Public News Sira

Public News Sira Contact information, map and directions, contact form, opening hours, services, ratings, photos, videos and announcements from Public News Sira, Media/News Company, Sira.

23/12/2024

ಶಿರಾ ನಗರದ ಮಹಬೂಬ್ ನಗರದಲ್ಲಿ
ಮಸ್ಜಿದ್ ಎ ರಜಯೇ ರೆಹನೀಯ ಹಾಗೂ ಜಾಮಿಯಾ ಮಸ್ಜಿದ್ ಕಮಿಟಿ ವತಿಯಿಂದ ಇಂದು ಹಿಜಮಾ (ಕಪಿಂಗ್ ) ಕಾರ್ಯಕ್ರಮವು ಆಯೋಜಿಸಿದ್ದು

ತುಮಕೂರಿನ ಹೆಲ್ಲಸ್ ಕ್ಲಿನಿಕ್ ಅಂಡ್ ವೆಲ್ಲನೆಸ್ ಸೆಂಟರ್ ನಾ ಡಾಕ್ಟರ್ ಉವೆಜ್ ಅಲಿ ಸಹಯೋಗದೊಂದಿಗೆ

ಬೆಳಗ್ಗೆ 9 ಗಂಟೆಯಿಂದ ಶುರುವಾದ ಹಿಜಮಾ ಕಾರ್ಯಕ್ರಮ ದಲ್ಲಿ ಸುಮಾರು 300ಜನ ಹಿಜಮಾ ಮಾಡಿಸಿದರು
ಈ ಸಂಧರ್ಭದಲ್ಲಿ

ರಜಾಯೇ ರೆಹನೀಯ ಮಸೀದಿಯ ಅಧ್ಯಕ್ಷರಾದ ಮುರದ್ ಪಾಶ ಉಪಾಧ್ಯಕ್ಷರು ಶಫಿವುಲ್ಲ ಖಾನ್ ಶೇಕು ಸಾದಿಕ್ ನಜ್ರುಲ್ಲ ಸಾಲರ್ ಅಮಾನ್ ಇನ್ನು ಮುಂತಾದವರು ಉಪಸ್ಥಿತರಿದ್ದರು

ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾನ್ಯ ಜನಪ್ರಿಯ ಶಾಸಕರು ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಶ್ರೀ ಟಿ.ಬಿ.ಜಯಚಂದ್ರ ...
17/12/2024

ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾನ್ಯ ಜನಪ್ರಿಯ ಶಾಸಕರು ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಶ್ರೀ ಟಿ.ಬಿ.ಜಯಚಂದ್ರ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಯನ್ನು ಸ್ಪೀಕರ್ ಶ್ರೀ ಯು.ಟಿ.ಖಾದರ್ ಅವರು ಮಾನ್ಯ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರ ಸಮ್ಮುಖದಲ್ಲಿ ವಿರೋಧಪಕ್ಷದ ನಾಯಕ ರಾದ ಶ್ರೀ ಅರ್.ಅಶೋಕ್, ಉಪ ಸಭಾಧ್ಯಕ್ಷರಾದ ಶ್ರೀ ರುದ್ರಪ್ಪ ಲಮಾಣಿ ಅವರ ಉಪಸ್ಥಿತಿ ಯಲ್ಲಿ ಪ್ರಧಾನ ಮಾಡಿದರು ‌.

22/11/2024

ಶಿರಾ ನಗರಕ್ಕೆ ಆಗಮಿಸಿದ ಕ್ರೀಡಜ್ಯೋತಿಗೆ ಅದ್ಧೂರಿ ಸ್ವಾಗತ
ಸದಾ ಒತ್ತಡದಲ್ಲಿರುವ ಹಗಲು ಇರುಳು ಎನ್ನದೆ ಕೆಲಸ ಮಾಡುವ ಪತ್ರಕರ್ತರ ಸೇವೆ ದೇಶ ಸೇವೆ ಸಮನಾದುದು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಕ್ರೀಡಾಕೂಟ ಏರ್ಪಡಿಸಿರುವುದು ಶ್ಲಾಘನೀಯ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು

31/10/2024
ಇಂದು ಮುಂಜಾನೆ ಬೀದಿಗಳಲ್ಲಿ ಹುಚ್ಚು ನಾಯಿಗಳು ನಡೆದುಕೊಂಡು ಹೋಗುತ್ತಿದ್ದ ಮಕ್ಕಳು ಮತ್ತು ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದೆ, ಗಾಯಾಳುಗಳನ್ನು ಶ...
02/10/2024

ಇಂದು ಮುಂಜಾನೆ ಬೀದಿಗಳಲ್ಲಿ ಹುಚ್ಚು ನಾಯಿಗಳು
ನಡೆದುಕೊಂಡು ಹೋಗುತ್ತಿದ್ದ ಮಕ್ಕಳು ಮತ್ತು ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದೆ, ಗಾಯಾಳುಗಳನ್ನು ಶಿರಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ, ಶಿರಾ ನಗರಸಭೆ ಅಧ್ಯಕ್ಷ ಜೀಶನ್ ಮೆಹಮೂದ್ ಅವರು ಶಿರಾ ನಗರಸಭೆ ಆಯುಕ್ತರೊಂದಿಗೆ ಆಸ್ಪತ್ರೆಗೆ ಆಗಮಿಸಿ ರೋಗಿಗಳನ್ನು ಪರೀಕ್ಷಿಸಿದರು ಮತ್ತು ಅವರ ಚಿಕಿತ್ಸೆಯ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿದರು ಮತ್ತು ಅವರಿಗೆ ಆರ್ಥಿಕ ನೆರವು ನೀಡಿದರು.

30/09/2024

ಶಿರಾ ನಗರದ ಪ್ರತಿಯೊಂದು ಮನೆಗೂ ನೀರು ಕೊಡುವ ಉದ್ದೇಶದಿಂದ 85.ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಅತಿ ಶೀಘ್ರದಲ್ಲಿಯೇ ಚಾಲನೆಯನ್ನು ನೀಡಿ ಸಿಗಲಿದ್ದು, 1 ವರ್ಷದಲ್ಲಿ ಪ್ರತಿ ಮನೆಗೂ ಪ್ರತ್ಯೇಕ ನಲ್ಲಿ ಸೌಲಭ್ಯ ಸಿಗಲಿದೆ.
ತ್ರಿವೇಣಿ ಸಂಗಮ ಮಾಡುವ ನನ್ನ ಸಂಕಲ್ಪ ಅತಿ ಶೀಘ್ರದಲ್ಲಿಯೇ ಸಕಾರಗೊಳ್ಳಲಿದ್ದು, ಎತ್ತಿನಹೊಳೆ, ಹೇಮಾವತಿ, ಅಪ್ಪರ ಭದ್ರ ನೀರಾವರಿ ಯೋಜನೆಗಳಿಂದ ಮುಂದಿನ ದಿನಗಳಲ್ಲಿ ಶಿರಾ ನಗರಕ್ಕೆ 4. ಟಿಎಂಸಿ ನೀರು ಲಭ್ಯವಾಗಲಿದೆ ಎಂದು ದೆಹಲಿ ವಿಶೇಷ ಪ್ರತಿನಿಧಿ, ಡಾ. ಟಿ.ಬಿ .ಜಯಚಂದ್ರ ಹೇಳಿದರು.
ಶಿರಾ ನಗರದ ದೊಡ್ಡ ಕೆರೆಗೆ ಹೇಮಾವತಿ ನೀರು ಹರಿದು ಕೋಡಿ ಬಿದ್ದ ಕಾರಣ ಸೋಮವಾರ ಶಿರಾ ದೊಡ್ಡ ಕೆರೆಗೆ ಗಂಗಾ ಪೂಜೆ ನೆರವೇರಿಸಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು.
ಶಿರಾ ನಗರಸಭೆ ಅಧ್ಯಕ್ಷ ಜಿಷಾನ್ ಮಹಮೂದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಸೂಡಾ ಅಧ್ಯಕ್ಷ ಪಿ.ಆರ್. ಮಂಜುನಾಥ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರಪ್ಪ, ನಗರಸಭೆ ಸದಸ್ಯರಾದ ಅಮಾನುಲ್ಲಾ ಖಾನ್, ಬುರಾನ್ ಮಹಮೂದ್, ಎಸ್. ಎಸ್. ಅಜಯಕುಮಾರ, ಮಹಮ್ಮದ್ ಜಾಫರ್, ಫಯಾಜ್ ಖಾನ್, ಕೃಷ್ಣಪ್ಪ, ರಫಿ ಉಲ್ಲಾ, ಎಸ್. ಎಲ್. ರಂಗನಾಥ್ , ನಸ್ರುಲ್ಲ ಖಾನ್, ತೇಜು ಭಾನುಪ್ರಕಾಶ, ಸಾನಿಯಾ ಖಾದರ್ , ಅಂಬ್ರಿನ್ ಪರ್ಮನ್ , ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಅರೆಹಳ್ಳಿ ರಮೇಶ್ ,ನಾಮ ನಿರ್ದೇಶನ ಸದಸ್ಯರಾದ ರಾಧಾಕೃಷ್ಣ, ಸುಶೀಲ , ವಾಜರಹಳ್ಳಿ ರಮೇಶ್, ವಿರುಪಾಕ್ಷ, ನಗರಸಭೆ ಆಯುಕ್ತ ರುದ್ರೇಶ್, ಮುಖಂಡ ಗುಳಿಗೆನಹಳ್ಳಿ ನಾಗರಾಜು, ಡಿ.ಸಿ. ಅಶೋಕ ,ತಹಸೀಲ್ದಾರ್ ಸಚ್ಚಿದಾನಂದ ಈಚನೂರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರೀಶ್, ಡಿವೈಎಸ್ಪಿ ಶೇಖರ್, ಮುಖಂಡರಾದ ಆಶ್ರಯ ಸಮಿತಿ ನೂರುದ್ದೀನ್, ರಹಮತ್ , ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿದೇವಮ್ಮ, ಜಯಲಕ್ಷ್ಮಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

29/09/2024

*ಶಿರಾ *ನಗರ ಸಭೆ* *ಪೌರಕಾರ್ಮಿಕರಿಗೆ*
ಕ್ರೀಡಾ *ಚಟುವಟಿಕೆ ಆ ಯೋಜನೆ ಮಾಡುವ ಮೂಲಕ ಸದಸ್ಯ, ಪೌರಕಾರ್ಮಿಕ*, *ನಗರಸಭೆ ಸಿಬ್ಬಂದಿ ಮನೋ ಉಲ್ಲಾಸ ಗೊಳಿಸಿದ ನಗರಸಭೆ ನೂತನ ಅಧ್ಯಕ್ಷ ಜಿಷಾನ್ ಮಹಮೂದ್* .
ಶಿರಾ ನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ನಗರಸಭೆ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ಜಿಶಾನ್ ಮಹಮೂದ್.
ನಿತ್ಯ ಸ್ವಚ್ಛತೆಗೆ ಜಂಜಾಟದಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರು ಹಾಗೂ ನಗರಸಭೆ ಸಿಬ್ಬಂದಿ ಇತರರಂತೆ ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿ ಎಂಬ ಸದುದ್ದೇಶದಿಂದ ಇಂತಹ ಕ್ರೀಡಾಕೂಟಗಳು ಹೆಚ್ಚು ಮನಸ್ಸಿಗೆ ಉಲ್ಲಾಸ ನೀಡುತ್ತವೆ.
ಕಾರ್ಮಿಕ, ಅಧಿಕಾರಿ, ನಗರಸಭೆ ಸದಸ್ಯ, ಅಧ್ಯಕ್ಷ, ಉಪಾಧ್ಯಕ್ಷ ಎಂಬ ತಾರತಮ್ಯ ಹೋಗಲಾಡಿಸಲು, ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸಲು ಇಂತಹ ಕ್ರೀಡಾಕೂಟಗಳು ಹೆಚ್ಚು ಸಹಕಾರಿಯಾಗುತ್ತವೆ ಎಂದರು.
ನಗರಸಭೆ ಉಪಾಧ್ಯಕ್ಷ ಲಕ್ಷ್ಮಿಕಾಂತ್, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬ್ದುಲ್ ಖಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರಪ್ಪ, ನಗರಸಭೆ ಸದಸ್ಯರಾದ ಬುರಾನ್ ಮಹಮೂದ್, ಎಸ್. ಎಸ್. ಅಜಯ್ ಕುಮಾರ, ಅಂಬ್ರಿನ್ ಫರ್ಮಾನ್, ಕೃಷ್ಣಮೂರ್ತಿ, ಸಾನಿಯಾ ಖಾದರ್, ಪೌರ ಆಯುಕ್ತ ರುದ್ರೇಶ್, ಸೇತುರಾಮ್ ಸಿಂಗ್, ಪಲ್ಲವಿ ಸೇರಿದಂತೆ ಪೌರಕಾರ್ಮಿಕರು, ಅಧಿಕಾರಿಗಳು ಉಪಸ್ಥಿತರಿದ್ದರು.

23/09/2024

ಶಿರಾ ನಗರಸಭೆ ಅಧ್ಯಕ್ಷರಾಗಿ ಜಿಶಾನ್ ಮಹಮೂದ್ *ಪೌರಕಾರ್ಮಿಕರ ದಿನ* ಅಧಿಕಾರ ಸ್ವೀಕಾರ ಮಾಡಿದರು.
ಉಪಾಧ್ಯಕ್ಷ ಲಕ್ಷ್ಮಿಕಾಂತ್ ಕೂಡ ಅಧಿಕಾರ ಸ್ವೀಕರಿಸಿದರು.
ದೆಹಲಿ ವಿಶೇಷ ಪ್ರತಿನಿಧಿ ಶಾಸಕ ಡಾ. ಟಿ.ಬಿ. ಜಯಚಂದ್ರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.
ಸಿರಾ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರಪ್ಪ,
ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬ್ದುಲ್ ಖಾನ್,
ನಗರಸಭೆ ಸದಸ್ಯರಾದ ಎಸ್. ಎಸ್.ಅಜಯ್ ಕುಮಾರ್, ಬುರಾನ್ ಮಹಮ್ಮದ್, ಮೊಹಮ್ಮದ್ ಜಾಫರ್, ಎಸ್. ಎಲ್. ರಂಗನಾಥ್, ನಸ್ರುಲ್ಲಾ ಖಾನ್, ಅಬ್ದುಲ್ ಖಾದರ್, ಫಯಾಜ್, ಕೃಷ್ಣಮೂರ್ತಿ, ನಗರಸಭೆ ನಾಮಿನಿ ಸದಸ್ಯರಾದ ಸುಶೀಲಾ ವಿರೂಪಾಕ್ಷ, ಎಸ್.ಎನ್. ಮಹೇಶ್ ಕುಮಾರ್, ಧ್ರುವ ಕುಮಾರ್ ರಹಮತ್ ಶರೀಫ್, ಮುಖಂಡರಾದ ಫರ್ಮನ್, ನಗರಸಭೆ ಮಾಜಿ ಸದಸ್ಯ, ಹಬೀಬ್ ಖಾನ್, ಆಶ್ರಯ ಸಮಿತಿ ಸದಸ್ಯ ನೂರುದ್ದೀನ್, ನಗರಸಭೆ ಆಯುಕ್ತ ರುದ್ರೇಶ್ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.

21/09/2024

ಶಿರಾ ನಗರದ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಕಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಮಹಾಸ್ವಾಮಿಗಳು.
ತುಮಕೂರು ಹಾಲು ಒಕ್ಕೂಟದಲ್ಲಿ ನಿರ್ದೇಶಕ ಎಸ್ ಆರ್ ಗೌಡ, ಜೆಡಿಎಸ್ ಹಿರಿಯ ಮುಖಂಡ ಆರ್ ಉಗ್ರೇಶ್, ನಗರಸಭೆ ಸದಸ್ಯ ರಾಮು, ರಾಘವೇಂದ್ರ ಸೇರಿದಂತೆ ಹಲವಾರು ಮುಖಂಡರು

21/09/2024

ಶಿರಾನಗರದ 8.ನೇ ವರ್ಷದ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ದೆಹಲಿ ವಿಶೇಷ ಪ್ರತಿನಿಧಿ ಶಾಸಕ ಡಾ. ಟಿ.ಬಿ. ಜಯಚಂದ್ರ ರವರು.
ಜೆಡಿಎಸ್ ಹಿರಿಯ ಮುಖಂಡ ಆರ್. ಉಗ್ರೇಶ್, ನಗರಸಭೆ ಅಧ್ಯಕ್ಷ ಜಿಶಾನ್ ಮಹಮೂದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಮಾಜಿ ಅಧ್ಯಕ್ಷ ಅಂಜಿನಪ್ಪ, ನಗರಸಭೆ ಸದಸ್ಯರಾದ ರಾಮು, ರಾಘವೇಂದ್ರ, ಮುಖಂಡರಾದ ವಿಜಯರಾಜು, ಲಿಂಗದಹಳ್ಳಿ ಸುಧಾಕರ್ ಗೌಡ, ಮಂಜುನಾಥ್ ಸೇರಿದಂತೆ ಸಾವಿರಾರು ಭಕ್ತರು ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

14/09/2024

ಶಿರಾ ನಗರಸಭಾ ಅಧ್ಯಕ್ಷ ಉಪಾಧ್ಯಕ್ಷರಾಗಿ ಜಿಶನ್ ಮಹಮ್ಮದ್ ಮತ್ತು ಲಕ್ಷ್ಮಿಕಾಂತ್ ಆಯ್ಕೆ, ವಿಪಕ್ಷಗಳ ಸದಸ್ಯರ ಆರೋಪಕ್ಕೆ ಉತ್ತರಿಸಿದ ದೆಹಲಿ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ.

Address

Sira
572137

Website

Alerts

Be the first to know and let us send you an email when Public News Sira posts news and promotions. Your email address will not be used for any other purpose, and you can unsubscribe at any time.

Share