Namma Hassan

Namma Hassan All about beautiful Hassan All About Hassan

ಕರ್ನಾಟಕದ ಹಿರಿಯ ಸಾಹಿತಿಗಳಾದ ಹಾಸನದ ಶ್ರೀಮತಿ ಬಾನು ಮುಷ್ತಾಕ್ ಅವರು ಬರೆದಿರುವ 'ಎದೆಯ ಹಣತೆ' ಕೃತಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ನಾಮನ...
05/03/2025

ಕರ್ನಾಟಕದ ಹಿರಿಯ ಸಾಹಿತಿಗಳಾದ ಹಾಸನದ ಶ್ರೀಮತಿ ಬಾನು ಮುಷ್ತಾಕ್ ಅವರು ಬರೆದಿರುವ 'ಎದೆಯ ಹಣತೆ' ಕೃತಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಶ್ರೀಮತಿ ಬಾನು ಮುಷ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

13/01/2025
ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ | ಅರಸೀಕೆರೆ | ಹಾಸನ. 🕉️🙏  #ಶ್ರೀಜೇನುಕಲ್  . 🙏💫
13/01/2025

ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ | ಅರಸೀಕೆರೆ | ಹಾಸನ. 🕉️🙏 #ಶ್ರೀಜೇನುಕಲ್ . 🙏💫

ಶ್ರೀ ಹಾಸನಾಂಬ ದೇವಿ ದರ್ಶನ - 2024ರ ವಿವರ :
05/10/2024

ಶ್ರೀ ಹಾಸನಾಂಬ ದೇವಿ ದರ್ಶನ - 2024ರ ವಿವರ :

ಶಶಾಂಕ್ UPSC ಯಲ್ಲಿ ಯಶಸ್ವಿ 459ನೇ ರಾಂಕ್ ಪಡೆದು ಉತ್ತೀರ್ಣ.ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನಲ್ಲೂರು ಗ್ರಾಮದ ಶಶಾಂಕ್  ಈ ಬಾರಿ ನಡ...
17/04/2024

ಶಶಾಂಕ್ UPSC ಯಲ್ಲಿ ಯಶಸ್ವಿ 459ನೇ ರಾಂಕ್ ಪಡೆದು ಉತ್ತೀರ್ಣ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನಲ್ಲೂರು ಗ್ರಾಮದ ಶಶಾಂಕ್ ಈ ಬಾರಿ ನಡೆದ UPSC ಪರೀಕ್ಷೆಯಲ್ಲಿ 459ನೇ ರಾಂಕ್ ಪಡೆದು ತೇರ್ಗಡೆ ಆಗುವ ಮೂಲಕ ಜಿಲ್ಲೆಗೆ ಕೀರ್ತಿತಂದಿದ್ದಾರೆ.

ಹಾಸನ - ಮೈಸೂರು ಮುಖ್ಯರಸ್ತೆ  ಹಂಗರಹಳ್ಳಿ ಮೇಲು ಸೇತುವೆ ಪಕ್ಕದ ರಸ್ತೆ ಯಲ್ಲಿ ಹಾಸನ ಮತ್ತು ಮೈಸೂರು  ಕಡೆಗೆ  ಕಾರು ಬೈಕ್ ಲಾರಿ ಮತ್ತು ಲಘು ವಾಹ...
16/04/2024

ಹಾಸನ - ಮೈಸೂರು ಮುಖ್ಯರಸ್ತೆ ಹಂಗರಹಳ್ಳಿ ಮೇಲು ಸೇತುವೆ ಪಕ್ಕದ ರಸ್ತೆ ಯಲ್ಲಿ ಹಾಸನ ಮತ್ತು ಮೈಸೂರು ಕಡೆಗೆ ಕಾರು ಬೈಕ್ ಲಾರಿ ಮತ್ತು ಲಘು ವಾಹನ ಸಂಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ.

ವಿಂಧ್ಯಗಿರಿ ಶಿಖರ ಚೂಡಾಮಣಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ.ಶ್ರವಣಬೆಳಗೊಳ.
15/04/2024

ವಿಂಧ್ಯಗಿರಿ ಶಿಖರ ಚೂಡಾಮಣಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ.ಶ್ರವಣಬೆಳಗೊಳ.

ಪಿಯುಸಿ ಫಲಿತಾಂಶ.ಕಳೆದ ಬಾರಿ 7ನೇ ಸ್ಥಾನದಲ್ಲಿದ್ದ ಹಾಸನ ಈ ಬಾರಿ 13 ನೇ ಸ್ಥಾನಕ್ಕೆ ಕುಸಿತ.
10/04/2024

ಪಿಯುಸಿ ಫಲಿತಾಂಶ.
ಕಳೆದ ಬಾರಿ 7ನೇ ಸ್ಥಾನದಲ್ಲಿದ್ದ ಹಾಸನ ಈ ಬಾರಿ 13 ನೇ ಸ್ಥಾನಕ್ಕೆ ಕುಸಿತ.

ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ ಬೇಲೂರು ಸಾಮಾಜಿಕ ಜಾಲತಾಣ ಪುಟದ ನೂತನ ಲಾಂಛನವನ್ನು ಶ್ರೀ ಚೆನ್ನಕೇಶವ ಸ್ವಾಮಿಯವರ ಮುಂದೆ  ದೇವಾಲಯದ ಪ್ರಧಾನ ಅರ...
09/04/2024

ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ ಬೇಲೂರು ಸಾಮಾಜಿಕ ಜಾಲತಾಣ ಪುಟದ ನೂತನ ಲಾಂಛನವನ್ನು ಶ್ರೀ ಚೆನ್ನಕೇಶವ ಸ್ವಾಮಿಯವರ ಮುಂದೆ ದೇವಾಲಯದ ಪ್ರಧಾನ ಅರ್ಚಕರು,ಎಲ್ಲಾ ಅಡ್ಡೆಗಾರರು ಮತ್ತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮುಖದಲ್ಲಿ ಯುಗಾದಿಯ ಶುಭದಿನದಂದು ಬಿಡುಗಡೆಗೊಳಿಸಲಾಯಿತು.

ಯುಗಾದಿ ಹಬ್ಬದ ಪ್ರಯುಕ್ತ ಅರಕಲಗೂಡು ಶ್ರೀ ದೊಡ್ಡಮ್ಮ ದೇವರಿಗೆ ವಿಶೇಷವಾದ ಅಲಂಕಾರ ಹಾಗೂ ವಿಶೇಷವಾದ ಪೂಜೆ.   #ದೊಡ್ಡಮ್ಮ_ದೇವಸ್ಥಾನ_ಅರಕಲಗೂಡು
09/04/2024

ಯುಗಾದಿ ಹಬ್ಬದ ಪ್ರಯುಕ್ತ ಅರಕಲಗೂಡು ಶ್ರೀ ದೊಡ್ಡಮ್ಮ ದೇವರಿಗೆ ವಿಶೇಷವಾದ ಅಲಂಕಾರ ಹಾಗೂ ವಿಶೇಷವಾದ ಪೂಜೆ.
#ದೊಡ್ಡಮ್ಮ_ದೇವಸ್ಥಾನ_ಅರಕಲಗೂಡು

ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ.ಅರಸೀಕೆರೆ. #ಶ್ರೀಜೇನುಕಲ್. .
25/03/2024

ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ.
ಅರಸೀಕೆರೆ.
#ಶ್ರೀಜೇನುಕಲ್.
.

ನೀರು ಬಾಗಿಲು ಶ್ರೀ ಆಂಜನೇಯ ಸ್ವಾಮಿಯ | ಗಾಂಧಿ ಬಜಾರ್ ರಸ್ತೆ | ಹಾಸನ |
23/03/2024

ನೀರು ಬಾಗಿಲು ಶ್ರೀ ಆಂಜನೇಯ ಸ್ವಾಮಿಯ

| ಗಾಂಧಿ ಬಜಾರ್ ರಸ್ತೆ | ಹಾಸನ |

ಶ್ರೀ ಕ್ಷೇತ್ರ ಮಾರಿಕಾಂಬ ಉಡುಸಲಮ್ಮ ಸನ್ನಿಧಿ, ಹಾಸನ
22/03/2024

ಶ್ರೀ ಕ್ಷೇತ್ರ ಮಾರಿಕಾಂಬ ಉಡುಸಲಮ್ಮ ಸನ್ನಿಧಿ, ಹಾಸನ

08/03/2024

ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ
ಶ್ರೀ ಕ್ಷೇತ್ರ ಕಿರಗಡಲು,ಆಲೂರು ತಾ||

ಹಾಸನ - ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿರುವಂತೆ ಆಲೂರು ತಾಲೂಕಿನ ಕಾಗನೂರು ಗ್ರಾಮದಲ್ಲಿ ಶ್ರೀರಾಮ ಸಂಚರಿಸಿದ್ದ ಎಂಬ ...
29/12/2023

ಹಾಸನ - ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿರುವಂತೆ ಆಲೂರು ತಾಲೂಕಿನ ಕಾಗನೂರು ಗ್ರಾಮದಲ್ಲಿ ಶ್ರೀರಾಮ ಸಂಚರಿಸಿದ್ದ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಪಾದುಕೆಗಳು ಭಕ್ತರ ಸೆಳೆಯುತ್ತಿವೆ.
ಶ್ರೀರಾಮ ಲಂಕೆಯಿಂದ ಹಿಂದಿರುಗುವಾಗ ಈ ಮಾರ್ಗವಾಗಿ ಹೋಗಿದ್ದ ಎಂಬ ನಂಬಿಕೆ ಇದ್ದು ಭಕ್ತರು ತಂಡೋಪ ತಂಡವಾಗಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಕಾಗನೂರು ಗ್ರಾಮದ ಆಂಜನೇಯ ದೇವಾಲಯದಿಂದ ಅರ್ಧ ಕಿ.ಮೀ. ದೂರದ ಹೇಮಾವತಿ ನದಿ ತೀರದಲ್ಲಿ ಪಾದಾರೆಕಲ್ಲು ಎಂಬ ಸ್ಥಳ ಶ್ರೀರಾಮ ಹಾದು ಹೋಗಿದ್ದ ಮಾರ್ಗ ಎಂದು ಪೂಜೆ ಸಲ್ಲಿಸಲಾಗುತ್ತದೆ.

ಇಲ್ಲಿ ಈಶ್ವರ ಲಿಂಗ, ಜೊತೆಯಾಗಿರುವ ಎರಡು ಪಾದಗಳು, ಮಸುಕಾಗಿ ಕಾಣುವ ಮತ್ತೊಂದು ದೊಡ್ಡ ಪಾದ, ತ್ರಿಕೋನಾಕೃತಿಯ ಪಗಡೆಹಾಸಿನಂತಹ ಆಕೃತಿ ಒಂದೇ ಬಂಡೆಯ ಮೇಲೆ ಮೂಡಿವೆ.

ಬ್ರಹ್ಮಹತ್ಯಾ ಪರಿಹಾರ ದೋಷ:
ಶ್ರೀರಾಮನು ಲಂಕಾಧೀಶ ರಾವಣನ ಸಂಹಾರದ ನಂತರ ಬ್ರಹ್ಮಹತ್ಯಾ ದೋಷ ಪರಿಹಾರಕ್ಕಾಗಿ ಈಗಿನ ಕಾಗನೂರು ಗ್ರಾಮದಲ್ಲಿ ಶಿವಲಿಂಗ ಮೂರ್ತಿ ಸೃಷ್ಟಿಸಿ ದೋಷ ಪರಿಹಾರ ಮಾಡಲು ಬಯಸಿದ್ದ. ಆದರೆ ಪಕ್ಕದಲ್ಲಿಯೇ ಹರಿಯುವ ಹೇಮಾವತಿ ನದಿಯನ್ನು ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ನಡೆಸಿಕೊಂಡು, ಪತ್ನಿಯನ್ನು ಹೆಗಲಲ್ಲಿ ಕುಳ್ಳಿರಿಸಿಕೊಂದು ದಾಟುತ್ತಿದ್ದ ದೃಶ್ಯ ನೋಡಿ ಶ್ರೀರಾಮನು ದೋಷ ಪರಿಹಾರಕ್ಕೆ ಈ ಸ್ಥಳ ಯೋಗ್ಯವಲ್ಲವೆಂದು ಮುಂದಕ್ಕೆ ಸಾಗುತ್ತಾರೆ. ಈ ಮಧ್ಯೆ ಇಲ್ಲಿ ಆಹಾರ, ವಿಹಾರ, ವಿನೋದಗಳು ನಡೆದ ಲಕ್ಷಣಗಳಿವೆ. ಆಂಜನೇಯ ಶ್ರೀರಾಮರನ್ನು ಹೊತ್ತೊಯ್ದಿರುವ ಕುರುಹಾಗಿ ಇರುವ ದೊಡ್ಡ ಪಾದ ಆಂಜನೇಯನದು. ಆಟದ ವಿಚಾರ ಪಗಡೆ ಹಾಸಿನಿಂದ ತಿಳಿಯುತ್ತದೆ.
ವಿಶೇಷತೆಯುಳ್ಳ ಈ ಬಂಡೆ ಹೇಮಾವತಿ ಹಿನ್ನೀರು ಆವರಿಸುವುದರಿಂದ ಸಂಪೂರ್ಣ ಮುಚ್ಚಿಹೋಗುತ್ತದೆ.
ಈ ಸ್ಥಳಕ್ಕೆ ಭಕ್ತರು ಶ್ರದ್ಧಾಭಕ್ತಿಯಿಂದ ಬರುತ್ತಿದ್ದಾರೆ.
ಬಳಿಕ ಇಲ್ಲಿಂದ ಮುಂದೆ ಹೊರಟು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಬಾಗೇರಿ ಗ್ರಾಮದ ಬಳಿ ಪೂಜೆ ಸಲ್ಲಿಸಲು ಮುಂದಾದಾಗ ನೀರಿನ ಅವಶ್ಯಕತೆ ಎದುರಾಗುತ್ತದೆ. ಆ ಸಂದರ್ಭದಲ್ಲಿ ಲಕ್ಷ್ಮಣ ತನ್ನ ಬಾಣವನ್ನ ಹೂಡಿ ಬಾವಿಯನ್ನ ತೆರೆದ ಎನ್ನಲಾಗುತ್ತಿದೆ. ಅ ಬಾವಿಯನ್ನ ಲಕ್ಷ್ಮಣ ಬಾವಿ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಇಲ್ಲೌ ಶ್ರೀರಾಮ ಸನ್ನಿಧಿ ಇದೆ.
ನಂತರ ಕೊಡ್ಲಿಪೇಟೆ ಸಮೀಪದ ಕಿರುಗುಡ್ಲಿ ಗ್ರಾಮದಲ್ಲಿ ಸೀತೆ ರಾಮ ಲಕ್ಷ್ಮಣ ಒಂದು ಮಂದಿರದಲ್ಲಿ ಒಂದು ರಾತ್ರಿ ತಂಗಿ ಮರು ದಿನ ಅರಕಲಗೂಡು ತಾಲೂಕಿನ ರಾಮನಾಥಪುರಕ್ಕೆ ತೆರಳಿ ಅಲ್ಲಿರುವ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಗೋಗರ್ಭ ನುಸುಳಿ ಶಿವ ಪೂಜೆ ಸಲ್ಲಿಸಿದರು ಎಂದು ಹೇಳಲಾಗುತ್ತದೆ. ನಂತರ ಮುಂದುವರಿದು ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಬಳಿ ಯೂ ಶ್ರೀರಾಮ ಸಂಚರಿಸಿದ ಎಂಬ ಕುರುಹುಗಳಿವೆ.

ರಕ್ಷಣೆಗೆ ಬೇಕಿದೆ ಆದ್ಯತೆ:
ಹೇಮಾವತಿ ನದಿ ದಡದಲ್ಲಿ ಪ್ರಾಚೀನ ಕಾಲದ ಕುರುಹುಗಳು ಪತ್ತೆಯಾಗಿದ್ದು, ಇವುಗಳ ರಕ್ಷಣೆಗೆ ಗಮನ ಹರಿಸಬೇಕಿದೆ. ಈ ವರ್ಷ ಮಳೆಯಿಲ್ಲದ ಕಾರಣ ಬಂಡೆ ಗೋಚರವಾಗಿದೆ. ಜೊತೆಗೆ ಶ್ರೀರಾಮ ಪಾದ ದರ್ಶನ, ಈಶ್ವರ ಪೂಜೆಗೆ ಅವಕಾಶ ದೊರೆಯಿತು. ಶ್ರೀರಾಮರ ಪಾದಸ್ಪರ್ಶವಾಗಿರುವ ಸ್ಥಳವನ್ನು ರಕ್ಷಿಸಿಕೊಳ್ಳಬೇಕಿದೆ.

ಆಲೂರು ತಾಲ್ಲೂಕಿನ ಕಾಗನೂರು ವಾಸ್ತವ್ಯಕ್ಕೆ ಪ್ರಶಸ್ತ ಸ್ಥಳವಲ್ಲ ಎಂಬುದನ್ನು ಅರಿತ ಶ್ರೀರಾಮನು ಕೊಡಗಿನ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ಕೊಡಗಿನಲ್ಲಿ ಸಣ್ಣ ಮಂಟಪ ನಿರ್ಮಿಸಿಕೊಂಡು ಸೀತಾಮಾತೆ ಅಲ್ಲಿಯೇ ಸ್ನಾನ ಮಾಡಿದ್ದರು ಎಂಬುದಕ್ಕೆ ಪ್ರತೀತಿ ಇದೆ. ನಂತರ ಅಲ್ಲಿಂದ ಬಾಗೇರಿಯಲ್ಲಿ ವಾಸ್ತವ್ಯ ಹೂಡಿದ್ದು ಅಲ್ಲಿ ರಾಮೇಶ್ವರ ದೇವಾಲಯ ನಿರ್ಮಿಸಿದ್ದಾರೆ. ಇತಿಹಾಸದ ಪುಟಗಳನ್ನು ಕೆದಕುತ್ತಾ ಹೋದರೆ ಇನ್ನು ಸಾಕಷ್ಟು ಮಾಹಿತಿ ಲಭ್ಯವಾಗುತ್ತವೆ. ಈ ನಿಟ್ಟಿನಲ್ಲಿ ಸಂಶೋಧಕರು ಗಮನ ಹರಿಸಬೇಕು.
-ಸತ್ಯನಾರಾಯಣ, ಹರಿಹಳ್ಳಿ ಗ್ರಾಮ

Address


Telephone

+917483936962

Website

Alerts

Be the first to know and let us send you an email when Namma Hassan posts news and promotions. Your email address will not be used for any other purpose, and you can unsubscribe at any time.

Contact The Business

Send a message to Namma Hassan:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share