11/12/2023
I have reached 7.5K followers! Thank you for your continued support. I could not have done it without each of you. 🙏🤗🎉
Living Harmony With Nature ಕಾಡು,ವನ್ಯಜೀವಿಗಳ ಬಗ್ಗೆ ಸುತ್ತಾಡಿ ತಮ್ಮೆಲ್ಲರ ಮನೆ ಬಾಗಿಲಿಗೆ ವನ್ಯಜೀವಿಗಳ ಮತ್ತು ಅರಣ್ಯದ ಸಂಪೂರ್ಣ ಮಾಹಿತಿಯನ್ನು ನೀಡಲು ಪ್ರಾರಂಭಿಸಿದ ಪೇಜ್ .
I have reached 7.5K followers! Thank you for your continued support. I could not have done it without each of you. 🙏🤗🎉
Road to Paradise
ನದಿಯ ನೆನಪು
ಟ್ವಿಟ್ಟರ್ನಲ್ಲಿ ಇದೊಂದು ಕುತೂಹಲಕರ ಪೋಸ್ಟ್ ನೋಡಿದೆ. ನದಿ ತನ್ನ ಪಾತ್ರವನ್ನು ನೆನಪು ಬಿಡುವುದಿಲ್ಲವಂತೆ.
ನೂರಾರು ವರ್ಷಗಳ ಬಳಿಕ ಯಮುನೆ ದಿಲ್ಲಿಯಲ್ಲಿ ತನ್ನ ಹಳೆಯ ಹಾದಿಯನ್ನು ನೆನಪಿಸಿಕೊಂಡು ಮತ್ತೆ ಹರಿಯುತ್ತಿದ್ದಾಳೆ!!
ಎಲ್ಲ ಕಡೆ ನದಿಗಳು ಹೀಗೆ ಹಳೆಯ ಹಾದಿಯ ನೆನಪು ಮಾಡಿಕೊಂಡರೆ ದೇಶದ ಮಹಾನಗರಗಳ ಗತಿ!!!
Credit: Rajaram Tallur
First Cheetah Cub/s born in Bharat after 79 years- Two days after sad News of a female Namibian Cheetah sasha's unfortunate death, another Namibian Cheetah named Siya gives birth to 4 cubs in MP's Kuno National Park.
Dhangar is a herding caste of people found in the Indian states of Maharashtra, Karnataka, Goa,...
Butea monosperma is a species of Butea native to tropical and sub-tropical parts of the South Asia and Southeast Asia, ra...
https://youtu.be/FgcskpQKPDM
ಹಬ್ಬುತ್ತಿರುವ ಕಾಡ್ಗಿಚ್ಚು ಆರಿಸುವುದು ಅಷ್ಟು ಸುಲಭವಲ್ಲ. ಬೆಂಕಿಯ ಕೆನ್ನಾಲಿಗೆಗೆ ದಿಕ್ಕು ತಪ್ಪಿ ಅಲೆಯುವ ವನ್ಯಜೀವಿಗಳ ಆರ್ತನಾದಕ್ಕೆ ಕಿವಿಯಾಗುವವರು ಯಾರು.? ಇಂತಹ ಹಲವು ದುರ್ಘಟನೆಗಳಿಗೆ ಹಲವಾರು ಬಾರಿ ಸಾಕ್ಷಿಯಾಗಿರುವ ಕರ್ನಾಟಕ ರಾಜ್ಯದಲ್ಲಿ ಕಾಡ್ಗಿಚ್ಚು ಅದು ಉಂಟು ಮಾಡಿದ ಸಾವುಗಳು,ನಾಶವಾದ ಪ್ರಾಕೃತಿಕ ಸಂಪತ್ತು ಮನಕಲುಕುವಂತಿದೆ. ಅರಣ್ಯ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಸುತ್ತಲೂ ಕಂದಕವನ್ನು ನಿರ್ಮಿಸಿ ಬೆಂಕಿಯನ್ನು ತಡೆಯುವ ಕ್ರಮ ಈ ಹಿಂದೆ ಜಾರಿಯಲ್ಲಿತ್ತು.ಈ ಪದ್ದತಿಯನ್ನು ಕ್ರಿ.ಶ 1870 ರಲ್ಲಿ ಬ್ರಿಟಿಷರು 'Forest Fire Line' ಯೋಜನೆಯಡಿ ಜಾರಿಗೆ ತಂದಿದ್ದರು, ಈ ನಿಯಮ ಇಂದಿಗೂ ಭಾರತದ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿದೆ.
ಈ ಕಾಡ್ಗಿಚ್ಚು ಅನ್ನೋ "ಬೆಂಕಿಯಾಟ" ನಮ್ಮ ಕಾಡನ್ನಷ್ಟೇ ಅಲ್ಲ ನಮ್ಮೆಲ್ಲರ ಬದುಕನ್ನು ಸುಡಲು ಶುರುವಾಗಿದೆ. ಅಪಾರ ಪ್ರಮಾಣದ ಅಮೂಲ್ಯ ಸಸ್ಯ-ಪ್ರಾಣಿ ಸಂಪತ್ತು ಬೆಂಕಿಯ ರೌದ್ರನರ್ತನದಲ್ಲಿ ಹೇಳ ಹೆಸರಿಲ್ಲದಂತೆ ಭಸ್ಮವಾಗುತ್ತಿರುವುದು, ನಾಳೆ ನಿಮಗೂ ಇದೇ ಸ್ಥಿತಿ ಅನ್ನೋದನ್ನ ಎಚ್ಚರಿಸುತ್ತಿದೆ. ಇಂತಹ ಕಾಡ್ಗಿಚ್ಚಿಗೆ ಪ್ರತ್ಯಕ್ಷವಾಗಿಯೋ-ಪರೋಕ್ಷವಾಗಿಯೋ ಹತ್ತಾರು ಡಿಗ್ರಿ ಓದಿಕೊಂಡ ನಾವೇ ಕಾರಣರು.!
ಗುಡ್ಡ ಹತ್ತಿ ಬೆಂಕಿ ಆರಿಸಲು ಹರ ಸಾಹಸ ಪಡುವುದೇನು ಹೊಸತಲ್ಲ. ಆದರೆ ಬೆಂಕಿ ನಂದಿಸುವ ವಿಚಾರದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ!ಬೆಂಕಿ ಬಿದ್ದ ಪ್ರದೇಶದ ಸುತ್ತಲೂ ಕೆಳಗೆ ಬಿದ್ದಿರುವ ಒಣಗೆಲೆ ಹಾಗೂ ಒಣಗಿದ ಯಾವುದೇ ವಸ್ತುಗಳನ್ನು ತೆರವುಗೊಳಿಸಿ, ತೀವ್ರ ಸ್ವರೂಪದಲ್ಲಿ ಬೆಂಕಿ ಇನ್ನಷ್ಟು ಹರಡದಂತೆ ಶ್ರಮವಹಿಸುವುದು ಹಾಗೂ ಬಿರುಬಿಸಿಲಿನ ಯಾತನೆಯ ನಡುವೆಯೂ ಉಸಿರುಗಟ್ಟಿಸಿಕೊಂಡು ಸಾಧ್ಯವಾದಷ್ಟು ಬೆಂಕಿ ನಂದಿಸಲು ಇಲಾಖೆಯ ಕೆಳಹಂತದ ಸಿಬ್ಬಂದಿಗಳ ಪ್ರಯತ್ನ ಶ್ಲಾಘನೀಯ. ಇದಿನ್ನೂ ಬೇಸಿಗೆಯ ಆರಂಭ. ಮುಂಬರುವ ದಿನಗಳಲ್ಲಿ ತಾಪಮಾನ ಹೆಚ್ಚಾಗುವ ಬಗ್ಗೆ ವರದಿಗಳು ಮುನ್ಸೂಚನೆ ನೀಡುತ್ತಿವೆ.
ಪರಿಸ್ಥಿತಿ ಹೀಗಿರುವಾಗ ಆಳುವ ಸರ್ಕಾರಗಳು ಮಾತ್ರ ಇತ್ತೀಚಿನ ದಿನಗಳಲ್ಲಿ ಜಿಲ್ಲಾ, ತಾಲ್ಲೂಕು ಉತ್ಸವಗಳಲ್ಲಿ ಜನಾಸಮಾನ್ಯರ ತೆರಿಗೆ ದುಡ್ಡಲ್ಲಿ ಜನ ಪ್ರತಿನಿಧಿಗಳು ಶೋಕಿಗಾಗಿ ಅನವಶ್ಯಕ ಹೆಲಿಕಾಪ್ಟರ್ ಬಳಕೆ ಸಾಮಾನ್ಯದ ವಿಚಾರವಾಗಿದೆ. ಮಳೆಗಾಲದಲ್ಲಿ ಬೀಜದುಂಡೆ ಕಾಡಿಗೆಸೆಯಲು ಇತ್ತಿಚೀಗೆ ಡ್ರೋನ್ ಕೂಡಾ ಬಳಸಲಾಗುತ್ತದೆ. ಹೊರ ದೇಶಗಳಲ್ಲಿ ಕಾಡ್ಗಿಚ್ಚು ನಂದಿಸಲು ನಿರಂತರವಾಗಿ Helicopter ಗಳಲ್ಲಿ ವಾರಗಟ್ಟಲೇ ನೀರನ್ನು ಮಳೆಯ ರೂಪದಲ್ಲಿ ಸಿಂಪಡಿಸಲಾಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ತ್ವರಿತವಾಗಿ ಹಬ್ಬಿದ ಜ್ವಾಲೆಯನ್ನು ನಂದಿಸಲು ಹರಸಾಹಸ ಪಡಲಾಗುತ್ತದೆ.
ಆದರೆ ವಿಶ್ವ ಗುರು ಭಾರತದಲ್ಲಿ ಮಾತ್ರ ಹೆಲಿಕಾಪ್ಟರ್,ಡ್ರೋಣ್,ವಿಮಾನ,ರಾಕೆಟ್ಗಳು ಮಾತ್ರ ಮರಿಚೀಕೆ.! ಅಥವಾ ಕರ್ನಾಟಕದ 31 ಜಿಲ್ಲೆಗಳ ನಡುವೆ ಅದು ಬೇಸಿಗೆಯಲ್ಲಿ ಬೆಂಕಿ ನಂದಿಸಲು ಕೇವಲ 2-3 ಹೆಲಿಕಾಪ್ಟರ್ ನೀಡಿದರು ಸಾಕು ಸಾಕಷ್ಟು ಪ್ರಮಾಣದಲ್ಲಿ ಕಾಡ್ಗಿಚ್ಚು ಕಡಿಮೆಯಾಗಿ, ಸಿಬ್ಬಂದಿಗಳು ಕಡಿಮೆಯಿರುವ ಇಲಾಖೆಯಲ್ಲಿ ಕಾಡು ಕಾಯುವ ನೌಕರರ ಪ್ರಾಣವಾದರು ಉಳಿದೀತು.
ಇದೆಕ್ಕೆಲ್ಲಾ ಅನುದಾನದ ಕೊರತೆಯೇ.?ಅಥವಾ ಇಚ್ಚಾಶಕ್ತಿಯ ಕೊರತೆಯೇ ದೇವರೇ ಬಲ್ಲ.! ಟೆಕ್ನಾಲಜಿ ಇಷ್ಟೊಂದು ಮುಂದುವರೆದಿರುವಾಗ, ಬೇರೆ ಧರ್ಮದ ದೇಶಗಳಿಗೆ ಸಾವಿರಾರು ಕೋಟಿ ಅನುದಾನ ಕೊಡುವ ಸರ್ಕಾರವು ತನ್ನದೇ ನೆಲದ,ದೇಶದ ಹಸಿರು,ಜೀವವೈವಿಧ್ಯತೆ ಸುಟ್ಟು ಕರಲಾಗುತ್ತಿದ್ದರು,ಈ ಜಾಣ ಕುರುಡುತನ ಯಾಕೆ.? ಚುನಾವಣೆ ಹತ್ತಿರವಾಗುತ್ತಿದೆ ಮಲೆನಾಡು,ಪಶ್ಚಿಮ ಘಟ್ಟ ಸುಂದರ ಭಾರತದ,ಕರ್ನಾಟಕದ ಮುಕಟ ಮಣಿ ಅಂತೆಲ್ಲಾ ಪುಂಗುವುದನ್ನು ಬಿಟ್ಟು ಓಟಿನ ನೆಪದಲ್ಲಾದರು ಬೆಂಕಿ ಆರಿಸುವ ನೂತನ ತಂತ್ರಜ್ಞಾನಗಳನ್ನು ಜಾರಿಗೆ ತಂದು ಈ ಡಬಲ್ ಇಂಜಿನ್ ಸರ್ಕಾರ ಹೊಸ ಚರೀಷ್ಮಾವನ್ನಾದರೂ ಬೆಳಸಿಕೊಳ್ಳಬಹುದು. ಪ್ರವಾಹ,ನೆರೆ-ಬರಗಾಲ ಬಂದಾಗಲೂ ಬರದ ಕೇಂದ್ರದವರು ಈಗ ಇಷ್ಟೊಂದು ದುಂದು ವೆಚ್ಚ ಮಾಡಿ ಪದೇ ಪದೇ ಕರ್ನಾಟಕಕ್ಕೆ ಬರುವ ಬದಲು ಅದೇ ದುಡ್ಡಿನಲ್ಲಿ ಒಂದೇ ಒಂದು ಹೆಲಿಕಾಪ್ಟರ್ ಕೊಡಿಸಬಹುದು.
ಇಡೀ ಭಾರತದ ಸಾರ್ವಭೌತ್ವದ ಚುಕ್ಕಾಣಿ ಹಿಡಿದಿರುವ ನೀವು ಅಧಿಕಾರ,ಹಕ್ಕು,ಒಪ್ಪಿಗೆ,ಇಶಾರೆ, ನಿಮ್ಮ ಬಳಿಯೇ ಇರುವಾಗ,ರಿಯಾಲಿಟಿ ಷೋಗಳಲ್ಲಿ ಕಾಡು ಸುತ್ತಿದ ಅನುಭವ ನಿಮಗಿದೆ.ಹೀಗಿರುವಾಗ ಕಾಡಿಗ್ಯಾಕೆ ನಿಮ್ಮ ಕಡೆಯಿಂದ ಈ ತಾರತಮ್ಯ.? ಒಂದೇ ಒಂದು ಕಾಡನ್ನುಳಿಸುವ ಯೋಜನೆ ತನ್ನಿ ನಿಮ್ಮಿಂದ ಅದು ಸಾಧ್ಯ. ಮಂದಿರ,ಪ್ರತಿಮೆಗಳನ್ನ ಕಟ್ಟುವ ಬದಲು ಅದೇ ದುಡ್ಡಲ್ಲಿ ಕಾಡು ಉಳಿಸಲು ಯೋಜನೆಗಳು ಬಂದರೆ ಮಂದಿರದಲ್ಲಿ ವಾಸ ಮಾಡುವ ದೇವರು ಈ ಪ್ರಕೃತಿಯಲ್ಲಿ ಕಾಣುತ್ತಾನೆ. ಪ್ರಕೃತಿ ಉಳಿದರೆ ಮಾತ್ರ ಧರ್ಮ,ಹೊಡೆದಾಟ,ರಾಮ,ಅಲ್ಲಾ ಎಲ್ಲಾ ಅದನ್ನು ಉಳಿಸಿಕೊಳ್ಳಬೇಕಾಗಿರುವುದು ನಮ್ಮ ಧರ್ಮ.
ಇಡೀ ಭಾರತದ ಕಾಡುಗಳು,ಅದು ನಂಬಿದ ಜನ,ಇಲಾಖೆ ಎಲ್ಲವೂ ನಿಮ್ಮನ್ನು "ವಿಶ್ವಗುರು" ಎಂದು ಕೊಂಡಾಡುತ್ತವೆ. ಅರಣ್ಯದ 'ಅಭಿವೃದ್ಧಿ'ಯ ಹೆಸರಿನಲ್ಲಿ ಲಕ್ಷ,-ಕೋಟಿಗಳ ಲೆಕ್ಕದಲ್ಲಿ ದಾಖಲೆ ತೋರಿಸುವ ಸರ್ಕಾರ, ಈ ಕಾಡ್ಗಿಚ್ಚು ವಿಚಾರದಲ್ಲಿ ಮಾತ್ರ ಯಾವುದೇ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲು ಇನ್ನೂ ಯಾಕೆ ಸಾಧ್ಯವಾಗುತ್ತಿಲ್ಲವೆಂಬುದು ಬೇಸರದ ಸಂಗತಿ.ಜನಪ್ರತಿನಿಧಿಗಳಾದರೂ ತಮ್ಮ ಕ್ಷೇತ್ರದ ಕಾಡುಗಳ ಬಗ್ಗೆ ಗಮನ ಹರಿಸಬೇಕು. ಹುಟ್ಟುಹಬ್ಬ,ಮರೆವಣಿಗೆಗೆ ಉದ್ರಿ ಉದ್ರಿ ರೋಡ್ ಷೋಗಳಿಗೆ ಸುರಿಯುವ ನಮ್ಮ ತೆರಿಗೆ ದುಡ್ಡನ್ನ ಕಾಡು ಸಂರಕ್ಷಿಸಲಾದರು ಬಳಸಿದರೆ ಜೀವಗಳು ಉಳಿಯುತ್ತವೆ.
🌿 Flame of The Forest
ಹಬ್ಬುತ್ತಿರುವ ಕಾಡ್ಗಿಚ್ಚು ಆರಿಸುವುದು ಅಷ್ಟು ಸುಲಭವಲ್ಲ. ಬೆಂಕಿಯ ಕೆನ್ನಾಲಿಗೆಗೆ ದಿಕ್ಕು ತಪ್ಪಿ ಅಲೆಯುವ ....
2017 ರ ಇದೇ ದಿನ (ಪೆಬ್ರವರಿ18) ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಲ್ಕೆರೆ ಅರಣ್ಯ ವಲಯದಲ್ಲಿ ಕಾಡ್ಗಿಚ್ಚು ನಂದಿಸುವಾಗ ಅರಣ್ಯ ರಕ್ಷಕರಾಗಿದ್ದ ಮುರುಗಪ್ಪ ತಮ್ಮನಗೋಳ್ ರವರು ಕೂಡ ಕಾಡ್ಗಿಚ್ಚು ನಂದಿಸುವ ಕಾರ್ಯದಲ್ಲಿದ್ದಾಗ ಮಡಿದು ಹುತಾತ್ಮರಾಗಿದ್ದರು. ಇಂದು ಸುಂದರೇಶ್ ರವರು ಸಕಲೇಶಪುರದಲ್ಲಿ ಅರಣ್ಯ ಬೆಂಕಿ ನಂದಿಸುವ ಸಮಯದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಮಂಗಳ ಗೃಹಕ್ಕೆ ಉಪಗ್ರಹಗಳನ್ನು ಕಳಿಸುವ ಸಾಮರ್ಥ್ಯ ಇರುವ ದೇಶದಲ್ಲಿ ಇಂದಿಗೂ ಅರಣ್ಯ ಸಿಬ್ಬಂದಿಗಳು ಕಾಡಿನ ಬೆಂಕಿ ನಂದಿಸಲು ಓಬೀರಾಯನ ಕಾಲದ ವಸ್ತುಗಳನ್ನು ಬಳಿಸಿ ಅರಣ್ಯ ಬೆಂಕಿಯನ್ನು ನಂದಿಸಲು ಪ್ರಯತ್ನಿಸುವುದು ನೋಡಿದ್ರೆ ನಮ್ಮ ದೇಶಕ್ಕೆ ಪರಿಸರ , ಅರಣ್ಯ , ವನ್ಯಪ್ರಾಣಿಗಳ ಮೇಲೆ ಇರುವ ಕಾಳಜಿ ಬದ್ಧತೆ ಗೊತ್ತಾಗುತ್ತೆ.ಏನಾದ್ರು ಅನಾಹುತ ಸಂಭವಿಸಿದಾಗ ಮಾತ್ರ ಎಲ್ಲರೂ ಸದ್ಗತಿ , ಓಂ ಶಾಂತಿ ಎಂದು ಸತ್ತವರ ಪ್ರಾಣಕ್ಕೆ ಶಾಂತಿ ಸಿಗಲಿ ಎಂದು ಬಯಸಿದರೆ ಅದು ನಮ್ಮ ಆಷಾಢಭೂತಿತನ ತೋರಿಸುತ್ತೆ ಹೊರತು ವಾಸ್ತವಿಕವಾಗಿ ಸತ್ತವರ ಆತ್ಮಕ್ಕೆ ಶಾಂತಿ ಸಿಗಲ್ಲ, ಇವತ್ತು ಮುಂಚೂಣಿ ಅರಣ್ಯ ಸಿಬ್ಬಂದಿಗಳ ಸಮಸ್ಯೆಗಳು ಬೆಟ್ಟದಷ್ಟು ಇವೆ ಅದರ ಬಗ್ಗೆ ಈ ಸಮಾಜವಾಗಲಿ ಅಥವಾ ವ್ಯವಸ್ಥೆಯಾಗಲಿ ಯಾವುದೇ ರೂಪದಲ್ಲಿ ಸಹಾಯ ಮಾಡುವ ಮನಸ್ಥಿತಿಯಲ್ಲಿ ಇಲ್ಲ. ಇದು ನಮ್ಮ ದೌರ್ಭಾಗ್ಯವೇ ಸರಿ
💞
I've just reached 5.5K followers! Thank you for continuing support. I could never have made it without each one of you. 🙏🤗🎉
Spotted Deer in KTR
Malabar Banded Peacock
https://youtu.be/YYxK6qK6B4I
ಅಸಿನೋನಿಕ್ಸ್ ಜುಬಾಟಸ್’ ಅಂದರೆ ಯಾರಿಗೂ ಗೊತ್ತಾಗಲ್ಲ; ಇದು ಚೀತಾದ ವೈಜ್ಞಾನಿಕ ಹೆಸರು. ಕನ್ನಡದಲ್ಲಿ ಇದನ್ನ ಸೀವಂಗಿ ಎನ್ನುತ್ತಾತೆ. ಇದರ ಹೆಗ್ಗಳಿಕೆ ಇರುವುದೇ ಅದರ ವೇಗದ ಓಟದಲ್ಲಿ. ಗಂಟೆಗೆ 110ರಿಂದ 120 ಕಿ.ಮೀ. ಶರ ವೇಗದಲ್ಲಿ ಓಡಬಲ್ಲ ಇವು ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಓಡುವ ಪ್ರಾಣಿ. ನಿರಂತರವಾಗಿ ವೇಗದಲ್ಲಿ ಓಡಲು ಇವಕ್ಕೆ ಆಗುವುದಿಲ್ಲಾ.ಒಮ್ಮೆ ಓಡಿದ ನಂತರ ಧೀರ್ಘ ವಿಶ್ರಾಂತಿ ಬೇಕು.ಊಹಿಸಿ ಕೇವಲ 35 sec ಅಂತರದೊಳಗೆ ತಾನು ನಿಗದಿಪಡಿಸಿದ ಭೇಟೆ ಫಿನಿಶ್.!
ಚೀತಾ ಎಂಬ ಹೆಸರು ಸಂಸ್ಕೃತದ ‘ಚಿತ್ರಕ’ದಿಂದ ಬಂದಿದೆ. ಚೀತಾ ಎಂದರೆ ಕಪ್ಪು ಎಂದರ್ಥ. ಇವುಗಳ ಕಣ್ಣುಗಳು ಬಲುಚುರುಕು. ಬೇಟೆಯಾಡಿದ ಪ್ರಾಣಿಯನ್ನು ಅರ್ಧಗಂಟೆ ಸುಧಾರಿಸಿದ ಬಳಿಕ ತಿನ್ನಲು ಶುರು ಮಾಡುತ್ತವೆ. ಉಳಿದ ಮಾಂಸವನ್ನು ಮರಗಳ ಮಧ್ಯೆ ಮರೆಮಾಡಿ ಅಥವಾ ನೆಲದಲ್ಲಿ ಹೂತಿಟ್ಟು, ಬಳಿಕ ಹಸಿವಾದಾಗ ತಿನ್ನುವುದು ಇವುಗಳ ವಿಶೇಷ.
ಭಾರತದಲ್ಲಿದ್ದ ಚೀತಾಗಳದ್ದು ಏಷಿಯಾಟಿಕ್ ಪ್ರಭೇದ. ಒಂದು ಕಾಲದಲ್ಲಿ ಇವು ಯಥೇಚ್ಛವಾಗಿ ನೋಡಲು ಸಿಗುತ್ತಿದ್ದವು. ದಕ್ಷಿಣದ ತಿರುನಲ್ವೇಲಿಯಿಂದ ಕರ್ನಾಟಕದ ಕಾಡುಗಳವರೆಗೂ ಓಡಾಡುತ್ತಿದ್ದವು. ಏಷಿಯಾಟಿಕ್ ಚೀತಾವನ್ನು ಹಂಟಿಂಗ್ ಚೀತಾ/ ಹಂಟಿಂಗ್ ಲೆಪರ್ಡ್ ಎಂದು ಕರೆಯಲಾಗುತ್ತಿತ್ತು. ಮೊಘಲ್ ದೊರೆಗಳು ಕೃಷ್ಣಮೃಗಗಳ ಬೇಟೆಗೆ ಇವುಗಳನ್ನು ಬಳಸುತ್ತಿದ್ದರು. ಮೊಘಲ್ ಚಕ್ರವರ್ತಿ ಅಕ್ಬರ್ ಬೇಟೆಯಲ್ಲಿ ನೆರವಾಗಲು 1,000ಕ್ಕೂ ಅಧಿಕ ಚೀತಾಗಳನ್ನು ಬಳಸುತ್ತಿದ್ದ ಬಗ್ಗೆ ಇತಿಹಾಸದಲ್ಲಿ ಉಲ್ಲೇಖಗಳಿವೆ.
ಭಾರತದಲ್ಲಿ ಶ್ರೀಮಂತರು ಮತ್ತು ರಾಜಮನೆತನದವರು ಚೀತಾಗಳನ್ನು ಸಾಕಲು ಶುರು ಮಾಡಿದ್ದರಿಂದಾಗಿ, 20ನೇ ಶತಮಾನದ ಮೊದಲಾರ್ಧದಲ್ಲಿ ಇವುಗಳ ಸಂತತಿ ನಾಶವಾಗುತ್ತಾ ಬಂತು. ಕೊನೆಯದಾಗಿ ಉಳಿದಿದ್ದ ಮೂರು ಗಂಡು ಏಷಿಯಾಟಿಕ್ ಚೀತಾಗಳನ್ನು ಉತ್ತರ ಛತ್ತೀಸ್ಗಢದ ರಾಮಾನುಜ್ ಪ್ರತಾಪ್ ಸಿಂಗ್ ದಿಯೋ ಎಂಬ ಮಹಾರಾಜ 1947ರಲ್ಲಿ ಹೊಡೆದುರುಳಿಸಿದ ಎಂಬುದು ದಾಖಲೆಗಳಲ್ಲಿದೆ. ಕ್ರಮೇಣ ಹುಲ್ಲುಗಾವಲುಗಳ ನಾಶದ ಪರಿಣಾಮ ಉಳಿದಿದ್ದ ಚೀತಾಗಳ ಅವಸಾನಕ್ಕೆ ಈ ಘಟನೆ ಕಾರಣವಾಯಿತು.
ಹುಲಿ, ಸಿಂಹ, ಚಿರತೆ, ಚೀತಾ, ಕಾಡುಬೆಕ್ಕು ಫಿಲಿಡೀ ಕುಟುಂಬ ವರ್ಗಕ್ಕೆ ಸೇರಿವೆ. ಇವು 70 ಮಿಲಿಯನ್ ವರ್ಷಗಳ ಹಿಂದೆ ಏಷಿಯಾ ಖಂಡದಲ್ಲಿ ಜನ್ಮ ತಾಳಿದವು. ಕಾಲಾಂತರದಲ್ಲಿ ಕೆಲವು ನಡುಗಡ್ಡೆಗಳನ್ನು ಬಿಟ್ಟು ಜಗತ್ತಿನ ಎಲ್ಲಾ ಕಡೆಯೂ ಕಂಡುಬಂದವು. ವಿಶ್ವದಾದ್ಯಂತ 37 ಪ್ರಭೇದದ ಬೆಕ್ಕುಗಳಿವೆ. ಇವುಗಳಲ್ಲಿ ಭಾರತದಲ್ಲಿ 15 ಪ್ರಭೇದದ ಬೆಕ್ಕುಗಳು ಕಾಣಸಿಗುತ್ತವೆ. ಏಷಿಯಾಟಿಕ್ ಚೀತಾಗಳ ಪ್ರಭೇದ ಕೊನೆಯುಸಿರೆಳೆದಿದೆ ಎಂದು ಅಧಿಕೃತವಾಗಿಯೇ ಘೋಷಿಸಲಾಗಿದೆ. ಐದು ಪ್ರಭೇದಗಳಲ್ಲಿ ಅಲಿನೋಯಿಸ್ ಜುಬಾಟಸ್ ರಾಯ್ ನೇಯಿಲ್, ದಕ್ಷಿಣ ಆಫ್ರಿಕಾದ ಚೀತಾ, ಉತ್ತರ ಆಫ್ರಿಕಾದ ಚೀತಾ ಮತ್ತು ಅಲಿನೋಯಿಸ್ ಜುಬಾಟಸ್ ಸೋಯಮೇರಿ ಪ್ರಭೇದ ಮಾತ್ರ ಉಳಿದುಕೊಂಡಿವೆ. ಆಗ್ನೇಯ ಏಷಿಯಾದಿಂದ ಹಿಡಿದು ಉತ್ತರ ಮತ್ತು ಮಧ್ಯೆ ಭಾರತದ ವಿವಿಧ ಕಾಡುಗಳಲ್ಲಿ ಇದ್ದ ಏಷಿಯಾಟಿಕ್ ಚೀತಾಗಳು ಈಗ ನೆನಪು ಮಾತ್ರ.
ಬೇರೆ ಪ್ರಭೇದದ ಚೀತಾಗಳೂ ಅಳಿವಿನಂಚಿಗೆ ಸಾಗಿವೆ. ಅನುವಂಶೀಯತೆಯಲ್ಲಿ ವಿವಿಧತೆ ಇಲ್ಲದಿರುವುದು ಒಂದು ಸಮಸ್ಯೆ. ತಮ್ಮ ಪ್ರಕೃತಿದತ್ತವಾದ ಸ್ವಜಾತೀಯ (ಫಿಸಿಕಲ್ ಹೋಮೊಜಿನಿಟಿ) ಗುಣಗಳನ್ನು ಹೊಂದದಿರುವುದು, ಕೆಲವು ಅಂಟುಜಾಢ್ಯಗಳಿಗೆ ತುತ್ತಾಗುವುದು, ಕಡಿಮೆ ಸತ್ವವುಳ್ಳ ವೀರ್ಯಾಣುಗಳಿಂದಾಗಿ ಹಾಗೂ ಕೊಂಕಿದ ಬಾಲದ ಕಾರಣದಿಂದಾಗಿ ಚೀತಾಗಳ ಸಂತತಿ ಕ್ಷೀಣಿಸುತ್ತಿದೆ. ಚೀತಾಗಳು ಬೇರೆ ಪ್ರಾಣಿಗಳಂತೆ ಬೇರೆ ಪರಿಸರಕ್ಕೆ ಒಗ್ಗಿಕೊಳ್ಳುವುದಿಲ್ಲ. ಇದರಿಂದ ಇದರ ಸ್ಥಳಾಂತರ ಕಷ್ಟ. ಈ ಸಮಸ್ಯೆಯಿಂದ ಮಾನವನ ಸಂಘರ್ಷಕ್ಕೆ ಗುರಿಯಾಗಿ ಬಹಳಷ್ಟು ಪ್ರದೇಶಗಳಲ್ಲಿ ಚೀತಾಗಳ ಉಳಿವು ಕಷ್ಟವಾಗಿದೆ. ಹೀಗಾಗಿ ಚೀತಾಗಳನ್ನು IUCN ಕೆಂಪುಪಟ್ಟಿಗೆ ಸೇರಿಸಿದೆ.
ಆಫ್ರಿಕಾದ ಸಬ್-ಸಹಾರ ಪ್ರದೇಶ, ಹುಲ್ಲುಗಾವಲು ಮತ್ತು ತೆರೆದ ಕಾಡುಗಳಲ್ಲಿ 9000ರಿಂದ 12000 ಚೀತಾಗಳು ವಾಸಿಸುತ್ತಿವೆ. ವಾಯುವ್ಯ ಇರಾನ್ನಲ್ಲಿ 60ರಿಂದ 90 ಚೀತಾಗಳು ವಾಸಿಸುತ್ತವೆ. ಇರಾನ್ನಲ್ಲಿರುವುದು ಏಷಿಯಾಟಿಕ್ ಚೀತಾಗಳ ತಳಿ ಎಂಬುದು ವಿಜ್ಞಾನಿಗಳ ಅಭಿಪ್ರಾಯ.
ಚೀತಾಗಳು ಮಾಂಸಾಹಾರಿಗಳು. ಆಫ್ರಿಕಾದ ಸಮತಟ್ಟಿನ ಹುಲ್ಲುಗಾವಲಿನಲ್ಲಿ ಮೊಲ, ಹಂದಿ, ಹಕ್ಕಿಗಳನ್ನು ಹಿಡಿದು ತಿನ್ನುತ್ತವೆ. ಕೆಲವೊಮ್ಮೆ ಗುಂಪಿನಲ್ಲಿದ್ದಾಗ ವೈಲ್ಡ್ಬೀಸ್ಟ್ನಂತಹ ಪ್ರಾಣಿಗಳನ್ನು ಬೇಟೆಯಾಡುತ್ತವೆ.
ಇವು ಸಾಧಾರಣವಾಗಿ ಬೇಟೆಯಾಡುವುದು ಬೆಳಕಿನಲ್ಲಿ. ತಮ್ಮ ಸಾವಿಗೆ ಕಾರಣವಾಗುವ ಸಿಂಹ, ಚಿರತೆ, ಕತ್ತೆಕಿರುಬಗಳಿಂದ ದೂರವಿರಲು ಗುಂಪಿನಲ್ಲಿರುತ್ತವೆ. ಈ ಗುಂಪು ತಾಯಿ ಹಾಗೂ ಮರಿಗಳನ್ನು ಒಳಗೊಂಡಿರುತ್ತದೆ. ಅಥವಾ ಗಂಡು ಚೀತಾಗಳು ಇವುಗಳ ಜೊತೆಯಲ್ಲಿರುತ್ತವೆ. ಜೊತೆಯಾಗಿಯೇ ಬೇಟೆಯಾಡುತ್ತವೆ. ಬೆದೆಗೆ ಬಂದಾಗ ಗಂಡು ಚೀತಾ ಕೂಡಲು ಹೆಣ್ಣುಗಳ ಗುಂಪು ಸೇರುತ್ತದೆ.
ಕಣ್ಮರೆ ಆಗಿರುವ ಏಷ್ಯಾಟಿಕ್ ಚೀತಾಗಳನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ದೇಶದ ಕೆಲವು ಪ್ರದೇಶಗಳನ್ನು ಗುರುತಿಸಲಾಗಿದೆ. ಮಧ್ಯಪ್ರದೇಶದ ದಿ ನೌರಾಡ್ಚಿ ವೈಲ್ಡ್ಲೈಫ್ ಸ್ಯಾಂಕ್ಚುರಿ, ಕುನೋ -ಪಾಲ್ಪುರ್ ಸ್ಯಾಂಕ್ಚುರಿ, ಷಾಹಗರ್ ಬಲ್ಜಿ ಲ್ಯಾಂಡ್ ಸ್ಕೇಪ್, ರಾಜಸ್ಥಾನದ ಜೆಸೆಲ್ಮೇರ್ ಪ್ರದೇಶ ಸಂಭಾವ್ಯ ಸ್ಥಳಗಳಾಗಿವೆ. ಕೂನೋ -ಪಾಲ್ಪುರ್ ಎಲ್ಲಾ 4 ದೊಡ್ಡ ಬೆಕ್ಕುಗಳ ಬೆಳವಣಿಗೆಗೆ ಪೂರಕವಾಗಿದೆ ಎಂದು ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರವನ್ನೂ ಚೀತಾ ಮರುಸ್ಥಾಪನೆಗಾಗಿ ಗಣನೆಗೆ ತೆಗೆದುಕೊಳ್ಳಲು ತಿಳಿಸಿದೆ. ಏಷಿಯಾಟಿಕ್ ಚೀತಾಗಳ ಅಳಿವಿನ ಮುಂಚೆ ಈ ಪ್ರದೇಶಗಳಲ್ಲಿ ಜೊತೆಯಾಗಿ ವಾಸಿಸುತ್ತಿದ್ದವು ಎಂದು ಹೇಳಿದೆ.
ಮಾಂಸಾಹಾರಿ ಪ್ರಾಣಿಗಳನ್ನು ಬೇರೊಂದು ಅರಣ್ಯಕ್ಕೆ ಬಿಟ್ಟು ಪೋಷಿಸಿ ಯಶಸ್ವಿಯಾದ ನಿದರ್ಶನಗಳಿಲ್ಲ. ಅಂತಹ ಆಲೋಚನೆಗಳು ಭಾರತದ ಅರಣ್ಯದ ಮಟ್ಟಿಗೆ ಸಾಧ್ಯವೂ ಇಲ್ಲ. ಯಾವುದೇ ಜೀವಿಯೊಂದು ಅದರ ಮೂಲ ನೆಲೆಯಿಂದ ಬೇರ್ಪಟ್ಟರೆ ಅದು ಅವನತಿಯ ಹಾದಿ ಹಿಡಿಯಿತು ಎಂದರ್ಥ. ರಾಜಸ್ಥಾನದ ಸರಿಸ್ಕಾ ಮತ್ತು ಮಧ್ಯಪ್ರದೇಶದ ಪೆನ್ನಾ ಹುಲಿ ರಕ್ಷಿತಾರಣ್ಯದಲ್ಲಿ ಕಳ್ಳಬೇಟೆಯಿಂದ ಹುಲಿಗಳು ಕಣ್ಮರೆ ಪ್ರಕರಣವೇ ಇದಕ್ಕೆ ಉದಾಹರಣೆ. ಚೀತಾ ಕೂಡ ಇದರಿಂದ ಹೊರತಲ್ಲ ಎಂಬುದು ಕೆಲವು ವನ್ಯಜೀವಿ ತಜ್ಞರ
ಅಭಿಪ್ರಾಯವಾಗಿದೆ.
ಜೀವವೈವಿಧ್ಯತೆಯ ದೃಷ್ಟಿಯಲ್ಲಿ ಇಂಥ ಪ್ರಯೋಗಗಳು ಮುಂದಿನ ಫೀಳಿಗೆಗೆ ಪರಿಸರ ಪ್ರಜ್ಞೆ ಮತ್ತು ವನ್ಯಜೀವಿಗಳ ಮೇಲಿನ ಒಲವು ಹೆಚ್ಚಾಗಲು ಕಾರಣವಾಗುತ್ತದೆ. ಹಾಗೂ ಭಾರತ ದೇಶವು ಜೀವವೈವಿಧ್ಯತೆಯನ್ನು ಪೋಷಿಸುವ ಸಂರಕ್ಷಿಸುವ ಭಾಗವಾಗಿ ಜೀವವೈವಿಧ್ಯತೆಯ ವಿಶ್ವ ನಕಾಶೆಯಲ್ಲಿ ತಾನು ಪ್ರಕೃತಿ,ವನ್ಯಜೀವಿಗಳ ಪರ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ.
Flame of The Forest - Please Subscribe The Channel.
ಅಸಿನೋನಿಕ್ಸ್ ಜುಬಾಟಸ್’ ಅಂದರೆ ಯಾರಿಗೂ ಗೊತ್ತಾಗಲ್ಲ; ಇದು ಚೀತಾದ ವೈಜ್ಞಾನಿಕ ಹೆಸರು. ಕನ್ನಡದಲ್ಲಿ ಇದ.....
https://youtu.be/UZOHBgsEPvQ
ರಾಣಿ ಚೆನ್ನಭೈರಾದೇವಿ
ಕರಿ ಮೆಣಸಿನ ರಾಣಿಯ ಅಕಳಂಕ ಚರಿತೆ
ಉತ್ತರ ಕನ್ನಡದ ನಗರಬಸದಿ ಶತಮಾನಗಳಚೆ ಜಗತ್ಪ್ರಸಿದ್ಧ ಸಮುದ್ರ ನಾವಿಕರಿಗೆ ಹುಚ್ಚು ಹಿಡಿಸಿದ ನಗರ. ಸಾಗರದಾಚೆಯ ಪಾಶ್ಚಿಮಾತ್ಯರು,ವ್ಯಾಪಾರಿಗಳು ಯಾತ್ರಿಕರು ವ್ಯಾಪಾರ ವಹಿವಾಟಿಗಾಗಿ ಓಡೋಡಿ ಬರುತ್ತಿದ್ದ ಶರಾವತಿ ಕಣಿವೆಯ ಚೆನ್ನಾಭೈರಾದೇವಿಯ ಕಾಳು ಮೆಣಸಿನ ಶ್ರೀಮಂತ ನಗರವಿದು. ಪೋರ್ಚುಗೀಸರಿಗೆ,ಬ್ರಿಟಿಷರಿಗೆ ಕಾಳು ಮೆಣಸಿನ ಘಾಟಿನ ಅಮಲು ಹತ್ತಿದ್ದೇ ಇಲ್ಲಿಂದ ,ಆಗಿನ ಕಾಲಕ್ಕೆ ಕೋಟಿಗಟ್ಟಲೇ ವಹಿವಾಟು ನಡೆಸುತ್ತಿದ್ದ ಭಾರತದ ಶ್ರೀಮಂತ ರಾಣಿಯ ಚರಿತ್ರೆ ಭಾರತದ ಇತಿಹಾಸದ ಪುಟಗಳಲ್ಲಿ ದಾಖಲೆಯಾಗದೇ ಇದ್ದದ್ದು ಕನ್ನಡಿಗರ ಪಾಲಿನ ದೌರ್ಭಾಗ್ಯ.
16 ನೇ ಶತಮಾನದ ಅಂಚಿನಲ್ಲಿ ಉತ್ಕೃಷ್ಟವಾದ ಕಾಡಿನ ಕರಿ ಮೆಣಸು ಹೇರಳವಾಗಿ ಕನ್ನಡ ನೆಲದಲ್ಲಿ ದೊರೆಯುತ್ತಿದ್ದ ಕಾಲವದು ಇಡೀ ಜಗತ್ತೇ ಅದರ ರುಚಿಗೆ,ಸುವಾಸನೆಗೆ ಸೋತಿದ್ದಾಗ ಇಟಲಿಯೆನ್ನುವ ದೇಶವಂಥು ಪಶ್ಚಿಮ ಘಟ್ಟದ ಮೆಣಸಿನ ಮುಂದೆ ಮುಂಡಿಯೂರಿ ಶರಣಾಗಿತ್ತು.ಅತ್ಯಂತ ಗುಣಮಟ್ಟದ,ಉತ್ಕೃಷ್ಟವಾದ ಶುದ್ದ ಮೆಣಸು ಚೈನ್ನಾಭೈರಾದೇವಿಯ ಸುಪರ್ದಿಯ ಸುತ್ತ ಮುತ್ತಲಿನ ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿತ್ತು.ಆಗಿನ ವೇಳೆಯ ಜಗತ್ತಿನಾದ್ಯಂತ ಬಿಕರಿಯಾಗುತ್ತಿದ್ದ ಪಶ್ಚಿಮ ಘಟ್ಟದ ಕಾಳು ಮೆಣಸಿನ ಬಹುಪಾಲು ವಹಿವಾಟು ಇವಳ ಸರ್ಪ ಹಿಡಿತದಲ್ಲಿತ್ತು..!
ಆದ್ದರಿಂದ ಆಂಗ್ಲ ಸಾಮ್ರಾಜ್ಯವು ಆಕೆಯನ್ನು "ಮಹಾಮಂಡಲೇಶ್ವರಿ" ಪೋರ್ಚುಗೀಸರು ಇವಳನ್ನು "Regina de pepper" (ಕಾಳು ಮೆಣಸಿನ ರಾಣಿ) ಎನ್ನುತ್ತಿದ್ದರು.ಇದನ್ನು ಮಾರಿ ಬಂದ ಆದಾಯದಲ್ಲಿ ಸೈನಿಕ ಬಲವನ್ನು ಬಲಾಢ್ಯಗೊಳಿಸಿಕೊಂಡು ಸಾಂಭಾರ ಪದಾರ್ಥಗಳ ವ್ಯಾಪಾರದ ಮೇಲೆ ಹಿಡಿತ ಸಾಧಿಸಿ ಭಾರತ ದೇಶ ಕಂಡರಿಯದ ಕೇಳರಿಯದ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿ ಇಡೀ ಭರತ ಖಂಡದ ಅತ್ಯಂತ ಸಿರಿವಂತ ರಾಣಿಯಾಗಿ ಮೆರೆಯುತ್ತಾಳೆ..!
ಉತ್ತರ ಕನ್ನಡದ ನಗರಬಸದಿ ಶತಮಾನಗಳಚೆ ಜಗತ್ಪ್ರಸಿದ್ಧ ಸಮುದ್ರ ನಾವಿಕರಿಗೆ ಹುಚ್ಚು ಹಿಡಿಸಿದ ನಗರ. ಸಾಗರದಾಚೆಯ ಪಾಶ...
ಪ್ರಕೃತಿಯನ್ನೇ ಮಣಿಸಿ ಬದುಕು ಕಟ್ಟಿಕೊಂಡ ಬೆಟ್ಟದ ಜೀವದ ಕಥೆ
https://youtu.be/cYIqjvpU5Oo
ಸುರೇಶ್ ಸಿದ್ದಿಯನ್ನು ನೋಡಿದಾಗಲೆಲ್ಲಾ ನನಗೆ ಕಾರಂತರ "ಚೋಮ" ನೆನಪಾಗುತ್ತಾನೆ.ಇವನು ಸದಾ ನನ್ನ ಅಂತಃಸಾಕ್ಷಿಯನ್ನು ಕೆಣಕುವ ಗುಂಗಿ ಹುಳ. ಮೊದಲ ಬಾರಿಗೆ ಸುರೇಶನನ್ನು ಬೇಡ್ತಿ ಕಾನುವಿನಲ್ಲಿ ನೋಡಿದಾಗ ಆತಂಕ ವಿಷಾದದಿಂದಲೇ ಸಿದ್ದಿ ಸೀಮೆಯೊಳಗೆ ಭೇಟಿಯಾಗಿದ್ದೆ. ಕುತೂಹಲಕ್ಕೆ ಅವನನ್ನು ತಿಳಿಯಲೋಸಗ ಮಾತಿಗೆಳೆದರೆ ವಿನಮ್ರನಾಗಿ ಮಾತಾನಾಡಲು ಹಿಂದೆ ಸರಿಯುತ್ತಿದ್ದ.
ದಟ್ಟ ಅರಣ್ಯವನ್ನ ಅಂತರಂಗದಲ್ಲೂ ಕಣ್ಣಲ್ಲೂ ತುಂಬಿಕೊಂಡು ನಮ್ಮ ಭವಿಷ್ಯದ ಕನಸುಗಳನ್ನೆಲ್ಲಾ ಭಗ್ನಗೊಳಿಸುವಂತೆ ಗೆಲುವಾಗಿ ಸುರೇಶ್ ಮಾತಾನಾಡುತ್ತಿದ್ದರೆ,ಅವನಲ್ಲಿ ನಾಳೆಯ ಬಗ್ಗೆ ಯಾವ ಆಸೆ,ನಿರೀಕ್ಷೆಗಳಿಲ್ಲದ ಸಹಜವಾದ ಕೃತ್ರಿಮತೆಯಿಲ್ಲದ ಜೀವನೋತ್ಸಾಹ ಕಂಡು ಇವನ ಹಾಗೇ ಇಷ್ಟು ಸಹಜವಾಗಿ ಕನಿಷ್ಠ ಸೌಲಭ್ಯಗಳಲ್ಲಿ ನಮಗೆ ಬದುಕಲು ಯಾಕೆ ಸಾಧ್ಯವಿಲ್ಲ.? ಎಂದೆನಿಸಿ ಸೋಜಿಗವೆನಿಸುತ್ತಿತ್ತು.!
ಸುರೇಶನನ್ನು ಕಂಡ ದಿನದಿಂದಲೂ ಆತ್ಮಗೌರವವಿರುವ ಯಾವ ಕೆಲಸ ಮಾಡಿದರೂ ತಪ್ಪಿಲ್ಲ ಎಂದೆನಿಸಲೂ ಶುರುವಾಗಿದೆ, ಉನ್ನತ ಹುದ್ದೆಯ ಆಸೆ ತಾತ್ಕಾಲಿಕವಷ್ಟೇ,ದೇಶ-ವಿದೇಶಗಳ ಕನಸು ಕರಗಿ ಕಾಡಲ್ಲೇ ಜೀವಮಾನವೀಡಿ ಬದುಕು ಸವೆಸಿಬಿಡಬೇಕೆಂದಿನಿಸಿದೆ. ಎಲ್ಲಕ್ಕಿಂತ ಜೀವನ ಪ್ರೀತಿ ದೊಡ್ಡದು ಎಂದೂ ಬತ್ತದ ಜೀವನೋತ್ಸಾಹವೇ ಚಲನಾಶೀಲಾ ಶಕ್ತಿಯ ಬದುಕಿನ ಇಂಧನ. ಎಲ್ಲವೂ ಈ ಕ್ಷಣಿಕ ಬದುಕಿನ ಕೊನೆಯ ನಿಲ್ದಾಣ ಬರುವವರೆಗೂ ಬದುಕು ಬಂದಂತೆ ಸ್ವೀಕರಿಸಬೇಕೆಂದು ಇವನನ್ನು ನೋಡಿದ ಮೇಲೆ ತೀವ್ರವಾಗಿ ಅನ್ನಿಸಿದ್ದಂತೂ ಸತ್ಯ.
ವಿವೇಕವುಳ್ಳವರಾದ ನಾವು ನಮ್ಮ ಶೋಕಿಯ Life style ಗಳ ಬಗ್ಗೆ ಬೇರೊಬ್ಬರನ್ನು ಅನುಕರಣೆ ಮಾಡುವ ಹುಕಿಗೆ ಬಿದ್ದು ಇನ್ನೊಬ್ಬರನ್ನು ಅನುಕರಿಸುವ ಅಂಧ ಗ್ರಹಿಕೆಗೆ ಒಳಗಾಗುತ್ತೇವೆ. ನಾವುಗಳು ಸಹಜವಾಗಿ ಜೀವಿಸದೇ ನಮ್ಮ ಪ್ರಧಾನವಾದ ಬದುಕನ್ನು ಜಾತಿ-ಧರ್ಮವೆಂಬ ಅಪಸವ್ಯಗಳ ಚೌಕಟ್ಟಿಗೆ ಹಾಕಿ ಪೈಪೋಟಿಗೆ ಬಿದ್ದು ರಾಡಿ ಮಾಡಿಕೊಳ್ಳುತ್ತೇವೆ. ಆದರೆ ಸುರೇಶನೆಂಬ ಚೋಮನ ಬದುಕಿನ ಮುಂದೆ ನಾವು ನಂಬಿಕೊಂಡ ಬದುಕಿನೆಲ್ಲಾ ಆದರ್ಶ,ನಂಬುಗೆ,ಸತ್ಯ,ಧರ್ಮಗಳೆಲ್ಲವೂ ಬೇಡ್ತಿಯ ದಿಂಬಗಾಡುವಿನಲ್ಲಿ ಎಷ್ಟು ಕ್ಷುಲ್ಲಕ ಎಂದೆನಿಸಿಬಿಡುತ್ತಿತ್ತು.
ಬದುಕಿನಲ್ಲಿ ಬೆಳಕಿಗೆ ಬಾರದ ಆಸೆಗಳನ್ನು ಈಡೇರಿಸಿಕೊಳ್ಳದ ನಮ್ಮೆಲ್ಲೆರೊಳಗೊಬ್ಬ ಚೋಮನಿದ್ದಾನೆ.ಬದುಕಿನಲ್ಲಿ ಕಂಡ ಆಸೆ-ಕನಸುಗಳೆಲ್ಲವೂ ಈಡೇರುವ ಮುಂಚಿತವಾಗಿಯೇ ಎಲ್ಲಿ ಚೋಮನಂತಾಗಿ ಬಿಡುವೆನೋ ಎಂದು ನನ್ನೊಳಗಿನ ಅನವರತ ಪ್ರಜ್ಞೆ ಸುರೇಶ ಸಿದ್ದಿಯ ಮೂಲಕ ಸದಾ ನನ್ನನ್ನು ತಿವಿಯುತ್ತಿರುತ್ತದೆ.
ಪ್ರಕೃತಿಯ ನಡುವೆ ಏಕಾಂಗಿಯಾಗಿ ಬದುಕುವ ಸುರೇಶಾ ನನಗಿಂತ ವಯಸ್ಸಿನಲ್ಲಿ,ಬದುಕಿನ ಅನುಭವದಲ್ಲಿ ದೊಡ್ಡವ. ಮನರಂಜನೆಗಾಗಿ ಯಕ್ಷಗಾನವನ್ನು ನೋಡುತ್ತೇನೆ ಎನ್ನುತ್ತಾನೆ. ಪ್ರಾಪಂಚಿಕ ಸುಖದ ಯಾವ ಭಾವವಿಕಾರಗಳಿಲ್ಲದ ಅಪ್ಪಟ ಮನುಷ್ಯ. ಬದುಕಿನಲ್ಲಿ ನಾಳೆಯ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳದೇ ದುಡಿಮೆಯನ್ನು ಕೂಡಿಡದೇ ಧರ್ಮದೈವಗಳ ಗೊಡವೆಯಿಲ್ಲದೇ ನಿರುಮ್ಮಳವಾಗಿ ಜೀವನ ನಡೆಸುತ್ತಿದ್ದಾನೆ.ಇಂಥ ಚೋಮನಂಥವನ ಸಂತನ ಮುಂದೆ ಜಗತ್ತಿನ ಎಲ್ಲಾ ಪರ್ಸನಾಲಿಟಿ ಡೆವಲಪ್ಮೆಂಟ್ ಕ್ಲಾಸ್ಗಳು,ಪುಸ್ತಕಗಳು ಆಧ್ಯಾತ್ಮಿಕ ಪ್ರವಚನಗಳು ಮಕಾಡೆ ಮಲಗಿ ಬಿಡುತ್ತವೆ.
ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢ ಶಾಲೆ ತಿಮ್ಮಜ್ಜಿಪುರ ಕೊಳ್ಳೇಗಾಲದಲ್ಲಿ
Please Subscribe The Channel and Give your valuable Feedback ☺️
https://youtube.com/c/FlameOfTheForest
https://youtu.be/FBF2ej4vL3g
ಇದು ಕಾಡು ಕಾಯುವವರ ಜೀವ ಉಳಿಸುವ ಸಂಜೀವಿನಿ - Getonia floribanda
ನೀರ್ಬಳ್ಳಿ,ಮರಸದ ಬಳ್ಳಿ, ಮರ್ಸುತ್ತು ಬಳ್ಳಿ ಎನ್ನುವ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಈ ಬಳ್ಳಿ ಸುಮಾರು 10 ಮೀಟರ್ ಎತ್ತರದವರೆಗೆ ಬೆಳೆಯುವ ಪೊದೆಸಸ್ಯವಾಗಿದೆ. (ವೈಜ್ಞಾನಿಕ ಹೆಸರು: ಕ್ಯಾಲಿಕೊಪ್ಟೆರಿಸ್/ಗೇಟೋನಿಯಾ ಫ್ಲೋರಿಬುಂಡಾ). ದಕ್ಷಿಣ ಭಾರತದ ಪತನಶೀಲ ಕಾಡುಗಳಿಗೆ,ನಿತ್ಯ ಹರಿದ್ವರ್ಣದ ಕಾಡುಗಳಿಗೆ ಈ ಬಳ್ಳಿ ಸ್ಥಳೀಯವಾಗಿದೆ. ಇದರ ಕಾಂಡಗಳಲ್ಲಿ ಲೋಳೆರೂಪದಲ್ಲಿ ಸಂಗ್ರಹವಾಗಿರುವ ನೀರು ಇರುತ್ತದೆ. ಆದ್ದರಿಂದ, ಕಾಡಿನಲ್ಲಿ ಕೆಲಸ ಮಾಡುವವರು ಬೇಸಿಗೆಯಂಥ ಹಾಗೂ ಕಾಡ್ಗಿಚ್ಚು ಸಂಭವಿಸಿದ ಸಂಧರ್ಭದಲ್ಲಿ ಹಾಗೂ ಕಾಡನ್ನು ಗಸ್ತು ತಿರುಗುವ ಸಮಯದಲ್ಲಿ ಕಾಡಿನಲ್ಲಿ ತಮ್ಮ ಪೂರಕವಾದ ವ್ಯಾಪ್ತಿ ಪ್ರದೇಶದಲ್ಲಿ ನೀರಿನ ಅಲಭ್ಯತೆ ಉಂಟಾದಾಗ,ಅರಣ್ಯ ವೀಕ್ಷಕರು/ಗಸ್ತು ಸಿಬ್ಬಂದಿಗಳ ಹಲವು ವರ್ಷಗಳಿಂದ ಕಾಡು ಸುತ್ತಿದ್ದರ ಪರಿಣಾಮವಾಗಿ ಅದ್ಬುತವಾದ ತಮ್ಮ ಅರಣ್ಯ ಜ್ಞಾನದಿಂದ, ಈ ಬಳ್ಳಿಯನ್ನು ಹುಡುಕಿ ಕಾಂಡಗಳನ್ನು ಕತ್ತರಿಸಿ ಬೇಸಿಗೆಯಲ್ಲಿ ನೀರನ್ನು ಕುಡಿದು ದೇಹದ ನೀರ್ಜಲೀಕರಣವನ್ನು ನೀಗಿಸಿಕೊಳ್ಳುತ್ತಾರೆ.
Please Subscribe the channel and Press The Bell Button
581363
Be the first to know and let us send you an email when Flame of The Forest posts news and promotions. Your email address will not be used for any other purpose, and you can unsubscribe at any time.
Send a message to Flame of The Forest:
First Cheetah Cub/s born in Bharat after 79 years- Two days after sad News of a female Namibian Cheetah sasha's unfortunate death, another Namibian Cheetah named Siya gives birth to 4 cubs in MP's Kuno National Park.
ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢ ಶಾಲೆ ತಿಮ್ಮಜ್ಜಿಪುರ ಕೊಳ್ಳೇಗಾಲದಲ್ಲಿ #FlameOf_TheForest Please Subscribe The Channel and Give your valuable Feedback ☺️ https://youtube.com/c/FlameOfTheForest
ತಡ ಮಾಡಿಬಿಡುತ್ತೇನೆ, ನಾನು ಸುಮ್ಮನೆ ತಡ ಮಾಡಿಬಿಡುತ್ತೇನೆ ಮಾತಿನ ಜರೂರತ್ತು ಇರುವಾಗ ಕೊಟ್ಟ ಮಾತು ಉಳಿಸಿಕೊಳ್ಳುವಾಗ ಮೈ , ಮನಸ್ಸು ಮೈಲಿಗೆಯಾದಾಗ ಮಾತು ಸೂತಕವಾದಾಗ ಅವರೊಂದಿಗೆ ಧ್ವನಿಗೂಡಿಸಬೇಕಾದಾಗ ಮತ್ತೆ ವಾಪಸು ಕರೆಯಬೇಕೆನಿಸಿದಾಗ ಮತ್ತೆ ಭೇಟಿ ಮಾಡಬೇಕೆನಿಸಿದಾಗ a ತಡ ಮಾಡಿಬಿಡುತ್ತೇನೆ ಹೃದಯ ಮುಟ್ಟಬೇಕಾದಾಗ ನೆನಪು ಆವರಿಸಿ ಮರೆತುಬಿಡಬೇಕೆನಿಸಿದಾಗ ದುಗುಡ ತುಂಬಿ, ದುಃಖ ಉಮ್ಮಳಿಸಿ ಕೈ ಹಿಡಿದು ಸಾಂತ್ವನ ಹೇಳಬೇಕೆನಿಸಿದಾಗ ತಡಮಾಡಿಬಿಡುತ್ತೇನೆ ಯಾರನ್ನೋ ಸಾವಿಗೆ ಮುಂಚೆ ಬಚಾವು ಮಾಡಬೇಕಾದಾಗ ತಿಳಿದ ವಾಸ್ತವ ಸತ್ಯ ಮನವರಿಕೆ ಮಾಡಬೇಕಾದಾಗ ಬದಲಾದ ಪರಿಸ್ಥಿತಿಗೆ ಅನುಸಂದಿಸಬೇಕಾದಾಗ ತಡ ಮಾಡಿಬಿಡುತ್ತೇನೆ ನಾನು, ಸುಮ್ಮನೆ ತಡ ಮಾಡಿಬಿಡುತ್ತೇನೆ.
Want your business to be the top-listed Media Company?