಪರಿಗಣಿಸಲ್ಪಟ್ಟ ಶ್ರೀ ನಾರಾಯಣ ಹಾಗೂ ಬ್ರಹ್ಮ ದೇವಾಲಯಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಭೇಟಿ ನೀಡಿದ ಸಂದರ್ಭದಲ್ಲಿ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಪೂಜ್ಯ ಶ್ರೀ ಶ್ರೀ ಸೋಮೇಶ್ವರನಾಥ ಸ್ವಾಮೀಜಿಯವರು, ಪೂಜ್ಯ ಶ್ರೀ ದಯಾನಂದಪುರಿ ಸ್ವಾಮೀಜಿಯವರು, ಪೂಜ್ಯ ಶ್ರೀ ರಾಮಾನುಜ ಸ್ವಾಮೀಜಿಯವರು ಉಪಸ್ಥಿತರಿದ್ದರು.
#ಆದಿಚುಂಚನಗಿರಿ #ಮಂಡ್ಯಒಕ್ಕಲಿಗರು #ನಂಜಾವಧೂತಸ್ವಾಮೀಜಿ #ತುಮಕೂರು #ಚುಂಚನಗಿರಿ #ಒಕ್ಕಲಿಗರು

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಚಿಕ್ಕಬಳ್ಳಾಪುರ ಹಾಗೂ ತುಮಕೂರು ಶಾಖಾಮಠದ ಪೂಜ್ಯ ಗುರುಗಳಾದ ಶ್ರೀ ಶ್ರೀ ಮಂಗಳನಾಥ ಸ್ವಾಮೀಜಿಗಳಿಗೆ ಜ...
05/12/2023

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಚಿಕ್ಕಬಳ್ಳಾಪುರ ಹಾಗೂ ತುಮಕೂರು ಶಾಖಾಮಠದ ಪೂಜ್ಯ ಗುರುಗಳಾದ ಶ್ರೀ ಶ್ರೀ ಮಂಗಳನಾಥ ಸ್ವಾಮೀಜಿಗಳಿಗೆ ಜನ್ಮ ವರ್ಧಂತಿಯ ಶುಭಾಶಯಗಳು 🙏

#ನಂಜಾವಧೂತಸ್ವಾಮೀಜಿ #ಚುಂಚನಗಿರಿ #ಆದಿಚುಂಚನಗಿರಿ #ಮಂಡ್ಯಒಕ್ಕಲಿಗರು #ತುಮಕೂರು

ಡಿಸೆಂಬರ್ ತಿಂಗಳ ಕ್ಯಾಲೆಂಡರ್      #ರವಿಕಾಂತೇಗೌಡ    #ಐಜಿಪಿ          #ಒಕ್ಕಲಿಗ  #ಕುವೆಂಪು    #ಪೂರ್ಣಚಂದ್ರತೇಜಸ್ವಿ    #ನಂಜಾವಧೂತಸ್ವಾ...
03/12/2023

ಡಿಸೆಂಬರ್ ತಿಂಗಳ ಕ್ಯಾಲೆಂಡರ್
#ರವಿಕಾಂತೇಗೌಡ #ಐಜಿಪಿ #ಒಕ್ಕಲಿಗ #ಕುವೆಂಪು #ಪೂರ್ಣಚಂದ್ರತೇಜಸ್ವಿ #ನಂಜಾವಧೂತಸ್ವಾಮೀಜಿ

ಶ್ರೀ ಬಿ.ಆರ್.ರವಿಕಾಂತೇಗೌಡ  ಅವರೊಂದಿಗೆ (ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್, ಸೆಂಟ್ರಲ್ ರೇಂಜ್, ಬೆಂಗಳೂರು.)   #ಐಜಿಪಿ      #ರವಿಕಾಂತೇಗೌ...
30/11/2023

ಶ್ರೀ ಬಿ.ಆರ್.ರವಿಕಾಂತೇಗೌಡ ಅವರೊಂದಿಗೆ (ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್, ಸೆಂಟ್ರಲ್ ರೇಂಜ್, ಬೆಂಗಳೂರು.)
#ಐಜಿಪಿ #ರವಿಕಾಂತೇಗೌಡ

11/11/2023

ಕರ್ನಾಟಕದ ಬಾವುಟಕ್ಕೆ ಮಾನ್ಯತೆ ಸಿಕ್ಕರೆ, ಕನ್ನಡಗರ ಆತ್ಮಾಭಿಮಾನ ಮತ್ತಷ್ಟು ಹೆಚ್ಚಾಗಲಿದೆ. ಈಗ ಇರುವ ಹಳದಿ, ಕೆಂಪು ಬಣ್ಣದ ಬಾವುಟ ಕನ್ನಡಿಗರ ಅಸ್ಮಿತೆಯಾಗಿ ಮನೆಮನಗಳಲ್ಲಿ ಹಲವಾರು ವರ್ಷಗಳಿಂದ ಹಾರುತ್ತಲೆ ಇದೆ, ಆದರೆ ಇಲ್ಲಿಯವರೆಗೂ ನಾಡ ಬಾವುಟಕ್ಕೆ ಸಂವಿಧಾನಿಕ ಮಾನ್ಯತೆ ಸಿಕ್ಕಿಲ್ಲ.
#ಕನ್ನಡಬಾವುಟ_ನಮ್ಮಗುರುತು

ಹಿರಿಯ ರಾಜಕಾರಣಿ, ಮಾಜಿ ಸಚಿವ ಡಿ.ಬಿ ಚಂದ್ರೇಗೌಡ ಅವರು ನಿಧನರಾಗಿದ್ದಾರೆ. ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಚಂದ್ರೇಗೌಡ, ಅವರು 1936 ಆಗಸ್ಟ್ ...
07/11/2023

ಹಿರಿಯ ರಾಜಕಾರಣಿ, ಮಾಜಿ ಸಚಿವ ಡಿ.ಬಿ ಚಂದ್ರೇಗೌಡ ಅವರು ನಿಧನರಾಗಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಚಂದ್ರೇಗೌಡ, ಅವರು 1936 ಆಗಸ್ಟ್ 26 ರಂದು ಜನಿಸಿದರು. ತಂದೆ ಪಟೇಲ್ ಭೈರೇಗೌಡ. ತಾಯಿ ಪುಟ್ಟಮ್ಮ.
ಆಪ್ತ ವಲಯದಲ್ಲಿ ಡಿಬಿಸಿ ಎಂದೇ ಜನಾನೂರಾಗಿಯಾಗಿದ್ದ ಡಿ.ಬಿ ಚಂದ್ರೇಗೌಡರು, ಕಾನೂನು ಪದವಿ ಪಡೆದು ವಕೀಲ ವೃತ್ತಿಯಲ್ಲಿ ನಿರತರಾಗಿದ್ದರು. 1971ರಲ್ಲಿ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಅವರು, ವಿಧಾನಸಭೆ, ವಿಧಾನ ಪರಿಷತ್ತು, ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರಾಗುವ ಮೂಲಕ ನಾಲ್ಕೂ ಸದನಗಳಲ್ಲಿ ಸದಸ್ಯರಾಗಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

1971ರಲ್ಲಿ ಡಿ.ಬಿ. ಚಂದ್ರೇಗೌಡರು ಮೊದಲ ಬಾರಿಗೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. 1977ರಲ್ಲಿ 2ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಅವರು, 1978ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸುವ ಸಂದರ್ಭ ಬಂದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಗೆಲುವಿಗೆ ಶ್ರಮಿಸುವ ಮೂಲಕ ದೇಶದ ಗಮನ ಸೆಳೆದಿದ್ದರು. ಸಂಸದರ ಸ್ಥಾನಕ್ಕೆ ರಾಜೀನಾಮೆಯ ಬಳಿಕ ವಿಧಾನ ಪರಿಷತ್ತಿನ ಸದಸ್ಯರಾಗಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಸಂಪುಟದಲ್ಲಿ 1979-1980 ಅವಧಿಯಲ್ಲಿ ಅವರು ನೀರಾವರಿ ಸಚಿವರಾಗಿದ

Address

Bangalore
560058

Alerts

Be the first to know and let us send you an email when Vishwa vokkaligara Jagruti posts news and promotions. Your email address will not be used for any other purpose, and you can unsubscribe at any time.

Contact The Business

Send a message to Vishwa vokkaligara Jagruti:

Videos

Share

Category


Other Magazines in Bangalore

Show All