Sandesha tv

11/01/2024

ನಾಯಿಗಳು ಕಚ್ಚಿ ತಿಂದು ಕೊಳೆತ ಸ್ಥಿತಿಯಲ್ಲಿ ಶವವೊಂದು ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ರಂಗನಾಥ ಕಲ್ಯಾಣ ಮಂಟಪ ಬಳಿ ಬೆಟ್ಟದ ಮೇಲೆ ಪತ್ತೆಯಾಗಿದೆ .

ಮೃತನ ವಯಸ್ಸು ಅಂದಾಜು 30 ರ ಆಸುಪಾಸು ಎಂದು ಅಂದಾಜಿಸಲಾಗಿದ್ದು,ಕುಡಿದು ಬಂಡೆಯ ಮೇಲಿನಿಂದ ಬಿದ್ದಿರುವ ಕೂಲಿ ಕಾರ್ಮಿಕ ಇರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೃಷ್ಣಕುಮಾರ್ ಮತ್ತು ಸಿಬ್ಬಂದಿ, ವಿಧಿವಿಜ್ಞಾನ ಪ್ರಯೋಗಾಲಯದ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಸುಮಾರು ನಾಲ್ಕೈದು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ .ನಾಯಿಗಳು
ಮೈ ಮೇಲೆಲ್ಲಾ ಕಚ್ಚಿ ತಿಂದು ಗುರುತು ಸಿಗದಂತಾಗಿರುವ ಶವದ ಗುರುತು ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ..

10/01/2024

ಯುವ ಮುಖಂಡರಾದ ಮಂಟಪ ಭುವನ್ ರೆಡ್ಡಿ ರವರಿಗೆ ಹುಟ್ಟು ಹಬ್ಬದ ಸಂಭ್ರಮ

ಬೆ೦ಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮಂಟಪ ಗ್ರಾಮದ ಯುವ ಮುಖಂಡರಾದ ಭುವನ್ ರೆಡ್ಡಿ ರವರು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಹೆಚ್.ಎಸ್.ಆರ್. ಬಡಾವಣೆಯಲ್ಲಿ ಸಮರ್ಥನಮ್ ಆಶ್ರಮದಲ್ಲಿ ಅನ್ನದಾಸೋಹ ಆಯೋಜನೆ ಮಾಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡರು.

ಇನ್ನು ಇದೇ ಸಂದರ್ಭದಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಭುವನ್ ರೆಡ್ಡಿ ರವರಿಗೆ ಬೃಹತ್ ಗಾತ್ರದ ಸೇಬಿನ ಹಾರ ಮತ್ತು ಹೂವಿನ ಹಾರ ಹಾಕಿ ಹುಟ್ಟು ಹಬ್ಬಕ್ಕೆ ಶುಭಾಶಯಗಳು ತಿಳಿಸಿದರುಇನ್ನು ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಮಂಟಪ ದಿಲೀಪ್, ಗೌತಮ್. ನವೀನ್, ಸಾಗರ್, ವಂಶಿತ್, ದರ್ಶನ್, ಮಹೇಂದ್ರ, ವಿಶಾಲ್, ಸೇರಿದಂತೆ ಹಲವಾರು ಸ್ನೇಹಿತರು ಭಾಗವಹಿಸಿದ್ದರು.

05/01/2024

ಕರುನಾಡ ಸೇವಕರು ಸಂಘದ ವತಿಯಿಂದ ಗಣಪತಿಪುರದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾದೇಶ ಗೌಡ ರವರ ನೇತೃತ್ವದಲ್ಲಿ,ಕುವೆಂಪು ರವರ ಹುಟ್ಟು ಹಬ್ಬದ ಪ್ರಯುಕ್ತ ನಡೆದ ನಿತ್ಯೋತ್ಸವ ಕಾರ್ಯಕ್ರಮ...

02/01/2024

ಕರಿಯಪ್ಪನಹಳ್ಳಿ ಕಾಂಗ್ರೆಸ್ ಮುಖಂಡರಾದ ಮಹೇಶ್ ರವರ ಹುಟ್ಟುಹಬ್ಬ ಸಂಭ್ರಮ.

27/12/2023

ಬೆಂಗಳೂರಿನ ಬನ್ನೇರುಘಟ್ಟ ಜಂಗಲ್ ಪಾಳ್ಯದಲ್ಲಿ 6 ನೇ ವರ್ಷದ ಹನುಮ ಜಯಂತಿ ಪ್ರಯುಕ್ತ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಧರ್ಮದರ್ಶಿಗಳಾದ ಜೆ.ಎಂ ನಾಗರಾಜ್ ರವರ ನೇತೃತ್ವದಲ್ಲಿ, ಶ್ರೀ ವೀರಾಂಜನೇಯ ಸ್ವಾಮಿಗೇ 108 ಎಳ್ಳ ನೀರು ಅಭಿಷೇಕ,ವಿಶೇಷ ಪೂಜೆ ಅಲಂಕಾರ,ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವೀರಗಾಸೆ, ಸಿಂಗಾರಿ ಮೇಳ, ಕೀಲು ಕುದುರೆ ಗೊಂಬೆ, ಭದ್ರಕಾಳಿ ಕುಣಿತ,ಹಾಗೂ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು.

26/12/2023

ಬನ್ನೇರುಘಟ್ಟ ಗ್ರಾಮ ಪಂಚಾಯಿತಿ ಸದಸ್ಯರಾದ ಮೋಹನ್ ಕುಮಾರ್ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಸ್ನೇಹಿತರು ಚಾಮುಂಡೇಶ್ವರಿ ಬಡಾವಣೆಯ ಗ್ರಾಮಸ್ಥರು ಹಾರ ಹಾಕಿ ಕೇಕ್ ಕತ್ತರಿಸುವ ಮೂಲಕ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು..

26/12/2023

ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ"ವತಿಯಿಂದ ಜೇಡರಹಳ್ಳಿ ಕೃಷ್ಣಪ್ಪ ರವರ ಹುಟ್ಟುಹಬ್ಬದ ಪ್ರಯುಕ್ತ "ಜೊತೆಯಲಿ" ಪತ್ರಿಕೆ ಹಾಗೂ ನೂತನ ವರ್ಷದ ಕ್ಯಾಲೆಂಡರ್ ಸಂಸ್ಥೆಯ ಗೌರವಾಧ್ಯಕ್ಷರಾದ ಜೇಡರಹಳ್ಳಿ ಕೃಷ್ಣಪ್ಪ ಅವರು ಹಾಗೂ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ರಾಜ್ಯದ್ಯಕ್ಷರಾದ ಕೆ ಎನ್ ಸಿ.ಸುರೇಶ್ ರವರ ಅಧ್ಯಕ್ಷತೆಯಲ್ಲಿ,2024ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು, ಇದೇ ಕಾರ್ಯಕ್ರಮದಲ್ಲಿ, ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ಸದಸ್ಯರುಗಳು ಸ್ನೇಹಿತರು ಭಾಗವಹಿಸಿದ್ದರು...

19/12/2023

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ನಗರ ಮಂಡಲದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀಯುತ ಅಭಿಷೇಕ್ ಗೌಡ ರವರ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ, ಕಣ್ಣಿನ ತಪಾಸಣೆ ಉಚಿತ ಕನ್ನಡಕ ವಿತರಣೆ ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ ಪೆನ್ ಪೆನ್ಸಿಲ್ ಬುಕ್ ವಿತರಣೆ, ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ ಮಹಿಳೆ ಸಂಘದವರಿಗೆ ಸೀರೆ , ಹಾಗೂ ಆಟೋ ಚಾಲಕರಿಗೆ ಸಮವಸ್ತು ವಿತರಣೆ, ಹಾರ ಹಾಕಿ ಕೇಕ್ ಕತ್ತರಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಿದರು, ಇದೇ ಕಾರ್ಯಕ್ರಮದಲ್ಲಿ ಶಾಸಕರಾದ ಎಂ ಕೃಷ್ಣಪ್ಪ, ಹುಲ್ಲಹಳ್ಳಿ ಶ್ರೀನಿವಾಸ್, ಕಮ್ಮನಹಳ್ಳಿ ಸೋಮಶೇಖರ್, ಬಿಬಿಎಂಪಿ ಮಂಜಣ್ಣ, ಮಾಗಡಿ ನಾರಾಯಣಸ್ವಾಮಿ, ರಾಮನಗರ ಪ್ರಕಾಶ್, ಕಮ್ಮನಹಳ್ಳಿ ಹೇಮಂತ್ ಗೌಡ, ಕಿರಣ್, ಜೀವನ್, ಪವನ್, ಶಿವರಾಜ್ srk, ಶೇಖರ್, ಅಮಿತ್, ಪುನೀತ್, ಕುಶಾಂತ್, ಪುನೀತ್, ಕಮ್ಮನಹಳ್ಳಿ ಗ್ರಾಮಸ್ಥರು ಹಾಗೂ ಸ್ನೇಹಿತರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು...

19/12/2023

ರಾಗಿಹಳ್ಳಿ ಕಾಡಿನ ಮಧ್ಯದಲ್ಲಿ ಒಂಟಿ ಸಲಗ ರೋಡ್ ದಾಟುತ್ತಿರುವ ದೃಶ್ಯ...

16/12/2023

ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ C k ರಾಮಮೂರ್ತಿ ರವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಹಾರ ಹಾಕಿ ಕೇಕ್ ಕತ್ತರಿಸುವ ಮೂಲಕ ಬಹಳ ವಿಜೃಂಭಣೆಯಿಂದ ಆಚರಿಸಿದರು..

15/12/2023

ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ

ಬನ್ನೇರಘಟ್ಟ ಮುಖ್ಯ ರಸ್ತೆಯಲ್ಲಿರುವ ಗೊಟ್ಟಿಗೆರೆ ಕೆರೆ ಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಹುಳಿಮಾವು ಪೊಲೀಸರು ಶವವನ್ನು ಕೆರೆಯಿಂದ ಮೇಲೆ ತಂದು ಆಸ್ಪ ತ್ರೆಗೆ ರವಾನಿಸಿದ್ದಾರೆ. ಮೃತ ವ್ಯಕ್ತಿಗೆ 35 ರಿಂದ 40 ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕೊಂಡು ಆತ್ಮಹತ್ಯೆಯೋ ಅಥವಾ ಕೊಲೆಯೊ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

14/12/2023

ಸ್ವರೋವ್ಸ್ಕಿಯ 'ಟ್ರೀ ಆಫ್ ವಂಡರ್' ಅನಾವರಣ
ಫೋರಂ ಸೌತ್ ಕೋಣನಕುಂಟೆ ಯಲ್ಲಿ 50-ಅಡಿ ಎತ್ತರದ ಕ್ರಿಸ್ಮಸ್ ಟ್ರೀ
ಬೆಂಗಳೂರು, 13 ಡಿಸೆಂಬರ್ 2023

ಪ್ರಪಂಚದಾದ್ಯಂತದ Swarovski ಕ್ರಿಸ್ಮಸ್ ಟ್ರೀ ಯಶಸ್ಸಿನಿಂದ ಸ್ಫೂರ್ತಿ ಪಡೆದ ಫೋರಂ ಸೌತ್ ಬೆಂಗಳೂರು, ಸ್ವರೋವ್ಸ್ಕಿಯ 'ಟ್ರೀ ಆಫ್ ವಂಡರ್' ಅನ್ನು ಅನಾವರಣಗೊಳಿಸಿದೆ. ಈ ಭವ್ಯವಾದ ಕ್ರಿಸ್ಮಸ್ ಮರ 50 ಅಡಿ ಎತ್ತರದಲ್ಲಿ ಮಿಂಚುತ್ತಿದೆ, ಬ್ರ್ಯಾಂಡ್‌ನ ಐಕಾನಿಕ್ ಆಕ್ಟಾಗನ್ (ಅಷ್ಟಭುಜಾಕೃತಿ) ಆಕಾರದ ಉಡುಗೊರೆ ಪೆಟ್ಟಿಗೆಗಳನ್ನು ಬಳಸಿಕೊಂಡು ವಿಶಿಷ್ಟ ವಿನ್ಯಾಸದಿಂದ ಅಲಂಕರಿಸಲಾಗಿದೆ.
ಪುನರ್ಜನ್ಮ, ಅನಂತತೆ ಮತ್ತು ಪರಿವರ್ತನೆಯ ಸಂಕೇತವಾದ ಅಷ್ಟಭುಜವು ಸ್ವರೋವ್ಸ್ಕಿಗೆ ವಿಶೇಷ ಪ್ರಾಮುಖ್ಯತೆ ಹೊಂದಿದೆ ಏಕೆಂದರೆ ಇದು ಬ್ರ್ಯಾಂಡ್‌ನ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ. ಎಂಟು ಮುಖಗಳನ್ನು ಒಳಗೊಂಡಿರುವ, ಅಷ್ಟಭುಜಾಕೃತಿಯು ಸ್ವರೋವ್ಸ್ಕಿಯ ಜಗತ್ತಿನಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಅಷ್ಟಭುಜಾಕೃತಿಯ ಮುಖಗಳು ಕೌಶಲ್ಯಪೂರ್ಣವಾಗಿದೆ. ಆಭರಣಗಳ ಅಲಂಕಾರ ಮರದ ಆಕರ್ಷಣೆಯನ್ನು ಹೆಚ್ಚಿಸುತ್ತದೆ ಮತ್ತು ಸ್ಫಟಿಕಗಳ ಜಗತ್ತಿನಲ್ಲಿ ಸ್ವರೋವ್ಸ್ಕಿಯ ಪರಿಣತಿಯೊಂದಿಗೆ ದೃಢೀಕರಿಸುತ್ತದೆ.
ಮರವು ಅಷ್ಟಭುಜಾಕೃತಿಯ ಪೆಟ್ಟಿಗೆಗಳಿಂದ ಕೂಡಿದೆ, ಪ್ರತಿಯೊಂದೂ ಬ್ರ್ಯಾಂಡ್‌ನ ಗುರುತನ್ನು ವ್ಯಾಖ್ಯಾನಿಸುವ ಐದು ವಿಭಿನ್ನ ಬಣ್ಣಗಳಿಂದ ಅಲಂಕೃತಗೊಂಡಿದೆ. ಈ ಬಣ್ಣಗಳು ಸಾಂಕೇತಿಕ ಅರ್ಥಗಳನ್ನು ಹೊಂದಿವೆ, ಇದು Swarovski ಯ ಸಾರವನ್ನು ಪ್ರತಿಬಿಂಬಿಸುತ್ತದೆ:
• ಸ್ವಾನ್ ವೈಟ್: ಸ್ವರೋವ್ಸ್ಕಿಯ ಸಾರ, ಶುದ್ಧ ಸ್ಫಟಿಕವನ್ನು ಪ್ರತಿನಿಧಿಸುತ್ತದೆ.
• ಹಸಿರು: ನೈಸರ್ಗಿಕ ಪ್ರಪಂಚ ಮತ್ತು Swarovski ಉತ್ಪನ್ನಗಳ ಮೂಲವನ್ನು ಸಾಕಾರಗೊಳಿಸುವ ಪ್ರಶಾಂತ ವರ್ಣ.
• ಬೇಬಿ ಬ್ಲೂ: ನೀರು ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ, ಮುಂದಾಲೋಚನೆಯನ್ನು ಸೂಚಿಸುತ್ತದೆ.
• ಹಳದಿ: ಸಕಾರಾತ್ಮಕತೆ ಮತ್ತು ಉಷ್ಣತೆಯನ್ನು ಹೊರಸೂಸುತ್ತದೆ, ಸೂರ್ಯನ ತೀಕ್ಷ್ಣ ಮತ್ತು ದಪ್ಪ ಬಣ್ಣ.
• ಗುಲಾಬಿ: ಲಿಂಗ ತಾರತಮ್ಯವಿಲ್ಲದ ಸೌಂದರ್ಯವನ್ನು ವ್ಯಕ್ತಪಡಿಸುವ ಸ್ವರೋವ್ಸ್ಕಿಯ ಸ್ವಾಗತಾರ್ಹ ಮತ್ತು ಮೃದುವಾದ ಬಣ್ಣ.
"Celebrate Wonder," ಎಂಬ ವಿಷಯದ ಅಡಿಯಲ್ಲಿ, Swarovski ಸ್ಫಟಿಕಗಳ ಶಕ್ತಿಯನ್ನು ಅಳವಡಿಸಿಕೊಳ್ಳಲು ಪ್ರತಿಯೊಬ್ಬರನ್ನು ಆಹ್ವಾನಿಸುತ್ತದೆ. ಸ್ವಯಂ-ಅಭಿವ್ಯಕ್ತಿಯನ್ನು ಪ್ರೋತ್ಸಾಹಿಸುವುದಲ್ಲದೆ ರಜಾದಿನಗಳಲ್ಲಿ ಎಲ್ಲರಿಗೂ ಹೊಳೆಯುವ ಅವಕಾಶ ನೀಡಲು ಬಯಸುತ್ತದೆ.
ಇಂದಿನಿಂದ 2024 ರ ಫೆಬ್ರವರಿ ಅಂತ್ಯದವರೆಗೆ, ಹಬ್ಬಗಳ ಆಚರಣೆಗೆ ಅದ್ಭುತ ಉಡುಗೊರೆಗಳು ಮತ್ತು ಆಕರ್ಷಕ ಅಲಂಕಾರಗಳ ವಸ್ತುಗಳ ಆಯ್ಕೆಗೆ Swarovski ಜತೆಗೆ ಸೇರಿಕೊಳ್ಳಿ. ಇಡೀ ಹಬ್ಬದ ಋತುವಿನಲ್ಲಿ ಸಂತೋಷವನ್ನು ಇಮ್ಮಡಿಗೊಳಿಸಲು ವಿಜೇತ ಸ್ಪರ್ಧಿಗಳಿಗೆ ಅತ್ಯಾಕರ್ಷಕ ಬಹುಮಾನಗಳು ಇರುತ್ತದೆ.
--
ರೀಟೇಲ್, ಪ್ರೆಸ್ಟೀಜ್ ಗ್ರೂಪ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ. ಮುಹಮ್ಮದ್ ಅಲಿ, "ಇಂದು ಫೋರಂ ಸೌತ್ ಬೆಂಗಳೂರಿನಲ್ಲಿ ನಾವು ಸ್ವರೋವ್ಸ್ಕಿ ಯಿಂದ ಭಾರತದ ಭವ್ಯವಾದ ಕ್ರಿಸ್ಮಸ್ ಟ್ರೀಯನ್ನು ಅನಾವರಣಗೊಳಿಸಿದ ಸಂಭ್ರಮದಲ್ಲಿದ್ದೇವೆ. ಶಾಪಿಂಗ್‌ಗೆ ಮೀರಿದ ಅಸಾಮಾನ್ಯ ಅನುಭವಗಳನ್ನು ನೀಡುವ ಮೂಲಕ ನಮ್ಮ ಗ್ರಾಹಕರ ಜೀವನವನ್ನು ಉತ್ಕೃಷ್ಟಗೊಳಿಸುವುದು ನಮ್ಮ ಬದ್ಧತೆಯಾಗಿದೆ. ಸ್ವರೋವ್ಸ್ಕಿಯೊಂದಿಗಿನ ಈ ಸಹಯೋಗವು ಅಂತಹ ಅನ್ವೇಷಣೆಗೆ ಸಾಕ್ಷಿಯಾಗಿದೆ. ಸ್ವರೋವ್ಸ್ಕಿಯೊಂದಿಗೆ ಕೈಜೋಡಿಸಲು ನಾವು ರೋಮಾಂಚನಗೊಂಡಿದ್ದೇವೆ ಮತ್ತು ಬೆಂಗಳೂರಿನ ಗ್ರಾಹಕರಿಗೆ ಪ್ರತ್ಯೇಕವಾಗಿ ವಿಶೇಷ ಕ್ರಿಸ್ಮಸ್ ಅಲಂಕಾರವನ್ನು ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ." ಎಂದು ಹೇಳಿದ್ದಾರೆ.

12/12/2023

ಬೆoಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜಿಗಣಿ ಸಮೀಪವಿರುವ ನಿಸರ್ಗ ಬಡಾವಣೆಯ ಪುರಂದರ ಮಂಟಪದ ಆವರಣದಲ್ಲಿ ಮಾತೃ ವಾತ್ಸಲ್ಯ ಪೌಂಡೇಷನ್ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ನಗೆ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇನ್ನು ಕನ್ನಡ ರಾಜ್ಯೋತ್ಸವ ಮತ್ತು ನಗೆ ಹಬ್ಬ ಕಾರ್ಯಕ್ರಮಕಕ್ಕೆ ಕರ್ನಾಟಕ ರಾಜ್ಯ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಶ್ರೀಯುತರಾದ ವೈ.ಕೆ.ಮುದ್ದುಕೃಷ್ಣರವರು ಮತ್ತು ಅತಿಥಿಗಳು ಚಾಲನೆ ನೀಡಿ ಶುಭ ಹಾರೈಸಿದರು.

ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತೃ ವಾತ್ಸಲ್ಯ ಪೌಂಡೇಷನ್ ಅಧ್ಯಕ್ಷೆ ಶ್ರೀಮತಿ ಎಸ್. ರಾಜ ಲಷ್ಮೀ ರವರು ವಹಿಸಿದ್ದರು.
ಇನ್ನು ನರಸಿಂಹಜೋಶಿ ಶ್ರೀಮತಿ ಇಂದುಮತಿ ಸಾಲಿಮಠ ಹಾಗೂ ಬಸವರಾಜ್ ಮಹಾಮನಿ ರವರು ನಗೆ ಹಬ್ಬವನ್ನು ನಡೆಸಿಕೊಟ್ಟರು. ಹಾಗೆಯೇ ಸಾಮಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು

ಇನ್ನು ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿಗಳಾದ ವಿ.ನಾಗೇಂದ್ರ ರವರು, ಪೋಲಿಸ್ ಇನ್ಸ್ ಪೆಕ್ಟರ್ ಕೆ. ವಿಶ್ವನಾಥ್, ಮಾತೃ ವಾತ್ಸಲ್ಯ ಪೌಂಡೇಷನ್ ಖಜಾಂಚಿ ಎಸ್.ಹೆಚ್. ರಾಮಚಂದ್ರಪ್ಪರವರು. ಯುವ ಸಾಹಿತಿ ನಾಗಲೇಖ. ಅಂಬರೀಶ್ ಸಮರ್ಥ, ವಿಜಯ್ ಕುಮಾರ್, ಜಿಗಣಿ ಮಂಜುನಾಥ್, ಶ್ರೀರಾಜ್, ಗೋಪನಹಳ್ಳಿ ಮಹೇಶ್ ಮತ್ತಿತರು ಭಾಗವಹಿಸಿದ್ದರು.

12/12/2023

ಬನ್ನೇರುಘಟ್ಟ ಪಂಚಾಯಿತಿ ವ್ಯಾಪ್ತಿಯಿಂದ ಶುರುವಾಗಿ ಹೆನ್ನಾಗರ ಪಂಚಾಯಿತಿ ವರೆಗೆ ಸುತ್ತಮುತ್ತಲಿನ ಜನರ ಸಮಸ್ಯೆಗಳನ್ನು ಆಲಿಸಿದರು. ಇಡೀ ದಿನ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಜನರು ಸಮಸ್ಯೆಗಳ ಸುರಿಮಳೆಗೈದರು. ಬಹುತೇಕ ಸಮಸ್ಯೆಗಳಿಗೆ ಸಂಸದರು ಸ್ಥಳೀಯವಾಗಿ ಪರಿಹಾರ ಒದಗಿಸಿದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ದೃಷ್ಟಿಯಿಂದ ಜನಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಹಿಂದಿನ ಬಿಜೆಪಿ ಸರಕಾರದ ದುರಾಡಳಿತದಿಂದ ಜನರು ತತ್ತರಿಸಿ ಹೋಗಿದ್ದರು.
ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಚುರುಕು ನೀಡಲಾಗಿದೆ. ಜನರು ಸಮಸ್ಯೆಗಳಿಗೆ ಪರಿಹಾರ ಸಿಗದೆ ಹೈರಾಣಾಗಿದ್ದರು. ಹಂತ‌ಹಂತವಾಗಿ ಸಮಸ್ಯೆ ಪರಿಹಾರಕ್ಕೆ ಮುಂದಾಗುವುದಾಗಿ ತಿಳಿಸಿದರು.

ನಾಲ್ಕು ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಕ್ಷೇತ್ರದ ಶಾಸಕರು ಏನು ಮಾಡುತ್ತಿದ್ದಾರೆ ಎಂದು ಹರಿಹಾಯ್ದ ಅವರು ಜನರು ಇನ್ನೂ ಮೂಲಭೂತ ಸೌಕರ್ಯಕ್ಕಾಗಿ ಅಂಗಲಾಚುತ್ತಿರುವುದು ಅಭಿವೃದ್ಧಿಗೆ ಹಿಡಿದು ಕೈಗನ್ನಡಿಯಾಗಿದೆ ಎಂದರು.

ಇದೇ ಕಾರ್ಯಕ್ರಮದಲ್ಲಿ, ಆರ್.ಕೆ ರಮೇಶ್ , ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಜಯ ಶ್ರೀ ಅಚ್ಯುತ್ ರಾಜ್, ಬನ್ನೇರುಘಟ್ಟ ಪಂಚಾಯಿತಿ ಅಧ್ಯಕ್ಷರಾದ ಬಿಸಿಎಂ ಮಂಜುನಾಥ್, ಬನ್ನೇರುಘಟ್ಟ ಗ್ರಾಮ ಪಂಚಾಯಿತಿ ಸದಸ್ಯರಾದ ಅಹಮದ್ ಪಾಷಾ ಬನ್ನೇರುಘಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶಾಂತಕುಮಾರಿ, ಬನ್ನೇರುಘಟ್ಟ ಗ್ರಾಮ ಪಂಚಾಯಿತಿ ಸದಸ್ಯರಾದ, ಯಶೋಧ, ಬನ್ನೇರುಘಟ್ಟ ಗ್ರಾಮ ಪಂಚಾಯತಿ ಸದಸ್ಯರಾದ ಲಕ್ಷ್ಮೀನಾರಾಯಣ್, ಕಾಂಗ್ರೆಸ್ ಯುವ ಮುಖಂಡರಾದ ಸಂತೋಷ್ ಕುಮಾರ್, ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು...

11/12/2023

ಭೀಕರ ರಸ್ತೆ ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು

ಚಾಲಕನ ನಿಯಂತ್ರಣ ತಪ್ಪಿದ ಸಿಮೆಂಟ್ ಮಿಕ್ಸರ್ ಲಾರಿ

ಬೈಕ್ ಹಾಗೂ ಅಂಗಡಿಗಳಿಗೆ ಗುದ್ದಿ ಪಲ್ಟಿಯಾದ ಲಾರಿ

ಬನ್ನೇರುಘಟ್ಟ ಮುಖ್ಯರಸ್ತೆಯ ಕೋಳಿಫಾರಂ ಗೇಟ್ ಬಳಿ ಘಟನೆ

ಬೆಂಗಳೂರು ಬನ್ನೇರುಘಟ್ಟ ಮುಖ್ಯರಸ್ತೆಯ ಕೋಳಿಫಾರಂ ಗೇಟ್

ಪುಟ್ಟೇನಹಳ್ಳಿ ನಿವಾಸಿ ಸತ್ಯೇಂದ್ರ ಸಿಂಗ್ ಮೃತ ದುರ್ದೈವಿ

ವೀವರ್ಸ್ ಕಾಲೋನಿಯಿಂದ ಕೋಳಿ ಫಾರಂ ಗೇಟ್ ಕಡೆಗೆ ಬರುತ್ತಿದ್ದ ಲಾರಿ

ಕೋಳಿ ಫಾರಂ ಗೇಟ್ ನಿಂದ ವೀವರ್ಸ್ ಕಾಲೋನಿ ಕಡೆಗೆ ಹೊರಟಿದ್ದ ಬೈಕ್ ಸವಾರ

ಅತಿವೇಗವಾಗಿ ಬಂದ ಸಿಮೆಂಟ್ ಮಿಕ್ಸರ್ ಲಾರಿ

ಚಾಲಕನ ನಿಯಂತ್ರಣ ತಪ್ಪಿ ಮೊದಲು ಬೈಕ್ ಸವಾರನಿಗೆ ಡಿಕ್ಕಿ

ಡಿಕ್ಕಿಯ ರಭಸಕ್ಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಬೈಕ್ ಸವಾರ

ಬೈಕ್ ಡಿಕ್ಕಿಯೊಡೆದ ಬಳಿಕ ಅಂಗಡಿಗಳಿಗೆ ಡಿಕ್ಕಿಯಾಗಿ ಪಲ್ಟಿಯೊಡೆದ ಲಾರಿ

ಅಂಗಡಿಗಳ ಮೇಲೆ ಉರುಳಿ ಬಿದ್ದ ಲಾರಿ, ಧ್ವಂಸವಾದ ಅಂಗಡಿಗಳಲ್ಲಿನ ವಸ್ತುಗಳು

ಕುಮಾರಸ್ವಾಮಿ ಸಂಚಾರಿ ಪೊಲೀಸರು‌ ಸ್ಥಳಕ್ಕೆ ಭೇಟಿ ಪರಿಶೀಲನೆ...

11/12/2023

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂಚಾಯಿತಿ ವ್ಯಾಪ್ತಿಯ, ಮಂಟಪ ಪಂಚಾಯಿತಿ ವ್ಯಾಪ್ತಿಯ ಜಂಗಲ್ ಪಾಳ್ಯದಲ್ಲಿ ಅಂಗನವಾಡಿ ಉದ್ಘಾಟನೆ ಮಾಡಿದ ಸಂಸದ ಡಿಕೆ ಸುರೇಶ್ ರವರು,

ಬನ್ನೇರುಘಟ್ಟ ಪಂಚಾಯಿತಿ ವ್ಯಾಪ್ತಿಯಿಂದ ಶುರುವಾಗಿ ಹೆನ್ನಾಗರ ಪಂಚಾಯಿತಿ ವರೆಗೆ ಸುತ್ತಮುತ್ತಲಿನ ಜನರ ಸಮಸ್ಯೆಗಳನ್ನು ಆಲಿಸಿದರು. ಇಡೀ ದಿನ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಜನರು ಸಮಸ್ಯೆಗಳ ಸುರಿಮಳೆಗೈದರು. ಬಹುತೇಕ ಸಮಸ್ಯೆಗಳಿಗೆ ಸಂಸದರು ಸ್ಥಳೀಯವಾಗಿ ಪರಿಹಾರ ಒದಗಿಸಿದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ದೃಷ್ಟಿಯಿಂದ ಜನಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಹಿಂದಿನ ಬಿಜೆಪಿ ಸರಕಾರದ ದುರಾಡಳಿತದಿಂದ ಜನರು ತತ್ತರಿಸಿ ಹೋಗಿದ್ದರು.
ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಚುರುಕು ನೀಡಲಾಗಿದೆ. ಜನರು ಸಮಸ್ಯೆಗಳಿಗೆ ಪರಿಹಾರ ಸಿಗದೆ ಹೈರಾಣಾಗಿದ್ದರು. ಹಂತ‌ಹಂತವಾಗಿ ಸಮಸ್ಯೆ ಪರಿಹಾರಕ್ಕೆ ಮುಂದಾಗುವುದಾಗಿ ತಿಳಿಸಿದರು.

ನಾಲ್ಕು ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಕ್ಷೇತ್ರದ ಶಾಸಕರು ಏನು ಮಾಡುತ್ತಿದ್ದಾರೆ ಎಂದು ಹರಿಹಾಯ್ದ ಅವರು ಜನರು ಇನ್ನೂ ಮೂಲಭೂತ ಸೌಕರ್ಯಕ್ಕಾಗಿ ಅಂಗಲಾಚುತ್ತಿರುವುದು ಅಭಿವೃದ್ಧಿಗೆ ಹಿಡಿದು ಕೈಗನ್ನಡಿಯಾಗಿದೆ ಎಂದರು.

ಇದೇ ಕಾರ್ಯಕ್ರಮದಲ್ಲಿ,ಮಂಟಪ ಗ್ರಾಮ ಪಂಚಾಯಿತಿ ಸದಸ್ಯರಾದ jvm ವೆಂಕಟೇಶ್,ತಾಲ್ಲೂಕು ಜಿಲ್ಲಾ ಪಂಚಾಯಿತಿ ಸದಸ್ಯರಾದ ಆಶಾ C ನರೇಂದ್ರಬಾಬು, ಮಾಜಿ ಕಾಂಗ್ರೆಸ್ ಮುಖಂಡರಾದ C ಮಹೇಶ್, ಮಂಟಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನವೀನ್ ಕುಮಾರ್,ಬಿ.ಕೆ.ಪ್ರವೀಣ್ ಕುಮಾರ,ಆರ್. ಕೆ ರಮೇಶ್,S L V ವೆಂಕಟೇಶ್,ಸೇರಿದಂತೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು, ವಿವಿಧ ಪಂಚಾಯಿತಿಯ ಅಧ್ಯಕ್ಷರು , ಉಪಾಧ್ಯಕ್ಷರು ಹಾಗೂ ಸದಸ್ಯರು, ಅಧಿಕಾರಿಗಳು, ಕ್ಷೇತ್ರದ ಮುಖಂಡರು, ಜಂಗಲ್ ಪಾಳ್ಯ ಗ್ರಾಮಸ್ಥರು, ಅಂಗನವಾಡಿ ಶಿಕ್ಷಕರು,ಆಶಾ ಕಾರ್ಯಕರ್ತೆಯರು,ಹಿರಿಯ ಮುಖಂಡರು ಸ್ನೇಹಿತರು ಭಾಗವಹಿಸಿದ್ದರು....

11/12/2023

ನಕಲಿ ದಾಖಲೆಗಳು ಮತ್ತು ಬ್ಲಾಕ್ ಮೈಲ್ ಆರೋಪ ಪ್ರತ್ಯಾರೂಪಗಳು...

09/12/2023

ಮೇರು ನಟಿ ಲೀಲಾವತಿ ಪಾರ್ಥಿವ ಶರೀರ ವನ್ನು ನೆಲಮಂಗಲ ಅಂಬೇಡ್ಕರ್ ಮೈದಾನದಲ್ಲಿ ಇಟ್ಟಿದ್ದಾರೆ,

08/12/2023

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪಿಲ್ಲಗನಹಳ್ಳಿ ಕೃಷ್ಣಪ್ಪ ಲೇಔಟ್ ನಲ್ಲಿ ಮುಗುಳುನಗೆ ಸೇವಾ ಟ್ರಸ್ಟ್ ವತಿಯಿಂದ ಮೂರನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 67ನೇ ಪರಿನಿರ್ವಣ ಕಾರ್ಯಕ್ರಮ ಮುಗುಳು ನಗೆ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಚೈತ್ರ ರವರ ನೇತೃತ್ವದಲ್ಲಿ ನಡೆಯಿತು,ಇದೇ ಕಾರ್ಯಕ್ರಮದಲ್ಲಿ,ಸಮಾಜ ಸೇವಕರಾದ ಪಿಲ್ಲಗನಹಳ್ಳಿ ಶ್ರೀನಿವಾಸ್ R V, ಕರ್ನಾಟಕ ಪ್ರಜಾಪುರ ವೇದಿಕೆ ಸಂಸ್ಥಾಪಕ ರಾಜ್ಯಧ್ಯಕ್ಷರಾದ ಕನ್ನಡ ಶಫಿ, ಸಮಾಜ ಸೇವಕರಾದ ವಿಷ್ಣು ಹೊಮ್ಮದೇವನಹಳ್ಳಿ , ಬನ್ನೇರುಘಟ್ಟ ಗ್ರಾಮ ಪಂಚಾಯಿತಿ ಸದಸ್ಯರಾದ ಅಹಮದ್ ಪಾಷಾ, ಸಿನಿಮಾ ನಿರ್ದೇಶಕರಾದ ಸಿದ್ದಾಪುರ ಶಿವು, ಚಿಗುರು ಸೇವಾ ಪ್ರತಿಷ್ಠಾನ ಪ್ರವೀಣ್ ಕುಮಾರ,ಶಂಕರ್, ನೈಸ್ ರೋಡ್ ಮಂಜು kv, ಸಮಾಜ ಸೇವಕರಾದ ಗುಣಶಂಕರ್ , ವಸಿಮ್ ಖಾನ್,ಶೋಭಾ ಪಿಳ್ಳಗಾನಹಳ್ಳಿ , ಯಶೋದಮ್ಮ , ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು..

08/12/2023

ಭಾರತೀಯ ಪ್ರಜಾ ಸೇನೆ ವತಿಯಿಂದ ಪಿಳ್ಳಗಾನಹಳ್ಳಿ ಯಲ್ಲಿ ವಿಶ್ವಮಾನವ ಸಮ ಸಮಾಜದ ಹರಿಕಾರ, ಸಂವಿಧಾನ ಶಿಲ್ಪಿ, ದೀನ ದಲಿತರ ಮಹಾನ್ ನಾಯಕ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್
ಅಂಬೇಡ್ಕ‌ರ್ ಅವರ 67ನೇ ಪರಿನಿರ್ವಾಣ ದಿನವನ್ನು
ಅಂಬೇಡ್ಕ‌ರ್ ಸ್ಮರಣೆ ಮಾಡಲಾಯಿತು. ಈ ಕಾರ್ಯಕ್ರಮದ
ರಕ್ತ ಧನ ಶಿಬಿರ ಉಚಿತ ಕಣ್ಣಿನ ತಪಾಸಣೆ ಹಾಗೂ
ಅನ್ನ ಸಂತರ್ಪಣೆ ಹಾಗೂ
ಅಂಬೇಡ್ಕ‌ರ್ ಬರಹಗಳ ವಿಚಾರ ಸಂಕಿರಣ ಭಾರತೀಯ
ಪ್ರಜಾ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಆ‌ರ್ ಮಂಜುನಾಥ್
ರವರ ಅಧ್ಯಕ್ಷತೆಯಲ್ಲಿ, ಮತ್ತು ರಾಜ್ಯಾಧ್ಯಕ್ಷರಾದ ಟಿ
ವೇಣುಗೋಪಾಲ್‌ ನೇತೃತ್ವದಲ್ಲಿ ಈ ಕಾರ್ಯಕ್ರಮ
ಯಶಸ್ವಿಯಾಗಿ ನಡೆಯಿತು, ಕಾರ್ಮಿಕ ಘಟಕದ
ರಾಜ್ಯಾಧ್ಯಕ್ಷರಾದ ಹೆಚ್ ಏನ್ ತರುಣ್ ಎಸ್, ಪಿಳ್ಳಗಾನಹಳ್ಳಿ,ಶಾಖೆಯ ಪುಷ್ಪಲತಾ,
ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ಮಂಜುಳಾ ಮೂರ್ತಿ, ವರಲಕ್ಷ್ಮಿ, ಶಿವಮ್ಮ, ಮೇರಿಯಮ್ಮ ಸರಸ್ವತಿ, ಪಿಳ್ಳಗಾನಹಳ್ಳಿ ಶಾಖೆಯ ರಾಕೇಶ್, ಜಾನ್, ಗೌತಮ್, ಸತೀಶ್, ಮಂಜುನಾಥ್, ಶಶಿ, ಪ್ರಭಾಕರ್ ಮಂಜಣ್ಣ, ಮುನೆಂದ್ರ, ಮೋಹನ್,ಹಾಗೂ ಸಂಘದ
ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು...

Address


Telephone

+919880666661

Website

Alerts

Be the first to know and let us send you an email when Sandesha tv posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Telephone
  • Alerts
  • Videos
  • Claim ownership or report listing
  • Want your business to be the top-listed Media Company?

Share