Rutha Media

Rutha Media Publication of a journal "Rutha' on Culture and Politics. Our News Portal, www. ruthamedia. com

21/01/2022
Rhutha 7. A Compilation of articles on Western Ghats by renowned writers.
21/09/2021

Rhutha 7. A Compilation of articles on Western Ghats by renowned writers.

15/08/2021
rutha 6
06/04/2021

rutha 6

20/01/2021

Sub editor/translator,knowledge of social media,digital marketing necessary

08/12/2020

ಋತ ಪತ್ರಿಕೆ ಮುಖಪುಟ, ವಿನ್ಯಾಸ, ಪುಟಗಳ ಸಂಖ್ಯೆ ಈ ಎಲ್ಲದರಲ್ಲೂ ಆಕರ್ಷಕವಾಗಿದೆ. ಪುಟಗಳ ಸಂಖ್ಯೆ ತುಂಬಾ ಹೆಚ್ಚಾದರೆ ಓದಲು ಅನಾನುಕೂಲವಾಗುತ್ತೆ, ಹಾಗಾಗಿ ಪುಟಗಳ ಮಿತಿ 78 ರಿಂದ 80 ಇರುವುದೆ ಸೂಕ್ತ. ಇನ್ನೂ ಒಳಗಿನ ಹೂರಣ ಕೂಡ ಚೆನ್ನಾಗಿದೆ. ಒಕ್ಕೂಟ ವ್ಯವಸ್ಥೆಯ ಕುರಿತು ಬಂದ ಸಂಚಿಕೆಯ ಹಲವು ಲೇಖನಗಳನ್ನು ನಾನು ಓದಿದ್ದೆ. ಲೇಖನಗಳ ದೃಷ್ಟಿಕೋನ ಭಿನ್ನ ಮತ್ತು ನವೀನವಾಗಿತ್ತು. ಹಾಗೆಯೆ ಈ ಸಂಚಿಕೆಯು ನನ್ನ ಅರಿವನ್ನು ಹೆಚ್ಚಿಸಿದೆ. ಪರಿಸರ ಚರಿತ್ರೆಯ ಕುರಿತು ನಾನು ಪೂರ್ಣವಾಗಿ ಓದಿರಲಿಲ್ಲ. ಹಾಗಾಗಿ ನನಗೆ ಈ ಸಂಚಿಕೆ ಸಂಗ್ರಹ ಯೋಗ್ಯವಾಗಿದೆ. ಧನ ಸಮೃದ್ಧಿಯ ಇಕಾಲಜಿ, ದಕ್ಷಿಣದ ಸವಾಲು ಮತ್ತು ಸಮಾಜವಾದ ಮತ್ತು ಪರಿಸರವಾದ ಎಂಬ ಲೇಖನಗಳು ನಾನು ಸದ್ಯ ಓದಿದ್ದು ಚೆನ್ನಾಗಿವೆ. ಗುಹಾ ಅವರ ನಿರಂತರ ಓದುಗ ನಾಗಿರುವ ನನಗೆ ಅವರ ಬರಹಗಳ ಕುರಿತು ಆಸಕ್ತಿ ಮತ್ತು ವಿಶ್ವಾಸವಿದೆ. ಪತ್ರಿಕೆಯ ರೂಪುಗೊಳ್ಳಲು ಕಾರಣವಾದ ಎಲ್ಲರಿಗೂ ಧನ್ಯವಾದ.
-Prof. Santhosh Undadi, Belagavi

26/11/2020

"ಋತ" ಹೊಸ ಸಂಚಿಕೆಯು ಜಗತ್ತಿನ ಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ ಜೀನ್ ಡ್ರೀಜ್ ಅವರ ಆರ್ಥಿಕ ಚಿಂತನೆಗಳನ್ನು ಕನ್ನಡಕ್ಕೆ ಪರಿಚಯಿಸಿದೆ. ನಮ್ಮ ಪತ್ರಿಕೆಗಳು ನೋಬೆಲ್ ಪ್ರಶಸ್ತಿ ಬಂದಾಗಷ್ಟೇ ಕಾಟಾಚಾರಕ್ಕೆ ಬರೆದು ಕೈತೊಳೆದುಕೊಳ್ಳುತ್ತವೆ. ಅಮರ್ತ್ಯ ಸೇನ್ ಅವರ ಚಿಂತನೆಗಳು ಕನ್ನಡಕ್ಕೆ ಬಂದಂತಿಲ್ಲ. ಕನ್ನಡ ಜಗತ್ತು ಅರ್ಥಶಾಸ್ತ್ರಜ್ಞರ ಚಿಂತನೆಗಳನ್ನು ಒಳಗೊಳ್ಳಬೇಕಿದೆ. ಅಂತಹ ಒಳಗೊಳ್ಳುವಿಕೆಯನ್ನು "ಋತ" ಸಂಪಾದಕರಾದ ಮಾಧವ ಐತಾಳರು ಮಾಡಿದ್ದಾರೆ. ಎಂದಿನಂತೆ ಈ ಬಾರಿಯ ಸಂಚಿಕೆಯು ಅತ್ಯುತ್ತಮವಾಗಿ ಮೂಡಿ ಬಂದಿದೆ. ನಿಮಗೂ ಮತ್ತು ಅನುವಾದ ಮಾಡಿದ ತಂಡದವರಿಗೂ ಅಭಿನಂದನೆಗಳು...
-Subash Rajamane

Rutha 5 will reach the subscribers by 3-4 days.This issue on Economist Jean Dreze was made possible by Santhosh naik, Su...
24/11/2020

Rutha 5 will reach the subscribers by 3-4 days.This issue on Economist Jean Dreze was made possible by Santhosh naik, Sushma kashyap, Apoorva yarabahalli ,Kavyashree and Nagabhushan. last but not least our designer Nelson. Immense tnx to all.
those who wish to hv a copy pl.call Yashoda @ 9986785653. Rutha is possible b'caz of our subscribers. a huge tnx. we need more support in our endeavour. subscribe,support and spread word.

18/11/2020

`ಋತ' ಕನ್ನಡದ ದೃಷ್ಟಿಯಿಂದ ವಿನೂತನ ಪ್ರಯೋಗ. ನಾವೆಲ್ಲರೂ ಗೆದ್ದೆತ್ತಿನ ಬಾಲವನ್ನು ಹಿಡಿಯುವವರು. ಅದು ರಾಜಕೀಯ ಕ್ಷೇತ್ರವಿರಲಿ, ಸಾಮಾಜಿಕ ಕ್ಷೇತ್ರವಿರಲಿ, ಸಾಂಸ್ಕøತಿಕ ಲೋಕವಿರಲಿ ಅಥವಾ ಸಾಹಿತ್ಯಿಕ ಪ್ರಪಂಚವಿರಲಿ. ಗಾಳಿ ಬಂದಾಗ ತೂರಿಕೊಂಡು ಬಹುಬೇಗ ಸಾಧನೆಯ ತುತ್ತ ತುದಿಯನ್ನು ಕೆಲವೇ ಸಮಯದಲ್ಲಿ ತಲುಪಿಬಿಡಬೇಕು ಎನ್ನುವ ಮಹದಾಸೆಯನ್ನು ಹೊತ್ತುಕೊಂಡು ಬದುಕುವವರು ನಾವು. ಒಂದು ಸಿನಿಮಾ ಗೆದ್ದರೆ ಅದೇ ರೀತಿಯ ಹತ್ತಾರು ಚಿತ್ರಗಳು ಬರುತ್ತವೆ; ಒಂದು ಪಕ್ಷ ಚುನಾವಣೆಯಲ್ಲಿ ಗೆದ್ದರೆ ಬೇರೆ ಪಕ್ಷಗಳ ನಾಯಕರು ಅದರ ಕಡೆಗೆ ಮುಖಮಾಡುತ್ತಾರೆ; ಒಂದು ಪತ್ರಿಕೆ ಯಶಸ್ವಿಯಾದರೆ ಅದೇ ಮಾದರಿಯ ಹತ್ತಾರು ಪತ್ರಿಕೆಗಳು ಹುಟ್ಟಿಕೊಳ್ಳುತ್ತವೆ; ಒಂದು ಪ್ರಕಾರದ ಸಾಹಿತ್ಯ ಜನಮೆಚ್ಚುಗೆ ಪಡೆದರೆ ಅದೇ ರೀತಿಯ ಹತ್ತುಹಲವಾರು ಬರಹಗಳು ಪ್ರಕಟಗೊಳ್ಳುತ್ತವೆ. ಇವೆಲ್ಲವನ್ನು ಒಟ್ಟಾರೆಯಾಗಿ ಗಮನಿಸಿದಾಗ ಮಾಧವ ಐತಾಳ್ ಬಹಳ ಇಷ್ಟವಾಗುತ್ತಾರೆ; ಅವರ `ಋತ' ಮನಮುಟ್ಟುತ್ತದೆ.
ವಿಭಿನ್ನ ಮಾದರಿಯ ಯೋಚನೆ ಹಾಗೂ ಯೋಜನೆ ಮೂಲಕ ಅವರು ಹೊರತರುತ್ತಿರುವ "ಋತ' ಆಳವಾದ ಅಧ್ಯಯನ ಮತ್ತು ಅಪಾರ ಪರಿಶ್ರಮವನ್ನು ಬೇಡುತ್ತದೆ. ಪ್ರತಿಯೊಂದು ಸಂಚಿಕೆಯೂ ಒಂದು ಪ್ರತ್ಯೇಕ ವಿಷಯದ ಚೌಕಟ್ಟನ್ನು ಹಾಕಿಕೊಂಡು, ಅದಕ್ಕೆ ಸಂಬಂಧಿಸಿದ ಹಲವಾರು ಗಮನೀಯ ಲೇಖನಗಳನ್ನು ನೀಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತದೆ. ಮಾಧವ ಐತಾಳ್ ಅವರೇ ಹೇಳಿಕೊಳ್ಳುವಂತೆ `ಕನ್ನಡಕ್ಕೆ ಜಗತ್ತಿನ ಎಲ್ಲ ಜ್ಞಾನಧಾರೆಗಳು ಬರಬೇಕು ಎನ್ನುವ ಆಶಯವನ್ನು ಆಗುಮಾಡುವ ಒಂದು ಪ್ರಯತ್ನವೇ ಋತ.' ಇದು ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದ ವಸ್ತುಗಳನ್ನು ವಿಮರ್ಶೆ ಮಾಡುತ್ತದೆ, ವಿಶ್ಲೇಷಿಸುತ್ತದೆ, ಆ ಕುರಿತಾಗಿ ವಿಚಾರವನ್ನು ಮಂಡಿಸುತ್ತದೆ ಮತ್ತು ಸಂವಾದವನ್ನು ನಡೆಸುತ್ತದೆ.
`ಋತ' ನಿಯತಕಾಲಿಕದ ಮೂರು ಸಂಚಿಕೆಗಳನ್ನು ನಾನು ಬಹಳ ಕುತೂಹಲ ಮತ್ತು ಆಸಕ್ತಿಯಿಂದ ಓದಿದ್ದೇನೆ. ಎಲ್ಲ ಸಂಚಿಕೆಗಳೂ ಇಷ್ಟವಾಗಿವೆ. ಒಂದರಲ್ಲಿ, `ಭಾರತದ ಆದಿವಾಸಿ ಕಥನ-ಅಸ್ಮಿತೆ ಮತ್ತು ಅಸಮಾನತೆ', ಮತ್ತೊಂದರಲ್ಲಿ, `ವಿಜ್ಞಾನ, ಪ್ರಜಾಪ್ರಭುತ್ವ ಮತ್ತು ಇಕಾಲಜಿ', ಇನ್ನೊಂದರಲ್ಲಿ `ಜಾಗತಿಕ ಪರಿಸರ ಚರಿತ್ರೆ' ವಿಷಯವನ್ನು ಕುರಿತು ಪ್ರಬುದ್ಧ ಲೇಖನಗಳ ಮೂಲಕ ಚರ್ಚಿಸಿದ್ದಾರೆ. ಕನ್ನಡಕ್ಕೆ ಹೊಸದೊಂದು ಪ್ರಕಾರದ ಪತ್ರಿಕೆಯನ್ನು ಕೊಡುತ್ತಿರುವ ಶ್ರೇಯಸ್ಸು ಮಾಧವ ಐತಾಳ್ ಮತ್ತು ಅವರೊಂದಿಗೆ ಕೈಜೋಡಿಸಿರುವ ಎಲ್ಲರಿಗೆ ಸಲ್ಲುತ್ತದೆ. ಅವರ ಪ್ರಯತ್ನವನ್ನು ನಾವು ಉಳಿಸಿಕೊಳ್ಳಬೇಕಿದೆ; ಅವರಿಗೆ ಬೆಂಬಲ ನೀಡಬೇಕಿದೆ. ಪತ್ರಿಕೋದ್ಯಮದಲ್ಲಿ ಅಪಾರ ಅನುಭವವನ್ನು ಹೊಂದಿರುವ ಮಾಧವ ಐತಾಳ್ ಅವರ ಪ್ರಯತ್ನಕ್ಕೆ ಶುಭ ಕೋರುತ್ತೇನೆ; ಅವರ ಯಶಸ್ಸನ್ನು ಬಯಸುತ್ತೇನೆ.
- ಡಾ. ನಾಗ ಎಚ್. ಹುಬ್ಳಿ
ಪ್ರಾಧ್ಯಾಪಕ, ರಾಂಚಿ, ಝಾರ್ಖಂಡ್

12/11/2020
Rutha 5
10/11/2020

Rutha 5

28/10/2020

ಆಕೃತಿ ಪುಸ್ತಕ ಪ್ರಕಾಶನದ ಹೊಸ ಪ್ರಕಟಣೆಗಳಾದ ವಿ ಆರ್ ಕಾರ್ಪೆಂಟರ್ ಅವರ 'ಬ್ರಾಹ್ಮಿನ್ ಕೆಫೆ'(ಕಥಾ ಸಂಕಲನ), ಚಲಂ ಹಾಡ್ಲಹಳ್ಳಿ ಅವರ 'ಎಲ್ಲಾ ಮೀನುಗಳು ಗಾಳಕ್ಕೆ ಸಿಕ್ಕುವುದಿಲ್ಲ'(ಕಥಾ ಸಂಕಲನ), ಬೇಲೂರು ರಘುನಂದನ್ ಅವರ 'ರೂಪ ರೂಪಗಳನು ದಾಟಿ ಮತ್ತು ಬೆಳಕಿನ ಅಂಗಡಿ'(ನಾಟಕಗಳು) ಹಾಗೂ ಮಾಧವ ಐತಾಳ್ ಅವರ ಸಂಪಾದಕತ್ವದಲ್ಲಿ ಮೂಡಿಬರುತ್ತಿರುವ 'ಋತ' ಪತ್ರಿಕೆಯ ಎರಡನೇ ಸಂಚಿಕೆಯ ಬಿಡಿ ಪ್ರತಿಗಳು ಇದೀಗ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಲಿಂಕ್ ಕ್ಲಿಕ್ಕಿಸುವ ಮೂಲಕ ಪ್ರಜೋದಯ ಪ್ರಕಾಶನದ Online Storeಗೆ ಭೇಟಿ ನೀಡಬಹುದು...
https://www.instamojo.com/prajodaya/

28/10/2020

ಮಾಧವ ಐತಾಳ್ ಅವರು ಅನುವಾದಿಸಿರುವ ರಾಮಚಂದ್ರ ಗುಹಾ ಅವರ 'ಜಾಗತಿಕ ಪರಿಸರ ಚರಿತ್ರೆ'(ಋತ ಸಂಚಿಕೆ-3) ಕೃತಿ ಕುರಿತು ಸುಭಾಶ್ ರಾಜಮಾನೆ ಅವರ ಪೋಸ್ಟ್...

---

ಮಾಧವ ಐತಾಳರು ಪರಿಸರ ಮತ್ತು ಇಕಾಲಜಿ ಬಗ್ಗೆ ಅಪಾರ ಕಾಳಜಿ ಇರುವ ಲೇಖಕರು. ಅವರ ಸಂಪಾದಕತ್ವದಲ್ಲಿ 'ಋತ' ಎಂಬ ಬಹಳ ಗಂಭೀರ ಮತ್ತು ಅಧ್ಯಯನಯೋಗ್ಯ ಪತ್ರಿಕೆ ಬರುತ್ತಿದೆ. ಈ ಮೂರನೇ ಸಂಚಿಕೆಯನ್ನು ರಾಮಚಂದ್ರ ಗುಹಾ ಅವರ 'ಜಾಗತಿಕ ಪರಿಸರ ಚರಿತ್ರೆ' ಕೃತಿಯ ಅನುವಾದವನ್ನಾಗಿಯೇ ರೂಪಿಸಲಾಗಿದೆ. ಮಾಧವ ಐತಾಳರೇ ಅನುವಾದಿಸಿ ಆಯಾ ವಿಷಯಗಳಿಗೆ ತಕ್ಕಂತೆ ಸೂಕ್ತವಾದ ಫೋಟೋಗಳನ್ನು ಅಳವಡಿಸಿ ಸಂಚಿಕೆಯನ್ನು ಸುಂದರವಾಗಿಸಿದ್ದಾರೆ. ಇದನ್ನು ಎಲ್ಲರೂ ಓದಲೇಬೇಕಾದ ಸಂಚಿಕೆಯನ್ನಾಗಿಸಿದ್ದಾರೆ.

- ಸುಭಾಶ್ ರಾಜಮಾನೆ

---

'ಜಾಗತಿಕ ಪರಿಸರ ಚರಿತ್ರೆ' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://imojo.in/2yj2g62

Address

Mahalaxmipura, Bengaluru/86

560086

Alerts

Be the first to know and let us send you an email when Rutha Media posts news and promotions. Your email address will not be used for any other purpose, and you can unsubscribe at any time.

Contact The Business

Send a message to Rutha Media:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share