Sudhimane news

  • Home
  • Sudhimane news

Sudhimane news Local kannada online news
(6)

https://youtu.be/FJ7QIfn1wFM*ಶಿರಾಳಕೊಪ್ಪ ಪಟ್ಟಣದಲ್ಲಿ ಸಂಭ್ರಮದ ಈದ್ ಮೀಲಾದ....*  *ಮೆರವಣಿಗೆಯಲ್ಲಿ  ಕುಣಿದು ಕುಪ್ಪಲಿಸಿದ ಯುವಕರು..*  ...
09/10/2022

https://youtu.be/FJ7QIfn1wFM

*ಶಿರಾಳಕೊಪ್ಪ ಪಟ್ಟಣದಲ್ಲಿ ಸಂಭ್ರಮದ ಈದ್ ಮೀಲಾದ....*
*ಮೆರವಣಿಗೆಯಲ್ಲಿ ಕುಣಿದು ಕುಪ್ಪಲಿಸಿದ ಯುವಕರು..*


*ಶಿರಾಳಕೊಪ್ಪ:9 ಅಕ್ಟೋಬರ್ 2022.*

*ಪಟ್ಟಣದಲ್ಲಿ ಮುಸ್ಲಿಂ ಭಾಂದವರು ಇದ್ ಮಿಲಾದ್ ಹಬ್ಬವನ್ನು ಭಾನುವಾರ ಅದ್ದೂರಿಯಾಗಿ ಭಾರೀ ವಿಜೃಂಭಣೆ ಮತ್ತು ಉತ್ಸಾಹದಿಂದ ಆಚರಿಸಿದರು.*

*ಪಟ್ಟಣದ ಹಳ್ಳೂರು ಪ್ರದೇಶದಲ್ಲಿರುವ ಸುನ್ನಿ ಜಾಮೀಯಾ ಮಸೀದಿಯಿಂದ ಸಾವಿರಾರು ಜನ ಸಂಖ್ಯೆಯಲ್ಲಿ ಪ್ರಾರಂಭವಾದ ಮೀಲಾದ್ ಮೆರವಣಿಗೆ ಹಿರೇಕೆರೂರು* *ರಸ್ತೆಯಲ್ಲಿರುವ ಸರರ್ಕಾರಿ ಅಸ್ಪತ್ರೆಯ ವರೆಗೂ ಬಂದು* *ಪಟ್ಟಣದ ದೊಡ್ಡ ಬ್ಯಾಂಡ್ ಕೇರಿ, ಕುಂಬಾರಕೇರಿ, ಕೆಳಗಿನಕೇರಿ ಸೇರಿದಂತೆ ಶಿಕಾರಿಪುರ ರಸ್ತೆ ಮಾರ್ಗವಾಗಿ ಊರಿನ ಪ್ರಮುಖ ಮುಸ್ಲಿಂ ಧಾರ್ಮಿಕ ಕೇಂದ್ರವಾದ* *ಹಜರತ್ ಮೀರ್ ಮನ್ಸೂರ್ ಅಲಿ ಶಾಹ್ ಖಾದ್ರಿ ಹಾಗೂ ಹಜರತ್* *ಮೀರ್ ಶಾಹಿದ್ ಅಲಿ ಶಾಹ್ ಖಾದ್ರಿ*
*ದರ್ಗಾದ ಆವರಣದಲ್ಲಿ ಜಮಾವಣೆ ಗೊಂಡಿದ ಮುಸ್ಲಿಂ ಭಾಂದವರು ಸಾಮೂಹಿಕವಾಗಿ ಪ್ರಾರ್ಥನೆ* *ಸಲ್ಲಿಸಿದರು.*

*ಮೆರವಣಿಯುದ್ದಕ್ಕೂ ಡಿ.ಜೆ ಸೌಂಡ್ ಗೆ ನೂರಾರು ಯುವಕರು ನೃತ್ಯ ಮಾಡಿದ್ದು ವಿಶೇಷವಾಗಿತ್ತು.*


*ಮೆಕ್ಕಾ -ಮದಿನಾದ ಸ್ಥಬ್ದ ಚಿತ್ರ , ಟಿಪ್ಪು ವೇಶದಾರಿಯ ಛದ್ಮವೇಶ ಮೆರವಣಿಗೆಯಲ್ಲಿ ಗಮನ ಸೆಳೆದವು.*

*ಹತ್ತು ಸಾವಿರ ಲಾಡು ವಿತರಣೆ:-* *ಈದ್ ಮಿಲಾದ್ ಹಬ್ಬದ ಅಂಗವಾಗಿ ಪಟ್ಟಣದ ಎಲ್ಲಾ ಹಿಂದೂ ಬಾಂಧವರಿಗೆ ಮತ್ತು ಪಟ್ಟಣದ ಜನತೆಗೆ ಸುಮಾರು ಹತ್ತು ಸಾವಿರ ಲಾಡುಗಳನ್ನು ದೊಡ್ಡ ಬ್ಯಾಂಡ್ ಕೇರಿಯ ಯೂನುಸ್ ಅಹ್ಮದ್ ಹಾಗೂ ಬಿಳಿಕಿ ಅಕ್ರಮ್ ತಂಡದವರು ಹಂಚಿದರು.*

*ಎಂ.ಎಂ.ಎಸ್ ಫ್ರೂಟ್ಸ್ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತು ಶ್ರೀಧರ್ ನಸಿರ್ಂಗ್ ಹೊಂ ನಲ್ಲಿ ರೋಗಿಗಳಿಗೆ ಹಣ್ಣುಗಳ ವಿತರಣೆ ಮಾಡಲಾಯಿತು.*
*ಮೆರವಣಿಗೆ ಉದ್ದಕ್ಕೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ಥಳೀಯ ಯುವಕರಿಂದ ಪಾನಕ, ಸಿಹಿ ಪಾಯಿಸ ವಿತರಣೆ ಮಾಡಲಾಯಿತು.*

*ಪಟ್ಟಣದ ಸುನ್ನಿ ದಾವತೆ ಇಸ್ಲಾಮಿ ಸಂಸ್ಥೆ ವತಿಯಿಂದ 70 ಜನ ಅರ್ಹ ಬಡವರಿಗೆ 2500 ಸಾವಿರ ಮೌಲ್ಯದ ಆಹಾರ ಸಾಮಾಗ್ರಿಗಳನ್ನು ಹಬ್ಬಮಾಡಲು ವಿತರಿಸಲಾಯಿತು.*

*ಅಂಜುಮನ್ ಇಸ್ಲಾಮ್ ಕಮೀಟಿಯ ಅಧ್ಯಕ್ಷ ಹನೀಫ್ ಸಾಬ್, ಕಾರ್ಯದರ್ಶಿ ವಾಜೀದ್ ಸಾಬ್, ಹಾಗೂ ಕಮೀಟಿಯ ಸದಸ್ಯರು, ಜಾಮೀಯಾ ಮಸೀದಿಯ ಮುತವಲ್ಲಿ ಬುದ್ವಂತ್ ಬಾಷಾ ಸಾಬ್ , ಪುರಸಭೆಯ ಮಾಜಿ ಸ್ಥಾಯಿ ಸಮೀತಿ ಅಧ್ಯಕ್ಷ ಮಕ್ಬೂಲ್ ಸಾಬ್ ಮಿಟೈಗಾರ್ ಸೇರಿದಂತೆ ಮೀಲಾದ್ ಕಮಿಟಿಯ ಇಮ್ರಾನ್ ಖಾನ್, ಖುರ್ಶೀದ್ ಖಾನ್, ನೇತೃತ್ವ ವಹಿಸಿದ್ದರು.*

*ವರದಿ:ನವೀದ್ ಶಿರಾಳಕೊಪ್ಪ*

ಈದ್ ಮೀಲಾದುನ್ನಬಿ (ಸ) 2022 @ಶಿರಾಳಕೊಪ್ಪದಿನಾಂಕ 9/10/2022 ರಂದು ಶಿರಾಳಕೊಪ್ಪದಲ್ಲಿ ನಡೆದ ಕಾರ್ಯಕ್ರಮಗಳು...*ಶಿರಾಳಕೊಪ್ಪ ಪಟ್ಟಣದಲ್ಲಿ ಸಂಭ.....

*ಶಿರಾಳಕೊಪ್ಪದಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ... |* http://www.sudhimanenews.co/...
24/05/2021

*ಶಿರಾಳಕೊಪ್ಪದಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ... |* http://www.sudhimanenews.co/2021/05/blog-post_33.html

*SUDHIMANENEWS DIGITAL WEB PORTAL*

ಶಿರಾಳಕೊಪ್ಪ :(ಮೆ.24)ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಜನರನ್ನು ರಕ್ಷಿಸಲು ಸ್ಪರ್ಧೆಗೆ ಇಳಿದವರ....

Address

Ikeri Road 5th Cross

Alerts

Be the first to know and let us send you an email when Sudhimane news posts news and promotions. Your email address will not be used for any other purpose, and you can unsubscribe at any time.

Contact The Business

Send a message to Sudhimane news:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share