Karnataka News

  • Home
  • Karnataka News

Karnataka News Karntaka News is founded to reach every kannadigaas all over the world. and equiping them to do the

30/12/2018

😀

Happy Independence Day
15/08/2018

Happy Independence Day

23/12/2017
http://m.varthabharati.in/article/2017_01_08/56386
08/01/2017

http://m.varthabharati.in/article/2017_01_08/56386

ಹೊಸದಿಲ್ಲಿ, ಜ.8: ಸಾರ್ವಜನಿಕವಾಗಿ ಮಹಿಳೆಯನ್ನು ಚುಂಬಿಸುವ ಯುಟ್ಯೂಬ್ ವೀಡಿಯೊ ಒಂದರ ಬಗ್ಗೆ ತನಿಖೆ ನಡೆಸುತ್ತಿರುವ ದಿಲ್ಲಿ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಅಂತರ್ಜಾಲದಲ್ಲಿ ವ್ಯಾಪಕವಾಗಿ ಪ್ರಚಾರವಾಗುತ್ತಿರುವ ಈ ವೀಡಿಯೋದಲ್ಲಿ ತಮಾಷೆಯ (ಪ್ರಾಂಕ್) ಹೆಸರಿನಲ್ಲಿ ಯುವತಿಯನ್ನು ಬೇಸ್ತು ಬೀಳಿಸಿ ಚುಂಬಿಸಿರುವ ದೃಶ್ಯವಿದೆ. 20ರ ಪ್ರಾಯದ ಯುವಕ...

08/09/2013

At least 10 more people were killed in spiralling violence in Muzaffarnagar today, taking the toll to 21 in the western UP district where the army staged flag marches and thousands of anti-riot police personnel were deployed to restore law and order.

08/09/2013

ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಎರಡು ಕೋಮುಗಳ ಮಧ್ಯೆ ನಡೆದ ಗುಂಪು ಘರ್ಷಣೆಯಲ್ಲಿ ಮೃತರ ಸಂಖ್ಯೆ 14ಕ್ಕೆ ಏರಿದ್ದು, ಭದ್ರತೆಗಾಗಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

08/09/2013

`ಪ್ರಧಾನಮಂತ್ರಿ ಹುದ್ದೆಗೆ ರಾಹುಲ್ ಗಾಂಧಿ ಉತ್ತಮ ಆಯ್ಕೆಯಾಗಿದ್ದು, ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ನಿರ್ವಹಿಸಲು ಸಿದ್ಧ' ಎಂದು ಹೇಳುವ ಮೂಲಕ ಪ್ರಧಾನಿ ಮನಮೋಹನ್ ಸಿಂಗ್ ಅವರು 2014ರ ಚುನಾವಣೆ ಬಳಿಕ ನಡೆಯಲಿರುವ ಪ್ರಧಾನಿ ಸ್ಥಾನದ ಸ್ಪರ್ಧಾ ಕಣದಿಂದ ತಾವಾಗಿಯೇ ಹಿಂದೆ ಸರಿದಿದ್ದಾರೆ.

ಜೋಗದಲ್ಲಿ ಶರಾವತಿ ನದಿ ರಮಣೀಯವಾಗಿ 960 ಅಡಿ ಎತ್ತರದಿಂದ ಪ್ರಪಾತಕ್ಕೆ ಧುಮ್ಮಿಕ್ಕುತ್ತಿರುವ ದೃಶ್ಯ ಬ್ರಿಟಿಷ್ ಬಂಗ್ಲೆಯಿಂದ ಶನಿವಾರ ಕ್ಯಾಮೆರಾ ಕ...
04/08/2013

ಜೋಗದಲ್ಲಿ ಶರಾವತಿ ನದಿ ರಮಣೀಯವಾಗಿ 960 ಅಡಿ ಎತ್ತರದಿಂದ ಪ್ರಪಾತಕ್ಕೆ ಧುಮ್ಮಿಕ್ಕುತ್ತಿರುವ ದೃಶ್ಯ ಬ್ರಿಟಿಷ್ ಬಂಗ್ಲೆಯಿಂದ ಶನಿವಾರ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ

23/07/2013
Six killed in wall collapse in HyderabadSecunderabad: Rescue workers trying to save an injured after a hotel collapsed i...
23/07/2013

Six killed in wall collapse in Hyderabad

Secunderabad: Rescue workers trying to save an injured after a hotel collapsed in Secunderabad in Andhra Pradesh. PTI file photo
Six persons, including two children, were today killed when the wall of a building collapsed on two adjacent huts in MJ Colony here.

23/07/2013

At least 10 people, including four school students, were killed Tuesday when a bus skidded off a bridge and plunged into a lake near Belaur in Karnataka's Hassan district, a police official said.

23/07/2013

45ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಕೆಎಸ್‌ಆರ್‌ಟಿಸಿ ಬಸ್ ಒಂದು ಮಂಗಳವಾರ ಬೆಳಿಗ್ಗೆ ಸಮೀಪದ ವಿಷ್ಣುಸಮುದ್ರ ಕೆರೆಗೆ ಉರುಳಿದ್ದು, ಈವರೆಗೆ 15 ಮಂದಿಯ ಶವಗಳನ್ನು ಹೊರ ತೆಗೆಯಲಾಗಿದೆ.

23/07/2013

ರಾಜ್ಯದಲ್ಲಿ ಸೋಮವಾರ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಬಿಟ್ಟು ಉಳಿದೆಡೆ ಮಳೆಯ ಅಬ್ಬರ ಮುಂದುವರಿದಿದೆ. ಗುಲ್ಬರ್ಗ, ಯಾದಗಿರಿ, ಬೀದರ್, ಕೊಪ್ಪಳ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸತತ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

16/07/2013

At least 5,748 people remain untraced and presumed dead in the Uttarakhand floods as the official deadline to trace missing persons expired on Monday, a month after calamity struck the hill state.

16/07/2013

Efforts to bring back Karnataka Janata Party (KJP) founder Yeddyurappa to the Bharatiya Janata Party (BJP) have not yielded any result.

ವೈದ್ಯರ ದಂಡ ರೂ 25 ಲಕ್ಷಕ್ಕೆ`ಕಡ್ಡಾಯ ಗ್ರಾಮೀಣ ಸೇವೆ ಪೂರೈಸದ ಸ್ನಾತಕ ಪದವೀಧರ ವೈದ್ಯರಿಗೆ ರೂ 25 ಲಕ್ಷ, ಸ್ನಾತಕ ಡಿಪ್ಲೊಮಾ ವೈದ್ಯರಿಗೆ ರೂ  1...
16/07/2013

ವೈದ್ಯರ ದಂಡ ರೂ 25 ಲಕ್ಷಕ್ಕೆ

`ಕಡ್ಡಾಯ ಗ್ರಾಮೀಣ ಸೇವೆ ಪೂರೈಸದ ಸ್ನಾತಕ ಪದವೀಧರ ವೈದ್ಯರಿಗೆ ರೂ 25 ಲಕ್ಷ, ಸ್ನಾತಕ ಡಿಪ್ಲೊಮಾ ವೈದ್ಯರಿಗೆ ರೂ 15 ಲಕ್ಷ ಮತ್ತು ಪದವೀಧರ (ಎಂಬಿಬಿಎಸ್) ವೈದ್ಯರಿಗೆ ರೂ 10 ಲಕ್ಷ ದಂಡ ವಿಧಿಸಲು ನಿರ್ಧರಿಸಲಾಗಿದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಯು.ಟಿ. ಖಾದರ್ ಪ್ರಕಟಿಸಿದರು.

16/07/2013

ಮಳೆ: ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಪಶ್ಚಿಮ ಭಾಗದ ಅರಣ್ಯ ಪ್ರದೇಶದಲ್ಲಿ ನಾಲ್ಕು ದಿನಗಳಿಂದ ಹಗಲು ರಾತ್ರಿಯೆನ್ನದೆ ಸುರಿದ ಮಳೆಯಿಂದ ಎಲ್ಲೆಡೆ ನೀರಿನ ಹರಿವು ಹೆಚ್ಚತೊಡಗಿದೆ. ತಾಲ್ಲೂಕಿನ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

16/07/2013

ಉತ್ತರಾಖಂಡ ದುರಂತ: 5,748 ಸಾವು

ಉತ್ತರಾಖಂಡದಲ್ಲಿ ಅಪಾರ ಪ್ರಾಣ ಮತ್ತು ಆಸ್ತಿ ಹಾನಿಗೆ ಕಾರಣವಾದ ಪ್ರವಾಹ ಉಂಟಾಗಿ ಒಂದು ತಿಂಗಳು ಕಳೆದರೂ, ಸಂಭವಿಸಿದ ನಷ್ಟದ ಲೆಕ್ಕ ಇನ್ನೂ ಖಚಿತವಾಗಿ ಸಿಗುತ್ತಿಲ್ಲ. ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾದ 5,748 ಜನರು `ಮೃತಪಟ್ಟಿದ್ದಾರೆ' ಎಂದು ಘೋಷಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮುಂಗಾರಿಗೆ ಮೈದುಂಬಿದ ಗೋಕಾಕ್ ಫಾಲ್ಸ್ಧಾರಾಕಾರವಾಗಿ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ಮೈದುಂಬಿ ಹರಿಯುತ್ತಿರುವ ಬೆಳಗಾವಿಯ ಗೋಕಾಕ್ ಫಾಲ್ಸ್...
16/07/2013

ಮುಂಗಾರಿಗೆ ಮೈದುಂಬಿದ ಗೋಕಾಕ್ ಫಾಲ್ಸ್ಧಾ

ರಾಕಾರವಾಗಿ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ಮೈದುಂಬಿ ಹರಿಯುತ್ತಿರುವ ಬೆಳಗಾವಿಯ ಗೋಕಾಕ್ ಫಾಲ್ಸ್‌ನ ವಿಹಂಗಮ ನೋಟ

30/09/2012

ಈಶಾನ್ಯ ದಿಕ್ಕಿನಿಂದ 1 ಕೊಕ್ರಜಾರ್(ಅಸ್ಸಾಂ): ಕಣ್ಣೀರಿಗೆ ಯಾವ ಭಾಷೆ, ಜಾತಿ, ಧರ್ಮ, ಊರು, ಕಾಲ? ನಿರಾಶ್ರಿತರ ಶಿಬಿರಗಳಲ್ಲಿರುವ ಮೀರಾ ಬಸುಮತಾರಿ, ರಜಿಯಾ ಅಹ್ಮದ್, ಮುನಾವರ್ ಹುಸೇನ್, ಕಮಾಲಿ ಬ್ರಹ್ಮ, ಸಲ್ಮಾ ಉದ್ದಿನ ಮತ್ತು ಇವರಂತೆಯೇ ಇರುವ ಇನ್ನೆಷ್ಟೋ ಮಂದಿಗೆ ಎದುರಿಗಿದ್ದವರ ಜತೆ ತಮ್ಮೆಲ್ಲ ಕಷ್ಟ-ಕಾರ್ಪಣ್ಯಗಳನ್ನು ಹೇಳಿಬಿಡುವ ತವಕ. ಅವರಲ್ಲಿ ಹೆಚ್ಚಿನವರು ಮಾ...

29/09/2012

ಬೆಳಗಾವಿ: ಗುರುವಾರ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಖಾನಾಪುರ ಶಾಸಕ ಪ್ರಹ್ಲಾದ ರೇಮಾನಿ ಅವರ ಇಬ್ಬರು ಪುತ್ರರನ್ನು ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಇಬ್ಬರಿಗೂ ದಂಡ ವಿಧಿಸಿ ಬಿಡುಗಡೆ ಮಾಡಿದೆ. ಶಾಸಕರ ಪುತ್ರರಾದ ಪ್ರತಾಪ ಪ್ರಹ್ಲಾದ ರೇಮಾನಿ, ಶರದ ರೇಮಾನಿ ಹಾಗೂ ಇವರ ಸ್ನೇಹಿತರೊಬ್ಬರು ಮ...

29/09/2012

ನವದೆಹಲಿ (ಪಿಟಿಐ): ಖ್ಯಾತ ಕವಿ ಹಾಗೂ ಚಿತ್ರ ನಿರ್ಮಾಪಕ ಗುಲ್ಜಾರ್ ಅವರನ್ನು ರಾಷ್ಟ್ರೀಯ ಭಾವೈಕ್ಯಕ್ಕಾಗಿ ಸಲ್ಲಿಸಿದ ಸೇವೆಗೆ ನೀಡಲಾಗುವ 27ನೇ ಇಂದಿರಾಗಾಂಧಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು 75ರ ಹರೆಯದ ಭಾವಗೀತಕಾರ ಗುಲ್ಜಾರ್ ಅವರಿಗೆ ಭಾವೈಕ್ಯಕ್ಕಾಗಿ ಸಲ್ಲಿಸಿದ ಸೇವೆಗಾಗಿ ನೀಡಲಾಗುವ ಈ ಪ್ರಶಸ್ತಿಯನ್ನು ಪ್ರದ...

29/09/2012

ಪಡಪೋಷಿ ಮಾತುಗಳು ಬೇಡ, ನೇರವಾಗಿ ಹೇಳುತ್ತೇನೆ. ಈ ಬರಹದ ಶೀರ್ಷಿಕೆಯಲ್ಲಿ ವೈವಾಹಿಕ ಶಿಕ್ಷಣದ ಬದಲು ಲೈಂಗಿಕ ಶಿಕ್ಷಣ ಎಂದು ಬರೆದಿದ್ದರೆ ಎಷ್ಟು ಜನ ಇದನ್ನು ಮುಜುಗರವಿಲ್ಲದೇ ಓದುತ್ತಿದ್ದರು ಅಥವಾ ಎಷ್ಟು ಮನೆಯಲ್ಲಿ `ಭೂಮಿಕಾ'ದ ಪ್ರತಿ ಹಜಾರದ ಟೀಪಾಯಿಯ ಮೇಲೆ ಕಂಡುಬರುವುದು ಸಾಧ್ಯವಿತ್ತು? ಇಂತಹ ತಪ್ಪು ತಿಳಿವಳಿಕೆ, ಹಿಂಜರಿಕೆಗಳಿಂದ ಹೊರಬರಲು ಪ್ರೇರೇಪಿಸಬೇಕೆಂಬ ಸಲುವಾ...

http://prajavani.net/include/story.php?news=100289&section=2&menuid=10
29/09/2012

http://prajavani.net/include/story.php?news=100289§ion=2&menuid=10

ತುಮಕೂರು: ಬಯಲುಸೀಮೆ ಜಿಲ್ಲೆಯ ಅನ್ನದ ಬಟ್ಟಲಲ್ಲಿ ನೇಣಿನ ಕುಣಿಕೆಯ ಬಿಂಬ ಕಾಣತೊಡಗಿದೆ. ಬರ ಮತ್ತು ಬೆಲೆ ಕುಸಿತ ರೈತರನ್ನು ಬೆನ್ನಟ್ಟಿದ್ದು, ರಾಗಿ, ಶೇಂಗಾದ ನಾಡಿನಲ್ಲೆಗ ಆತ್ಮಹತ್ಯೆಯ ಬಿರುಗಾಳಿ. ಇನ್ನೂರೈವತ್ತು ವರ್ಷಗಳ ಹಿಂದೆ ಜಿಲ್ಲೆಯ ಮಧುಗಿರಿಯಲ್ಲಿ ಗೋಧಿ ಸಮೃದ್ಧವಾಗಿತ್ತು. ಈಗ ಗೋಧಿಯ ಲವಶೇಷವೂ ಇಲ್ಲ. ಜಿಲ್ಲೆಯ ಪ್ರಧಾನ ಬೆಳೆಗಳಾದ ರಾಗಿ, ಶೇಂಗಾವು ಗೋಧಿಯ ...

29/09/2012

ಬೆಂಗಳೂರು (ಪಿಟಿಐ): ಭಾರತದ ಅತ್ಯಾಧುನಿಕ ಸಂಪರ್ಕ ಉಪಗ್ರಹ ಜಿಸ್ಯಾಟ್-10ನ್ನು ಯುರೋಪಿನ ಫ್ರೆಂಚ್ ಗಯಾನಾದಲ್ಲಿನ ಬಾಹ್ಯಾಕಾಶ ನಿಲ್ದಾಣದಿಂದ ಏರಿಯನ್-5 ರಾಕೆಟ್ ಮೂಲಕ ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. 15 ವರ್ಷಗಳ ಕಾಲ ಬಾಳ್ವಿಕೆ ಬರುವಂತೆ ವಿನ್ಯಾಸಗೊಳಿಸಲಾಗಿರುವ ಜಿ-ಸ್ಯಾಟ್ ಉಪಗ್ರಹವು ನವೆಂಬರ್ ತಿಂಗಳಲ್ಲಿ ತನ್ನ ಕಾರ್ಯಾರಂಭ ಮಾಡಲಿದ್ದು, ದೂರಸಂಪರ್ಕ,...

29/09/2012

ನವದೆಹಲಿ (ಐಎಎನ್ ಎಸ್): ಸುಪ್ರೀಂಕೋರ್ಟ್ ನ ಅತ್ಯಂತ ಹಿರಿಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರು ಭಾರತದ 39ನೇ ಮುಖ್ಯನ್ಯಾಯಮೂರ್ತಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಶನಿವಾರ ನಿವೃತ್ತರಾದ ಮುಖ್ಯನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ಅವರ ಉತ್ತರಾಧ...

ವಿದ್ಯಾರ್ಥಿವೇತನ ರದ್ದು: ಕಾರ್ಮಿಕರ ಪ್ರತಿಭಟನೆJune 06, 2012ಮಂಗಳೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ಬಂದ ನೆಪವನ್ನು ಮುಂದಿಟ್ಟ...
07/06/2012

ವಿದ್ಯಾರ್ಥಿವೇತನ ರದ್ದು: ಕಾರ್ಮಿಕರ ಪ್ರತಿಭಟನೆ

June 06, 2012

ಮಂಗಳೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ಬಂದ ನೆಪವನ್ನು ಮುಂದಿಟ್ಟು ಬೀಡಿ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ರದ್ದುಪಡಿಸುವ ಕ್ರಮವನ್ನು ವಿರೋಧಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

ಎಐಟಿಯುಸಿಗೆ ಒಳಪಟ್ಟ ದಕ್ಷಿಣ ಕನ್ನಡ ಬೀಡಿ ವರ್ಕರ್ಸ್ ಫೆಡರೇಷನ್ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ಬೀಡಿ ಕಾರ್ಮಿಕರು ಮಳೆಯನ್ನೂ ಲೆಕ್ಕಿಸದೆ ಪಾಲ್ಗೊಂಡರು.
ಆರ್‌ಟಿಇ ಜಾರಿಗೆ ಬಂದರೂ ಬೀಡಿ ಕಾರ್ಮಿಕರ 1ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಈ ಮೊದಲಿನಂತೆ ವಿದ್ಯಾರ್ಥಿ ವೇತನ ನೀಡಬೇಕು.

ಒಂದು ವೇಳೆ ಹೊಸ ನೀತಿಯಂತೆ ಇದನ್ನು ರದ್ದುಪಡಿಸಿದರೆ ಖಾಸಗಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಿಗುವ ಬಿಡಿಗಾಸು ಕೈತಪ್ಪಿದಂತಾಗುತ್ತದೆ ಎಂದು ತಿಳಿಸಲಾಯಿತು. ಫೆಡರೇಷನ್‌ನ ಅಧ್ಯಕ್ಷ ಪಿ.ಸಂಜೀವ, ಕಾರ್ಯದರ್ಶಿ ವಿ.ಸೀತಾರಾಮ ಬೇರಿಂಜ, ಬೀಡಿ ಆ್ಯಂಡ್ ಟೊಬೆಕೊ ಲೇಬರ್ ಯೂನಿಯನ್‌ನ ಅಧ್ಯಕ್ಷ ಚಂದಪ್ಪ ಅಂಚನ್, ಬಂಟ್ವಾಳ ತಾಲ್ಲೂಕು ಫೆಡರೇಷನ್‌ನ ಬಿ.ಸುರೇಶ್, ಬಿ.ಶೇಖರ್ ಇತರರು ಇದ್ದರು.

ಜ್ಯೂಸ್ ಪೊಟ್ಟಣದಲ್ಲಿ ಸತ್ತ ಹಾವಿನ ಮರಿ: ತಾಯಿ, ಮಗಳು ಆಸ್ಪತ್ರೆಗೆJune 07, 2012 ಭಟ್ಕಳ (ಉ.ಕ. ಜಿಲ್ಲೆ): ಇಲ್ಲಿಯ ಬೇಕರಿಯೊಂದರಲ್ಲಿ ಖರೀದಿಸಿ...
07/06/2012

ಜ್ಯೂಸ್ ಪೊಟ್ಟಣದಲ್ಲಿ ಸತ್ತ ಹಾವಿನ ಮರಿ: ತಾಯಿ, ಮಗಳು ಆಸ್ಪತ್ರೆಗೆ

June 07, 2012

ಭಟ್ಕಳ (ಉ.ಕ. ಜಿಲ್ಲೆ): ಇಲ್ಲಿಯ ಬೇಕರಿಯೊಂದರಲ್ಲಿ ಖರೀದಿಸಿದ ಜ್ಯೂಸ್ ಪೊಟ್ಟಣದಲ್ಲಿ ಸತ್ತ ಹಾವಿನ ಮರಿಯೊಂದು ಬುಧವಾರ ಪತ್ತೆಯಾಗಿದೆ. ಜೂಸ್ ಕುಡಿದ ತಾಯಿ-ಮಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಲ್ಲಿಯ ಗುಡ್‌ಲಕ್ ರಸ್ತೆಯ ನಿವಾಸಿ ಸೈಯದ್ ಮಹಮ್ಮದ್ ಸಫ್ವಾನ್ ಅವರು ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಬೇಕರಿಯೊಂದರಿಂದ ಜ್ಯೂಸ್ ಪೊಟ್ಟಣ ಖರೀದಿಸಿದರು. ಅವರ ಮಗಳು ಸಹೀಫಾ (22) ಸ್ವಲ್ಪ ಕುಡಿದು, ಉಳಿದದ್ದನ್ನು ತಾಯಿ ಉಮ್ಮೆ ಸಲ್ಮಾ (45) ಅವರಿಗೆ ನೀಡಿದರು. ಸ್ಟ್ರಾ ಮೂಲಕ ಕುಡಿಯುವಾಗ ಜ್ಯೂಸ್ ಬರಲಿಲ್ಲ. ಆಗ ಸ್ಟ್ರಾವನ್ನು ಮೇಲಕ್ಕೆಳೆದು ನೋಡಿದಾಗ, ಅದರಲ್ಲಿ ಸತ್ತಹಾವಿನ ಮರಿ ಸಿಕ್ಕಿಕೊಂಡಿತ್ತು. ಇದನ್ನು ಕಂಡು ಹೆದರಿದ ತಾಯಿ, ಮಗಳು ತಕ್ಷಣ ವಾಂತಿ ಮಾಡಿಕೊಂಡು ಅಸ್ವಸ್ಥರಾದರು.

ಇವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೈಯದ್ ತಿಳಿಸಿದ್ದಾರೆ.
ಜ್ಯೂಸ್ ಪೊಟ್ಟಣದಲ್ಲಿ ಸುಮಾರು ಮೂರು ಅಂಗುಲ ಉದ್ದದ ಹಾವಿನ ಮರಿ ಸಿಕ್ಕಿದ್ದನ್ನು ಬೇಕರಿಯ ಮಾಲೀಕರಿಗೆ ತಿಳಿಸಿದಾಗ, ಅದನ್ನು ಮರಳಿ ಕಂಪೆನಿಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಬೇಕರಿಯ ಮಾಲೀಕರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಿಇಟಿ ಶ್ರೇಯಾಂಕ ಪ್ರಕಟ: ಬೆಂಗಳೂರಿಗೆ ಸಿಂಹಪಾಲುJune 07, 2012ಬೆಂಗಳೂರು: ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್, ಭಾರತೀಯ ವೈದ್ಯಪದ್ಧತಿ ...
07/06/2012

ಸಿಇಟಿ ಶ್ರೇಯಾಂಕ ಪ್ರಕಟ: ಬೆಂಗಳೂರಿಗೆ ಸಿಂಹಪಾಲು

June 07, 2012

ಬೆಂಗಳೂರು: ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್, ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೋಪಥಿ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಒಟ್ಟು 80,932 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ನಲ್ಲಿ ಈ ಬಾರಿಯೂ ಮೊದಲ ರ‌್ಯಾಂಕ್ ಬೆಂಗಳೂರು ವಿದ್ಯಾರ್ಥಿಗಳ ಪಾಲಾಗಿದೆ.

ನಾಲ್ಕೂ ವಿಭಾಗಗಳಲ್ಲಿ ಮೊದಲ ಹತ್ತು ರ‌್ಯಾಂಕ್‌ಗಳನ್ನು ಗಣನೆಗೆ ತೆಗೆದುಕೊಂಡರೆ, ಒಟ್ಟು 40 ರ‌್ಯಾಂಕ್‌ಗಳಲ್ಲಿ 22 ರ‌್ಯಾಂಕ್‌ಗಳನ್ನು ರಾಜಧಾನಿಯ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ. ವಾಸ್ತುಶಿಲ್ಪ ವಿಭಾಗದಲ್ಲಿ ಮೊದಲ ಹತ್ತು ರ‌್ಯಾಂಕ್‌ಗಳ ಪೈಕಿ ಎಂಟನ್ನು ಬೆಂಗಳೂರು ವಿದ್ಯಾರ್ಥಿಗಳು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.

ನಗರದ ಎಚ್‌ಎಎಲ್‌ನ ನ್ಯಾಷನಲ್ ಪಬ್ಲಿಕ್ ಶಾಲೆಯ ಅರ್ಚನಾ ಶಶಿ ವೈದ್ಯಕೀಯ/ದಂತ ವೈದ್ಯಕೀಯದಲ್ಲಿ ಮೊದಲ ರ‌್ಯಾಂಕ್ ಹಾಗೂ ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೋಪಥಿಯಲ್ಲಿ ಮೂರನೇ ರ‌್ಯಾಂಕ್ ಗಳಿಸಿದ್ದಾರೆ.

ಮೈಸೂರಿನ ಸದ್ವಿದ್ಯಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎನ್.ಪ್ರೀತೇಶ್‌ಕುಮಾರ್ ವೈದ್ಯಕೀಯ/ ದಂತ ವೈದ್ಯಕೀಯ ವಿಭಾಗದಲ್ಲಿ ಎರಡನೇ ರ‌್ಯಾಂಕ್, ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೋಪಥಿಯಲ್ಲಿ ಮೊದಲ ರ‌್ಯಾಂಕ್, ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಎಲ್.ಎಂ.ವೀರೇಶ್ ವೈದ್ಯಕೀಯ/ದಂತ ವೈದ್ಯಕೀಯ ವಿಭಾಗದಲ್ಲಿ ಮೂರನೇ ರ‌್ಯಾಂಕ್ ಪಡೆದಿದ್ದಾರೆ.

ಎಂಜಿನಿಯರಿಂಗ್‌ನಲ್ಲಿ ಮಲ್ಲೇಶ್ವರದ ಎಂಇಎಸ್ ಕಿಶೋರ ಕೇಂದ್ರದ ಎಂ.ದೀಪಾ ಪ್ರಥಮ ರ‌್ಯಾಂಕ್, ಬಳ್ಳಾರಿ ನಗರದ ಬಳ್ಳಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಾಜ್ ವಿ.ಜೈನ್ ಎರಡನೇ ರ‌್ಯಾಂಕ್, ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಗರ್ ಹೊನ್ನುಂಗರ ಮೂರನೇ ರ‌್ಯಾಂಕ್ ಗಳಿಸಿದ್ದಾರೆ.

ವಾಸ್ತುಶಿಲ್ಪ ವಿಭಾಗದಲ್ಲಿ ನಗರದ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನ ಎಸ್.ನಕ್ಷಾ ಮೊದಲ ರ‌್ಯಾಂಕ್, ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಂನ ಎಸ್. ಪವನ್‌ಕುಮಾರ್ ದ್ವಿತೀಯ ರ‌್ಯಾಂಕ್, ನ್ಯಾಷನಲ್ ಹಿಲ್‌ವ್ಯೆ ಪಬ್ಲಿಕ್ ಶಾಲೆಯ ಪೃಥ್ವಿ ಹೆಗಡೆ ತೃತೀಯ ರ‌್ಯಾಂಕ್ ಗಳಿಸಿದ್ದಾರೆ.

ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೋಪಥಿಯಲ್ಲಿ ಉಡುಪಿಯ ವಿದ್ಯೋದಯ ಪಿಯು ಕಾಲೇಜಿನ ಚಂದನ ಆಚಾರ್ಯ ತೃತೀಯ ರ‌್ಯಾಂಕ್ ಪಡೆದಿದ್ದಾರೆ. ವೃತ್ತಿಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶವನ್ನು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಬುಧವಾರ ಪ್ರಕಟಿಸಿದರು.

ಜುಲೈ 23ರಿಂದ ಆನ್‌ಲೈನ್ ಮೂಲಕ ಸೀಟು ಹಂಚಿಕೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ. ಯಾವ ಕಾಲೇಜು, ಕೋರ್ಸ್‌ಗಳಲ್ಲಿ ಎಷ್ಟು ಸೀಟುಗಳು ಇವೆ ಎಂಬುದು ಸೀಟು ಹಂಚಿಕೆ ಪಟ್ಟಿ ಪ್ರಕಟವಾದ ನಂತರವೇ ಗೊತ್ತಾಗಲಿದೆ.

ಜುಲೈ ಎರಡನೇ ವಾರದಲ್ಲಿ ಸೀಟು ಹಂಚಿಕೆ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ. ಆನ್‌ಲೈನ್ ಕೌನ್ಸೆಲಿಂಗ್ ಬಗ್ಗೆ ಮಾಹಿತಿ ನೀಡುವ ಸಿ.ಡಿ.ಯನ್ನು ಸಹಾಯವಾಣಿ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದರು.

ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸ್‌ಗಳಿಗೆ 15,776 (13,666), ಎಂಜಿನಿಯರಿಂಗ್ ಕೋರ್ಸ್‌ಗಳಿಗೆ 78,694 (73,242), ಆರ್ಕಿಟೆಕ್ಟರ್ ಕೋರ್ಸ್‌ಗೆ 836 (815) ಹಾಗೂ ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೋಪಥಿ ಕೋರ್ಸ್‌ಗೆ 59,011(55,682) ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ (ಆವರಣದಲ್ಲಿ ಕಳೆದ ಸಾಲಿನಲ್ಲಿ ಅರ್ಹತೆ ಪಡೆದಿದ್ದ ವಿದ್ಯಾರ್ಥಿಗಳ ಸಂಖ್ಯೆ ನೀಡಲಾಗಿದೆ).

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್, ಭಾರತೀಯ ವೈದ್ಯಪದ್ಧತಿ ಮತ್ತು ಹೋಮಿಯೋಪಥಿ ವಿಭಾಗದಲ್ಲಿ ಅರ್ಹತೆ ಪಡೆದವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಎಂಜಿನಿಯರಿಂಗ್‌ನಲ್ಲಿ ಖಾಲಿ ಉಳಿಯುವ ಸೀಟುಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ. ಆದರೆ, ಉಳಿದ ಕೋರ್ಸ್‌ಗಳಲ್ಲಿ ಸೀಟಿಗಾಗಿ ಪೈಪೋಟಿ ಹೆಚ್ಚಾಗಲಿದೆ.

ಮೇ 21, 22ರಂದು ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಒಟ್ಟು 1,20,945 ವಿದ್ಯಾರ್ಥಿಗಳ ಪೈಕಿ 1,18,780 ಅಭ್ಯರ್ಥಿಗಳು ಹಾಜರಾಗಿದ್ದರು. ವೆಬ್‌ಸೈಟ್‌ನಲ್ಲಿ ಸಿಇಟಿ ಫಲಿತಾಂಶ ಲಭ್ಯವಿದ್ದು, ಗುರುವಾರ ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳ ಪರಿಶೀಲನೆಗಾಗಿ ಸ್ಕ್ಯಾನ್ ಮಾಡಿದ ಎಲ್ಲ ಒ.ಎಂ.ಆರ್ ಉತ್ತರ ಪತ್ರಿಕೆಗಳ ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಫಲಿತಾಂಶ ತಡೆಹಿಡಿದಿರುವ ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಪ್ರತಿಯನ್ನು ಪ್ರಾಧಿಕಾರಕ್ಕೆ ಇ-ಮೇಲ್, ಅಂಚೆ ಅಥವಾ ಫ್ಯಾಕ್ಸ್ ಮೂಲಕ ಜೂನ್ 8ರ ನಂತರ ಸಲ್ಲಿಸಿ ರ‌್ಯಾಂಕ್ ಪಡೆಯಬಹುದಾಗಿದೆ.

ದ್ವಿತೀಯ ಪಿಯುಸಿ ಮರು ಮೌಲ್ಯಮಾಪನದಲ್ಲಿ ಅಂಕಗಳು ವ್ಯತ್ಯಾಸವಾದರೆ, ಆ ಅಂಕಗಳ ಆಧಾರದ ಮೇಲೆ ಹೊಸ ರ‌್ಯಾಂಕ್ ನೀಡಲಾಗುತ್ತದೆ.

ಆನ್‌ಲೈನ್ ಕೌನ್ಸೆಲಿಂಗ್: ಈ ವರ್ಷದಿಂದ ಆನ್‌ಲೈನ್ ಕೌನ್ಸೆಲಿಂಗ್ ಜಾರಿಗೆ ಬಂದಿದೆ. ಹೀಗಾಗಿ ಅಭ್ಯರ್ಥಿಗಳು ಸೀಟು ಆಯ್ಕೆಗಾಗಿ ಕೌನ್ಸೆಲಿಂಗ್ ಕೇಂದ್ರಗಳಿಗೆ ಅಲೆಯುವ ಅಗತ್ಯವಿಲ್ಲ. ಮನೆಯಲ್ಲಿ ಕುಳಿತು, ಸೈಬರ್ ಕೆಫೆಗಳಿಗೆ ತೆರಳಿ ಸೀಟು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಜುಲೈ 15ರ ಒಳಗೆ ಸೀಟು ಹಂಚಿಕೆ ಪಟ್ಟಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಜುಲೈ 10ರ ಒಳಗೆ ಸೀಟು ಹಂಚಿಕೆ ಪಟ್ಟಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಚಿವ ರಾಮದಾಸ್ ತಿಳಿಸಿದರು.

ಈ ತಿಂಗಳ ಮೂರನೇ ವಾರದಲ್ಲಿ ನವದೆಹಲಿಗೆ ತೆರಳಿ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್ ಅವರನ್ನು ಭೇಟಿ ಮಾಡಿ ಸೀಟು ಹಂಚಿಕೆ ಪಟ್ಟಿಯನ್ನು ಜುಲೈ 10ರ ಒಳಗೆ ನೀಡುವಂತೆ ಕೋರಲಾಗುವುದು ಎಂದರು.

ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಜಿ.ಎಸ್.ವೆಂಕಟೇಶ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ವಿ.ರಶ್ಮಿ, ಆಡಳಿತಾಧಿಕಾರಿ ಕೆ.ಜ್ಯೋತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟMay 17, 2012ಬೆಂಗಳೂರು: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಗುರುವಾರ ಮಧ್ಯಾಹ್ನ 3 ಗಂಟೆ ನಂತರ ವ...
17/05/2012

ಇಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ

May 17, 2012

ಬೆಂಗಳೂರು: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಗುರುವಾರ ಮಧ್ಯಾಹ್ನ 3 ಗಂಟೆ ನಂತರ ವೆಬ್‌ಸೈಟ್ ಮತ್ತು ಮೊಬೈಲ್‌ನಲ್ಲಿ ಲಭ್ಯವಾಗಲಿದೆ.

ರಾಜ್ಯದ ಎಲ್ಲ ಪ್ರೌಢಶಾಲೆಗಳಲ್ಲಿ ಶುಕ್ರವಾರ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಣೆ ತಿಳಿಸಿದೆ.

13 ವಿವಿಧ ವೆಬ್‌ಸೈಟ್‌ಗಳಲ್ಲಿ ಮತ್ತು ಹತ್ತು ವಿವಿಧ ಸ್ಥಿರ ಮತ್ತು ಮೊಬೈಲ್ ದೂರವಾಣಿಗಳಲ್ಲಿ ಫಲಿತಾಂಶ ದೊರೆಯಲಿದೆ.

ವೆಬ್‌ಸೈಟ್ ವಿಳಾಸ:

http://schooleducation.kar.nic.in
http://karresults.nic.in
http://sslc.kar.nic.in
www.Exametc.com
www.karnatakaEducation.net
www.ExamResults.net
kannada.oneindia.in
www.oneindia.in
www.karnataka.com
[email protected]
www.bharatstudent.com
www.manabadi.co.in
www.indiaresults.com
www.educationgateway.co.in
www.indiaExam.net
www.khatav.com
www.ccspl.net
www.schools9.com
BANGALOREEDUCATION.COM
kannada.webdunia.com

ದೂರವಾಣಿ ಸಂಖ್ಯೆಗಳು (ಆವರಣದಲ್ಲಿನ ಸಂಖ್ಯೆಗಳಿಗೆ ಎಸ್‌ಎಂಎಸ್ ಮಾಡಬಹುದು)

Airtel 543212222 (55077)
Idia 5545678 (55456)
BSNL 1255560 (56505)
Tatagsm 54321234 (51234)
Tata 129660
Reliance 56566 (56506)
vadafone 56731 (56730)
Uninor 51234
BSNL1255225(sslcReg no sent to 53345 or 55352
IDEA, Reliance, Airtel (53030 kk10roll no send it to 53030
BSNL 1255596
All operaters (SSLC Reg no sent to 56006909

ಮುಂಬೈ (ಪಿಟಿಐ):  ಜಾಗತಿಕ ಆರ್ಥಿಕ ವಿದ್ಯಮಾನಗಳು ದೇಶದ ಅರ್ಥ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರಿ ವೆಚ...
17/05/2012

ಮುಂಬೈ (ಪಿಟಿಐ): ಜಾಗತಿಕ ಆರ್ಥಿಕ ವಿದ್ಯಮಾನಗಳು ದೇಶದ ಅರ್ಥ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರಿ ವೆಚ್ಚಗಳಿಗೆ ಕಡಿವಾಣ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಲಿದೆ.

ಡಾಲರ್ ಎದುರು ರೂಪಾಯಿಯ ವಿನಿಮಯ ದರ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ (ರೂ 54.46) ಕುಸಿತ ಕಂಡಿದೆ. ಕುಸಿದಿರುವ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಗಮನಾರ್ಹವಾಗಿ ಕುಸಿದ ಹಿನ್ನೆಲೆಯಲ್ಲಿ, ಕೆಲ ಜನಪ್ರಿಯವಲ್ಲದ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗಲಿದೆ. ಜನರು ಇಷ್ಟಪಡಲಿ ಬಿಡಲಿ ನಾನಂತೂ ಕೆಲ ಮಿತವ್ಯಯ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಬುಧವಾರ ರಾಜ್ಯಸಭೆಯಲ್ಲಿ ಪ್ರಕಟಿಸಿದರು.

ಮಿತವ್ಯಯ ಕ್ರಮಗಳ ಸ್ವರೂಪ ಹೇಗಿರುತ್ತದೆ ಮತ್ತು ಅವುಗಳು ಎಂದಿನಿಂದ ಇದು ಜಾರಿಗೆ ಬರಲಿವೆ ಎನ್ನುವುದನ್ನು ಅವರು ಸ್ಪಷ್ಟಪಡಿಸಲಿಲ್ಲ. ಸದ್ಯದ ಬಿಕ್ಕಟ್ಟಿಗೆ ಸರ್ಕಾರ ಹೇಗೆ ಸ್ಪಂದಿಸಲಿದೆ ಎನ್ನುವುದಕ್ಕೆ ಈ ಮಿತವ್ಯಯ ಕ್ರಮಗಳು ನೆರವಾಗಲಿವೆ. ಹೀಗಾಗಿ ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದೂ ಅವರು ಭರವಸೆ ನೀಡಿದ್ದಾರೆ. 2008-09ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ಮಿತವ್ಯಯ ಕ್ರಮಗಳನ್ನು ಕೈಗೊಂಡಿತ್ತು.

ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿರುವ ಬಗ್ಗೆ ಆತಂಕ ಬೇಡ. ಭಾರತೀಯ ರಿಸರ್ವ್ ಬ್ಯಾಂಕ್ ವಿನಿಮಯ ಮಾರುಕಟ್ಟೆಯ ಮೇಲೆ ನಿಗಾ ವಹಿಸುತ್ತಿದ್ದು, ಯೂರೋಪ್ ಆರ್ಥಿಕ ಸ್ಥಿತಿಗತಿ ಚೇತರಿಸಿಕೊಳ್ಳುತ್ತಿದ್ದಂತೆ ರೂಪಾಯಿ ವಿನಿಮಯ ಮೌಲ್ಯ ಸಹಜ ಸ್ಥಿತಿಗೆ ಮರಳಲಿದೆ ಎಂದು ಮುಖರ್ಜಿ ಹೇಳಿದ್ದಾರೆ.

ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಬುಧವಾರ ಸಾರ್ವಕಾಲಿಕ ದಾಖಲೆ ಮಟ್ಟ 54.46ಕ್ಕೆ ಕುಸಿತ ಕಂಡಿದೆ. ಆಮದುದಾರರು ಮತ್ತು ಬ್ಯಾಂಕುಗಳಿಂದ ದಿನೇ ದಿನೇ ಹೆಚ್ಚುತ್ತಿರುವ ಡಾಲರ್ ಬೇಡಿಕೆ, ಯೂರೋಪ್ ಒಕ್ಕೂಟದ ಬಿಕ್ಕಟ್ಟು, ಕುಸಿಯುತ್ತಿರುವ `ಜಿಡಿಪಿ`, ಹೆಚ್ಚುತ್ತಿರುವ ವಿತ್ತೀಯ ಕೊರತೆ ಇತ್ಯಾದಿ ಸಂಗತಿಗಳು ರೂಪಾಯಿ ಮೌಲ್ಯ ಕುಸಿಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ವಿನಿಮಯ ಮಾರುಕಟ್ಟೆಗೆ ಮಧ್ಯಪ್ರವೇಶಿಸುವ ಮೂಲಕ ರೂಪಾಯಿ ಮೌಲ್ಯ ಕುಸಿತ ತಪ್ಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಡೆಸಿದ ಪ್ರಯತ್ನ ಕೂಡ ವಿಫಲವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಬುಧವಾರ ರೂಪಾಯಿ ಮೌಲ್ಯ 67 ಪೈಸೆಗಳಷ್ಟು ಇಳಿದಿದೆ. ಕಳೆದ ವರ್ಷ ಡಿಸೆಂಬರ್ 15ರಂದು ರೂಪಾಯಿ ಮೌಲ್ಯ 54.30ಕ್ಕೆ ಕುಸಿದಿದ್ದುದು ಇಲ್ಲಿಯವರೆಗಿನ ಗರಿಷ್ಠ ಇಳಿಕೆಯಾಗಿತ್ತು.

`ಏರಿಳಿತ ನಿಯಂತ್ರಿಸಲು ಮಾತ್ರ `ಆರ್‌ಬಿಐ` ವಿನಿಮಯ ಮಾರುಕಟ್ಟೆಗೆ ಮಧ್ಯಪ್ರವೇಶಿಸುತ್ತದೆಯೇ ಹೊರತು, ರೂಪಾಯಿ ಕುಸಿತ ತಡೆಯಲು ಅಲ್ಲ. ಈ ವ್ಯತ್ಯಾಸ ಅರ್ಥಮಾಡಿಕೊಳ್ಳಬೇಕು` ಎಂದು `ಆರ್‌ಬಿಐ` ಡೆಪ್ಯುಟಿ ಗವರ್ನರ್ ಕೆ.ಸಿ ಚಕ್ರವರ್ತಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಯೂರೋಪ್ ಒಕ್ಕೂಟದ ಆರ್ಥಿಕ ಬಿಕ್ಕಟ್ಟು ಉಲ್ಬಣಿಸುತ್ತಿರುವುದು ಮತ್ತು ಜಾಗತಿಕ ಷೇರು ಪೇಟೆಗಳಲ್ಲಿ ನೀರಸ ವಹಿವಾಟು ನಡೆಯುತ್ತಿರುವುದರಿಂದ ಡಾಲರ್ ಬೇಡಿಕೆ ಹೆಚ್ಚಿದೆ. ದೇಶೀಯ ಮಟ್ಟದಲ್ಲಿ ಹಣದುಬ್ಬರ ಹೆಚ್ಚಳ, ಕೈಗಾರಿಕಾ ಪ್ರಗತಿ ಕುಸಿತ ಇತ್ಯಾದಿ ಸಂಗತಿಗಳು ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿಯುವಂತೆ ಮಾಡಿದೆ ಎಂದು ದೆಹಲಿ ಮೂಲದ ಕರೆನ್ಸಿ ವಿನಿಮಯ ವರ್ತಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಬಿಐ ಸಲಹೆ: ರಫ್ತುದಾರರು ತಮ್ಮ ಬಳಿ ಇರುವ ವಿದೇಶಿ ವಿನಿಮಯ ಮೀಸಲಿನಲ್ಲಿ ಅರ್ಧದಷ್ಟು ಭಾಗವನ್ನು ರೂಪಾಯಿಗೆ ಪರಿವರ್ತಿಸಿಕೊಳ್ಳಬೇಕು. ಇದರಿಂದ ಮಾರುಕಟ್ಟೆಯಲ್ಲಿ ಡಾಲರ್ ಲಭ್ಯತೆ ಹೆಚ್ಚಲಿದ್ದು, ರೂಪಾಯಿ ಅಪಮೌಲ್ಯ ತಪ್ಪಿಸಬಹುದು ಎಂದು `ಆರ್‌ಬಿಐ` ಕಳೆದ ವಾರ ಸೂಚನೆ ಸಲಹೆ ನೀಡಿತ್ತು.

ಆದರೆ, ಚಾಲ್ತಿ ಖಾತೆಯ (ಸಿಎಡಿ) ಗರಿಷ್ಠ ಕೊರತೆಯಿಂದ ರೂಪಾಯಿ ಮೌಲ್ಯ ದಿನೇ ದಿನೇ ಕುಸಿಯುತ್ತಿದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಸಿ. ರಂಗರಾಜನ್ ಹೇಳಿದ್ದರು. ಡಿಸೆಂಬರ್ 2011ರ ಅಂತ್ಯಕ್ಕೆ `ಸಿಎಡಿ` ಮಟ್ಟದ `ಜಿಡಿಪಿ`ಯ ಶೇ 4ರಷ್ಟು ದಾಟಿದೆ.

1991ರ ಪರಿಸ್ಥಿತಿ ಮರುಕಳಿಸೀತೇ?

ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿರುವುದರಿಂದ 1991ರಲ್ಲಿ ಉಂಟಾದ ಪರಿಸ್ಥಿತಿ ಮರುಕಳಿಸಬಹುದು ಎಂದು ವಿರೋಧ ಪಕ್ಷಗಳು ಬುಧವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. 1991ರಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಬರಿದಾದಾಗ ವಿದೇಶದಲ್ಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆಯಲಾಗಿತ್ತು.

ಈಗಿನ ಆರ್ಥಿಕ ಬಿಕ್ಕಟ್ಟು ಗಮನಿಸಿದರೆ ಮತ್ತೆ 1991ರ ಪರಿಸ್ಥಿತಿ ಉದ್ಭವಿಸುವ ಸೂಚನೆಗಳು ಕಾಣುತ್ತಿವೆ ಎಂದು ಹಿರಿಯ ಬಿಜೆಪಿ ಮುಖಂಡ ಮುರಳಿ ಮನೋಹರ ಜೋಶಿ ಸರ್ಕಾರವನ್ನು ಟೀಕಿಸಿದರು.

ಬಂಧನ ಭೀತಿಯಲ್ಲಿ ಯಡಿಯೂರಪ್ಪಬೆಂಗಳೂರು: ಜಿಂದಾಲ್ ಸಮೂಹದ ಸೌತ್‌ವೆಸ್ಟ್ ಮೈನಿಂಗ್ ಕಂಪೆನಿಯಿಂದ ಸಂಶಯಾಸ್ಪದವಾಗಿ ಹಣ ಪಡೆದ ಆರೋಪದ ಮೇಲೆ ಮಾಜಿ ಮುಖ...
17/05/2012

ಬಂಧನ ಭೀತಿಯಲ್ಲಿ ಯಡಿಯೂರಪ್ಪ

ಬೆಂಗಳೂರು: ಜಿಂದಾಲ್ ಸಮೂಹದ ಸೌತ್‌ವೆಸ್ಟ್ ಮೈನಿಂಗ್ ಕಂಪೆನಿಯಿಂದ ಸಂಶಯಾಸ್ಪದವಾಗಿ ಹಣ ಪಡೆದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ, ಬುಧವಾರ ಬೆಂಗಳೂರು, ಬಳ್ಳಾರಿ ಮತ್ತು ಶಿವಮೊಗ್ಗ ನಗರಗಳ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಯಡಿಯೂರಪ್ಪ ನಿವಾಸ, ಡಾಲರ್ಸ್ ಕಾಲೊನಿಯಲ್ಲಿರುವ `ಧವಳಗಿರಿ` ನಿವಾಸ, ಮಾಲೂರು ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರ ರಾಜಾಜಿನಗರದ ಮನೆ, ಯಡಿಯೂರಪ್ಪ ಅಳಿಯ ಆರ್.ಎನ್.ಸೋಹನ್‌ಕುಮಾರ್ ಅವರ ವಿಜಯನಗರ ನಿವಾಸ, ಸೋಹನ್‌ಕುಮಾರ್ ಹಾಗೂ ಯಡಿಯೂರಪ್ಪ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಒಡೆತನದ ಧವಳಗಿರಿ ಡೆವಲಪರ್ಸ್ ಕಚೇರಿ, ಪ್ರೇರಣಾ ಚೇಂಬರ್ಸ್ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆದಿದೆ.

ಸಂಡೂರಿನ ತೋರಣಗಲ್ಲಿನಲ್ಲಿರುವ ಜಿಂದಾಲ್ ಸ್ಟೀಲ್ಸ್ ಕಚೇರಿ, ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನೋದ್ ನಾವಲ್ ನಿವಾಸ, ಸೌತ್‌ವೆಸ್ಟ್ ಮೈನಿಂಗ್ ಕಂಪೆನಿಯ ಕಚೇರಿ, ಶಿವಮೊಗ್ಗದ ವಿನೋಬಾ ನಗರದಲ್ಲಿರುವ ಯಡಿಯೂರಪ್ಪ ಅವರ ಪುತ್ರಿ ಅರುಣಾದೇವಿ ನಿವಾಸ ಮತ್ತು ಪ್ರೇರಣಾ ಶಿಕ್ಷಣ ಸಂಸ್ಥೆಯ ಕಚೇರಿಗಳ ಮೇಲೆ ದಾಳಿ ನಡೆದಿದೆ. ಸಿಬಿಐನ ಹೈದರಾಬಾದ್ ವಿಭಾಗದ ಜಂಟಿ ನಿರ್ದೇಶಕ ವಿ.ವಿ.ಲಕ್ಷ್ಮೀನಾರಾಯಣ, ಬೆಂಗಳೂರು ವಿಭಾಗದ ಡಿಐಜಿ ಆರ್.ಹಿತೇಂದ್ರ, ಎಸ್.ಪಿ ಡಾ.ಸುಬ್ರಹ್ಮಣ್ಯೇಶ್ವರ ರಾವ್ ದಾಳಿಯ ನೇತೃತ್ವ ವಹಿಸಿದ್ದರು.

ಸುಪ್ರೀಂಕೋರ್ಟ್ ಆದೇಶದಂತೆ ಯಡಿಯೂರಪ್ಪ, ರಾಘವೇಂದ್ರ, ವಿಜಯೇಂದ್ರ, ಸೋಹನ್‌ಕುಮಾರ್ ಮತ್ತು ಇತರರ ವಿರುದ್ಧ ಮಂಗಳವಾರವೇ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದ ಸಿಬಿಐ ಪೊಲೀಸರು, ಅದನ್ನು ಮುಚ್ಚಿದ ಲಕೋಟೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಬಳಿಕ ಉದ್ದೇಶಿತ ಸ್ಥಳಗಳಲ್ಲಿ ದಾಳಿ ನಡೆಸಲು ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದುಕೊಂಡಿದ್ದರು.

ಮಹತ್ವದ ದಾಖಲೆ ವಶ: ಡಾಲರ್ಸ್ ಕಾಲೊನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸ `ಧವಳಗಿರಿ` ಮತ್ತು ಶೇಷಾದ್ರಿಪುರದಲ್ಲಿರುವ ಪ್ರೇರಣಾ ಚೇಂಬರ್ಸ್‌ನಲ್ಲಿರುವ ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್, ಭಗತ್ ಹೋಮ್ಸ ಕಂಪೆನಿ ಮತ್ತು ಪ್ರೇರಣಾ ಶಿಕ್ಷಣ ಸಂಸ್ಥೆಯ ಕಚೇರಿಯಲ್ಲಿ ಸಿಬಿಐ ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು ದೊರೆತಿವೆ. ಡಾಲರ್ಸ್ ಕಾಲೋನಿಯ ಮನೆಯಿಂದ ಸಿಬಿಐ ಅಧಿಕಾರಿಗಳು ಮೂರು ಚೀಲಗಳಲ್ಲಿ ದಾಖಲೆಗಳನ್ನು ಕೊಂಡೊಯ್ದಿದ್ದಾರೆ.

ದಾಳಿ ನಡೆಸಿದ ಸ್ಥಳಗಳಲ್ಲಿ ಪ್ರಮುಖ ದಾಖಲೆಗಳು ದೊರೆತಿರುವುದನ್ನು ಸಿಬಿಐ ಖಚಿತಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಬಿಐ, `ಆರೋಪಿಗಳ ವಿರುದ್ಧ ದೋಷಾರೋಪ ಮಾಡುವಂತಹ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ` ಎಂದು ತಿಳಿಸಿದೆ.

ನಸುಕಿನಲ್ಲೇ ದಾಳಿ: ರೇಸ್‌ಕೋರ್ಸ್ ರಸ್ತೆಯ ನಿವಾಸದಲ್ಲಿ ಮೊದಲು ದಾಳಿ ಆರಂಭವಾಯಿತು. ಬೆಳಿಗ್ಗೆ 6.15ಕ್ಕೆ ಸಿಬಿಐ ಅಧಿಕಾರಿಗಳ ತಂಡ ಮನೆಯೊಳಕ್ಕೆ ಪ್ರವೇಶಿಸಿತು. ಹಿತೇಂದ್ರ ನೇತೃತ್ವದ ತಂಡ ಆರು ಗಂಟೆಗಳಿಗೂ ಹೆಚ್ಚು ಕಾಲ ಶೋಧಕಾರ್ಯ ನಡೆಸಿತು. ತನಿಖಾ ತಂಡ ಶೋಧಕಾರ್ಯ ನಡೆಸುತ್ತಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಕುಟುಂಬದ ಸದಸ್ಯರಿಗೆ ಮಾತ್ರ ಅಲ್ಲಿರಲು ಅವಕಾಶ ನೀಡಲಾಗಿತ್ತು. ಇತರೆ ವ್ಯಕ್ತಿಗಳನ್ನು ತಕ್ಷಣವೇ ಮನೆಯಿಂದ ಹೊರಕ್ಕೆ ಕಳುಹಿಸಿದ ಸಿಬಿಐ ಅಧಿಕಾರಿಗಳು, ಮನೆಯ ಆವರಣದ ಪ್ರವೇಶ ದ್ವಾರವನ್ನು ಬಂದ್ ಮಾಡಿದರು. ಮಧ್ಯಾಹ್ನ 12.30ರವರೆಗೂ ಪರಿಶೀಲನೆ ನಡೆಸಿದ ತನಿಖಾ ತಂಡ, ಕೆಲವು ದಾಖಲೆಗಳೊಂದಿಗೆ ಅಲ್ಲಿಂದ ವಾಪಸಾಯಿತು.

ಇದೇ ವೇಳೆಗೆ `ಧವಳಗಿರಿ`, ಪ್ರೇರಣಾ ಚೇಂಬರ್ಸ್‌ನಲ್ಲಿರುವ ಮೂರು ಕಚೇರಿಗಳು, ಕೃಷ್ಣಯ್ಯ ಶೆಟ್ಟಿ ನಿವಾಸ ಮತ್ತು ಸೋಹನ್‌ಕುಮಾರ್ ಮನೆಗಳ ಮೇಲೆ ದಾಳಿ ನಡೆಯಿತು. ಎಲ್ಲ ಕಡೆಗಳಲ್ಲೂ ದೀರ್ಘ ಕಾಲ ತಪಾಸಣೆ ನಡೆಸಿದ ತನಿಖಾ ತಂಡ, ಬ್ಯಾಂಕ್ ವಹಿವಾಟು, ಕಂಪೆನಿಗಳ ನೋಂದಣಿ ಮತ್ತು ವ್ಯವಹಾರ, ಆಸ್ತಿ ಖರೀದಿ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ಪಡೆದಿದೆ. ಎಫ್‌ಐಆರ್‌ನಲ್ಲಿ ಪ್ರಸ್ತಾಪಿಸಿರುವ ಅಂಶಗಳ ಜೊತೆ ನಂಟು ಹೊಂದಿರುವ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪುತ್ರಿ ಮನೆಯಲ್ಲೂ ತಪಾಸಣೆ: ಪ್ರಕರಣದ ಕೇಂದ್ರ ಬಿಂದುವಾಗಿರುವ ಪ್ರೇರಣಾ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಜಂಟಿ ಕಾರ್ಯದರ್ಶಿಯೂ ಆಗಿರುವ ಬಿಎಸ್‌ವೈ ಪುತ್ರಿ ಅರುಣಾದೇವಿ ಮನೆಯಲ್ಲೂ ಶೋಧ ನಡೆದಿದೆ.

ಶಿವಮೊಗ್ಗದ ವಿನೋಬಾನಗರದಲ್ಲಿರುವ ಅವರ ಮನೆಯ ಮೇಲೆ ಬೆಳಿಗ್ಗೆ 7 ಗಂಟೆಗೆ ದಾಳಿ ನಡೆಸಿದ ತನಿಖಾ ತಂಡ, ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಿತು. ನಂತರ ಅರುಣಾದೇವಿ ಮತ್ತು ಅವರ ಪತಿ ಉದಯಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿತು.

ಮಧ್ಯಾಹ್ನ ಉದಯಕುಮಾರ್ ಅವರನ್ನು ಮನೆಯಿಂದ ಕರೆದೊಯ್ದ ಸಿಬಿಐ ಅಧಿಕಾರಿಗಳು, ಶಿವಮೊಗ್ಗದ ಸಿಂಡಿಕೇಟ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಗಳಲ್ಲಿದ್ದ ಲಾಕರ್‌ಗಳನ್ನು ತೆರೆದು ಪರಿಶೀಲನೆ ನಡೆಸಿದರು. ಲಾಕರ್‌ನಲ್ಲಿ ದೊರೆತವೂ ಸೇರಿದಂತೆ ಕೆಲವು ದಾಖಲೆಗಳನ್ನು ಸಿಬಿಐ ತಂಡ ಶಿವಮೊಗ್ಗದಲ್ಲಿ ವಶಪಡಿಸಿಕೊಂಡಿದೆ. ಪ್ರೇರಣಾ ಶಿಕ್ಷಣ ಸಂಸ್ಥೆಯ ಅಧಿಕಾರಿಗಳನ್ನೂ ಪ್ರಶ್ನಿಸಿ, ಜಿಂದಾಲ್‌ನಿಂದ ದೇಣಿಗೆ ಸಂದಾಯ ಆಗಿರುವ ಬಗ್ಗೆ ಮಾಹಿತಿ ಪಡೆದಿದೆ.

ಜಿಂದಾಲ್‌ನಲ್ಲೂ ಶೋಧ: ತೋರಣಗಲ್ಲಿನ ವಿದ್ಯಾನಗರದಲ್ಲಿರುವ ಜೆಎಸ್‌ಡಬ್ಲ್ಯು ಉಪನಗರದಲ್ಲಿರುವ ಜೆಎಸ್‌ಡಬ್ಲ್ಯೂ ಸ್ಟೀಲ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ.ವಿನೋದ್ ನಾವಲ್ ಹಾಗೂ ಸೌಥ್‌ವೆಸ್ಟ್ ಮೈನಿಂಗ್ ಕಂಪೆನಿಯ ಪ್ರಭಾರಿ ಸಿಇಒ ಯು.ಕೆ. ಪಾಂಡೆ ಅವರ ನಿವಾಸಗಳ ಮೇಲೆ ಸಿಬಿಐ ಎಸ್‌ಪಿ ಮಂಜೇಶ್ವರ ರಾವ್ ನೇತೃತ್ವದ ತಂಡ ಬೆಳಿಗ್ಗೆ ಆರು ಗಂಟೆಗೆ ದಾಳಿ ನಡೆಸಿತು. ಬೆಳಿಗ್ಗೆ 9 ಗಂಟೆಯ ಸುಮಾರಿಗೆ ತೋರಣಗಲ್ಲಿನಲ್ಲಿರುವ ಜಿಂದಾಲ್ ಕಚೇರಿಗೆ ಬಂದ ತನಿಖಾ ತಂಡ ಅಲ್ಲಿಯೂ ಶೋಧ ಕಾರ್ಯ ನಡೆಸಿ, ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿತು.

ಸಂಡೂರು ರಸ್ತೆಯಲ್ಲಿರುವ ಸೌತ್‌ವೆಸ್ಟ್ ಮೈನಿಂಗ್ ಕಂಪೆನಿಯ ಕಚೇರಿಯ ಮೇಲೆ ಮತ್ತೊಂದು ತಂಡ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡಿತು. ಮಧ್ಯಾಹ್ನದವರೆಗೂ ತಪಾಸಣೆ ನಡೆಸಿದ ತನಿಖಾ ತಂಡ, ನಂತರ ಕೆಲ ದಾಖಲೆಗಳೊಂದಿಗೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು.

ಸಂಜೆ ಸಭೆ: ಶೋಧ ಕಾರ್ಯ ಅಂತ್ಯಗೊಳ್ಳುತ್ತಿದ್ದಂತೆ ಗಂಗಾನಗರದಲ್ಲಿರುವ ಸಿಬಿಐ ಕಚೇರಿಯಲ್ಲಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ನಡೆಯಿತು. ಹಿತೇಂದ್ರ, ಸುಬ್ರಹ್ಮಣ್ಯೇಶ್ವರ ರಾವ್, ಹೆಚ್ಚುವರಿ ಎಸ್‌ಪಿ ಬಿಸ್ವಜಿತ್ ದಾಸ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು. ದಾಳಿಯ ವೇಳೆ ವಶಕ್ಕೆ ಪಡೆದಿರುವ ದಾಖಲೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದರು. ಹೇಳಿಕೆ ನೀಡಲು ಬರುವಂತೆ ಒಂದೆರಡು ದಿನಗಳಲ್ಲಿ ಆರೋಪಿಗಳಿಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.

08/03/2012

ಎಲ್‌ಪಿಜಿ ಟ್ಯಾಂಕರ್ ಮುಷ್ಕರ ಅಂತ್ಯ

ಚೆನ್ನೈ (ಪಿಟಿಐ): ಕಳೆದೊಂದು ವಾರದಿಂದ ಅಡುಗೆ ಅನಿಲದ (ಎಲ್‌ಪಿಜಿ) ವ್ಯತ್ಯಯದಿಂದ ಪರದಾಡುತ್ತಿದ್ದವರಿಗಿದು ಸಂತಸದ ಸುದ್ದಿ...!

ಅನಿಲ ಸಾಗಣೆ ಟ್ಯಾಂಕರ್‌ಗಳ ಬಾಡಿಗೆ ದರ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದ ಟ್ಯಾಂಕರ್ ಮಾಲಿಕರು ಸರ್ಕಾರ ಬುಧವಾರ ತೈಲ ಮಾರಾಟ ಕಂಪೆನಿಗಳ ಜತೆ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ಗುರುವಾರ ಮುಷ್ಕರ ಕೈ ಬಿಟ್ಟಿದ್ದಾರೆ.

ದರ ಪರಿಷ್ಕರಣೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರವರಿ 29 ರಂದು ದಕ್ಷಿಣ ಪ್ರಾಂತೀಯ ಸಗಟು ಎಲ್‌ಪಿಜಿ ಸಾಗಣೆ ಟ್ಯಾಂಕರ್ ಮಾಲೀಕರ ಸಂಘ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಎಲ್‌ಪಿಜಿ ಗ್ರಾಹಕರು ವಾರಪೂರ್ತಿ ಪರದಾಡುವಂತಾಗಿತ್ತು.

ಮುಷ್ಕರವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ತೈಲ ಮಾರಾಟ ಕಂಪೆನಿ ಹಾಗೂ ಟ್ಯಾಂಕರ್ ಮಾಲಿಕರ ಜತೆ ಶನಿವಾರ ನಡೆಸಿದ ಸಭೆ ವಿಫಲಗೊಂಡಿತ್ತು.

ಆದ್ದರಿಂದ ಬುಧವಾರ ಸರ್ಕಾರ ನಾಗರೀಕ ಪೂರೈಕೆ ಮತ್ತು ಗ್ರಾಹಕರ ಹಿತರಕ್ಷಣಾ ಆಯೋಗದ ಆಯುಕ್ತ ಪಿ.ಎಂ.ಬಷಿರ್ ಅಮ್ಮಹದ್ ಅವರ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿತ್ತು.

ರಂಗು ರಂಗಾದ ಕ್ಷಣ... ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಗುರುವಾರ ಓಕುಳಿಯಾಟದಲ್ಲಿ ನಿರತರಾದ ವಿದ್ಯಾರ್ಥಿಗಳು ಕಂಡುಬಂದಿದ್ದು ಹೀಗೆ.
08/03/2012

ರಂಗು ರಂಗಾದ ಕ್ಷಣ... ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಗುರುವಾರ ಓಕುಳಿಯಾಟದಲ್ಲಿ ನಿರತರಾದ ವಿದ್ಯಾರ್ಥಿಗಳು ಕಂಡುಬಂದಿದ್ದು ಹೀಗೆ.

Address


Website

Alerts

Be the first to know and let us send you an email when Karnataka News posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share